Sunday, April 14, 2024

MSS QUIZ RESULT -2024




MSS QUIZ 2024 RESULTS ANNOUNCED

Click this link to see you result - https://www.siddaganga.com/mss/find-result.php

Enter your Register number and your date of birth to see your result , 




watch this video to see 2 PU Result (2023-24) of Siddaganga PU College





Monday, May 8, 2023

ಸಿದ್ಧಗಂಗೆಯ ಜಿಲ್ಲಾ ಟಾಪರ್ ಚೇತನಾಗೆ ಕ್ಷೇತ್ರ ಶಿಕ್ಷಣಾಧಿಕಾರಿ ದಾರುಕೇಶ್‌ರವರಿಂದ ಅಭಿನಂದನೆ

 

625 ಕ್ಕೆ 624 ಅಂಕಗಳಿಸಿದ ದಾವಣಗೆರೆ ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲಿನ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿನಿಯಾದ ಚೇತನಾ ಆರ್. ಗೆ ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ದಾರುಕೇಶ್‌ರವರು ಶಾಲು ಹೊದಿಸಿ ಪೇಟ ತೊಡಿಸಿ ಹಾರಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಾಲಕಿಯ ತಂದೆ ನಿವೃತ್ತ ಯೋಧ ರಘುನಾಥ ಜಗತಾಪ್ ಮತ್ತು ತಾಯಿ ರೇಣುಕಾ ಬಾಯಿ, ಶಿಕ್ಷಣ ಸಂಯೋಜಕರಾಗಿದ್ದ ಮುರುಗೇಂದ್ರಯ್ಯನವರು ಹಾಜರಿದ್ದರು. ಬಾಲಕಿಯ ಸಾಧನೆಯನ್ನು ಶ್ಲಾಘಿಸಿದ ಶಿಕ್ಷಣಾಧಿಕಾರಿಗಳು ಮುಂದಿನ ಗುರಿ ಐ. ಎ. ಎಸ್. ಮಾಡಬೇಕೆಂಬುದಾಗಿ ಬಾಲಕಿ ಹೇಳಿದಾಗ ಮತ್ತಷ್ಟು ಸಂಭ್ರಮಿಸಿದರು. ಜಿಲ್ಲೆಗೆ ಕೀರ್ತಿ ಬರುವಂತೆ ಮಾಡಿದ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರ ಶ್ರದ್ಧೆ ಮತ್ತು ಬದ್ಧತೆಯನ್ನು ಹೊಗಳಿದರು.



SSLC RESULT - 2023



 ಸಿದ್ಧಗಂಗಾ ಹೈಸ್ಕೂಲಿನ ಚೇತನಾ ಆರ್. ಜಿಲ್ಲೆಗೆ ಟಾಪರ್ 

624 ಪಡೆದು ರಾಜ್ಯಕ್ಕೆ  ದ್ವಿತೀಯ ಸ್ಥಾನ

ಮಾರ್ಚ್ – ಏಪ್ರಿಲ್ ನಲ್ಲಿ ನಡೆದ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ದಾವಣಗೆರೆ ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್‌ನ ಚೇತನಾ ಆರ್ 625 ಕ್ಕೆ 624 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದು, ಕನ್ನಡ 125, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 99, ಸಮಾಜ ವಿಜ್ಞಾನ 100, ಒಟ್ಟು 624 ಅಂಕಗಳನ್ನು ಗಳಿಸಿ ದಾಖಲೆ ಸ್ಥಾಪಿಸಿದ್ದಾಳೆ. ಭೂಮಿಕಾ ಬಸವರಾಜ್ ಮುತ್ತಗಿ 620, ವಿಕಾಸ್ ಎಂ 615, ವಿವೇಕ್ ಅಂಗಡಿ ಎನ್ ಎಂ 614, ತಾರಾ ಪಿ. ಜೆ. 611, ಫಾಲ್ಗುಣಿ ಜಿ. 609, ವಿನುತ ಎಂ. 609, ಕರುಣ್ ಸಾಗರ್ ಕೆ. ಎಂ. 607, ಶ್ರಾವಣಿ ಎಂ ಬಾಗೂರು 607, ವಿನುತಾ ಹೆಚ್. ಯು. 607, ಫಾಲ್ಗುಣ ಎನ್ ಬಾಗೂರು 606, ವಿಶಾಲಾಕ್ಷಿ ಭೀಮಪ್ಪ ಮೂರಾಮನ್ 606, ಹೆಚ್ ಶಶಾಂಕ್ ಶರ್ಮ 605, ಮೇಘರಾಜ್ ಬಣಕಾರ್ 603, ಶ್ರೇಯಾ ಜೆ. ಕೆ. 602 ಅಂಕಗಳನ್ನು ಗಳಿಸಿದ್ದಾರೆ. 48 ಮಕ್ಕಳು 90% ಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 93 ಮಕ್ಕಳು ಉತ್ತೀರ್ಣರಾಗಿದ್ದಾರೆ. ಕನ್ನಡ ವಿಷಯದಲ್ಲಿ 9, ಇಂಗ್ಲೀಷ್‌ನಲ್ಲಿ 3, ಹಿಂದಿ 39, ಗಣಿತ 4, ವಿಜ್ಞಾನ 1, ಸಮಾಜ ವಿಜ್ಞಾನ 4 ಮಕ್ಕಳು, ಒಟ್ಟಾರೆ 60 ಮಕ್ಕಳು ಈ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಚೇತನಾ ಆರ್ ಹಾಗೂ ಶಾಲೆಗೆ ಅತ್ಯುತ್ತಮ ಫಲಿತಾಂಶ ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಬೋಧಕ ವರ್ಗ ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.







Sunday, April 23, 2023

MSS QUIZ RESULT - 2023

 Watch this video on how to see your result


click here to see your result

 MSS QUIZ RESULT - 2023  - https://www.siddaganga.com/mss/find-result.php

MSS QUIZ - 2023

watch this video on how to see your result 


click here to see your MSS QUIZ RESULThttps://www.siddaganga.com/mss/find-result.php


MSS Quiz is a State Level competition held by Siddaganga School & PU College, Davanagere in the name of founder  Dr. M.S. Shivanna. MSS ಲಿಖಿತ ಕ್ವಿಜ್ ಸಂಸ್ಥಾಪಕ   ಡಾ. M.S. ಶಿವಣ್ಣ ಅವರ ಹೆಸರಿನಲ್ಲಿ ದಾವಣಗೆರೆಯ ಸಿದ್ಧಗಂಗಾ ಶಾಲೆ & ಪದವಿ ಪೂರ್ವ ಕಾಲೇಜು ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ.

