Saturday, December 31, 2022

 ಮಕ್ಕಳ ಕೌಶಲ್ಯದ ಅನಾವರಣ

ಸಿದ್ಧಗಂಗಾದಲ್ಲಿ ನಡೆದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ.






ನಗರದ ಶ್ರೀ  ಸಿದ್ಧಗಂಗಾ ಶಾಲೆಯ 3 ರಿಂದ 10 ನೇ ತರಗತಿಯ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ನೂರಾರು ಮಾದರಿಗಳು, ಅದಕ್ಕೆ ಸಂಬಂಧಪಟ್ಟ ವಿವರಣೆ, ಮಕ್ಕಳ ವಿಜ್ಞಾನಾಸಕ್ತಿ ಮತ್ತು ಕಲಾ ಪ್ರೇಮಕ್ಕೆ ಸಾಕ್ಷಿಯಾದವು. ಸುಂದರವಾಗಿ ನಿರ್ಮಿತವಾದ ವೇದಿಕೆಯಲ್ಲಿ ಹಸಿರು ಸಸ್ಯಗಳಿಗೆ ನೀರೆರೆಯುವ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ'ಸೌಜ ರವರು ಮತ್ತು ತೀರ್ಪುಗಾರರಾಗಿ ಆಗಮಿಸಿದ್ದ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳನ್ನು ಶ್ಲಾಘಿಸಿದರು. ತಮ್ಮ ಮಕ್ಕಳ ‘ವಸ್ತು ಪ್ರದರ್ಶನ’ ವೀಕ್ಷಿಸಲು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಸ್ಮಾರ್ಟ್ ರೈಲ್ವೆ ಸ್ಟೇಷನ್, ಕಾರ್ಗಿಲ್ ಯುದ್ಧ , ಚನ್ನಕೇಶವ ದೇವಸ್ಥಾನ, ಮಣ್ಣಿನ ಮತ್ತು ಶಿಲೆಗಳ ಮಾದರಿಗಳು, ವಿಧಾನಸೌಧ, ಆದಿಮಾನವನ ಜೀವನಶೈಲಿ ಹೀಗೆ ನೂರಾರು ಸಮಾಜಶಾಸ್ತ್ರಕ್ಕೆ, ಕಲೆಗೆ ಸಂಬಂಧಪಟ್ಟ ಮಾದರಿಗಳು ಒಂದಕ್ಕಿಂತ  ಒಂದು ಆಕರ್ಷಕವಾಗಿ ಪ್ರದರ್ಶನಗೊಂಡವು. ಮಕ್ಕಳ ಕ್ರಿಯಾಶೀಲತೆಗೆ ವಿಸ್ಮಯ ಪಡುವಂತಾಯಿತು. ವಿಜ್ಞಾನ ಮಾದರಿಗಳು ಭೌತಶಾಸ್ತ್ರದ ಅನೇಕ ತತ್ವಗಳ ಮೇಲೆ ಆಧಾರಿತವಾಗಿದ್ದು, ರಸಾಯನಶಾಸ್ತ್ರ ವಿಭಾಗದಲ್ಲಿ ಮಕ್ಕಳು ರಾಸಾಯನಿಕ ಕ್ರಿಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಜೀವ ವೈವಿಧ್ಯಗಳ ಮಾದರಿಗಳು, ಸಸ್ಯಗಳು, ಜಲಚಕ್ರ, ನೀರಿನ ಮರುಬಳಕೆಯ ಮಾದರಿಗಳು ಜೀವಶಾಸ್ತ್ರ ವಿಭಾಗದಲ್ಲಿ ಗಮನ ಸೆಳೆದವು. ಹೊಲಗದ್ದೆಗಳಲ್ಲಿ ಪಶು-ಪಕ್ಷಿಗಳನ್ನು ಓಡಿಸಲು ದೊಡ್ಡ ಶಬ್ದ ಬರುವಂತೆ ಮಾಡಿದ ಮಂಕಿಗನ್ ಮಾದರಿಯ ಸರಳ ಯಂತ್ರದ ಬಗ್ಗೆ ಎಲ್ಲರೂ ಆಕರ್ಷಿತರಾದರು. ಇತ್ತೀಚಿನ ದಿನಗಳಲ್ಲಿ ಊರೊಳಗೆ ಬರುತ್ತಿರುವ ಮುಷ್ಯಾಗಳ ಹಾವಳಿ ತಡೆಯಲು ಇದು ಸೂಕ್ತವಾಗಿದೆ ಎಂಬ ಅಭಿಪ್ರಾಯ ಎಲ್ಲರಲ್ಲಿ ಮೂಡಿತು. ಪ್ಲಾಸ್ಟಿಕ್ ಪೈಪ್‌ನಿಂದ ಮಾಡಿದ ಬಹಳ ಹಗುರವಾದ ಈ ಮಂಕಿಗನ್ ಬಹು ಉಪಯೋಗಿಯಾಗಿತ್ತು. ಪ್ರಾಣಿ ಸಂಗ್ರಹಾಲಯ, ಗ್ರಾಮರ್ ಟ್ರೀ  , ಹೈಡ್ರಾಲಿಕ್ ಬ್ರಿಡ್ಜ್ , ರಾಕೆಟ್ ಉಡಾವಣೆ, ಸೌರವ್ಯೂಹ, ಕೆಂಪುಕೋಟೆ ಇತ್ಯಾದಿ ಅನೇಕ ಮಾದರಿಗಳಿದ್ದವು.

ಕೋವಿಡ್‌ನಿಂದಾಗಿ ಮಕ್ಕಳು ಎರಡು ವರ್ಷ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌ರವರ ಮಾರ್ಗದರ್ಶನದಲ್ಲಿ, ಶಿಕ್ಷಕರ ಮತ್ತು ಪಾಲಕರ ಸಹಯೋಗದಿಂದ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಮಕ್ಕಳ ಆಸಕ್ತಿ ಅನಾವರಣಗೊಂಡಿತು. 300 ಕ್ಕೂ ಹೆಚ್ಚು ವಿವಿಧ ಮಾದರಿಗಳು ಪ್ರದರ್ಶಿತಗೊಂಡಿದ್ದವು.

Wednesday, December 21, 2022

 ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್‌ ನೀವಾಗಬೇಡಿ  ಹದಿವಯಸ್ಸಿನ ಬಾಲಕಿಯರಿಗೆ  ಡಾ || ಶಶಿಕಲಾ ಕೃಷ್ಣಮೂರ್ತಿಯವರಿಂದ ಎಚ್ಚರಿಕೆ

ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಉಂಟಾಗಿರುವ ಮಾನಸಿಕ ಬದಲಾವಣೆಗಳ ಹಾಗೂ ಹದಿವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಜೀವನ ಶೈಲಿಯನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ಎಸ್. ಎಸ್. ಇನ್ಸ್ಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್‌ (SSIMS) ನ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ|| ಶಶಿಕಲಾ ಕೃಷ್ಣಮೂರ್ತಿಯವರು ಸಿದ್ಧಗಂಗಾ ಸಂಸ್ಥೆಯ 10 ನೇ ತರಗತಿ ಬಾಲಕಿಯರಿಗೆ ಮತ್ತು ತಾಯಂದಿರಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. 



ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ್ದಾಗ ಮಕ್ಕಳು ಆನ್‌ಲೈನ್‌ ತರಗತಿಗೆಂದು ಪಡೆದ ಮೊಬೈಲ್‌ಗಳಿಂದಾಗಿ ಹೇಗೆ ಅದಕ್ಕೆ ದಾಸರಾಗಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. 180 ಹೆಣ್ಣು ಮಕ್ಕಳು ಅಷ್ಟೇ ಸಂಖ್ಯೆಯ ತಾಯಂದಿರು ಡಾ|| ಶಶಿಕಲಾ ಮೇಡಂರವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದರು. ಹದಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಲ್ಲಿ ಆಗುವ ದೈಹಿಕ ಬದಲಾವಣೆ, ಶುಚಿತ್ವ, ಋತು ಚಕ್ರ, ಆಹಾರ ಪದ್ಧತಿ, ಯುವಕರತ್ತ ಆಕರ್ಷಣೆ, ಸ್ನೇಹಿತರ ಆಯ್ಕೆಯ ಬಗ್ಗೆ ವಿವೇಚನೆ ಇವುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ತಾಯಂದಿರು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು. ಲೈಂಗಿಕ ದೌರ್ಜನ್ಯಗಳ ಬಗ್ಗೆ ಅವುಗಳಿಂದಾಗುತ್ತಿರುವ ಅನಾಹುತಗಳನ್ನು ವಿವರಿಸುತ್ತಾ “ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್‌ ನೀವಾಗಬೇಡಿ” ಎಂದು ಎಚ್ಚರಿಕೆ ನೀಡಿದರು.

ಪ್ರಾರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ 10 ನೇ ತರಗತಿಯ ಬಾಲಕಿಯರು ಪೂಜಾ ಸಾಮಗ್ರಿಗಳೊಂದಿಗೆ ತಮ್ಮ ತಮ್ಮ ತಾಯಂದಿರಿಗೆ ಪಾದ ಪೂಜೆ ನೆರವೇರಿಸಿ ಪುಷ್ಪವೃಷ್ಠಿಗೈದರು. ಹೆತ್ತಮ್ಮನಿಗೆ ಹೆಮ್ಮೆ ತರುವ ಮಗಳಾಗುವೆನೆಂದು ವಾಗ್ದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ, ಶಿಕ್ಷಕಿಯರಾದ ಪ್ರತಿಭಾ, ಝೀನತ್‌, ರಮಾದೇವಿ, ಅಂಬುಜಾಕ್ಷಿ ಮತ್ತು ಭೂಮಿಕ ಇವರಿದ್ದರು. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿತ್ತೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.

