Friday, April 30, 2021

Bridge Course for CBSE/ICSE 10 Students

Prestigious Siddaganga PU College is organising a Bridge Course for CBSE/ICSE 10 Students getting into PUC Science. This bridge course will help students to understand PU concepts effectively. To register to bridge course signup with link https://bit.ly/3vgPG9W

Watch video below for more detail


Sunday, April 25, 2021

1 PUC Admission (for CBSE/ICSE Students)

 Dear Parent,

Since CBSE/ICSE Grade 10 board exams are cancelled this year, admission for I PUC will be open to all CBSE/ICSE Grade 10 students. There will be a eligibility test based on Science & Mathematics. Upon clearing this test, parents can get their child admitted by paying fee as per the table below. However students can get up to 100% tuition fee as MSS scholarship program in the name of founder M S Shivanna.

Contact office for further detail

Landline : 08192-233635

Mobile : 8073301604

Address : 2347, Siddalingeshwara Nagar, Davanagere

Virtual Tour : https://youtu.be/f-pSmnSXD6c

Direction : https://goo.gl/maps/kb5hpAGk4STb2v7Y6

Details of MSS Scholarship (For CBSE/ICSE Students Only)

1. MSS Scholarship exam will be based on 1st PUC syllabus.

2. Exam will be for 600 marks covering PCMB/CS & 2 Languages based on combination opted by student.

3. Exam will be tentatively held in the month of August 2021.

4. Exam will be in offline mode using Pen and Paper.

5. Eligible students will receive scholarship amount in the form of Cheque.

6. Only students who get admitted on or before May 31st June 26th 2021 will be eligible for MSS Scholarship.

7. MSS Scholarship will be applicable only for 1 PUC Students.

8. Date of exam and portion will be published later.



Hostel Fee is based on room selection, will be allotted based on availability. 



Sunday, April 18, 2021

ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದ ಹರಿಕಾರನ ಪ್ರಥಮ ವರ್ಷದ ಸ್ಮರಣೆ

 ಶಿಕ್ಷಣ ಶಿಲ್ಪಿ ಎಂ.ಎಸ್.ಶಿವಣ್ಣ

ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದ ಹರಿಕಾರನ ಪ್ರಥಮ ವರ್ಷದ ಸ್ಮರಣೆ

‘ಶಿವಣ್ಣ’ ಎಂಬ ಶಿಕ್ಷಣದ ದ್ರುವತಾರೆ ಸಿದ್ಧಗಂಗೆಯ ನಭದಿಂದ ಜಾರಿ ಬಿದ್ದು ಏಪ್ರಿಲ್ 18 ಕ್ಕೆ ವರ್ಷ ತುಂಬುತ್ತದೆ. ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದು ಸಿದ್ಧಗಂಗೆಯ ವೈಶಿಷ್ಠ್ಯತೆ ಮೆರೆದು ತಮ್ಮ ಪೂಜ್ಯ ಗುರುಗಳಾದ ಲಿಂ|| ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಧ್ಯೇಯ ಉದ್ದೇಶಗಳನ್ನು ಈಡೇರಿಸಿ ಸಾರ್ಥಕ ಭಾವದಿಂದ ಗುರುಗಳನ್ನು ಅರಸುತ್ತಾ ಸಿದ್ಧಲಿಂಗನ ಪಾದಗಳಲ್ಲಿ ಲೀನವಾದ ಶಿವಣ್ಣನವರು ಅಖಂಡ ಗುರುಭಕ್ತಿ, ದೈವಭಕ್ತಿಯ ಪ್ರತೀಕವಾಗಿದ್ದರು.

ಎಂಭತ್ತು ಸಂವತ್ಸರಗಳನ್ನು ಹರಳುಗಟ್ಟಿಸಿ ಇಹಲೋಕ ವ್ಯಾಪಾರ ಮುಗಿಸಿದ ಶಿವಣ್ಣನವರ ಜೀವನ ಹೋರಾಟದಿಂದಲೇ ಪ್ರಾರಂಭವಾಗಿ ಹೋರಾಟದಲ್ಲೇ ಮುಕ್ತಾಯಗೊಂಡಿತು. ಶಿಕ್ಷಣ ರಂಗದಲ್ಲಿ ಮಂತ್ರದಂಡವಿಲ್ಲದ ಮಾಂತ್ರಿಕನಾಗಿ ಐದು ದಶಕಗಳಿಗೂ ಮೀರಿ ಅಮಿತ ಶ್ರದ್ಧೆಯಿಂದ ಲಕ್ಷ - ಲಕ್ಷ ವಿದ್ಯಾರ್ಥಿಗಳ ಭವಿಷ್ಯ ತಿದ್ದಿ – ತೀಡಿ ಸುಂದರ ಆಕಾರ ನೀಡಿದ ಶಿವಣ್ಣ ಮೇಷ್ಟ್ರನ್ನು ಸುಲಭವಾಗಿ ಮರೆಯಲಾಗದು.