Instructions for the day of Quiz - ರಸಪ್ರಶ್ನೆ ದಿನದ ಸೂಚನೆಗಳು

1. Student should reach Siddaganga School, Davanagere and collect Admission ticket at-least one hour before Quiz Time. 

ವಿದ್ಯಾರ್ಥಿಗಳು ದಾವಣಗೆರೆಯ ಸಿದ್ದಗಂಗಾ ಶಾಲೆಯನ್ನು ತಲುಪಬೇಕು ಮತ್ತು ಕ್ವಿಜ್ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು Admission ticket ಅನ್ನು ಪಡೆದುಕೊಳ್ಳಬೇಕು.

2. Counter for Admission ticket will be open from 9 AM on Quiz Day.

ಕ್ವಿಜ್ ದಿನದಂದು ಬೆಳಗ್ಗೆ 9 ಗಂಟೆಯಿಂದ Admission ticket ಕೌಂಟರ್ ತೆರೆದಿರುತ್ತದೆ.

3. You MUST bring xerox copy of your SSLC/CBSE Hall Ticket

ನೀವು ನಿಮ್ಮ SSLC/CBSE ಹಾಲ್ ಟಿಕೆಟ್‌ನ ಜೆರಾಕ್ಸ್ ಪ್ರತಿಯನ್ನು ತರಬೇಕು.

4. Write Your Home Address along with Pincode on the Backside of Board Exam Hall ticket Xerox.

ನಿಮ್ಮ ಮನೆಯ ವಿಳಾಸವನ್ನು Pincode ನೊಂದಿಗೆ Board Exam Hall ticket Xerox ಹಿಂಭಾಗದಲ್ಲಿ ಬರೆಯಿರಿ

5. Note, there will be separate counter for Kannada Medium & English Medium to collect Admission Ticket. 

ಗಮನಿಸಿ, Admission Ticket ಸಂಗ್ರಹಿಸಲು ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಕೌಂಟರ್ ಇರುತ್ತದೆ

6. Admission Ticket contains Room Number & Register Number. Admission Ticket 

ನಿಮ್ಮ ರೂಮ್ ನಂಬರ್ ಮತ್ತು ನೊಂದಣಿ ಸಂಖ್ಯೆಯನ್ನು ನಮೂದಿಸಲಾಗಿರುವುದು.

7. Student should bring blue or black ball point PEN. 

ವಿದ್ಯಾರ್ಥಿಗಳು ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ ತರಬೇಕು

8. NO ELECTRONIC GADGETS like Phone, Tablet, Smart Watch allowed inside examination Hall. 

ಪರೀಕ್ಷಾ ಹಾಲ್ ಒಳಗೆ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್‌ನಂತಹ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಅನುಮತಿಸಲಾಗುವುದಿಲ್ಲ

9. For students coming from other cities, pickup is arranged from Davanagere KSRTC Bus Stand (Entry Gate) & Davanagere Railway Station at 9 AM, 9.30 AM, 10 AM. Look for Yellow coloured school bus with Siddaganga name on it outside Bus stand / railway station.

ಇತರ ನಗರಗಳಿಂದ ಬರುವ ವಿದ್ಯಾರ್ಥಿಗಳಿಗೆ, 9 AM, 9.30 AM, 10 AM ಕ್ಕೆ ದಾವಣಗೆರೆ KSRTC ಬಸ್ ನಿಲ್ದಾಣ (ಪ್ರವೇಶ ದ್ವಾರ) ಮತ್ತು ರೈಲ್ವೆ ನಿಲ್ದಾಣದಿಂದ SCHOOL BUS ಪಿಕಪ್ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ / ರೈಲ್ವೆ ನಿಲ್ದಾಣದ ಹೊರಗೆ ಸಿದ್ದಗಂಗಾ ಹೆಸರಿನ ಹಳದಿ ಬಣ್ಣದ ಶಾಲಾ ಬಸ್‌ಗಾಗಿ ನೋಡಿ

10. For any additional query send WhatsApp message to 8073054295

ಯಾವುದೇ ಹೆಚ್ಚುವರಿ ಪ್ರಶ್ನೆಗೆ WhatsApp ಸಂದೇಶವನ್ನು 8073054295 ಗೆ ಕಳುಹಿಸಿ

11. Those who are coming on Saturday evening or Sunday early morning, can request hostel facility by filling this form     https://forms.gleVknEJP11cdXk8sLeA 

ಶನಿವಾರ ಸಂಜೆ ಅಥವಾ ಭಾನುವಾರ ಮುಂಜಾನೆ ಬರಲು ಇಚ್ಚಿಸುವವರು ಈ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಹಾಸ್ಟೆಲ್ ಸೌಲಭ್ಯವನ್ನು ಕೋರಬಹುದು    https://forms.gle/VknEJP11cdXk8sLeA


Date of Quiz : Sunday, 16th April 2023

Reporting time : 10 AM

Examination time : 11 AM

Address : Sri Siddaganga School and PU College

                2347, Siddalingeshwara Nagar

                Near district stadium

                Davanagere - 577002

Google Map : https://goo.gl/maps/6rmy41yV256U8uCh9

Frequently Asked Questions - FAQ

    1. What is MSS Quiz? - MSS ಕ್ವಿಜ್ ಎಂದರೇನು?

            MSS Quiz is a state level written test competition held by Siddaganga School & PU College every year in honour of Founder Dr. M.S. Shivanna. Quiz will be in the form of M.C.Q. questions. Students will answer in OMR sheet. MSS ಕ್ವಿಜ್ ಸಿದ್ಧಗಂಗಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸಂಸ್ಥಾಪಕ  ಡಾ. ಎಂ.ಎಸ್.ಶಿವಣ್ಣ ಅವರ ಗೌರವಾರ್ಥ ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ. ರಸಪ್ರಶ್ನೆಯು MCQ ಪ್ರಶ್ನೆಗಳ ರೂಪದಲ್ಲಿರುತ್ತದೆ. 