 ಸ್ಕೌಟ್ಸ್‌ – ಗೈಡ್ಸ್‌  ಸಿದ್ಧಗಂಗಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ  ದಾವಣಗೆರೆಯ ಗಾಜಿನ ಅರಮನೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಮಟ್ಟದ ಪ್ರಪ್ರಥಮ ಸಾಂಸ್ಕೃತಿಕ ಜಾಂಬೂರಿ ನಡೆಯುತ್ತಿದೆ. ಡಿಸೆಂಬರ್‌ 21 ರಿಂದ 27 ರವರೆಗೆ ದೇಶ –ವಿದೇಶದ ಮಕ್ಕಳ ಪ್ರತಿಭೆ – ಸಾಹಸ ಪ್ರದರ್ಶನ ಅನಾವರಣಗೊಳ್ಳಲಿದೆ. ರಾಷ್ಟ್ರದ ವಿವಿಧ ರಾಜ್ಯಗಳ ಮತ್ತು 10 ವಿದೇಶಿ ರಾಷ್ಟ್ರಗಳ 50 ಸಾವಿರ ಸ್ಕೌಟ್ಸ್‌ – ಗೈಡ್ಸ, ರೇಂಜರ್ಸ್‌, ರೋವರ್ಸ್‌, 10 ಸಾವಿರ ದಳನಾಯಕರು ಮತ್ತು 3 ಸಾವಿರ ಸ್ವಯಂ ಸೇವಕರ ಬೃಹತ್‌ ಮೇಳ ಕರ್ನಾಟಕದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ದಾವಣಗೆರೆ ಜಿಲ್ಲೆಯಿಂದ 920 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.

C:\Users\lenovo\Downloads\IMG-20221221-WA0002.jpg

ಈ ಅವಿಸ್ಮರಣೀಯ ಜಾಂಬೂರಿಗೆ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ 50 ಸ್ಕೌಟ್ಸ್‌ 47 ಗೈಡ್ಸ್‌ಗಳು, 5 ತರಬೇತಿದಾರರು ಮತ್ತು 4 ಸ್ವಯಂ ಸೇವಕರು ಎರಡು ಬಸ್‌ಗಳಲ್ಲಿ ತೆರಳಿದ್ದಾರೆ. ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಗಾಜಿನ ಅರಮನೆಯ ಪ್ರತಿರೂಪವನ್ನು ಜಾಂಬೂರಿಯ ಕಲಾ ಪ್ರದರ್ಶನದಲ್ಲಿ ಸ್ಥಾಪಿಸಿದ್ದಾರೆ. ರಾಷ್ಟ್ರದ ಅತಿ ದೊಡ್ಡ ದಾವಣಗೆರೆಯ ಗಾಜಿನ ಮನೆಯ ವಿಶಿಷ್ಠತೆಯನ್ನು ಪ್ರೇಕ್ಷಕರಿಗೆ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ತಿಳಿಸಿಕೊಡಲು ಮಕ್ಕಳು ಸಿದ್ಧರಾಗಿದ್ದಾರೆ. ಇದಲ್ಲದೆ ಹಿಂದೂ ಸಂಪ್ರದಾಯದ ವಿವಾಹ ಪದ್ಧತಿಯನ್ನು ಸಾಂಸ್ಕೃತಿಕ ವೇದಿಕೆಯಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಅಭಿನಯಿಸಲಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಮಟ್ಟದ ಬೃಹತ್‌ ಜಾಂಬೂರಿ ಮೇಳದಲ್ಲಿ ದಾವಣಗೆರೆಯ ಅನುರೂಪ – ಸುಂದರ ಗಾಜಿನ ಅರಮನೆಯನ್ನು ಸಿದ್ಧಗಂಗಾ ಸ್ಕೌಟ್‌ – ಗೈಡ್‌ ಮಕ್ಕಳು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್‌, ರಾಜೇಶ್, ರಾಜಶೇಖರ್‌, ಸ್ವಾತಿ, ಹೀನಾ ಕೌಸರ್‌ ಮತ್ತು ಪ್ರಿಯಾಂಕರವರ ಪರಿಶ್ರಮದಿಂದ ಈ ಸುಂದರ ಆಕೃತಿ ಮೂಡಿ ಬಂದಿದೆ.

Monday, December 19, 2022

 ಸಿದ್ಧಗಂಗಾ ಕಾಲೇಜಿನ ಬಾಲಕ-ಬಾಲಕಿಯರಿಂದ

ರಾಷ್ಟ್ರ – ರಾಜ್ಯಮಟ್ಟದ ಕ್ರೀಡೆಗಳಲ್ಲಿ ಅಪ್ರತಿಮ ಸಾಧನೆ



ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬಾಲಕ – ಬಾಲಕಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಬಾಲಕಿಯರ ವಿಭಾಗದಿಂದ ಸೃಷ್ಠಿ ಕೆ ಬೆಳ್ಳೂಡಿ ರಾಜ್ಯ ಮಟ್ಟದ ಬಾಸ್ಕೆಟ್‌ ಬಾಲ್‌ನಲ್ಲಿ ದ್ವಿತೀಯ, ಯುವ ಸಬಲೀಕರಣ ಪ್ರಾಧಿಕಾರದ ವಿಭಾಗ ಮಟ್ಟದ ನೆಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಹಾವೇರಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮಾನ್ಯ ಜೆ. ಮತ್ತು ದೀಪ್ತಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಬಾಲ್‌ ಬ್ಯಾಡ್‌ಮಿಂಟನ್‌ನಲ್ಲಿ ಅಕ್ಷತಾ ಟಿ. ವಿ ಮತ್ತು ಸಿಂಧು ಸಿ. ವಿ, ಶಿವಮೊಗ್ಗದಲ್ಲಿ ನಡೆದ ಕರಾಟೆಯಲ್ಲಿ ರಕ್ಷಾ ಜಿ. ಆರ್, ಉಡುಪಿಯಲ್ಲಿ ನಡೆದ ವಾಲಿಬಾಲ್‌ನಲ್ಲಿ ಕವನ ವೈ ಮತ್ತು ಸ್ನೇಹ ಟಿ. ಬಿ, ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಥ್ರೊ ಬಾಲ್‌ ನಲ್ಲಿ ಶ್ರೀಕಮಲ, ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಅನುಷಾ ಹೆಚ್, ದೀಪಾ ಜೆ. ಮೈದೂರ್‌ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಡೆದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಸುಪ್ರಿಯ ಎಂ, ನಂದಿತ ವಿ, ಪ್ರಕಾಶ್‌, ರೇಣುಕಾ ಎಂ, ಧನುಷ್‌ ಕೆ. ಜೆ, ಸುಪ್ರಿಯ, ಹರ್ಷಿತ  ಎ. ಎನ್ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಾಲಕರ ವಿಭಾಗದಲ್ಲಿ ವೈಭವ್‌‌ ಎಸ್, ವಿನಾಯಕ ಬಿ ತಮಿಳು ನಾಡಿನ ದಿಂಡಿಗಲ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲ್‌ಬಾಲ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಯಚೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಭಾಗವಹಿಸಿದ ಶಶಾಂಕ ಕೆ. ಎಸ್, ಕಾರ್ತಿಕ್  ಟಿ. ವಿ, ಸುಹಾಸ್‌, ಧನುಷ್‌ ಎಲ್, ಅವನೀಶ್‌ ಡಿ. ಹೆಚ್ , ಶಿವರಾಜ್‌ ಹೆಚ್.‌ ಬಿ ಇವರಲ್ಲಿ ಕಾರ್ತಿಕ್  ಟಿ. ವಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಆದಿತ್ಯ ದೀಪಕ್‌, ಅಭಿಷೇಕ್‌ ವೈ. ಎಂ ಬೆಸ್ಟ್‌ ಆಟಗಾರರಾಗಿದ್ದರು. ಆದಿತ್ಯ ದೀಪಕ್‌ ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್‌ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾನೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ಕ್ರೀಡೆಗಳಲ್ಲಿ ಉಲ್ಲಾಸ್‌ ರೆಡ್ಡಿ, ಸಿದ್ಧನಗೌಡ, ಹರೀಶ್‌ ಹೆಚ್.‌ ಕೆ ಇವರು ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ, ಸೂಫಿಯಾನ್‌ ಎಸ್.‌ ಎಂ ಚಿಕ್ಕೋಡಿ ಜಿಲ್ಲೆಯಲ್ಲಿ ನಡೆದ ಷಟಲ್‌ ಬ್ಯಾಡ್ಮಿಂಟನ್‌ ನಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕರಾಟೆಯಲ್ಲಿ ಮನೋಜ್‌ ಶೀಲವಂತ್‌ ಮತ್ತು ಮಧು, ಹಾವೇರಿ ಜಿಲ್ಲೆಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಶಿವರಾಜ್‌ ಸಿ. ಜೆ ಮತ್ತು ವಿನಾಯಕ ಕೆ. ಹಾಗೂ ಮೈಸೂರು ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್‌ ಟೆನ್ನಿಸ್‌ನಲ್ಲಿ ಮಲ್ಲಿಕಾರ್ಜುನ್  ಜೆ. ಎಸ್ ಮತ್ತು ಅಭಿಷೇಕ್‌ ಬಿ. ಎಸ್ ಉತ್ತಮ ಪ್ರದರ್ಶನ ನೀಡಿ ಸಿದ್ಧಗಂಗಾ ಕಾಲೇಜಿನ ಉತ್ತಮ ಕ್ರೀಡಾಪಟುಗಳೆಂದು ಹೆಸರು ಗಳಿಸಿದ್ದಾರೆ.

ರಾಷ್ಟ್ರ – ರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆ ಮೆರೆದ ಬಾಲಕ – ಬಾಲಕಿಯರಿಗೆ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.

