Friday, January 22, 2021

ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ

 ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ. 

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ.

ದಾವಣಗೆರೆ ಜ. 21, ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಮಾಡಿದವರು ಸಿದ್ಧಗಂಗಾ ಶಿವಕುಮಾರ ಶ್ರೀಗಳು. ಅವರ ಹೆಸರಲ್ಲಿರುವ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆ ಕೂಡ ಅದರಂತೆಯೇ ನಡೆಯುತ್ತಿರುವ ಕಾರಣ ಈ ಸಂಸ್ಥೆಯಲ್ಲಿ ಕಲಿತವರು ಸುಸಂಸ್ಕøತರಾಗುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. 

ಅವರಿಂದು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದಾಡುವ ದೇವರೆಂದೇ ಭಾವಿಸಿದ್ದ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ದಾಸೋಹದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ ಎಂದ ಅವರು ಮಕ್ಕಳಿಗೆ ಸುಜ್ಞಾನವಂತರಾಗುವ ಶಿಕ್ಷಣ ಪಡೆಯಲು ತಿಳಿಸಿದರು. 

ಪಿ. ಯು. ಸಿ ಹಂತದ ವಿದ್ಯಾರ್ಥಿಗಳು ಮುಂದೆ ನಾನು ಏನಾಗಬೇಕೆಂದು ಕನಸು ಕಟ್ಟುವ ಸಮಯ. ಈ ಸಮಯದಲ್ಲಿ ನೀವು ಉನ್ನತ ಮಟ್ಟದ ಕನಸನ್ನೇ ಕಟ್ಟಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗುತ್ತೆ ಎಂದರು.

ಜಾತಿ, ವರ್ಣಗಳನ್ನ ಮೀರಿ ಸಮಾಜದ ಆಸ್ತಿಯಾಗಿ ನಿಮ್ಮ ಬಳಿ ಬರುವ ಎಲ್ಲರಿಗೂ ಒಳಿತನ್ನು ಬಯಸಿ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಂದುವರೆದು ಮಾತನಾಡಿದ ಬೀಳಗಿಯವರು ದೊಡ್ಡ ಮರದ ನೆರಳಿನಲ್ಲಿ ಬೆಳೆಯುವವರು ವಿಭೂತಿ  ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕೆಂದರು. ದಾಸೋಹ ಉದ್ಘಾಟನೆಯ ನಂತರ ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪ್ರಸಾದ ವಿನಿಯೋಗಿಸಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ನಮ್ಮ ನಾಡಿನ ಸಹಸ್ರಾರು ನಿರ್ಗತಿಕರ ದಾರಿದೀಪವಾಗಿದ್ದರು ಅವರು ಇಂದು ನಮ್ಮ ಜೊತೆಗಿಲ್ಲ ಆದರೆ ಅವರ ಆದರ್ಶ ನಮ್ಮ ಜೊತೆಗಿದೆÉ. ಅವುಗಳನ್ನ ನಾವು ಪಾಲಿಸೋಣ ಎಂದರು.

ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಶ್ವೇತಾ ಶ್ರೀನಿವಾಸ್ ಉಪಸ್ಥಿತರಿದ್ದರು.


ಪ್ರಾರಂಭದಲ್ಲಿ ಸಿದ್ಧಗಂಗಾ ಪಿ. ಯು. ಕಾಲೇಜು ಪ್ರಾಂಶುಪಾಲರಾದ ನಿರಂಜನ ಜಿ. ಸಿ. ಸ್ವಾಗತಿಸಿದರು. ಪಿ. ಯು. ಕಾಲೇಜು ನಿರ್ದೇಶಕ ಜಯಂತ್ ಡಿ. ಎಸ್. ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಿದ್ಧಗಂಗೆ ಶ್ರೀಗಳವರ ತ್ರಿವಿಧ  ದಾಸೋಹ  ಸೇವೆಯನ್ನು ಮತ್ತು ಅವರ ಮಾರ್ಗದಲ್ಲೇ ಮುನ್ನಡೆದ ಎಂ. ಎಸ್. ಶಿವಣ್ಣನವರ ಕಾಯಕವನ್ನು ನಿರೂಪಿಸುತ್ತಾ ನಡೆದಾಡುವ ದೇವರು ಪಾದಸ್ಪರ್ಶ ಮಾಡಿದ ಪುಣ್ಯಭೂಮಿ ಈ ಸಿದ್ಧಗಂಗಾ ವಿದ್ಯಾಸಂಸ್ಥೆ ಎಂದರು. ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ದರ್ಶನ್ ರುದ್ರಾಕ್ಷಿಬಾಯಿ ಮತ್ತು ತಂಡದವರು ಸುಶ್ರಾವ್ಯವಾಗಿ ಹಾಡಿ ಭಕ್ತಿ ಸೇವೆ ಸಮರ್ಪಿಸಿದರು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ಮತ್ತು ಪ್ರಶಾಂತ್‍ರವರು ನಿರ್ವಹಿಸಿದರು.

ಸಂಸ್ಥಾಪಕ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಸ್ಟಿನ್ ಡಿ’ಸೌಜ ಎಲ್ಲರಿಗೂ ವಂದಿಸಿದರು.