ಪ್ರೀತಿಯಿಂದ ಮಕ್ಕಳ ಮನಸ್ಸು ಗೆದ್ದು, ತಪ್ಪಿದಾಗ ಶಿಕ್ಷಿಸಿ, ಸರಿದಾರಿಗೆ ತಂದ ಅದ್ವಿತೀಯ ಗುರುವನ್ನು ಅವರ ಶಿಷ್ಯಗಣ ಆರಾಧಿಸುತ್ತಿದ್ದಾರೆ. ಉಳಿ ಪೆಟ್ಟು ಬೀಳದೆ ಕಗ್ಗಲ್ಲು ಮೂರ್ತಿಯಾಗದು ಎಂಬ ಸಿದ್ಧಾಂತದ ಶಿವಣ್ಣನವರಿಗೆ ಮಕ್ಕಳ ಭಾವಕೋಶದಲ್ಲೊಂದು ವಿಶಿಷ್ಠ ಸ್ಥಾನವಿದೆ.

ಶಿವಣ್ಣನವರು ದಾವಣಗೆರೆಯಲ್ಲಿ ಹುಟ್ಟಿ ಬೆಳೆದವರಲ್ಲ. ಆದರೆ ಇಲ್ಲಿಯ ಜೀವನಾಡಿಯ ಮಿಡಿತ ಅರಿತವರಾಗಿದ್ದರು. 60 ರ ದಶಕದಲ್ಲಿ ಎಸ್ ಎಸ್ ಎಲ್ ಸಿ ಎಂಬ ಭೂತವನ್ನು ಎದುರಿಸಲಾರದೆ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದವರ ಆಶಾಕಿರಣವಾಗಿ “ಶಿವಾನಂದ ಟ್ಯುಟೋರಿಯಲ್” ಎಂಬ ಮಿಣುಕು ದೀಪ ಹಚ್ಚಿ ಹಂತ ಹಂತವಾಗಿ ತೈಲ ಎರೆಯುತ್ತಾ ‘ಸಿದ್ಧಗಂಗಾ’ ಎಂಬ ಜ್ಞಾನ ಜ್ಯೋತಿ ಬೆಳಗಿಸಿ ದಶದಿಕ್ಕುಗಳಲ್ಲಿ ಅದರ ಪ್ರಕಾಶ ಹರಡುವಂತೆ ಮಾಡಿ ಶಿಕ್ಷಣದ ಕ್ರಾಂತಿಕಾರರಾದರು.

ಅಂಜಿಕೆ, ಅಳಕು, ಸುಳ್ಳು, ತಟ – ವಟ ಅರಿಯದ ನಿಷ್ಕಪಟಿ. ಬೇಕೆನಿಸಿದ್ದನ್ನು ಶತಾಯ ಗತಾಯ ಪಡೆಯುವ ಹಠಮಾರಿ. ಮಾಡುವ ಕೆಲಸದಲ್ಲಿ ಶ್ರದ್ಧೆ - ನಿಷ್ಠೆ. ಪಟ್ಟು ಬಿಡದ ಛಲಗಾರ. ನೊಂದವರ ಕಣ್ಣೀರಿಗೆ ಕರಗುವ, ಮೋಸ ವಂಚನೆಗಳಿಗೆ ಆರ್ಭಟಿಸುವ ವೈರುಧ್ಯ ಸ್ವಭಾವದ ಬ್ರಹ್ಮಸೃಷ್ಟಿ. ಪ್ರಾಣದ ಹಂಗು ತೊರೆದು ಸಾತ್ವಿಕ ಹೋರಾಟ ನಡೆಸಿದ್ದು ಈಗ ಇತಿಹಾಸ. ಸಮಕಾಲೀನರು ಶಿವಣ್ಣನವರ ಎದೆಗಾರಿಕೆಗೆ ಬೆರಗಾಗುತ್ತಿದ್ದರು.