Friday, December 16, 2022

 ಪ್ರತಿಭಾ ಕಾರಂಜಿ : ಸಿದ್ಧಗಂಗಾ ಫಲ್ಗುಣಿ ರಾಜ್ಯ ಮಟ್ಟಕ್ಕೆ ಆಯ್ಕೆ


ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ  ಫಲ್ಗುಣಿ ಜಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಂತ 3 ರಲ್ಲಿ ಕನ್ನಡ ಭಾಷಾ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ನಿರ‍್ಗಳವಾಗಿ ಭಾಷಣ ಮಾಡಿದ ಈ ಬಾಲಕಿ ಕ್ಲಸ್ಟರ್‌, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಈಗ ರಾಜ್ಯ ಮಟ್ಟದ ಸ್ರ‍್ಧೆಗೆ ರ‍್ಹಳಾಗಿದ್ದಾಳೆ. ಸುಪ್ರಿಯಾ ಮತ್ತು ವಿ. ಗಿರಿ ಯವರ ಪುತ್ರಿ ಫಲ್ಗುಣಿಗೆ ಶಾಲಾ ಆಡಳಿತ ಮಂಡಳಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

Wednesday, November 2, 2022

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ವೈಶಿಷ್ಠ್ಯ ಪೂರ್ಣ ಆಚರಣೆ



ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
ವೈಶಿಷ್ಠ್ಯ  ಪೂರ್ಣ ಆಚರಣೆ
ನ.೧
೬೭ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಸಿದ್ಧಗಂಗಾ ಶಾಲಾ-ಕಾಲೇಜಿನ ಮಕ್ಕಳು ವೈಶಿಷ್ಠö್ಯಪೂರ್ಣವಾಗಿ ಆಚರಿಸಿದರು. ಬೆಳಿಗ್ಗೆ ೦೮:೩೦ಕ್ಕೆ ಸಂಸ್ಥೆಯ ಹಿರಿಯ ಶಿಕ್ಷಕಿ ರಮಾದೇವಿ ಅವರಿಂದ ಧ್ವಜಾರೋಹಣೆ ನೆರವೇರಿತು. ನಾಡಗೀತೆ ನಂತರ ಉದಯವಾಗಲಿ ಕನ್ನಡನಾಡು, ಬಾರಿಸು ಕನ್ನಡ ಡಿಂಡಿಮ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ಗೀತೆಗಳನ್ನು ಒಟ್ಟಾಗಿ ಹಾಡಿ ಮಕ್ಕಳು ನಾಡಪ್ರೇಮ, ಭಾಷಾ ಪ್ರೇಮವನ್ನು ಸಂಗೀತದ ಮೂಲಕ ಪ್ರಸ್ತುತ ಪಡಿಸಿದರು. ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ್‌ರವರು ಮೈಸೂರು ರಾಜ್ಯ ಹೇಗೆ ಕರ್ನಾಟಕ ಎಂಬ ಹೆಸರು ಪಡೆಯಿತು ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತಾ ಕನ್ನಡ ಭಾಷೆಗೆ ವಿದೇಶಿಯರ ಕೊಡುಗೆಯನ್ನು ಸ್ಮರಿಸಿದರು. ೧೦ನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದಳು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ಸಿ. ನಿರಂಜನ್‌ರವರು ವಂದನಾರ್ಪಣೆ ಸಲ್ಲಿಸಿದರು. ಶಾಲಾ-ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮ ವೀಕ್ಷಿಸಿದರು. ಕನ್ನಡ ಬಾವುಟಗಳಿಂದ ಸಿಂಗಾರಗೊAಡ ಶಾಲಾ ಆವರಣ, ಕನ್ನಡಾಂಬೆಯ ಪೂಜಾ ಕಾರ್ಯಕ್ರಮದಿಂದಾಗಿ ಕಾರ್ಯಕ್ರಮ ಹೆಚ್ಚು ಮೆರಗು ಪಡೆಯಿತು. 



 

Thursday, September 1, 2022

ಕರಾಟೆಯಲ್ಲಿ ನಮ್ರತಾ ವಿಭೂತಿ ಸಾಧನೆ


2022 ರ ಡಾ. ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಸಿದ್ಧಗಂಗಾ ಬಾಲಕಿ ನಮ್ರತಾ U ವಿಭೂತಿ ಕಟಾ ಮತ್ತು ಕುಮ್ಟೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 28 ರಂದು ನಡೆದ ಈ ಸ್ಪರ್ಧೆಗಳನ್ನು ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿಯವರು ಆಯೋಜಿಸಿದ್ದರು. ಪದಕಗಳನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿರುವ ನಮ್ರತಾಳನ್ನು ತಾಯಿ ಪದ್ಮ ಮತ್ತು ತಂದೆ ಉಮಾಪತಿಯವರು ಹಾಗೂ ಸಿದ್ಧಗಂಗಾ ಶಾಲೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ. 



12 ಅಡಿ ಎತ್ತರದ ಸಿದ್ಧಗಂಗಾ ಪರಿಸರ ಸ್ನೇಹಿ ಗಣೇಶ ಮೂರ್ತಿ












12 ಅಡಿ ಎತ್ತರದ ಸಿದ್ಧಗಂಗಾ ಪರಿಸರ ಸ್ನೇಹಿ ಗಣೇಶ ಮೂರ್ತಿ 
ಪ್ರತಿ ವರ್ಷದಂತೆ ಈ ವರ್ಷವೂ ದಾವಣಗೆರೆಯ ಸಿದ್ಧಗಂಗೆಯ ಆವರಣದಲ್ಲಿ ಬೃಹತ್ ಗಣಪ ಸಭಾ ಮಂಟಪದಲ್ಲಿ ಕಂಗೊಳಿಸುತ್ತಿದ್ದಾನೆ. 12 ಅಡಿ ಎತ್ತರದ ಪೇಪರ್ ಗಣೇಶ ಸರ್ವಾಂಗ ಸುಂದರವಾಗಿದ್ದು ಶಿಲಾ ಮೂರ್ತಿಯಂತೆ ಕಾಣುತ್ತಿದ್ದಾನೆ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್, ರಾಜೇಶ್,ರಾಜಶೇಖರ್, ಹೀನಾ ಕೌಸರ್, ಸ್ವಾತಿ, ಪ್ರಿಯಾಂಕ, ಇವರ ಕೈ ಚಳಕದಿಂದ ಮೂಡಿದ ಈ ಗಣಪನನ್ನು ತಯಾರಿಸುವಲ್ಲಿ 9 ಮತ್ತು 10 ನೇ ತರಗತಿ ಮಕ್ಕಳು ಕೈ ಜೋಡಿಸಿದ್ದರು. ತಾವೇ ರೂಪಿಸಿದ ಗಣಪ ಎಂಬ ಹೆಮ್ಮೆ ಶಾಲಾ ಮಕ್ಕಳದು. ಪ್ರತಿಷ್ಠಾಪನೆಗೆ ಮುನ್ನ ಪ್ರಮುಖ ಬೀದಿಗಳಲ್ಲಿ ಗಣಪನ ಮೆರವಣಿಗೆ ಮಾಡಿದರು. ಮಕ್ಕಳು ಸಾಂಪ್ರದಾಯಿಕ ಉಡುಗೆ ಧರಿಸಿ ಭಕ್ತಿಗೀತೆಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಕಣ್ಮನ ಸೆಳೆಯುವಂತಿತ್ತು. ನಂದಿಕೋಲು, ಪಟಗಳು, ಬಣ್ಣ ಬಣ್ಣದ ಛತ್ರಿಗಳು ಗಣಪನ ಶೋಭೆಯನ್ನು ಇನ್ನಷ್ಟು ಹೆಚ್ಚಿಸಿತು. ಮಧ್ಯಾನ್ಹ 12 ಗಂಟೆಗೆ ಗಣೇಶನ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು. ಸಾರ್ವಜನಿಕರ ವೀಕ್ಷಣೆಗೆ ಅಪರೂಪದ ಈ ಪರಿಸರ ಸ್ನೇಹಿ ಪೇಪರ್ ಗಣಪತಿ ಸೆಪ್ಟೆಂಬರ್ 9 ರ ವರೆಗೆ ಲಭ್ಯವಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮತ್ತು  ನಿರ್ದೇಶಕ ಜಯಂತ್ ಅವರು ತಿಳಿಸಿದ್ದಾರೆ. 

Tuesday, August 30, 2022

ಸಿದ್ಧಗಂಗಾ ಸ್ಕೌಟ್-ಗೈಡ್ಸ್ ಮಕ್ಕಳಿಂದ ಪರಿಸರ ಗಣಪತಿ

 













ವಿಘ್ನನಿವಾರಕ, ವಿದ್ಯಾ ಗಣಪತಿಯ ವಿವಿಧ  ಆಕಾರ - ಗಾತ್ರದ  ಗಣಪತಿಗಳು ಸಿದ್ಧಗಂಗಾ ಅಂಗಳದಲ್ಲಿ ಇಂದು ಕಂಗೊಳಿಸಿದವು . ವಿಶೇಷವೆಂದರೆ ಈ ಎಲ್ಲಾ ಗಣಪತಿಗಳು ಪರಿಸರ ಸ್ನೇಹಿ ಗಣಪಗಳಾಗಿದ್ದವು . ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ,ಗೈಡ್ಸ್  ಮಕ್ಕಳು ಮೈದಾ ,ಅರಿಶಿನ ,ಜೇಡಿ ಮಣ್ಣು ,ಸೋಪು ,ಗೋಧಿಹಿಟ್ಟು  ಹೀಗೆ  ಸ್ಥಳೀಯ ಲಭ್ಯ ಪರಿಸರ ವಸ್ತುಗಳಿಂದ ಗಣೇಶನನ್ನು ನಿರ್ಮಿಸಿದ್ದರು . ಪುಟ್ಟ ಪುಟ್ಟ  ಕೈಗಲ್ಲಿ  ಸುಂದರ ಗಣಪಗಳು ವಿಶೇಷ  ಭೂಷಣಗಳೊಂದಿಗೆ  ಅಲಂಕೃತಗೊಂಡಿದ್ದವು .  ಎಲ್ .ಟಿ  ಶಶಿಕಲಾ ಅವರ  ನೇತೃತ್ವದಲ್ಲಿ  ಶಾಲೆಯ ಗೈಡ್ಸ್  ಶಿಕ್ಷಕರಾದ ನಿರ್ಮಲ , ಮಂಜುಳ , ದೀಪ ಎನ್ , ಸುನೀತಾ , ಸುನೀತಾಬಾಯಿ , ವೇದಾವತಿ , ವಾಹಿದಾ  ಮತ್ತು  ಸ್ಕೌಟ್ ಮಾಸ್ಟರ್ ಗಳಾದ  ಆರೋಗ್ಯಮ್ಮ ,ದುಗ್ಗಪ್ಪ ,ಮಹೇಶ್ , ಶ್ರೀನಿವಾಸ್ ,ಸಾಮ್ಯಾನಾಯ್ಕ , ಎ ಡಿ ಸಿ  ಸ್ಕೌಟ್  ಡಾ।। ಜಯಂತ್ , ಎ ಡಿ ಸಿ ಗೈಡ್ಸ್  ರೇಖಾರಾಣಿ , ಖಜಾಂಚಿ ಗಾಯತ್ರಿಯವರು ಮಕ್ಕಳಿಗೆ ಮಾರ್ಗದರ್ಶನ  ನೀಡಿ ಗಣೀಶ ಹಬ್ಬದ ಸಂಭ್ರಮ ಹಂಚಿಕೊಂಡರು .