    2. Why should I attend MSS Quiz? ನಾನು MSS ಕ್ವಿಜ್ ನಲ್ಲಿ ಏಕೆ ಭಾಗವಹಿಸಬೇಕು ?

            Quiz is based on your 10th board syllabus. No additional preparation is required to attend this quiz. You can win prize upto Rs. 25,000/- and bring fame to yourself, parents and your school. This can also help your future studies. ಕ್ವಿಜ್ ನಿಮ್ಮ 10ನೇ ಬೋರ್ಡ್ ಪಠ್ಯಕ್ರಮವನ್ನು ಆಧರಿಸಿದೆ. ಈ ರಸಪ್ರಶ್ನೆಗೆ ಹಾಜರಾಗಲು ಯಾವುದೇ ಹೆಚ್ಚುವರಿ ತಯಾರಿ ಅಗತ್ಯವಿಲ್ಲ. ನೀವು 25,000 ವರೆಗೆ ಬಹುಮಾನವನ್ನು ಗೆದ್ದು, ನಿಮಗೆ, ನಿಮ್ಮ ಪಾಲಕರಿಗೆ ಮತ್ತು ನಿಮ್ಮ ಶಾಲೆಗೆ ಖ್ಯಾತಿಯನ್ನು ತರಬಹುದು. ಇದು ನಿಮ್ಮ ಮುಂದಿನ ಶಿಕ್ಷಣಕ್ಕೆ ಸಹಾಯವಾಗಬಲ್ಲದು. 

    3. When is MSS Quiz held this year ?  ಈ ವರ್ಷ ಕ್ವಿಜ್ ಯಾವಾಗ ನಡೆಯುವುದು?

            This year, quiz will be held on Sunday, 16th April 2023 at Siddaganga School, Davanagere at 11 AM. ಈ ವರ್ಷ ಭಾನುವಾರ, 16 ಏಪ್ರಿಲ್ 2023 ರಂದು ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

    4. Is it Online or Offline ? ಇದು ಆನ್‌ಲೈನ್ ಪರೀಕ್ಷೆಯೋ ಅಥವಾ ಆಫ್‌ಲೈನ್ ಪರೀಕ್ಷೆಯೋ ?\

            Quiz is held only in OFFLINE format at Siddaganga School, Davanagere. Students will write quiz using OMR sheet provided during examination. ಕ್ವಿಜ್ ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ OFFLINE ಮಾದರಿಯಲ್ಲಿ ಮಾತ್ರ ನಡೆಯುತ್ತದೆ. ಪರೀಕ್ಷೆಯ ಸಮಯದಲ್ಲಿ ಒದಗಿಸಲಾಗುವ  OMR ಹಾಳೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ರಸಪ್ರಶ್ನೆಗೆ ಉತ್ತರಿಸುತ್ತಾರೆ. 

    5. Who can attend this Quiz? ಯಾರು ಈ ಕ್ವಿಜ್ ಗೆ  ಹಾಜರಾಗಬಹುದು?

            All 10th Students from Karnataka, writing State board, CBSE examination this year are eligible to register. ಈ ವರ್ಷ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ಕರ್ನಾಟಕದ ಎಲ್ಲಾ 10 ನೇ ವಿದ್ಯಾರ್ಥಿಗಳು ನೋಂದಾಯಿಸಲು ಅರ್ಹರಾಗಿದ್ದಾರೆ.

    6. Is there any entry fee for Quiz ? ರಸಪ್ರಶ್ನೆಗೆ ಪ್ರವೇಶ ಶುಲ್ಕವಿದೆಯೇ ?

            There is NO ENTRY FEE for quiz. ರಸಪ್ರಶ್ನೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.

    7. Will score in MSS Quiz help me to get admission to Siddaganga PU College? ಸಿದ್ಧಗಂಗಾ  P.U. ಕಾಲೇಜಿಗೆ ಪ್ರವೇಶ ಪಡೆಯಲು MSS ಕ್ವಿಜ್  ಅಂಕಗಳು ನನಗೆ ಸಹಾಯವಾಗುವುದೇ ?

            MSS Quiz score may help you to get admission for Siddaganga PU College. MSS ರಸಪ್ರಶ್ನೆ ಅಂಕವು ಸಿದ್ದಗಂಗಾ P.U. ಕಾಲೇಜಿಗೆ ಪ್ರವೇಶ ಪಡೆಯಲು ನಿಮಗೆ ಸಹಾಯವಾಗಬಹುದು 

    8. When is the result of M.S.S. Quiz? ಕ್ವಿಜ್ ಫಲಿತಾಂಶ ಯಾವಾಗ ?

Result will be published within one week on website : www.siddaganga.com   

ಫಲಿತಾಂಶವನ್ನು ಒಂದು ವಾರದೊಳಗೆ ವೆಬ್‌ಸೈಟ್: www.siddaganga.com ನಲ್ಲಿ ಪ್ರಕಟಿಸಲಾಗುವುದು



Eligibility to participate - ಭಾಗವಹಿಸಲು ಅರ್ಹತೆ

    1. Students writing board exam for SSLC or CBSE 10th Grade this year. ಈ ವರ್ಷ SSLC ಅಥವಾ CBSE 10ನೇ ತರಗತಿಗೆ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.

    2. Other boards like ICSE can participate, however quiz will be based on NCERT textbook. ICSE ನಂತಹ ಇತರ ಬೋರ್ಡ್ ವಿದ್ಯಾರ್ಥಿಗಳು ಭಾಗವಹಿಸಬಹುದು, ಆದರೆ  ಕ್ವಿಜ್ NCERT ಪಠ್ಯಪುಸ್ತಕವನ್ನು ಆಧರಿಸಿರುತ್ತದೆ

    3. Only students from Karnataka state are eligible to participate. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅರ್ಹರು

Date and format of Quiz - ಕ್ವಿಜ್ ದಿನಾಂಕ ಮತ್ತು ಸ್ವರೂಪ

    1. Quiz will be held on Sunday, 16th April 2023 at 11 AM as a written test. ಕ್ವಿಜ್ 16ನೇ ಏಪ್ರಿಲ್ 2023 ರಂದು ಭಾನುವಾರ ಬೆಳಿಗ್ಗೆ 11 ಕ್ಕೆ ಲಿಖಿತ ರೂಪದಲ್ಲಿರುತ್ತ್ತದೆ. 

    2. Quiz will be held in offline format at Siddaganga School Campus in Davanagere (address and google map link provided below). ಲಿಖಿತ ಕ್ವಿಜ್ ದಾವಣಗೆರೆಯ ಸಿದ್ದಗಂಗಾ ಶಾಲಾ ಕ್ಯಾಂಪಸ್‌ನಲ್ಲಿ ಆಫ್‌ಲೈನ್ ಸ್ವರೂಪದಲ್ಲಿ ನಡೆಯಲಿದೆ (ವಿಳಾಸ ಮತ್ತು ಗೂಗಲ್ ಮ್ಯಾಪ್ ಲಿಂಕ್ ಕೆಳಗೆ ನೀಡಲಾಗಿದೆ)

    3. Quiz will be in form of MCQ, 30 Questions from Science & 30 Questions from Maths. ಲಿಖಿತ ಕ್ವಿಜ್ MCQ ರೂಪದಲ್ಲಿರುತ್ತದೆ, ವಿಜ್ಞಾನದಿಂದ 30 ಪ್ರಶ್ನೆಗಳು ಮತ್ತು ಗಣಿತದಿಂದ 30 ಪ್ರಶ್ನೆಗಳು