ಶಾಲೆಯ ಹೊರತಾಗಿ ಅವರ ಕಾರ್ಯಕ್ಷೇತ್ರ, ಸಮಾಜಸೇವೆ, ಪತ್ರಿಕೋದ್ಯಮ, ಸಾಂಘಿಕ ಚಟುವಟಿಕೆ, ಕಲೆ, ನಾಟಕರಂಗಗಳಿಗೆ ವಿಸ್ತರಿಸಿತ್ತು. ಬಹುಮುಖ ಪ್ರತಿಭೆಯ ಶಿವಣ್ಣನವರಿಗೆ ಪಾಠ ಮಾಡುವುದು ಬಾಲ್ಯದ ಹವ್ಯಾಸ. ಮುಂದೆ ಅದು ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆಗೆ ನಾಂದಿಯಾಯಿತು. ಡಿ.ಎಡ್, ಬಿ.ಎಡ್ ಗಳಂತಹ ಯಾವುದೇ ಶಿಕ್ಷಕ ವೃತ್ತಿಯ ಅರ್ಹತೆಗಳಿಲ್ಲದೆ ಶಿಕ್ಷಣಕ್ಕೆ ಹೊಸ ರೂಪ ನೀಡಿ ಶಿಕ್ಷಣ ತಜ್ಞನೆಂಬ ಬಿರುದು ಪಡೆದರು.

ಸಿದ್ಧಗಂಗೆಗೆ ಸೇರಿದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತೆಯೇ ಇಲ್ಲ. ಬೋಧನೆಯಲ್ಲಿನ ನಾವೀನ್ಯತೆ ಇಲ್ಲಿ ಎಲ್ಲರಿಗೂ ಕರಗತ. ಶಿಕ್ಷಣವೆಂಬುದು ಏಕಾಗ್ರತೆಯ ಕೂಸು. ಕಥೆಗಳ ಮೂಲಕ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ ನಂತರ ಪಠ್ಯಗಳಲ್ಲಿ ತೊಡಗಿಸಿಕೊಳ್ಳುವುದು ಶಿವಣ್ಣನವರ ಬೋಧನಾ ಕ್ರಮವಾಗಿತ್ತು. ಎಷ್ಟೋ ವರ್ಷಗಳ ಹಿಂದೆ ಹೇಳಿದ ಕಥೆಗಳು ಮಕ್ಕಳ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿ ನಿಂತಿದೆ. ಕಥೆಗಳೆಂದರೆ ಅದು ಜೀವನದ ರಸಪಾಕ. ಅನುಭವದ ಮೂಸೆಯಲ್ಲಿ ಪುಟಿದ ಚಿನ್ನ. ತನ್ನ ವಾಗ್ಝರಿಯಿಂದ ಮಕ್ಕಳನ್ನು ಸೆಳೆಯುತ್ತಿದ್ದ ಸೂಜಿಗಲ್ಲಾಗಿದ್ದರು ಶಿವಣ್ಣನವರು. ಕಥೆಯ ಮೂಲಕ ನೀತಿ ಬೋಧಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದ ಶ್ರೇಷ್ಠ ಗುರು!

ಖಂಡ – ತುಂಡವಾಗಿ ಮಾತನಾಡುತ್ತಿದ್ದ ಶಿವಣ್ಣನವರಿಗೆ ವೈರಿಗಳ ಸಮೂಹವೂ ದೊಡ್ಡದಿತ್ತು. ವೈರಿಯೂ ಮೆಚ್ಚುವಂತೆ ಬಾಳಿದ ಶಿವಣ್ಣನವರ ತತ್ವ - ಸಿದ್ಧಾಂತಗಳಿಂದ ಪ್ರಭಾವಿತರಾದ ಕ್ರಮೇಣ ಅವರೆಲ್ಲರೂ ಸ್ನೇಹಿತರಾದದ್ದು ಮತ್ತೊಂದು ದಾಖಲೆ.