Tuesday, August 16, 2022

75 th INDEPENDENCE DAY





 











ಸ್ವಾತಂತ್ರ ಸಂಭ್ರಮದ  75 ವರ್ಷಗಳ ಇತಿಹಾಸ  ತೆರೆದಿಟ್ಟ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು

ಕ್ಷಣಕ್ಕೊಂದು ದೃಶ್ಯ , ಗಳಿಗೆಗೊಂದು ಘಟನೆ . ವೀಕ್ಷಕರು  ಕಣ್ಣು ಮಿಟುಕಿಸಲೂ  ಇಚ್ಛೆ ಪಡದಂತೆ  ಸಹಸ್ರಾರು ಮಕ್ಕಳ ನೃತ್ಯ  ವೈಭವವನ್ನು  ಇಂದು ನಗರದ ಕ್ರೀಡಾಂಗಣದಲ್ಲಿ  ಕಣ್ತುಂಬಿಕೊಂಡರು.  ಸಿದ್ದಗಂಗಾ ಸಂಸ್ಥೆಯ ಶಾಲಾ ಕಾಲೇಜಿನ ಎರಡು ಸಾವಿರಕ್ಕೂ ಹೆಚ್ಚು  ಮಕ್ಕಳು ಅಮೃತ ಮಹೋತ್ಸವಕ್ಕೆ  " ವಂದೇ ಮಾತರಂ " ನೃತ್ಯ ರೂಪಕದ  ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದರು. 

ಕಾರ್ಗಿಲ್ ಯುದ್ಧ , ಪುಲ್ವಾಮ ಘಟನೆ, ಯೋಧರ ಹೋರಾಟದ ಮೂಲಕ ಅವರಿಗೆ ಶ್ರದ್ಧಾಂಜಲಿ  ಸಲ್ಲಿಸಿದರೆ , ಭಾರತೀಯ  ನೃತ್ಯ ಪರಂಪರೆಗಳನ್ನು  ಏಕ ಕಾಲದಲ್ಲಿ ಅನಾವರಣಗೊಳಿಸಿ  ವೈವಿಧ್ಯತೆಯಲ್ಲಿ ಏಕತೆ ಮೆರೆದರು. ಭರತನಾಟ್ಯ , ಮಣಿಪುರಿ ,ಕಥಕ್ಕಳಿ , ಪೂಜಾ ಕುಣಿತ , ನಂದಿಕೋಲು , ಜನಪದ  ನೃತ್ಯಗಳಲ್ಲಿ ಏಕ ಕಾಲದಲ್ಲಿ ಮಕ್ಕಳು ಗೀತೆಗೆ ತಕ್ಕ ಹೆಜ್ಜೆ ಹಾಕುತ್ತಾ ಇಡೀ  ಕ್ರೀಡಾಂಗಣವನ್ನು  ತ್ರಿವರ್ಣ ಧ್ವಜಮಯ  ಗೊಳಿಸಿದರು . ಪ್ರಾರಂಭದಲ್ಲಿ ವಿಜ್ಞಾನಿಗಳು  ಇಸ್ರೋ  ಸಂಸ್ಥೆಯಿಂದ  ರಾಕೆಟ್ ಉಡಾವಣೆಯನ್ನು  ಯಶಸ್ವಿಯಾಗಿ  ಮಾಡಿದರು . ನಂತರ ಇಡೀ ಭೂಮಂಡಲವನ್ನು  ವ್ಯಾಪಿಸಿದ  ಕರೋನಾ  ವಿರುದ್ಧ  ಭಾರತೀಯರು  ಹೋರಾಟ ನಡೆಸಿದ್ದು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿದು ಕರೋನಾ ಮೆಟ್ಟಿ ನಿಂತ  ದೃಶ್ಯ  ಊಹೆಗೂ ಮೀರಿದ್ದಾಗಿತ್ತು.  ವೈದ್ಯರು  ಕರೋನಾ ರೋಗಿಗಳನ್ನು  ಉಳಿಸಲು  ನಡೆಸಿದ ಹೋರಾಟ ,ಕರೋನಾ ವೈರಸ್ ಗಳು  ಸ್ವೇಚ್ಚೆ ಯಾಗಿ  ಜನ ಜಂಗುಳಿಯನ್ನು  ಕಂಗಾಲಾಗಿಸಿದ ಮನಕಲುಕುವ ದೃಶ್ಯ ಎರಡು ವರ್ಷಗಳ  ಕರೋನಾ ಆಘಾತವನ್ನು ನೆನಪಿಸುವಂತೆ  ಮಾಡಿತು . ಕ್ರೀಡಾಂಗಣ ಸ್ತಬ್ಧವಾಗಿ  ಕೇವಲ ಚಪ್ಪಾಳೆ  ಶಬ್ದ  ಮಾತ್ರ  ಕೇಳುತಿತ್ತು . ದೃಶ್ಯಕ್ಕೆ  ತಕ್ಕ ಪರಿಕರ , ಕಟೌಟ್ ಗಳು ನೃತ್ಯ ರೂಪಕದ ಶೋಭೆ ಹೆಚ್ಚಿಸಿತು . ಹಿನ್ನಲೆಯಲ್ಲಿ  ಸುಮಾರು 900  ಬಾಲಕರು ಜೈಹಿಂದ್ ,ಇಂಡಿಯಾ ,ಅಬ್ದುಲ್ ಕಲಾಂ ,ಪಿ . ಎಸ್ . ಎಲ್ . ವಿ ,ಪುಲ್ವಾಮ  ಹೀಗೆ  ಸಂದರ್ಭಕ್ಕೆ  ತಕ್ಕಂತೆ  ಇಂಗ್ಲಿಷ್  ಅಕ್ಷರ  ಜೋಡಣೆ ನಡೆಸಿ ವೀಕ್ಷಕರನ್ನು  ಬೆರಗಾಗಿಸಿದರು. ಡಾll ಜಯಂತ್ ರವರ ಪರಿಕಲ್ಪನೆಯಲ್ಲಿ  ರೂಪುಗೊಂಡ ನೃತ್ಯ ರೂಪಕಕ್ಕೆ  ಸಂಸ್ಥೆಯ  ಎಲ್ಲ  ಶಿಕ್ಷಕ - ಶಿಕ್ಷಕಿಯರು  ಸಹಕರಿಸಿ  ಯಶಸ್ವಿಗೊಳಿಸಿ ಕೊಟ್ಟಿದ್ದು  ಪಾಲಕರ ಸಂಭ್ರಮ  ಇಮ್ಮಡಿಗೊಳಿಸಿತು .  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು  ವಿಜ್ಞಾನಿ ಕಲಾಂ ಮತ್ತು ಸಾರಾಭಾಯಿ  ಅವರ ಬೃಹತ್ ಚಿತ್ರ ಮೂಡಿಸಿದ  ಮಕ್ಕಳ ಏಕಾಗ್ರತೆಗೆ  ವೀಕ್ಷಕರು ಬೆರಗಾದರು. 



 

Friday, August 12, 2022

FLAG MARCH 75th INDEPENDENCE DAY


 


75 ನೇ  ಸ್ವಾತಂತ್ರ ಸಂಭ್ರಮ 
ಸಾಗರದಂತೆ  ಹರಿದು ಬಂದ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು 

ಎತ್ತ ನೋಡಿದರೂ ತ್ರಿವರ್ಣ ಧ್ವಜಗಳು , ಸಾಗರದಂತೆ  ಹರಿದು ಬಂದ ವಿದ್ಯಾರ್ಥಿ ಸಮೂಹ . ಸೂರ್ಯ ರಶ್ಮಿಗೆ ಮಿರಮಿರನೆ ಮಿಂಚುತ್ತಿದ್ದ ಬಾವುಟಗಳು . ಮುಗಿಲು ಮುಟ್ಟಿದ ಉತ್ಸಾಹ. " ಜೈ ಭಾರತ್ ಮಾತಾಕೀ " , " ವಂದೇ ಮಾತರಂ " ಘೋಷಣೆಗಳು  ರಸ್ತೆಗಳಲ್ಲಿ ಅನುರಣಿಸಿತು . ನಾಗರೀಕರು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು . ಶಿಸ್ತಿನಿಂದ ಹೆಜ್ಜೆ ಹಾಕಿದ ಸಾವಿರಾರು ಮಕ್ಕಳು ರಾಷ್ಟ್ರಭಕ್ತಿಯನ್ನು ಆವಾಹಿಸಿಕೊಂಡಿದ್ದರು . ಬಿಸಿಲು - ಮಳೆ  ಲೆಕ್ಕಿಸದೆ  ಡಾಂಗೆ ಪಾರ್ಕ್ ರಸ್ತೆಯಿಂದ - ಶಿವಪ್ಪಯ್ಯ ಸರ್ಕಲ್ - ಜಯದೇವ ಸರ್ಕಲ್ - ಅಂಬೇಡ್ಕರ್ ಸರ್ಕಲ್ - ವಿದ್ಯಾರ್ಥಿ ಭವನ  ಸರ್ಕಲ್ ದಾಟಿ ಸಂಸ್ಥೆಯತ್ತ ಹೆಜ್ಜೆ ಹಾಕಿದ ಮಕ್ಕಳು ರಸ್ತೆಯುದ್ದಕ್ಕೂ ಸಂಚಲನ ಮೂಡಿಸಿದರು . 