    4. Duration of examination is 60 minutes. ಪರೀಕ್ಷೆಯ ಅವಧಿ 60 ನಿಮಿಷಗಳು

    5. Students will be answering using OMR sheet provided during the quiz. ಲಿಖಿತ ಕ್ವಿಜ್ ಸಮಯದಲ್ಲಿ ಒದಗಿಸಲಾದ OMR ಶೀಟ್ ಬಳಸಿ ವಿದ್ಯಾರ್ಥಿಗಳು ಉತ್ತರಿಸುತ್ತಾರೆ

    6. NO NEGATIVE marking for wrong answer. ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕ ಇರುವುದಿಲ್ಲ

    7. Syllabus for Quiz is based on reduced syllabus given by SSLC & CBSE boards. ಲಿಖಿತ ಕ್ವಿಜ್ ಪಠ್ಯಕ್ರಮವು ಈ ವರ್ಷ SSLC ಮತ್ತು CBSE ಬೋರ್ಡ್‌ಗಳು ನೀಡಿದ ಕಡಿತಗೊಂಡ ಪಠ್ಯಕ್ರಮವನ್ನು ಆಧರಿಸಿದೆ.

How to register for Quiz - ಕ್ವಿಜ್ ಗೆ  ನೋಂದಾಯಿಸುವುದು ಹೇಗೆ

    1. Send your name and School Name to 8073054295 by WhatsApp. You can also use this link to send message https://bit.ly/3v2GJlX . ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು 8073054295 ಗೆ WhatsApp ಸಂದೇಶವನ್ನು ಕಳುಹಿಸುವ ಮೂಲಕ ರಸಪ್ರಶ್ನೆಗೆ ನೋಂದಾಯಿಸಿಕೊಳ್ಳಬಹುದು. ಸಂದೇಶವನ್ನು ಕಳುಹಿಸಲು ನೀವು ಈ ಲಿಂಕ್ ಅನ್ನು ಸಹ ಬಳಸಬಹುದು https://bit.ly/3v2GJlX

    2. Last date for registration is Saturday, 15th April 2023. ನೋಂದಣಿಗೆ ಕೊನೆಯ ದಿನಾಂಕ ಶನಿವಾರ, 15ನೇ ಏಪ್ರಿಲ್ 2023

Saturday, April 22, 2023

II PU RESULT 2022-23

 ಸಿದ್ಧಗಂಗಾ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ

97.33 % ಪಡೆದ ಸಾಗರ್ ಮತ್ತು ಸಂಜನಾ ಕಾಲೇಜಿಗೆ ಪ್ರಥಮ

ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ದಾವಣಗೆರೆಯ ಸಿದ್ಧಗಂಗಾ ಪಿಯು ಕಾಲೇಜು ಅತ್ಯುತ್ತಮ ಫಲಿತಾಂಶ ಪಡೆದು ದಾಖಲೆ ಮಾಡಿದೆ. ಕನ್ನಡ ವಿಷಯದಲ್ಲಿ 6, ಸಂಸ್ಕೃತದಲ್ಲಿ 1, ಭೌತಶಾಸ್ತ್ರದಲ್ಲಿ  9, ರಸಾಯನ ಶಾಸ್ತ್ರದಲ್ಲಿ  2, ಗಣಿತದಲ್ಲಿ 18, ಜೀವಶಾಸ್ತ್ರದಲ್ಲಿ  1 ಒಟ್ಟು 37 ಬಾಲಕ-ಬಾಲಕಿಯರು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. 37 ಮಕ್ಕಳು 95% ಗಿಂತ ಹೆಚ್ಚು, 151 ಮಕ್ಕಳು 90% ಗಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 291 ಅತ್ಯುತ್ತಮ ಶ್ರೇಣಿ, 322 ಪ್ರಥಮ ದರ್ಜೆ, 29 ದ್ವಿತೀಯ ದರ್ಜೆ 4 ಮಕ್ಕಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಗರ್ ಎಸ್. ಆರ್. ಕನ್ನಡ 95, ಇಂಗ್ಲೀಷ್ 93, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 98 ಗಣಿತ 100, ಜೀವಶಾಸ್ತ್ರ 98 ಒಟ್ಟು 584 ಅಂಕಗಳನ್ನು ಗಳಿಸಿದರೆ, ಸಂಜನ ಜಿ. ಎಸ್. ಕನ್ನಡ 100, ಇಂಗ್ಲೀಷ್ 96, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 94, ಗಣಿತ 100, ಕಂಪ್ಯೂಟರ್ 95 ಒಟ್ಟು 584 ಅಂಕಗಳನ್ನು ಪಡೆದಿದ್ದಾರೆ. ಇಬ್ಬರೂ 97.33 % ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅತ್ಯುತ್ತಮ ಫಲಿತಾಂಶ ಪಡೆದ ಎಲ್ಲ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಮತ್ತು ಎಲ್ಲ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ

Monday, April 17, 2023

ಸಿದ್ಧಗಂಗಾ ಎಂ. ಎಸ್.‌ ಎಸ್ ಕ್ವಿಜ್‌ ಅಭೂತಪೂರ್ವ ಯಶಸ್ಸು – ಶಿಸ್ತಿಗೆ ಮನಸೋತ ಪಾಲಕರು


ಪ್ರತಿ ವರ್ಷದಂತೆ ಈ ವರ್ಷವೂ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಎಂ. ಎಸ್.‌ ಎಸ್ ಕ್ವಿಜ್‌ ಅಭೂತ ಪೂರ್ವ ಯಶಸ್ಸು ಕಂಡಿತು. ಶಿಕ್ಷಣ ಶಿಲ್ಪಿ ಡಾ. ಎಂ. ಎಸ್.‌ ಶಿವಣ್ಣನವರ ಗೌರವಾರ್ಥ ಕಳೆದ 9 ವರ್ಷಗಳಿಂದ ನಡೆಸುತ್ತಿರುವ ಅತ್ಯಂತ ಶಿಸ್ತಿನ ಪಾರದರ್ಶಕವಾದ ಈ ಲಿಖಿತ ಕ್ವಿಜ್‌ಗೆ ಎರಡು ಸಾವಿರದ ಮುನ್ನೂರು ವಿದ್ಯಾರ್ಥಿಗಳು ಹಾಜರಾಗಿದ್ದರು. ಆಂಗ್ಲ ಮಾಧ್ಯಮ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮದ ಮಕ್ಕಳ ಜೊತೆ ಕನ್ನಡ ಮಾಧ್ಯಮದ ಮಕ್ಕಳೂ ಭಾಗವಹಿಸಿದ್ದು ವಿಶೇಷವಾಗಿತ್ತು. ದೂರದ ರಾಯಚೂರು, ಬಳ್ಳಾರಿ, ಬೆಳಗಾವಿ, ಮೈಸೂರು, ಬೆಂಗಳೂರು, ಮಂಗಳೂರು, ಸಮೀಪದ ಹಾವೇರಿ, ಹುಬ್ಬಳ್ಳಿ, ಧಾರವಾಡ, ಜಿಲ್ಲೆಗಳಿಂದ ಪಾಲಕರ ಸಮೇತ ಬಂದ ಮಕ್ಕಳು ರಾತ್ರಿ ಸಿದ್ಧಗಂಗಾ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಿ ಬೆಳಿಗ್ಗೆ ಲಿಖಿತ ಕ್ವಿಜ್‌ಗೆ ಹಾಜರಾದರು. ಸಿದ್ಧಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸುಶ್ರಾವ್ಯ ಭಕ್ತಿಗೀತೆಗಳೊಂದಿಗೆ ಪ್ರಾರಂಭವಾದ ಕ್ವಿಜ್‌ಗೆ ಆಗಮಿಸಿದ್ದ ಮಕ್ಕಳನ್ನು ಮತ್ತು ಪಾಲಕರನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ನಿರ್ದೇಶಕರಾದ 

ಡಾ||ಜಯಂತ್‌ರವರು ಎಂ. ಎಸ್.‌ ಎಸ್‌ ಕ್ವಿಜ್‌ನ ನಿಯಮಗಳನ್ನು ಮಕ್ಕಳಿಗೆ ತಿಳಿಸಿದರು. ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಡಾ. ಎಂ. ಎಸ್‌. ಶಿವಣ್ಣನವರ ಗೌರವಾರ್ಥ ಎಂ. ಎಸ್.‌ ಎಸ್‌ ಕ್ವಿಜ್‌ ಮತ್ತು ಎಂ. ಎಸ್.‌ ಎಸ್‌ ಸ್ಕಾಲರ್‌ಶಿಪ್‌ ಹಾಗೂ ಎಂ. ಎಸ್. ಎಸ್‌ ಟ್ರೈನಿಂಗ್‌ ಸೆಂಟರ್‌ನಲ್ಲಿ ನೀಡುತ್ತಿರುವ ಸೂಪರ್‌ ಬ್ರೈನ್‌ ಟ್ರೈನಿಂಗ್‌ ಬಗ್ಗೆ ಮಾಹಿತಿ ನೀಡುತ್ತಾ ಎಂ. ಎಸ್.‌ ಎಸ್ ಕ್ವಿಜ್‌ನಲ್ಲಿ ವಿಜೇತ ಮಕ್ಕಳಿಗೆ ಎರಡು ವರ್ಷದ ಉಚಿತ ಪಿಯು ವಿಜ್ಞಾನ ಶಿಕ್ಷಣ ಮತ್ತು ಸ್ಕಾಲರ್‌ಶಿಪ್‌ ಪಡೆಯಲು ಬೇಕಾದ ಅರ್ಹತೆಗಳನ್ನು ತಿಳಿಸಿದರು.

9 ರಿಂದ 10-45 ರವರೆಗೆ ವಿದ್ಯಾರ್ಥಿಗಳ ನೊಂದಣಿಯಾಯಿತು. ಪ್ರತಿಷ್ಠಿತ ಎಂ. ಎಸ್.‌ ಎಸ್.‌ ಟ್ರೋಫಿ ಹಿಡಿದ ಪಿಯುಸಿ ವಿದ್ಯಾರ್ಥಿನಿಯರು ಆಕರ್ಷಕ ಪಥಸಂಚಲನ ನಡೆಸಿದರು. ರಾಸಾಯನಿಕ ವಸ್ತುಗಳನ್ನು ಬಳಸಿ ಕೇಸರಿ, ಬಿಳಿ, ಹಸಿರು ಕಾರಂಜಿ ಚಿಮ್ಮಿಸಿದರು. 11 ಗಂಟೆಯಿಂದ 71 ಕೊಠಡಿಗಳಲ್ಲಿ ವ್ಯವಸ್ಥಿತವಾಗಿ ನಡೆದ ಲಿಖಿತ ಕ್ವಿಜ್‌ನಲ್ಲಿ ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಕೊಠಡಿ ವೀಕ್ಷಣೆ ಮಾಡಿದರು. ಭಾಗವಹಿಸಿದ ಪ್ರತಿ ಮಗುವಿಗೆ ಸರ್ಟಿಫಿಕೇಟ್‌ ಕೊಡಲಾಯಿತು. ಅತ್ಯಂತ ಸುವ್ಯವಸ್ಥಿತವಾಗಿ ಆಯೋಜಿಸಿದ್ದ ಲಿಖಿತ ಕ್ವಿಜ್‌ಗೆ ನೊಂದಣಿ ಮಾಡಿಸಿ ಬಂದ ಮಕ್ಕಳಿಗೆ ಮಾರ್ಗದರ್ಶನ ನೀಡಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ವಯಂ ಸೇವೆ ಆಗಮಿಸಿದ್ದ ಪಾಲಕರ ಗಮನ ಸೆಳೆಯಿತು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಿದ್ಧಗಂಗಾ ಸ್ವಾಮಿಜಿಯವರ ಮತ್ತು ಎಂ. ಎಸ್.‌ ಶಿವಣ್ಣನವರ ಚಿತ್ರ ಬಿಡಿಸಿದ್ದ ಮಕ್ಕಳ ಏಕಾಗ್ರತೆಯನ್ನು ಪಾಲಕರು ಮೆಚ್ಚಿದರು. ಸಂಸ್ಥೆಯ ಅಧ್ಯಕ್ಷರಾದ ಡಿ. ಎಸ್.‌ ಪ್ರಶಾಂತ್‌ರವರು, ಮನುಶ್ರೀ ಮತ್ತು ಮನೋಹರ, ಹರ್ಷ ಇವರು ಕ್ವಿಜ್‌ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಕಾರ್ಯದರ್ಶಿ ಹೇಮಂತ್‌ರವರು ಆಗಮಿಸಿದ್ದ ಪಾಲಕರಿಗೆ ಮತ್ತು ಮಕ್ಕಳಿಗೆ ಮಧ್ಯಾನ್ಹದ ಉಪಹಾರದ ವ್ಯವಸ್ಥೆ ಮಾಡಿದ್ದರು.