ಶಿಕ್ಷಣಕ್ಕೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ, ವಿಜ್ಞಾನ ಆವಿಷ್ಕಾರಗಳಿಗೆ, ನಾಟಕ, ಸಂಗೀತ, ನೃತ್ಯಗಳಿಗೆ ಮುಕ್ತ ಅವಕಾಶ ನೀಡಿ ಶಿಕ್ಷಣದಿಂದ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಎಂಬುದನ್ನು ಸದ್ದಿಲ್ಲದೆ ಸಾಧಿಸಿ ತೋರಿಸಿದ ಶಿವಣ್ಣನವರು ಶಾಲೆ ಸಮಾಜಮುಖಿಯಾಗಿರಬೇಕೆಂಬ ಸಂದೇಶವನ್ನು ತಮ್ಮ ಜೀವಿತ ಕಾಲದಲ್ಲಿ ಪಾಲಿಸಿ ಅದೇ ಪರಂಪರೆಯನ್ನು ಸಂಸ್ಥೆಯಲ್ಲಿ ಮುಂದುವರೆಸಿಕೊಂಡು ಹೋಗಲು ದಾರಿದೀಪವಾಗಿದ್ದಾರೆ.

ಮಹಾನಗರ ಪಾಲಿಕೆಯವರು ಕೆ.ಟಿ.ಜೆ ನಗರದ 18 ನೇ ಮುಖ್ಯ ರಸ್ತೆಗೆ “ಶಿಕ್ಷಣ ಶಿಲ್ಪಿ ಎಂ.ಎಸ್ ಶಿವಣ್ಣ ರಸ್ತೆ” ಎಂದು ನಾಮಕರಣ ಮಾಡಿ ಅವರ ನೆನಪನ್ನು ಶಾಶ್ವತಗೊಳಿಸಿದ್ದಾರೆ. ಈ ಸತ್ಕಾರ್ಯಕ್ಕೆ ಸಹಕರಿಸಿದವರೆಲ್ಲರಿಗೂ ಸಂಸ್ಥೆಯ ಕೃತಜ್ಞತೆಗಳು. ದಾವಣಗೆರೆ ವಿಶ್ವವಿದ್ಯಾನಿಲಯ ಲಿಂ|| ಎಂ.ಎಸ್ ಶಿವಣ್ಣನವರ ಸೇವೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಅವರ ಅಭಿಮಾನಿಗಳು, ಶಿಷ್ಯರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರೀತಿಗೆ ನಮ್ಮ ನಮನಗಳು. ಬಹುದೊಡ್ಡ ಸಂಸ್ಥೆಯ ನಿರ್ಮಾತೃವಾದರೂ ಸರಳ, ನಿಗರ್ವಿ ಶಿವಣ್ಣನವರು ಅಣ್ಣ ಬಸವಣ್ಣ ಹೇಳಿದಂತೆ ಎನಗಿಂತ ಕಿರಿಯರಿಲ್ಲ ..... ಎಂಬ ನುಡಿಯ ಪಡಿಯಚ್ಚಾಗಿ ಬಾಳಿ-ಬದುಕಿ-ಮರೆಯಾದವರು. ಸಾವೆಂಬುದು ಭೌತಿಕ ಕಾಯಕ್ಕೆ ಮಾತ್ರ ಆದರೆ ಮಾಡಿದ ಕಾಯಕಕ್ಕೆ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಇಂದು ದಾವಣಗೆರೆಯ ಸಿದ್ಧಗಂಗಾ ಸಂಸ್ಥೆ ರಾಜ್ಯದಾದ್ಯಂತ ಹೆಸರು ಮಾಡಿದೆ. ಗುಣಾತ್ಮಕ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಗುರುಕುಲವಾಗಿದೆ. ಇರುಳನ್ನು ಹಗಲಾಗಿಸಿ ಕಣ್ರೆಪ್ಪೆ ಮುಚ್ಚದಂತೆ ಅಹರ್ನಿಶಿ ದುಡಿದು ಶೂನ್ಯದಿಂದ ಶಿಖರಕ್ಕೇರಿದ ಶಿವಣ್ಣನವರು ಆನಗೋಡಿನ ತಮ್ಮ ಜಮೀನಿನಲ್ಲಿ ಶಿಲಾ ಮಂಟಪದ ಗರ್ಭದಲ್ಲಿ ಶಾಶ್ವತ ನಿದ್ರೆಯಲ್ಲಿದ್ದಾರೆ. ಇತಿಹಾಸ ಸೃಷ್ಠಿಸಿ ಚಿರಸ್ಥಾಯಿಯಾಗಿದ್ದಾರೆ. ಅವರ ಸ್ಮರಣೆಯಲ್ಲಿ “ಅಜರಾಮರ” ನುಡಿನಮನ ಕೃತಿ ಸಿದ್ಧಗೊಂಡಿದೆ. ಕೋವಿಡ್ – 19 ರ ಅಬ್ಬರ ಪುಣ್ಯಸ್ಮರಣೆಗೆ ಅಡ್ಡಿಯಾಗಿದೆ. 2020 ರ ಸ್ಥಿತಿ ಮರುಕಳಿಸಿದೆ. ಗುರುಸ್ಮರಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿ ಪರಿಸ್ಥಿತಿ ತಿಳಿಯಾದ ನಂತರ ಸ್ಮರಣೋತ್ಸವ ಆಚರಣೆ ಮಾಡೋಣ.