ಈ ಬೃಹತ್ ಮೆರವಣಿಗೆಗೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ P. ಮುದ್ದಜ್ಜಿಯವರು ಚಾಲನೆ ನೀಡಿದರು . ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಜಿ .ಆರ್.ತಿಪ್ಪೇಶಪ್ಪ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ  ನಿರಂಜನಮೂರ್ತಿ , ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ್ , ಯುವ ಕಾಂಗ್ರೆಸ್ ನಾಯಕ  K . G . ಶಿವಕುಮಾರ್ , ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು .  ಬ್ಯಾoಡ್  ಸೆಟ್ಟಿನ ಸುಮಧುರ ನಾದಕ್ಕೆ ಮಕ್ಕಳು ಶಿಸ್ತಿನಿಂದ  ಹೆಜ್ಜೆ  ಹಾಕಿದರು . ರಾಷ್ಟ್ರಗೀತೆ  ಹಾಡುವುದರ ಮೂಲಕ ಪ್ರಾರಂಭವಾದ ಮೆರವಣಿಗೆ ರಾಷ್ಟ್ರ  ಗೀತೆಯೊಂದಿಗೆ ಮುಕ್ತಾಯಗೊಂಡಿತು . " ಆಜಾದಿ ಕೀ ಅಮೃತ್ ಮಹೋತ್ಸವ " ವನ್ನು  ಸಿದ್ದಗಂಗಾ  ವಿದ್ಯಾ  ಸಂಸ್ಥೆ  ಅರ್ಥಪೂರ್ಣವಾಗಿ  ಆಚರಿಸಿತು . ಸಂಸ್ಥೆಯ ಕಾರ್ಯದರ್ಶಿ D.S. ಹೇಮಂತ್  ಮತ್ತು  ನಿರ್ದೇಶಕ ಡಾll ಜಯಂತ್ ರವರ  ಮಾರ್ಗದರ್ಶನದಲ್ಲಿ  ನಡೆದ ಈ ಅಭೂತ ಪೂರ್ವ  ಕಾರ್ಯಕ್ರಮದಲ್ಲಿ  ಸಹಕರಿಸಿದ ಪ್ರತಿಯೊಬ್ಬರನ್ನೂ  ಸಂಸ್ಥೆಯ ಮುಖ್ಯಸ್ಥೆ  ಜಸ್ಟಿನ್  ಡಿ'ಸೌಜ  ವಂದಿಸಿದರು. 

Saturday, July 30, 2022

NDA ಗೆ ಆಯ್ಕೆಯಾದ ಸಿದ್ಧಗಂಗಾ ಕಾಲೇಜಿನ ಹೇಮಂತ್ ಸ್ವಾಮಿಗೆ ಆತ್ಮೀಯ ಸನ್ಮಾನ - ಬೀಳ್ಕೊಡುಗೆ

















ಸಿದ್ಧಗಂಗೆಯ ಅಂಗಳದಲ್ಲಿ ಸಂಭ್ರಮದ ಆಚರಣೆ. ಕರ್ನಾಟಕ ಪ್ರತಿನಿಧಿಸಿ ಯು ಪಿ ಎಸ್ ಸಿ  ಪರೀಕ್ಷೆಯಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೇಮಂತ್ ಸ್ವಾಮಿಗೆ ಹೃದಯ ಸ್ಪರ್ಶಿ ಸನ್ಮಾನ ಮತ್ತು ಬೀಳ್ಕೊಡುಗೆ. ಸಂಸ್ಥೆಯ ಸಹಸ್ರಾರು ಮಕ್ಕಳು ಅಭಿಮಾನದಿಂದ ಹೇಮಂತ್ ಸ್ವಾಮಿಯನ್ನು ಆದರ್ಶರೂಪದಲ್ಲಿ ಕಂಡರು. ವಾಯುಸೇನೆಯಲ್ಲಿ ತರಬೇತಿ ಪಡೆಯಲು ತೆರಳುತ್ತಿರುವ ತಮ್ಮ ಆತ್ಮೀಯ ಸ್ನೇಹಿತನನ್ನು ಪುಷ್ಪವೃಷ್ಠಿಗರೆದು ರಾಷ್ಟ್ರಧ್ವಜ ಗೌರವ ನೀಡಿ ಬೀಳ್ಕೊಟ್ಟರು. ದಾವಣಗೆರೆ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ ಸಿದ್ಧಗಂಗೆಯ ಈ ಪ್ರತಿಭಾವಂತನನ್ನು ಗುರು ವೃಂದದವರು ಹಾರೈಸಿ-ಹರಸಿ ಕಳಿಸಿಕೊಟ್ಟರು. 

ಭಾರತದಾದ್ಯಂತ ಪರೀಕ್ಷೆ ಬರೆದ 8 ಲಕ್ಷ ಅಭ್ಯರ್ಥಿಗಳಲ್ಲಿ 8 ಸಾವಿರ ಅಭ್ಯರ್ಥಿಗಳು ದ್ವಿತೀಯ ಹಂತಕ್ಕೆ ಬರುತ್ತಾರೆ. ಇದರಲ್ಲಿ 250 ಅಭ್ಯರ್ಥಿಗಳು ತೃತೀಯ ಹಂತಕ್ಕೆ ಬರುತ್ತಾರೆ. ಅಂತಿಮ ಆಯ್ಕೆಯಲ್ಲಿ 81 ಅಭ್ಯರ್ಥಿಗಳು ಉಳಿಯುತ್ತಾರೆ. ಆ 81 ಅದೃಷ್ಠವಂತರಲ್ಲಿ ಹೇಮಂತ್ ಸ್ವಾಮಿ ಎಂಬುದು ಆತನ ನಿರಂತರ ಪ್ರಯತ್ನ, ಸತತ ಪರಿಶ್ರಮದ ಪ್ರತಿಫಲ. ಅಪರೂಪದ ಈ ಸಾಧನೆಯನ್ನು ಕಂಪ್ಯೂಟರ್ ವಿಭಾಗದ ಪ್ರಾಧ್ಯಾಪಕರಾದ ನಫೀಸ್‌ರವರು ವಿವರಿಸಿದರು. ಪ್ರಾಚಾರ್ಯ ನಿರಂಜನ್, ನಿರ್ದೇಶಕ ಡಾ|| ಜಯಂತ್, ಹಿರಿಯ ಉಪನ್ಯಾಸಕರಾದ ಎಲ್. ವಿ. ಸುಬ್ರಹ್ಮಣ್ಯ, ಸಿದ್ದಪ್ಪ, ನರಸಿಂಹ, ಲಕ್ಷ್ಮೀ ನಾರಾಯಣ, ಜಯಣ್ಣ ಇಟಗಿ, ಪ್ರದೀಪ್, ಸದಾಶಿವ ಹೊಳ್ಳ, ವಾಣಿಶ್ರೀ ಇವರು ಎಲ್ಲ ಉಪನ್ಯಾಸಕರೊಡಗೂಡಿ ಹೇಮಂತ್ ಸ್ವಾಮಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಹೂಮಳೆಗರೆದು ಗೌರವಿಸಿದರು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ, ಉಪ ಪ್ರಾಚಾರ್ಯೆ ಗಾಯಿತ್ರಿ ಚಿಮ್ಮಡ್ ಹಾಜರಿದ್ದರು. ಶಾಲಾ ಕಾಲೇಜಿನ ಮಕ್ಕಳು ಹೇಮಂತ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಸಿದ್ಧಗಂಗಾ ಸಂಸ್ಥೆಯ  ತನ್ನ ಸ್ನೇಹಿತರು ಮತ್ತು ಗುರುವೃಂದದವರು ನೀಡಿದ ಈ ಅವಿಸ್ಮರಣೀಯ ಗೌರವವನ್ನು ತಾನು ಎಂದೂ ಮರೆಯುವುದಿಲ್ಲವೆಂದು ಕೃತಜ್ಞತೆಯಿಂದ ವಿನಯದಿಂದ ಹೇಮಂತ್ ಸ್ವಾಮಿ ಎಲ್ಲರನ್ನೂ ವಂದಿಸಿದನು.