Friday, March 31, 2023

I PU RESULTS - 2022-23

1 PUC Result of Siddaganga PU College is published on website www.siddaganga.com

To check result click link here

To check result, enter your register number (8 digit number used for examination), Date of birth and click Search

Make sure you choose the proper date of birth as per official record. 

All the Best


Saturday, December 31, 2022

 ಮಕ್ಕಳ ಕೌಶಲ್ಯದ ಅನಾವರಣ

ಸಿದ್ಧಗಂಗಾದಲ್ಲಿ ನಡೆದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ.






ನಗರದ ಶ್ರೀ  ಸಿದ್ಧಗಂಗಾ ಶಾಲೆಯ 3 ರಿಂದ 10 ನೇ ತರಗತಿಯ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ನೂರಾರು ಮಾದರಿಗಳು, ಅದಕ್ಕೆ ಸಂಬಂಧಪಟ್ಟ ವಿವರಣೆ, ಮಕ್ಕಳ ವಿಜ್ಞಾನಾಸಕ್ತಿ ಮತ್ತು ಕಲಾ ಪ್ರೇಮಕ್ಕೆ ಸಾಕ್ಷಿಯಾದವು. ಸುಂದರವಾಗಿ ನಿರ್ಮಿತವಾದ ವೇದಿಕೆಯಲ್ಲಿ ಹಸಿರು ಸಸ್ಯಗಳಿಗೆ ನೀರೆರೆಯುವ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ'ಸೌಜ ರವರು ಮತ್ತು ತೀರ್ಪುಗಾರರಾಗಿ ಆಗಮಿಸಿದ್ದ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳನ್ನು ಶ್ಲಾಘಿಸಿದರು. ತಮ್ಮ ಮಕ್ಕಳ ‘ವಸ್ತು ಪ್ರದರ್ಶನ’ ವೀಕ್ಷಿಸಲು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಸ್ಮಾರ್ಟ್ ರೈಲ್ವೆ ಸ್ಟೇಷನ್, ಕಾರ್ಗಿಲ್ ಯುದ್ಧ , ಚನ್ನಕೇಶವ ದೇವಸ್ಥಾನ, ಮಣ್ಣಿನ ಮತ್ತು ಶಿಲೆಗಳ ಮಾದರಿಗಳು, ವಿಧಾನಸೌಧ, ಆದಿಮಾನವನ ಜೀವನಶೈಲಿ ಹೀಗೆ ನೂರಾರು ಸಮಾಜಶಾಸ್ತ್ರಕ್ಕೆ, ಕಲೆಗೆ ಸಂಬಂಧಪಟ್ಟ ಮಾದರಿಗಳು ಒಂದಕ್ಕಿಂತ  ಒಂದು ಆಕರ್ಷಕವಾಗಿ ಪ್ರದರ್ಶನಗೊಂಡವು. ಮಕ್ಕಳ ಕ್ರಿಯಾಶೀಲತೆಗೆ ವಿಸ್ಮಯ ಪಡುವಂತಾಯಿತು. ವಿಜ್ಞಾನ ಮಾದರಿಗಳು ಭೌತಶಾಸ್ತ್ರದ ಅನೇಕ ತತ್ವಗಳ ಮೇಲೆ ಆಧಾರಿತವಾಗಿದ್ದು, ರಸಾಯನಶಾಸ್ತ್ರ ವಿಭಾಗದಲ್ಲಿ ಮಕ್ಕಳು ರಾಸಾಯನಿಕ ಕ್ರಿಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಜೀವ ವೈವಿಧ್ಯಗಳ ಮಾದರಿಗಳು, ಸಸ್ಯಗಳು, ಜಲಚಕ್ರ, ನೀರಿನ ಮರುಬಳಕೆಯ ಮಾದರಿಗಳು ಜೀವಶಾಸ್ತ್ರ ವಿಭಾಗದಲ್ಲಿ ಗಮನ ಸೆಳೆದವು. ಹೊಲಗದ್ದೆಗಳಲ್ಲಿ ಪಶು-ಪಕ್ಷಿಗಳನ್ನು ಓಡಿಸಲು ದೊಡ್ಡ ಶಬ್ದ ಬರುವಂತೆ ಮಾಡಿದ ಮಂಕಿಗನ್ ಮಾದರಿಯ ಸರಳ ಯಂತ್ರದ ಬಗ್ಗೆ ಎಲ್ಲರೂ ಆಕರ್ಷಿತರಾದರು. ಇತ್ತೀಚಿನ ದಿನಗಳಲ್ಲಿ ಊರೊಳಗೆ ಬರುತ್ತಿರುವ ಮುಷ್ಯಾಗಳ ಹಾವಳಿ ತಡೆಯಲು ಇದು ಸೂಕ್ತವಾಗಿದೆ ಎಂಬ ಅಭಿಪ್ರಾಯ ಎಲ್ಲರಲ್ಲಿ ಮೂಡಿತು. ಪ್ಲಾಸ್ಟಿಕ್ ಪೈಪ್‌ನಿಂದ ಮಾಡಿದ ಬಹಳ ಹಗುರವಾದ ಈ ಮಂಕಿಗನ್ ಬಹು ಉಪಯೋಗಿಯಾಗಿತ್ತು. ಪ್ರಾಣಿ ಸಂಗ್ರಹಾಲಯ, ಗ್ರಾಮರ್ ಟ್ರೀ  , ಹೈಡ್ರಾಲಿಕ್ ಬ್ರಿಡ್ಜ್ , ರಾಕೆಟ್ ಉಡಾವಣೆ, ಸೌರವ್ಯೂಹ, ಕೆಂಪುಕೋಟೆ ಇತ್ಯಾದಿ ಅನೇಕ ಮಾದರಿಗಳಿದ್ದವು.

ಕೋವಿಡ್‌ನಿಂದಾಗಿ ಮಕ್ಕಳು ಎರಡು ವರ್ಷ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌ರವರ ಮಾರ್ಗದರ್ಶನದಲ್ಲಿ, ಶಿಕ್ಷಕರ ಮತ್ತು ಪಾಲಕರ ಸಹಯೋಗದಿಂದ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಮಕ್ಕಳ ಆಸಕ್ತಿ ಅನಾವರಣಗೊಂಡಿತು. 300 ಕ್ಕೂ ಹೆಚ್ಚು ವಿವಿಧ ಮಾದರಿಗಳು ಪ್ರದರ್ಶಿತಗೊಂಡಿದ್ದವು.