ಜಸ್ಟಿನ್ ಡಿ’ಸೌಜ


Thursday, April 1, 2021

ಸರಿಗನ್ನಡ ಮತ್ತು ಗುಣಮಟ್ಟ

 “ಸರಿಗನ್ನಡ ಮತ್ತು ಗುಣಮಟ್ಟದ” ಬಗ್ಗೆ

ಲಿಂ|| ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ನಿಲುವು.


“ಸರಿಗನ್ನಡ”ದ ಬಗ್ಗೆ ಜಾಗೃತಿ ಮೂಡಿಸುವ ಕಾಯಕ ಪ್ರಾರಂಭವಾಗಿದೆ
. ಕನ್ನಡ ಸರಳ - ಸುಂದರ ಭಾಷೆ. ಕರ್ನಾಟಕದ ವಿವಿಧ ಭಾಗದ ಜನರು ವಿಶಿಷ್ಠ ಶೈಲಿಯ ಭಾಷಾ ಸೊಗಡನ್ನು ಹೊಂದಿದ್ದಾರೆ. ಆದರೆ ಕನ್ನಡದ ಗ್ರಂಥ ಭಾಷೆಯನ್ನು ಬರವಣಿಗೆಯಲ್ಲಿ ಬಳಸುವಾಗ, ಉಚ್ಛಾರ ಮಾಡುವಾಗ ತಪ್ಪು ಉಂಟಾಗುವುದನ್ನು ಸಿದ್ಧಗಂಗಾ ಮಠದ ಲಿಂಗೈಕ್ಯ ಪರಮ ಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಸಹಿಸುತ್ತಿರಲಿಲ್ಲ.


ಪರಮ ಪೂಜ್ಯರು ಈ ವಿಚಾರವನ್ನು ಬಹಳ ಹಿಂದೆ ಅವರ ಶ್ರೀವಾಣಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅದು ಕೆಳಗಿನಂತಿದೆ.


“ಮೊನ್ನೆ ಒಂದು ಅಪ್ಲಿಕೇಷನ್ ತಂದುಕೊಟ್ಟರು, ಕೊಟ್ಟಾತ ಒಬ್ಬ ನಿವೃತ್ತ ಶಿಕ್ಷಕ, ಮೊವತ್ತು ವರ್ಷಗಳ ಸೇವೆ ಸಲ್ಲಿಸಿ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿರುವ ವ್ಯಕ್ತಿ. ಮುಖ್ಯೋಪಾಧ್ಯಾಯನಾಗಿ ಪ್ರೌಢಶಾಲೆಯ ಆಡಳಿತಾಂಗದಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕ. ಅವನು ಕೊಟ್ಟ ಅರ್ಜಿಯ ವಿಷಯವನ್ನಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಆ ಅರ್ಜಿಯ ಭಾಷಾದೋಷಗಳನ್ನು ಕುರಿತು ಹೇಳಬೇಕಾಗಿದೆ. “ನನ್ನ ಹಣ್ಣನಿಗೆ” ಎಂದು ಪದ ಬಳಸಿದ್ದು ಕಾಣಬಂದಿತು. 