Friday, July 22, 2022

CBSE GRADE 10 RESULT 2021-22








 ಸಿದ್ಧಗಂಗಾ  ಶಾಲೆಗೆ 98.43 % ಫಲಿತಾಂಶ - ಹರ್ಷಿತಾಗೆ 97%
ಕೇಂದ್ರ  ಪಠ್ಯಕ್ರಮದ 10 ನೇ ತರಗತಿ  ಫಲಿತಾಂಶ ಪ್ರಕಟವಾಗಿದ್ದು  ಸಿದ್ಧಗಂಗಾ ಶಾಲೆಯ ಹರ್ಷಿತಾ ಸಿ ಪಿ 500 ಕ್ಕೆ  486 ಅಂಕಗಳನ್ನು ಪಡೆದು ಶೇಕಡಾ 97 ಅಂಕ  ಗಳಿಸಿದ್ದಾಳೆ . ಇಂಗ್ಲಿಷ್ 92, ಕನ್ನಡ 99, ಗಣಿತ 99, ವಿಜ್ಞಾನ 100, ಸಮಾಜ  96 ಅಂಕಗಳನ್ನು ಗಳಿಸಿ ಶಾಲೆಗೇ ಪ್ರಥಮ ಸ್ಥಾನ ಪಡೆದಿದ್ದಾಳೆ. ನಿತ್ಯಶ್ರೀ ಕೊಂತಿಕಲ್ 96 % , ಮಮತ  ಜೆ  ಬಿ 96%, ಸಹನಾ ಎಲ್  95% ,ಮನೋಜ್ ಕೆ ಟಿ 95%, ಮಾನ್ಯ ಪಿ  94%, ಜಹ್ರಾ ಫಾತೀಮಾ 93%, ನೇಹಾ ಎಸ್ ನಾಯ್ಕ್  93%, ವರ್ಷಾ  93%, ಮುಜಕಿರ್ 91% , ಅಫ್ರಾ ಜೈನಬ್ 90%, ಮಧು ಆರ್ 90% ಪಡೆದಿದ್ದಾರೆ . ಸಹನಾ ಎಲ್ ಗಣಿತದಲ್ಲಿ ಮತ್ತು ಹರ್ಷಿತಾ ಸಿ ಪಿ ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ .12 ಮಕ್ಕಳು ಶೇಕಡಾ 90ಕ್ಕೂ  ಹೆಚ್ಚು , 20 ಮಕ್ಕಳು  ಶೇಕಡಾ 80ಕ್ಕೂ  ಹೆಚ್ಚು ಅಂಕಗಳಿಸಿದ್ದಾರೆ.ಅತ್ಯುನ್ನತ ಶ್ರೇಣಿಯಲ್ಲಿ 20 ಮಕ್ಕಳು, ಪ್ರಥಮ ದರ್ಜೆಯಲ್ಲಿ 38 ಮಕ್ಕಳು, ದ್ವಿತೀಯ  ದರ್ಜೆಯಲ್ಲಿ 5 ಮಕ್ಕಳು ಸ್ಥಾನ ಪಡೆದಿದ್ದಾರೆ. 

ಅತ್ಯುತ್ತಮ  ಫಲಿತಾಂಶ ನೀಡಿರುವ 10 ನೆೇ ತರಗತಿಯ ಮಕ್ಕಳಿಗೆ ಮತ್ತು ಬೋಧಕ ವರ್ಗದವರಿಗೆ ಪ್ರಾಚಾರ್ಯೆರಾದ  ಗಾಯತ್ರಿ ಚಿಮ್ಮಡ್ , ಉಪ  ಪ್ರಾಚಾರ್ಯೆ ಮಂಜುಳಾ ಹಂಪಾಳಿ , ಕಾರ್ಯದರ್ಶಿ ಶ್ರೀ ಹೇಮಂತ್ ಡಿ ಎಸ್ , 
ನಿರ್ದೇಶಕ  ಡಾ ।। ಜಯಂತ್ , ಮುಖ್ಯಸ್ಥೆ  ಜಸ್ಟಿನ್ ಡಿ'ಸೌಜ  ಅಭಿನಂದಿಸಿದ್ದಾರೆ. 

Saturday, June 18, 2022

2 PUC RESULT 2021-22


 


ಸಿದ್ಧಗಂಗಾ  P U  ಕಾಲೇಜಿಗೆ  ಅಮೋಘ ಫಲಿತಾಂಶ

ವಿನಾಯಕನಿಗೆ  600 ಕ್ಕೆ 593

ಏಪ್ರಿಲ್ - ಮೇ ನಲ್ಲಿ ನಡೆದ ದ್ವಿತೀಯ P U ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ದಾವಣಗೆರೆಯ ಪ್ರತಿಷ್ಠಿತ ಕಾಲೇಜು ಎಂದೇ ಪ್ರಸಿದ್ದವಾಗಿರುವ  ಶ್ರೀ  ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ  ವಿನಾಯಕ L  600 ಕ್ಕೆ 593 ಅಂಕಗಳಿಸಿ ಪ್ರಥಮ ಸ್ಥಾನದಲ್ಲಿದ್ದಾನೆ . ಚಿನ್ಮಯ್ M D  591,ರಕ್ಷಿತ S R  589,ದಿವ್ಯಶ್ರೀ   589,ಸೋನು ನಿಂಗರೆಡ್ಡಿ  588, ರಾಘವೇಂದ್ರ 587,ಕಿರಣ್ V  586,ಮಂಜುನಾಥ ಸ್ವಾಮಿ  586, ಪೂಜಾ N U ,ಶಾಹಿದ್  ಹುಸೇನ್ T A  ಮತ್ತು  ಸಿದ್ದನಗೌಡ ಹಿತ್ತಲಮನಿ 585 ಅಂಕಗಳನ್ನು ಪಡೆದು ಅದ್ವಿತೀಯ ಸಾಧನೆ ತೋರಿದ್ದಾರೆ . 

ಹಿಂದಿ - 1 ,ಸಂಸ್ಕೃತ -2, ಭೌತಶಾಸ್ತ್ರ - 14, ರಾಸಾಯನಶಾಸ್ತ್ರ - 22 ,,ಗಣಿತ - 141, ಜೀವಶಾಸ್ತ್ರ - 16 ಮತ್ತು ಕಂಪ್ಯೂಟರ್ ಸೈನ್ಸ್ - 9 ಒಟ್ಟು 205 ಮಕ್ಕಳು ಮೇಲ್ಕಂಡ  ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು   ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ . 307 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ, 251 ಮಕ್ಕಳು  ಪ್ರಥಮ ದರ್ಜೆಯಲ್ಲಿ ಮತ್ತು 20 ಮಕ್ಕಳು ದ್ವಿತೀಯ ದರ್ಜೆಯಲ್ಲಿ  ಉತ್ತೀರ್ಣರಾಗಿ ದಾಖಲೆಯ  ಫಲಿತಾಂಶ ನೀಡಿದ ಪ್ರತಿಯೊಬ್ಬರಿಗೂ  ಕಾಲೇಜಿನ ಪ್ರಾಚಾರ್ಯರಾದ  G. C. ನಿರಂಜನ್ , ಮ್ಯಾನೇಜಿಂಗ್ ಡೈರೆಕ್ಟರ್  ಡಾll ಜಯಂತ್ D. S, ಸಂಸ್ಥೆಯ  ಕಾರ್ಯದರ್ಶಿ D. S. ಹೇಮಂತ್ , ಮುಖ್ಯಸ್ಥರಾದ ಜಸ್ಟಿನ್ ಡಿ'ಸೌಜ  ಮತ್ತು  ಎಲ್ಲಾ  ಬೋಧಕ - ಬೋಧಕೇತರ  ಸಿಬ್ಬಂದಿ  ವರ್ಗದವರು ಅಭಿನಂದಿಸಿದ್ದಾರೆ. 

Wednesday, June 8, 2022

World Environment Day 2022





















ಸಿದ್ಧಗಂಗಾ  ಸಂಸ್ಥೆಯಲ್ಲಿ   ಪರಿಸರ  ದಿನಾಚರಣೆ  
50  ಸಾವಿರ  ಬೀಜದುಂಡೆ  ತಯಾರಿಸಿದ  ಮಕ್ಕಳು 

ಸಿದ್ಧಗಂಗಾ ಶಾಲೆಯಲ್ಲಿ ಮಕ್ಕಳ ಕಲರವ . ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆವತಿಯಿಂದ ಪರಿಸರ  ದಿನಾಚರಣೆ ವಿಶೇಷವಾಗಿ  ಹಮ್ಮಿಕೊಳ್ಳಲಾಗಿತ್ತು . 