Wednesday, December 21, 2022

 ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್‌ ನೀವಾಗಬೇಡಿ  ಹದಿವಯಸ್ಸಿನ ಬಾಲಕಿಯರಿಗೆ  ಡಾ || ಶಶಿಕಲಾ ಕೃಷ್ಣಮೂರ್ತಿಯವರಿಂದ ಎಚ್ಚರಿಕೆ

ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಉಂಟಾಗಿರುವ ಮಾನಸಿಕ ಬದಲಾವಣೆಗಳ ಹಾಗೂ ಹದಿವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಜೀವನ ಶೈಲಿಯನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ಎಸ್. ಎಸ್. ಇನ್ಸ್ಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್‌ (SSIMS) ನ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ|| ಶಶಿಕಲಾ ಕೃಷ್ಣಮೂರ್ತಿಯವರು ಸಿದ್ಧಗಂಗಾ ಸಂಸ್ಥೆಯ 10 ನೇ ತರಗತಿ ಬಾಲಕಿಯರಿಗೆ ಮತ್ತು ತಾಯಂದಿರಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. 



ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ್ದಾಗ ಮಕ್ಕಳು ಆನ್‌ಲೈನ್‌ ತರಗತಿಗೆಂದು ಪಡೆದ ಮೊಬೈಲ್‌ಗಳಿಂದಾಗಿ ಹೇಗೆ ಅದಕ್ಕೆ ದಾಸರಾಗಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. 180 ಹೆಣ್ಣು ಮಕ್ಕಳು ಅಷ್ಟೇ ಸಂಖ್ಯೆಯ ತಾಯಂದಿರು ಡಾ|| ಶಶಿಕಲಾ ಮೇಡಂರವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದರು. ಹದಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಲ್ಲಿ ಆಗುವ ದೈಹಿಕ ಬದಲಾವಣೆ, ಶುಚಿತ್ವ, ಋತು ಚಕ್ರ, ಆಹಾರ ಪದ್ಧತಿ, ಯುವಕರತ್ತ ಆಕರ್ಷಣೆ, ಸ್ನೇಹಿತರ ಆಯ್ಕೆಯ ಬಗ್ಗೆ ವಿವೇಚನೆ ಇವುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ತಾಯಂದಿರು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು. ಲೈಂಗಿಕ ದೌರ್ಜನ್ಯಗಳ ಬಗ್ಗೆ ಅವುಗಳಿಂದಾಗುತ್ತಿರುವ ಅನಾಹುತಗಳನ್ನು ವಿವರಿಸುತ್ತಾ “ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್‌ ನೀವಾಗಬೇಡಿ” ಎಂದು ಎಚ್ಚರಿಕೆ ನೀಡಿದರು.

ಪ್ರಾರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ 10 ನೇ ತರಗತಿಯ ಬಾಲಕಿಯರು ಪೂಜಾ ಸಾಮಗ್ರಿಗಳೊಂದಿಗೆ ತಮ್ಮ ತಮ್ಮ ತಾಯಂದಿರಿಗೆ ಪಾದ ಪೂಜೆ ನೆರವೇರಿಸಿ ಪುಷ್ಪವೃಷ್ಠಿಗೈದರು. ಹೆತ್ತಮ್ಮನಿಗೆ ಹೆಮ್ಮೆ ತರುವ ಮಗಳಾಗುವೆನೆಂದು ವಾಗ್ದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ, ಶಿಕ್ಷಕಿಯರಾದ ಪ್ರತಿಭಾ, ಝೀನತ್‌, ರಮಾದೇವಿ, ಅಂಬುಜಾಕ್ಷಿ ಮತ್ತು ಭೂಮಿಕ ಇವರಿದ್ದರು. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿತ್ತೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.

 ಸ್ಕೌಟ್ಸ್‌ – ಗೈಡ್ಸ್‌  ಸಿದ್ಧಗಂಗಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ  ದಾವಣಗೆರೆಯ ಗಾಜಿನ ಅರಮನೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಮಟ್ಟದ ಪ್ರಪ್ರಥಮ ಸಾಂಸ್ಕೃತಿಕ ಜಾಂಬೂರಿ ನಡೆಯುತ್ತಿದೆ. ಡಿಸೆಂಬರ್‌ 21 ರಿಂದ 27 ರವರೆಗೆ ದೇಶ –ವಿದೇಶದ ಮಕ್ಕಳ ಪ್ರತಿಭೆ – ಸಾಹಸ ಪ್ರದರ್ಶನ ಅನಾವರಣಗೊಳ್ಳಲಿದೆ. ರಾಷ್ಟ್ರದ ವಿವಿಧ ರಾಜ್ಯಗಳ ಮತ್ತು 10 ವಿದೇಶಿ ರಾಷ್ಟ್ರಗಳ 50 ಸಾವಿರ ಸ್ಕೌಟ್ಸ್‌ – ಗೈಡ್ಸ, ರೇಂಜರ್ಸ್‌, ರೋವರ್ಸ್‌, 10 ಸಾವಿರ ದಳನಾಯಕರು ಮತ್ತು 3 ಸಾವಿರ ಸ್ವಯಂ ಸೇವಕರ ಬೃಹತ್‌ ಮೇಳ ಕರ್ನಾಟಕದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ದಾವಣಗೆರೆ ಜಿಲ್ಲೆಯಿಂದ 920 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.

C:\Users\lenovo\Downloads\IMG-20221221-WA0002.jpg

ಈ ಅವಿಸ್ಮರಣೀಯ ಜಾಂಬೂರಿಗೆ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ 50 ಸ್ಕೌಟ್ಸ್‌ 47 ಗೈಡ್ಸ್‌ಗಳು, 5 ತರಬೇತಿದಾರರು ಮತ್ತು 4 ಸ್ವಯಂ ಸೇವಕರು ಎರಡು ಬಸ್‌ಗಳಲ್ಲಿ ತೆರಳಿದ್ದಾರೆ. ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಗಾಜಿನ ಅರಮನೆಯ ಪ್ರತಿರೂಪವನ್ನು ಜಾಂಬೂರಿಯ ಕಲಾ ಪ್ರದರ್ಶನದಲ್ಲಿ ಸ್ಥಾಪಿಸಿದ್ದಾರೆ. ರಾಷ್ಟ್ರದ ಅತಿ ದೊಡ್ಡ ದಾವಣಗೆರೆಯ ಗಾಜಿನ ಮನೆಯ ವಿಶಿಷ್ಠತೆಯನ್ನು ಪ್ರೇಕ್ಷಕರಿಗೆ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ತಿಳಿಸಿಕೊಡಲು ಮಕ್ಕಳು ಸಿದ್ಧರಾಗಿದ್ದಾರೆ. ಇದಲ್ಲದೆ ಹಿಂದೂ ಸಂಪ್ರದಾಯದ ವಿವಾಹ ಪದ್ಧತಿಯನ್ನು ಸಾಂಸ್ಕೃತಿಕ ವೇದಿಕೆಯಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಅಭಿನಯಿಸಲಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಮಟ್ಟದ ಬೃಹತ್‌ ಜಾಂಬೂರಿ ಮೇಳದಲ್ಲಿ ದಾವಣಗೆರೆಯ ಅನುರೂಪ – ಸುಂದರ ಗಾಜಿನ ಅರಮನೆಯನ್ನು ಸಿದ್ಧಗಂಗಾ ಸ್ಕೌಟ್‌ – ಗೈಡ್‌ ಮಕ್ಕಳು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್‌, ರಾಜೇಶ್, ರಾಜಶೇಖರ್‌, ಸ್ವಾತಿ, ಹೀನಾ ಕೌಸರ್‌ ಮತ್ತು ಪ್ರಿಯಾಂಕರವರ ಪರಿಶ್ರಮದಿಂದ ಈ ಸುಂದರ ಆಕೃತಿ ಮೂಡಿ ಬಂದಿದೆ.