ಇನ್ನೊಂದು ಇಂಗ್ಲೀಷ್ ಎಂ.ಎ ಮಾಡುತ್ತಿರುವ ಅಭ್ಯರ್ಥಿಯೊಬ್ಬ ಅಪ್ಲಿಕೇಷನ್ ಕೊಟ್ಟುಹೋದ. ಅದರ ಮೇಲೆ ಕಣ್ಣಾಡಿಸಿದಾಗ ಇದು ಯಾವ ಇಂಗ್ಲೀಷ್ ಎಂಬ ಭಾವನೆ ಬಂದಿತು. “I am here by informing” ಎಂದು ಪ್ರಾರಂಭಿಸಿ ಅನಂತರ “requesting” ಎಂದು ಸೇರಿಸಿ ವಾಕ್ಯ ಪ್ರಾರಂಭ ಮಾಡಿದ್ದು ಕಾಣಬಂದಿತು. ಮತ್ತೊಂದು ಸಮಯದಲ್ಲಿ ವಿದ್ಯಾರ್ಥಿಗಳ ಆಟೆಂಡೆನ್ಸ್ ರಿಜಿಸ್ಟರ್ ನೋಡುವ ಸಂದರ್ಭದಲ್ಲಿ ವಿದ್ಯಾರ್ಥಿ “ಸಿವರುದ್ರಯ್ಯ”, ‘ಮುಖ್ಯೋಪಾಧಾಯ’ ಎನ್ನುವ ಕಾಗುಣಿತಗಳ ದೋಷಗಳನ್ನು ಕಾಣುವಂತಾಯಿತು. ಇವು ಶಿಕ್ಷಣ ಕ್ಷೇತ್ರದಲ್ಲಿ ಕಾಣಬರುತ್ತಿರುವುದಾದರೆ ಅನ್ಯಕ್ಷೇತ್ರಗಳ ಹಣೆಬರಹವೂ ಇದೇ ಆಗಿದೆ. 

ಸಂಸ್ಕøತ ಪ್ರೌಢವಾದ, ಜ್ಞಾನನಿಷ್ಠವಾದ ಭೌದ್ಧಿಕ ಭಾಷೆ. ಅಲ್ಲಿನ ಶ್ಲೋಕಗಳ ಅಧ್ಯಯನ ನಿರ್ದಿಷ್ಟವಾಗಿರುತ್ತದೆ. ತಪ್ಪಿಲ್ಲದ ಉಚ್ಛಾರ ಅತಿ ಮುಖ್ಯ. ಪೂಜಾ ಸಂದರ್ಭದಲ್ಲಿ ಕೆಲಮಂತ್ರಗಳನ್ನು ಪಠಿಸುವ ಪುಣ್ಯಾತ್ಮರು ಅಪಶಬ್ಧವನ್ನೇ ಎತ್ತಿದ ಕಂಠದಲ್ಲಿ ಉಗ್ಗಡಿಸುವುದನ್ನು ಗಮನಿಸಬಹುದು. ವಸ್ತುಗಳ ಉತ್ಪಾದನೆಯಲ್ಲಿ, ಮಾಡುವ ಕೆಲಸದಲ್ಲಿ, ಕಲಿಯುವ ಹಂತದ ಗುಣಕ್ಕೆ ಪ್ರಾಮುಖ್ಯತೆ ಇಲ್ಲವಾಗಿದೆ. ಪರೀಕ್ಷೆಗಳಲ್ಲಿ ಫಲಿತಾಂಶ ಇಳಿಮುಖವಾಗಿದೆ. ಏರುಮುಖವಾಗಿದೆ ಎಂದರೆ ಅಪಮಾರ್ಗದಲ್ಲಿ ನಡೆದಿರಬೇಕು ಎಂಬುದು ಬಹಿರಂಗ ಸತ್ಯವಾಗಿದೆ. ಚುನಾವಣೆಗಳಲ್ಲಿ ಪ್ರಚಂಡ ಬಹುಮತ ಗಳಿಸಲಾಯಿತು ಎನ್ನುವಾಗ ನಡೆದಿರುವ ಭ್ರಷ್ಟಾಚಾರವನ್ನು ಮರೆಯುವಂತಿಲ್ಲ. ಕೃಷಿ ಕೃತ್ಯ ಕಾಯಕವೊಂದೆ ಭ್ರಷ್ಟ ಮುಕ್ತವಾದ ಪವಿತ್ರ ದುಡಿಮೆಯೆಂಬ ಸದ್ಭಾವನೆಯಿತ್ತು. ಅಲ್ಲಿಯೂ ಪ್ರಮಾಣಿಕವಾದ ದುಡಿಮೆ ಕಾಣಬರುತ್ತಿಲ್ಲ. ಪ್ರಕೃತಿ ಸೋಮಾರಿಗಳಿಗೆ, ಸೋಗಲಾಡಿತನಕ್ಕೆ ಒಲಿಯಲಾರಳು. ಗುಣಮಟ್ಟವನ್ನು ನಿರ್ಧಾರ ಮಾಡುವ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಆದರೆ ಅಲ್ಲಿಯೂ ನ್ಯೂನತೆಗಳಿವೆಯೆನ್ನಲಾಗುತ್ತದೆ. ನಮ್ಮ ಪೂಜ್ಯಗುರುಗಳು ಬಳಸುತ್ತಿದ್ದ ಕೆಲವು ವಸ್ತುಗಳು ನಮ್ಮ ಬಳಿ ಇನ್ನೂ ಸುಭದ್ರಸ್ಥಿತಿಯಲ್ಲಿವೆ. 