ಮೂಟೆ ಮೂಟೆ ಕೆಂಪು  ಮಣ್ಣನ್ನು  ಬಯಲಲ್ಲಿ  ಸುರಿದರು . ವಿವಿಧ  ಜಾತಿಯ  ಕಾಡು ಮರಗಳ  ಬೀಜಗಳನ್ನು ರಾಶಿ  ಹಾಕಿದರು .  ಕ್ಷಣಾರ್ಧದಲ್ಲಿ  ಮಕ್ಕಳು  ತಮ್ಮ ತಮ್ಮ  ಗುಂಪು  ಮಾಡಿಕೊಂಡು ಮಣ್ಣನ್ನು ಹಂಚಿಕೊಂಡರು .  ಬೀಜಗಳನ್ನು  ಬೊಗಸೆಗಳಲ್ಲಿ  ತುಂಬಿಕೊಂಡರು .  ವಾಟರ್ ಬಾಟಲಿಗಳಿಂದ  ನೀರನ್ನು  ಸುರುವಿಕೊಂಡು  ಮಣ್ಣನ್ನು  ಉಂಡೆ ಕಟ್ಟುವ  ಹದಕ್ಕೆ  ಮೃದು  ಮಾಡಿಕೊಂಡರು .  ಪುಟ್ಟ  ಪುಟ್ಟ  ಕೈಗಳಲ್ಲಿ  ಉಂಡೆಗಳು  ರೂಪುಗೊಂಡಂತೆ  ಅದರ ಮಧ್ಯದೊಳಗೆ  ಬೀಜ  ಇಟ್ಟು  ದುಂಡಾದ ಆಕಾರ ಮಾಡಿ ಸಾಲಾಗಿ ಜೋಡಿಸಿದರು .  ವಿವಿಧ  ಗಾತ್ರದ ಬೀಜದುಂಡೆಗಳು  ತಯಾರಾದವು . ಒಣಗಲು  ಹರಡಿದರು .  ಸಾವಿರಾರು ಬೀಜದುಂಡೆಗಳನ್ನು  ಅರಣ್ಯ  ಇಲಾಖೆಯವರು ನಿಗದಿತ ಕಾಡು ಪ್ರದೇಶದಲ್ಲಿ ಬಿಸಾಡುವರು . ಮಳೆಗಾಲದಲ್ಲಿ  ಬೀಜಗಳು ಮೊಳಕೆಯೊಡೆದು ಸಸಿಯಾಗಿ ವೃಕ್ಷಗಳಾಗುತ್ತವೆ  ಎಂದು ತಿಳಿಸಿದಾಗ ಮಕ್ಕಳಲ್ಲಿ ಉತ್ಸಾಹ ತುಂಬಿತು . ಪರಿಸರ ದಿನಾಚರಣೆಯನ್ನು ಸಾರ್ಥಕವಾಗಿ  ಆಚರಿಸಿದ  ಭಾವನೆ  ಉಂಟಾಯಿತು .  ಜಿಲ್ಲಾ ಸ್ಕೌಟ್  ಗೈಡ್  ಸಂಸ್ಥೆಯಿಂದ ಆಗಮಿಸಿದ  ಕಾರ್ಯದರ್ಶಿ ರತ್ನ , ಎ ಡಿ ಸಿ ಹಾಲಪ್ಪ  ಮತ್ತು  ಎಸ್ ಜಿವಿ  ಅಶ್ವಿನಿಯವರು ಹಾಗೂ ಬೇರೆ ಬೇರೆ ಕಾಲೇಜುಗಳಿಂದ  ಬಂದಿದ್ದ  ರೋವರ್, ರೇಂಜರ್ ಗಳು ಮಕ್ಕಳ ಈ ಚಟುವಟಿಕೆಯನ್ನು ಶ್ಲಾಘಿಸಿದರು. ಸಂಸ್ಥೆಯ ಸ್ಕೌಟ್ ಮಾಸ್ಟರ್ ಮತ್ತು ಗೈಡ್ಸ್ ಕ್ಯಾಪ್ಟನ್ ,ಕಬ್ಸ್   ಬುಲ್ ಬುಲ್ ಫ್ಲಾಕ್ ಲೀಡರ್ಸ್ , ಬನ್ನೀಸ್  ಶಿಕ್ಷಕ - ಶಿಕ್ಷಕಿಯರು ಮತ್ತು ಹಲವಾರು ಪಾಲಕರು  ಮಕ್ಕಳ  ಉತ್ಸಾಹವನ್ನು  ಕುತೂಹಲದಿಂದ ವೀಕ್ಷಿಸಿದರು . ಬೀಜದುಂಡೆಗಳನ್ನು  ಕಟ್ಟುವಾಗ  ಹಿನ್ನಲೆಯಲ್ಲಿ  ಸುಶ್ರಾವ್ಯವಾಗಿ  ಮಕ್ಕಳು  ಪರಿಸರ  ಗೀತೆಗಳನ್ನು  ಹಾಡಿದರು . ಸಿದ್ಧಗಂಗಾ  ಸ್ಥಳೀಯ  ಸಂಸ್ಥೆಯ  ಕಾರ್ಯದರ್ಶಿ ಶಶಿಕಲಾರವರು  ಮಾರ್ಗದರ್ಶನ  ನೀಡಿದರು . 

Sunday, May 1, 2022

1 PUC Result - 2022

 1 PUC Result of Siddaganga PU College is published on website www.siddaganga.com

To check result click link here

To check result, enter your register number (8 digit number used for examination), date of birth and click Search

Make sure you choose the proper date of birth as per official record. 











All the Best

To check result click link here

Wednesday, April 20, 2022

MSS Quiz Result 2022

 Dear Students & Parents,

Link for Result - Click here

How to check result.

Once you click the above link, you will see a page asking Examination, MSS Quiz Register Number & your date of birth. Fill the detail and click Search

You will be able to see your result. At bottom of the result page, there will be additional information based on your ranking in MSS Quiz.

All The best.

Link for Result - Click here


In case of any issue, please WhatsApp 8073054295 with the screenshot of issue you are facing.

The Date of birth is defaulted to 01/01/2006, Please ensure you choose the correct year, month and date

MSS Quiz 2022 Event Video


MSS Quiz 2022 Photos


MSS Quiz Promo






Saturday, April 9, 2022

MSS Quiz - 2022

MSS Quiz is a State Level competition held by Siddaganga School & PU College, Davanagere in the name of founder M.S. Shivanna. MSS ಕ್ವಿಜ್ ಸಂಸ್ಥಾಪಕ M.S. ಶಿವಣ್ಣ ಅವರ ಹೆಸರಿನಲ್ಲಿ ದಾವಣಗೆರೆಯ ಸಿದ್ಧಗಂಗಾ ಶಾಲೆ & ಪದವಿ ಪೂರ್ವ ಕಾಲೇಜು ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ.

Instructions for the day of Quiz - ರಸಪ್ರಶ್ನೆ ದಿನದ ಸೂಚನೆಗಳು

    1. Student should reach Siddaganga School, Davanagere and collect Hall Ticket at-least one hour before Quiz Time. ವಿದ್ಯಾರ್ಥಿಗಳು  ಕ್ವಿಜ್ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಹಾಲ್ ಟಿಕೆಟ್ ಅನ್ನು ಪಡೆದುಕೊಳ್ಳಬೇಕು.

    2. Counter for Hall Ticket will be open from 9 AM on Quiz Day.  ಕ್ವಿಜ್  ದಿನದಂದು ಬೆಳಿಗ್ಗೆ 9 ಗಂಟೆಯಿಂದ ಹಾಲ್ ಟಿಕೆಟ್‌ ಕೌಂಟರ್ ತೆರೆದಿರುತ್ತದೆ.

    3. You MUST bring xerox copy of your SSLC Hall Ticket. ನೀವು ನಿಮ್ಮ SSLC ಹಾಲ್ ಟಿಕೆಟ್‌ನ ಜೆರಾಕ್ಸ್ ಪ್ರತಿಯನ್ನು ತರಬೇಕು.

    4. CBSE & Other board students should bring their School ID card (original and a xerox). CBSE ಮತ್ತು ಇತರೆ ಬೋರ್ಡ್ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ತರಬೇಕು (ಒರಿಜಿನಲ್ ಮತ್ತು ಜೆರಾಕ್ಸ್)

    5. There will be separate counter for Kannada Medium & English Medium to collect Hall Ticket. ಹಾಲ್ ಟಿಕೆಟ್ ಪಡೆಯಲು ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಕೌಂಟರ್ ಇರುತ್ತದೆ

    6. Hall Ticket contains Room Number & Register Number. ಹಾಲ್ ಟಿಕೆಟಿನಲ್ಲಿ ನಿಮ್ಮ ರೂಮ್ ನಂಬರ್ ಮತ್ತು ನೊಂದಣಿ ಸಂಖ್ಯೆಯನ್ನು ನಮೂದಿಸಲಾಗಿರುವುದು.

    7. Student should bring blue or black ball PEN. ವಿದ್ಯಾರ್ಥಿಗಳು ನೀಲಿ ಅಥವಾ ಕಪ್ಪು ಬಾಲ್ ಪೆನ್ ತರಬೇಕು

    8. ELECTRONIC GADGETS like Phone, Tablet, Smart Watch NOT ALLOWED inside examination hall. ಪರೀಕ್ಷಾ ಹಾಲ್ ಒಳಗೆ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್‌ನಂತಹ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ನಿಷೇದಿಸಲಾಗಿದೆ. 

    9. For students coming from other cities, pickup is arranged from Davanagere KSRTC Bus Stand & Davanagere Railway Station at 9 AM, 9.30 AM, 10 AM. Look for Yellow coloured school bus with Siddaganga name on it outside Bus stand (AVK Road Exit) / railway station.  ಇತರೆ  ನಗರಗಳಿಂದ ಬರುವ ವಿದ್ಯಾರ್ಥಿಗಳಿಗೆ, 9 AM, 9.30 AM, 10 AM ಕ್ಕೆ ದಾವಣಗೆರೆ KSRTC ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ SCHOOL BUS ಪಿಕಪ್ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ (A.V.K. Road ಕಡೆ)/ ರೈಲ್ವೆ ನಿಲ್ದಾಣದ ಹೊರಗೆ ಸಿದ್ಧಗಂಗಾ ಹೆಸರಿನ ಹಳದಿ ಬಣ್ಣದ ಶಾಲಾ ಬಸ್‌ಗಾಗಿ ನೋಡಿ

    10. For any additional query send WhatsApp message to 8073054295. ಹೆಚ್ಚಿನ ಮಾಹಿತಿಗಾಗಿ  WhatsApp ಸಂದೇಶವನ್ನು 8073054295 ಗೆ ಕಳುಹಿಸಿ

    This page will be updated with FAQ. Keep checking this for additional information. ಈ ಪುಟವನ್ನು FAQ ನೊಂದಿಗೆ ನವೀಕರಿಸಲಾಗುತ್ತದೆ. ಹೆಚ್ಚುವರಿ ಮಾಹಿತಿಗಾಗಿ ಇದನ್ನು ಪರಿಶೀಲಿಸುತ್ತಿರಿ.

Date of Quiz : Wednesday, 13th April 2022

Reporting time : 10 AM

Examination time : 11 AM

Address : Siddaganga School and PU College

                   2347, Siddalingeshwara Nagar

                    Near district stadium

                    Davanagere - 577002

Google Map : https://goo.gl/maps/6rmy41yV256U8uCh9

Frequently Asked Questions - FAQ

    1. What is MSS Quiz? - MSS ಕ್ವಿಜ್ ಎಂದರೇನು?

            MSS Quiz is a state level competition held by Siddaganga School & PU College every year in honour of Founder M.S. Shivanna. Quiz will be in the form of M.C.Q. questions. Students will answer in OMR sheet. MSS ಕ್ವಿಜ್ ಸಿದ್ಧಗಂಗಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸಂಸ್ಥಾಪಕ ಎಂ.ಎಸ್.ಶಿವಣ್ಣ ಅವರ ಗೌರವಾರ್ಥ ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ. ರಸಪ್ರಶ್ನೆಯು MCQ ಪ್ರಶ್ನೆಗಳ ರೂಪದಲ್ಲಿರುತ್ತದೆ. 