Monday, December 19, 2022

 ಸಿದ್ಧಗಂಗಾ ಕಾಲೇಜಿನ ಬಾಲಕ-ಬಾಲಕಿಯರಿಂದ

ರಾಷ್ಟ್ರ – ರಾಜ್ಯಮಟ್ಟದ ಕ್ರೀಡೆಗಳಲ್ಲಿ ಅಪ್ರತಿಮ ಸಾಧನೆ



ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬಾಲಕ – ಬಾಲಕಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಬಾಲಕಿಯರ ವಿಭಾಗದಿಂದ ಸೃಷ್ಠಿ ಕೆ ಬೆಳ್ಳೂಡಿ ರಾಜ್ಯ ಮಟ್ಟದ ಬಾಸ್ಕೆಟ್‌ ಬಾಲ್‌ನಲ್ಲಿ ದ್ವಿತೀಯ, ಯುವ ಸಬಲೀಕರಣ ಪ್ರಾಧಿಕಾರದ ವಿಭಾಗ ಮಟ್ಟದ ನೆಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಹಾವೇರಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮಾನ್ಯ ಜೆ. ಮತ್ತು ದೀಪ್ತಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಬಾಲ್‌ ಬ್ಯಾಡ್‌ಮಿಂಟನ್‌ನಲ್ಲಿ ಅಕ್ಷತಾ ಟಿ. ವಿ ಮತ್ತು ಸಿಂಧು ಸಿ. ವಿ, ಶಿವಮೊಗ್ಗದಲ್ಲಿ ನಡೆದ ಕರಾಟೆಯಲ್ಲಿ ರಕ್ಷಾ ಜಿ. ಆರ್, ಉಡುಪಿಯಲ್ಲಿ ನಡೆದ ವಾಲಿಬಾಲ್‌ನಲ್ಲಿ ಕವನ ವೈ ಮತ್ತು ಸ್ನೇಹ ಟಿ. ಬಿ, ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಥ್ರೊ ಬಾಲ್‌ ನಲ್ಲಿ ಶ್ರೀಕಮಲ, ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಅನುಷಾ ಹೆಚ್, ದೀಪಾ ಜೆ. ಮೈದೂರ್‌ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಡೆದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಸುಪ್ರಿಯ ಎಂ, ನಂದಿತ ವಿ, ಪ್ರಕಾಶ್‌, ರೇಣುಕಾ ಎಂ, ಧನುಷ್‌ ಕೆ. ಜೆ, ಸುಪ್ರಿಯ, ಹರ್ಷಿತ  ಎ. ಎನ್ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಾಲಕರ ವಿಭಾಗದಲ್ಲಿ ವೈಭವ್‌‌ ಎಸ್, ವಿನಾಯಕ ಬಿ ತಮಿಳು ನಾಡಿನ ದಿಂಡಿಗಲ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲ್‌ಬಾಲ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಯಚೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಭಾಗವಹಿಸಿದ ಶಶಾಂಕ ಕೆ. ಎಸ್, ಕಾರ್ತಿಕ್  ಟಿ. ವಿ, ಸುಹಾಸ್‌, ಧನುಷ್‌ ಎಲ್, ಅವನೀಶ್‌ ಡಿ. ಹೆಚ್ , ಶಿವರಾಜ್‌ ಹೆಚ್.‌ ಬಿ ಇವರಲ್ಲಿ ಕಾರ್ತಿಕ್  ಟಿ. ವಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಆದಿತ್ಯ ದೀಪಕ್‌, ಅಭಿಷೇಕ್‌ ವೈ. ಎಂ ಬೆಸ್ಟ್‌ ಆಟಗಾರರಾಗಿದ್ದರು. ಆದಿತ್ಯ ದೀಪಕ್‌ ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್‌ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾನೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ಕ್ರೀಡೆಗಳಲ್ಲಿ ಉಲ್ಲಾಸ್‌ ರೆಡ್ಡಿ, ಸಿದ್ಧನಗೌಡ, ಹರೀಶ್‌ ಹೆಚ್.‌ ಕೆ ಇವರು ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ, ಸೂಫಿಯಾನ್‌ ಎಸ್.‌ ಎಂ ಚಿಕ್ಕೋಡಿ ಜಿಲ್ಲೆಯಲ್ಲಿ ನಡೆದ ಷಟಲ್‌ ಬ್ಯಾಡ್ಮಿಂಟನ್‌ ನಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕರಾಟೆಯಲ್ಲಿ ಮನೋಜ್‌ ಶೀಲವಂತ್‌ ಮತ್ತು ಮಧು, ಹಾವೇರಿ ಜಿಲ್ಲೆಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಶಿವರಾಜ್‌ ಸಿ. ಜೆ ಮತ್ತು ವಿನಾಯಕ ಕೆ. ಹಾಗೂ ಮೈಸೂರು ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್‌ ಟೆನ್ನಿಸ್‌ನಲ್ಲಿ ಮಲ್ಲಿಕಾರ್ಜುನ್  ಜೆ. ಎಸ್ ಮತ್ತು ಅಭಿಷೇಕ್‌ ಬಿ. ಎಸ್ ಉತ್ತಮ ಪ್ರದರ್ಶನ ನೀಡಿ ಸಿದ್ಧಗಂಗಾ ಕಾಲೇಜಿನ ಉತ್ತಮ ಕ್ರೀಡಾಪಟುಗಳೆಂದು ಹೆಸರು ಗಳಿಸಿದ್ದಾರೆ.

ರಾಷ್ಟ್ರ – ರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆ ಮೆರೆದ ಬಾಲಕ – ಬಾಲಕಿಯರಿಗೆ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.