Tuesday, August 30, 2022

ಸಿದ್ಧಗಂಗಾ ಸ್ಕೌಟ್-ಗೈಡ್ಸ್ ಮಕ್ಕಳಿಂದ ಪರಿಸರ ಗಣಪತಿ

 













ವಿಘ್ನನಿವಾರಕ, ವಿದ್ಯಾ ಗಣಪತಿಯ ವಿವಿಧ  ಆಕಾರ - ಗಾತ್ರದ  ಗಣಪತಿಗಳು ಸಿದ್ಧಗಂಗಾ ಅಂಗಳದಲ್ಲಿ ಇಂದು ಕಂಗೊಳಿಸಿದವು . ವಿಶೇಷವೆಂದರೆ ಈ ಎಲ್ಲಾ ಗಣಪತಿಗಳು ಪರಿಸರ ಸ್ನೇಹಿ ಗಣಪಗಳಾಗಿದ್ದವು . ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ,ಗೈಡ್ಸ್  ಮಕ್ಕಳು ಮೈದಾ ,ಅರಿಶಿನ ,ಜೇಡಿ ಮಣ್ಣು ,ಸೋಪು ,ಗೋಧಿಹಿಟ್ಟು  ಹೀಗೆ  ಸ್ಥಳೀಯ ಲಭ್ಯ ಪರಿಸರ ವಸ್ತುಗಳಿಂದ ಗಣೇಶನನ್ನು ನಿರ್ಮಿಸಿದ್ದರು . ಪುಟ್ಟ ಪುಟ್ಟ  ಕೈಗಲ್ಲಿ  ಸುಂದರ ಗಣಪಗಳು ವಿಶೇಷ  ಭೂಷಣಗಳೊಂದಿಗೆ  ಅಲಂಕೃತಗೊಂಡಿದ್ದವು .  ಎಲ್ .ಟಿ  ಶಶಿಕಲಾ ಅವರ  ನೇತೃತ್ವದಲ್ಲಿ  ಶಾಲೆಯ ಗೈಡ್ಸ್  ಶಿಕ್ಷಕರಾದ ನಿರ್ಮಲ , ಮಂಜುಳ , ದೀಪ ಎನ್ , ಸುನೀತಾ , ಸುನೀತಾಬಾಯಿ , ವೇದಾವತಿ , ವಾಹಿದಾ  ಮತ್ತು  ಸ್ಕೌಟ್ ಮಾಸ್ಟರ್ ಗಳಾದ  ಆರೋಗ್ಯಮ್ಮ ,ದುಗ್ಗಪ್ಪ ,ಮಹೇಶ್ , ಶ್ರೀನಿವಾಸ್ ,ಸಾಮ್ಯಾನಾಯ್ಕ , ಎ ಡಿ ಸಿ  ಸ್ಕೌಟ್  ಡಾ।। ಜಯಂತ್ , ಎ ಡಿ ಸಿ ಗೈಡ್ಸ್  ರೇಖಾರಾಣಿ , ಖಜಾಂಚಿ ಗಾಯತ್ರಿಯವರು ಮಕ್ಕಳಿಗೆ ಮಾರ್ಗದರ್ಶನ  ನೀಡಿ ಗಣೀಶ ಹಬ್ಬದ ಸಂಭ್ರಮ ಹಂಚಿಕೊಂಡರು .

No comments:

Post a Comment