ನಮ್ಮಲ್ಲಿ ಅಂಬಲಗೆರೆ ನಂಜುಂಡಯ್ಯ ಎಂಬ ಅಧ್ಯಾಪಕರೊಬ್ಬರಿದ್ದರು. ಅವರು ನೆಲಮಂಗಲದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಂಸ್ಕøತ ಬೋಧಿಸುವ ಅವಕಾಶ ಲಭ್ಯವಾಗಿತ್ತು. ಆದರೆ ಅವರಿಗೆ ಸಂಸ್ಕøತ ಜ್ಞಾನ ಅಷ್ಟಾಗಿರಲಿಲ್ಲ. ಅವರು ಶ್ರೀಮಠಕ್ಕೆ ಶನಿವಾರ, ಭಾನುವಾರ ಬಂದು ಇಲ್ಲಿ ಶ್ರೀ ರುದ್ರಾರಾಧ್ಯ ಶರ್ಮ, ಶ್ರೀ ಬಿ. ಗಂಗಪ್ಪ ಅವರಿಂದ ಪಾಠ ಹೇಳಿಸಿಕೊಂಡು ಸೋಮವಾರ ಶಾಲೆಗೆ ಹೋಗಿ ಬೋಧಿಸುತ್ತಿದ್ದರು. ಅವರೊಮ್ಮೆ ಶಾಲಾ ತನಿಖಾಧಿಕಾರಿಗಳಾದ ಶ್ರೀ ಗೋಪಾಲ್ ಎಂಬುವರ ಮುಂದೆ ಬೋಧಿಸಬೇಕಾಯಿತು. ಬೋಧನಾ ವಿಧಾನ ಗಮನಿಸಿದ ತನಿಖಾಧಿಕಾರಿಗಳು ನಂಜುಂಡಯ್ಯನವರಿಗೆ “ಬೋಧನಾಚಾರ್ಯ” ಎಂದು ಪ್ರಶಂಸಿಸಿ ಮಾತನಾಡಿದರು. ಗುಣಮಟ್ಟವನ್ನು ಕಾಪಾಡಿಕೊಳ್ಳುವುದರ ಹಿಂದೆ ಶ್ರದ್ಧೆ, ಪ್ರಾಮಾಣಿಕತೆ, ತಾನು ಪ್ರತಿನಿಧಿಸುತ್ತಿರುವ ಸಮಾಜ ಪ್ರಜ್ಞೆ ಇರಬೇಕಾಗುತ್ತದೆ. ಕೊನೆಯದಾಗಿ ಒಂದು ಮಾತು. ಯಾರೂ ತಪ್ಪು ತಿಳಿಯಬಾರದು. ‘ಗುಣಮಟ್ಟ’ ಎಲ್ಲರಿಗೂ ಅನ್ವಯವಾಗುವ ಮಾತು”.(ಕೃಪೆ:ಅಮೃತ ಗಂಗಾ)

ಪರಮ ಪೂಜ್ಯರ 113 ನೇ ದಿವ್ಯ ಜಯಂತಿಯಂದು ಕನ್ನಡಿಗರಾದ ನಾವು ಪೂಜ್ಯರ ಶ್ರೀವಾಣಿ ಪಾಲಿಸಿದರೆ “ಸರಿಗನ್ನಡ” ಅಭಿಯಾನಕ್ಕೆ ಒಂದು ಶ್ರೇಷ್ಠ ಕೊಡುಗೆಯಾಗಬಹುದು.

- ಜಸ್ಟಿನ್ ಡಿ’ಸೌಜ