    2. Why should I attend MSS Quiz? ನಾನು MSS ಕ್ವಿಜ್ ನಲ್ಲಿ ಏಕೆ ಭಾಗವಹಿಸಬೇಕು ?

            Quiz is based on your 10th board syllabus. No additional preparation is required to attend this quiz. You can win prize upto Rs. 25,000/- and bring fame to yourself, parents and your school. This can also help your future studies. ಕ್ವಿಜ್ ನಿಮ್ಮ 10ನೇ ಬೋರ್ಡ್ ಪಠ್ಯಕ್ರಮವನ್ನು ಆಧರಿಸಿದೆ. ಈ ರಸಪ್ರಶ್ನೆಗೆ ಹಾಜರಾಗಲು ಯಾವುದೇ ಹೆಚ್ಚುವರಿ ತಯಾರಿ ಅಗತ್ಯವಿಲ್ಲ. ನೀವು 25,000 ವರೆಗೆ ಬಹುಮಾನವನ್ನು ಗೆದ್ದು, ನಿಮಗೆ, ನಿಮ್ಮ ಪಾಲಕರಿಗೆ ಮತ್ತು ನಿಮ್ಮ ಶಾಲೆಗೆ ಖ್ಯಾತಿಯನ್ನು ತರಬಹುದು. ಇದು ನಿಮ್ಮ ಮುಂದಿನ ಶಿಕ್ಷಣಕ್ಕೆ ಸಹಾಯವಾಗಬಲ್ಲದು. 

    3. When is MSS Quiz held this year ?  ಈ ವರ್ಷ ಕ್ವಿಜ್ ಯಾವಾಗ ನಡೆಯುವುದು?

            This year, quiz will be held on Wednesday, 13th April 2022 at Siddaganga School, Davanagere at 11 AM. ಈ ವರ್ಷ ಬುಧವಾರ, 13 ಏಪ್ರಿಲ್ 2022 ರಂದು ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

    4. Is it Online or Offline ? ಇದು ಆನ್‌ಲೈನ್ ಪರೀಕ್ಷೆಯೋ ಅಥವಾ ಆಫ್‌ಲೈನ್ ಪರೀಕ್ಷೆಯೋ ?\

            Quiz is held only in OFFLINE format at Siddaganga School, Davanagere. Students will write quiz using OMR sheet provided during examination. ಕ್ವಿಜ್ ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ OFFLINE ಮಾದರಿಯಲ್ಲಿ ಮಾತ್ರ ನಡೆಯುತ್ತದೆ. ಪರೀಕ್ಷೆಯ ಸಮಯದಲ್ಲಿ ಒದಗಿಸಲಾಗುವ  OMR ಹಾಳೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ರಸಪ್ರಶ್ನೆಗೆ ಉತ್ತರಿಸುತ್ತಾರೆ. 

    5. Who can attend this Quiz? ಯಾರು ಈ ಕ್ವಿಜ್ ಗೆ  ಹಾಜರಾಗಬಹುದು?

            All 10th Students from Karnataka, writing state board, CBSE examination this year are eligible to register. ಈ ವರ್ಷ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ಕರ್ನಾಟಕದ ಎಲ್ಲಾ 10 ನೇ ವಿದ್ಯಾರ್ಥಿಗಳು ನೋಂದಾಯಿಸಲು ಅರ್ಹರಾಗಿದ್ದಾರೆ.

    6. Is there any entry fee for Quiz ? ರಸಪ್ರಶ್ನೆಗೆ ಪ್ರವೇಶ ಶುಲ್ಕವಿದೆಯೇ ?

            There is NO ENTRY FEE for quiz. ರಸಪ್ರಶ್ನೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.

    7. Will score in MSS Quiz help me to get admission to Siddaganga PU College? ಸಿದ್ಧಗಂಗಾ  P.U. ಕಾಲೇಜಿಗೆ ಪ್ರವೇಶ ಪಡೆಯಲು MSS ಕ್ವಿಜ್  ಅಂಕಗಳು ನನಗೆ ಸಹಾಯವಾಗುವುದೇ ?

            MSS Quiz score may help you to get admission for Siddaganga PU College. MSS ರಸಪ್ರಶ್ನೆ ಅಂಕವು ಸಿದ್ದಗಂಗಾ P.U. ಕಾಲೇಜಿಗೆ ಪ್ರವೇಶ ಪಡೆಯಲು ನಿಮಗೆ ಸಹಾಯವಾಗಬಹುದು 

    8. When is the result of M.S.S. Quiz? ಕ್ವಿಜ್ ಫಲಿತಾಂಶ ಯಾವಾಗ ?

Result will be published within one week on website : www.siddaganga.com   

ಫಲಿತಾಂಶವನ್ನು ಒಂದು ವಾರದೊಳಗೆ ವೆಬ್‌ಸೈಟ್: www.siddaganga.com ನಲ್ಲಿ ಪ್ರಕಟಿಸಲಾಗುವುದು


  

Eligibility to participate - ಭಾಗವಹಿಸಲು ಅರ್ಹತೆ

    1. Students writing board exam for SSLC or CBSE 10th Grade this year. ಈ ವರ್ಷ SSLC ಅಥವಾ CBSE 10ನೇ ತರಗತಿಗೆ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.

    2. Other boards like ICSE can participate, however quiz will be based on NCERT textbook. ICSE ನಂತಹ ಇತರ ಬೋರ್ಡ್ ವಿದ್ಯಾರ್ಥಿಗಳು ಭಾಗವಹಿಸಬಹುದು, ಆದರೆ  ಕ್ವಿಜ್ NCERT ಪಠ್ಯಪುಸ್ತಕವನ್ನು ಆಧರಿಸಿರುತ್ತದೆ

    3. Only students from Karnataka state are eligible to participate. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅರ್ಹರು

Date and format of Quiz - ಕ್ವಿಜ್ ದಿನಾಂಕ ಮತ್ತು ಸ್ವರೂಪ

    1. Quiz will be held on Wednesday, 13th April 2022 at 11 AM as a written test. ಕ್ವಿಜ್ 13ನೇ ಏಪ್ರಿಲ್ 2022 ರಂದು ಬುಧವಾರ ಬೆಳಿಗ್ಗೆ 11 ಕ್ಕೆ ಲಿಖಿತ ರೂಪದಲ್ಲಿರುತ್ತ್ತದೆ. 

    2. Quiz will be held in offline format at Siddaganga School Campus in Davanagere (address and google map link provided below). ಕ್ವಿಜ್ ದಾವಣಗೆರೆಯ ಸಿದ್ದಗಂಗಾ ಶಾಲಾ ಕ್ಯಾಂಪಸ್‌ನಲ್ಲಿ ಆಫ್‌ಲೈನ್ ಸ್ವರೂಪದಲ್ಲಿ ನಡೆಯಲಿದೆ (ವಿಳಾಸ ಮತ್ತು ಗೂಗಲ್ ಮ್ಯಾಪ್ ಲಿಂಕ್ ಕೆಳಗೆ ನೀಡಲಾಗಿದೆ)

    3. Quiz will be in form of MCQ, 30 Questions from Science & 30 Questions from Maths. ಕ್ವಿಜ್ MCQ ರೂಪದಲ್ಲಿರುತ್ತದೆ, ವಿಜ್ಞಾನದಿಂದ 30 ಪ್ರಶ್ನೆಗಳು ಮತ್ತು ಗಣಿತದಿಂದ 30 ಪ್ರಶ್ನೆಗಳು

    4. Duration of examination is 60 minutes. ಪರೀಕ್ಷೆಯ ಅವಧಿ 60 ನಿಮಿಷಗಳು

    5. Students will be answering using OMR sheet provided during the quiz. ಕ್ವಿಜ್ ಸಮಯದಲ್ಲಿ ಒದಗಿಸಲಾದ OMR ಶೀಟ್ ಬಳಸಿ ವಿದ್ಯಾರ್ಥಿಗಳು ಉತ್ತರಿಸುತ್ತಾರೆ

    6. NO NEGATIVE marking for wrong answer. ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕ ಇರುವುದಿಲ್ಲ

    7. Syllabus for Quiz is based on reduced syllabus given by SSLC & CBSE boards. ಕ್ವಿಜ್ ಪಠ್ಯಕ್ರಮವು ಈ ವರ್ಷ SSLC ಮತ್ತು CBSE ಬೋರ್ಡ್‌ಗಳು ನೀಡಿದ ಕಡಿತಗೊಂಡ ಪಠ್ಯಕ್ರಮವನ್ನು ಆಧರಿಸಿದೆ.

How to register for Quiz - ಕ್ವಿಜ್ ಗೆ  ನೋಂದಾಯಿಸುವುದು ಹೇಗೆ

    1. Send your name and School Name to 8073054295 by WhatsApp. You can also use this link to send message https://bit.ly/3v2GJlX . ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು 8073054295 ಗೆ WhatsApp ಸಂದೇಶವನ್ನು ಕಳುಹಿಸುವ ಮೂಲಕ ರಸಪ್ರಶ್ನೆಗೆ ನೋಂದಾಯಿಸಿಕೊಳ್ಳಬಹುದು. ಸಂದೇಶವನ್ನು ಕಳುಹಿಸಲು ನೀವು ಈ ಲಿಂಕ್ ಅನ್ನು ಸಹ ಬಳಸಬಹುದು https://bit.ly/3v2GJlX

    2. Last date for registration is Tuesday, 12th April 2022. ನೋಂದಣಿಗೆ ಕೊನೆಯ ದಿನಾಂಕ ಮಂಗಳವಾರ, 12ನೇ ಏಪ್ರಿಲ್ 2022

Tuesday, February 8, 2022

Self Assessment Test

Self Assessment Test for SSLC & CBSE Grade 10 Students

Questions based on prescribed textbook of 10th

25 Questions from Mathematics, 25 Questions from Science

To register click link https://forms.gle/89EiLELKYvMTT9Wj9