Monday, December 19, 2022

 ಸಿದ್ಧಗಂಗಾ ಕಾಲೇಜಿನ ಬಾಲಕ-ಬಾಲಕಿಯರಿಂದ

ರಾಷ್ಟ್ರ – ರಾಜ್ಯಮಟ್ಟದ ಕ್ರೀಡೆಗಳಲ್ಲಿ ಅಪ್ರತಿಮ ಸಾಧನೆ



ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬಾಲಕ – ಬಾಲಕಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಬಾಲಕಿಯರ ವಿಭಾಗದಿಂದ ಸೃಷ್ಠಿ ಕೆ ಬೆಳ್ಳೂಡಿ ರಾಜ್ಯ ಮಟ್ಟದ ಬಾಸ್ಕೆಟ್‌ ಬಾಲ್‌ನಲ್ಲಿ ದ್ವಿತೀಯ, ಯುವ ಸಬಲೀಕರಣ ಪ್ರಾಧಿಕಾರದ ವಿಭಾಗ ಮಟ್ಟದ ನೆಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಹಾವೇರಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮಾನ್ಯ ಜೆ. ಮತ್ತು ದೀಪ್ತಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಬಾಲ್‌ ಬ್ಯಾಡ್‌ಮಿಂಟನ್‌ನಲ್ಲಿ ಅಕ್ಷತಾ ಟಿ. ವಿ ಮತ್ತು ಸಿಂಧು ಸಿ. ವಿ, ಶಿವಮೊಗ್ಗದಲ್ಲಿ ನಡೆದ ಕರಾಟೆಯಲ್ಲಿ ರಕ್ಷಾ ಜಿ. ಆರ್, ಉಡುಪಿಯಲ್ಲಿ ನಡೆದ ವಾಲಿಬಾಲ್‌ನಲ್ಲಿ ಕವನ ವೈ ಮತ್ತು ಸ್ನೇಹ ಟಿ. ಬಿ, ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಥ್ರೊ ಬಾಲ್‌ ನಲ್ಲಿ ಶ್ರೀಕಮಲ, ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಅನುಷಾ ಹೆಚ್, ದೀಪಾ ಜೆ. ಮೈದೂರ್‌ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಡೆದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಸುಪ್ರಿಯ ಎಂ, ನಂದಿತ ವಿ, ಪ್ರಕಾಶ್‌, ರೇಣುಕಾ ಎಂ, ಧನುಷ್‌ ಕೆ. ಜೆ, ಸುಪ್ರಿಯ, ಹರ್ಷಿತ  ಎ. ಎನ್ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಾಲಕರ ವಿಭಾಗದಲ್ಲಿ ವೈಭವ್‌‌ ಎಸ್, ವಿನಾಯಕ ಬಿ ತಮಿಳು ನಾಡಿನ ದಿಂಡಿಗಲ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲ್‌ಬಾಲ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಯಚೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಭಾಗವಹಿಸಿದ ಶಶಾಂಕ ಕೆ. ಎಸ್, ಕಾರ್ತಿಕ್  ಟಿ. ವಿ, ಸುಹಾಸ್‌, ಧನುಷ್‌ ಎಲ್, ಅವನೀಶ್‌ ಡಿ. ಹೆಚ್ , ಶಿವರಾಜ್‌ ಹೆಚ್.‌ ಬಿ ಇವರಲ್ಲಿ ಕಾರ್ತಿಕ್  ಟಿ. ವಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಆದಿತ್ಯ ದೀಪಕ್‌, ಅಭಿಷೇಕ್‌ ವೈ. ಎಂ ಬೆಸ್ಟ್‌ ಆಟಗಾರರಾಗಿದ್ದರು. ಆದಿತ್ಯ ದೀಪಕ್‌ ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್‌ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾನೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ಕ್ರೀಡೆಗಳಲ್ಲಿ ಉಲ್ಲಾಸ್‌ ರೆಡ್ಡಿ, ಸಿದ್ಧನಗೌಡ, ಹರೀಶ್‌ ಹೆಚ್.‌ ಕೆ ಇವರು ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ, ಸೂಫಿಯಾನ್‌ ಎಸ್.‌ ಎಂ ಚಿಕ್ಕೋಡಿ ಜಿಲ್ಲೆಯಲ್ಲಿ ನಡೆದ ಷಟಲ್‌ ಬ್ಯಾಡ್ಮಿಂಟನ್‌ ನಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕರಾಟೆಯಲ್ಲಿ ಮನೋಜ್‌ ಶೀಲವಂತ್‌ ಮತ್ತು ಮಧು, ಹಾವೇರಿ ಜಿಲ್ಲೆಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಶಿವರಾಜ್‌ ಸಿ. ಜೆ ಮತ್ತು ವಿನಾಯಕ ಕೆ. ಹಾಗೂ ಮೈಸೂರು ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್‌ ಟೆನ್ನಿಸ್‌ನಲ್ಲಿ ಮಲ್ಲಿಕಾರ್ಜುನ್  ಜೆ. ಎಸ್ ಮತ್ತು ಅಭಿಷೇಕ್‌ ಬಿ. ಎಸ್ ಉತ್ತಮ ಪ್ರದರ್ಶನ ನೀಡಿ ಸಿದ್ಧಗಂಗಾ ಕಾಲೇಜಿನ ಉತ್ತಮ ಕ್ರೀಡಾಪಟುಗಳೆಂದು ಹೆಸರು ಗಳಿಸಿದ್ದಾರೆ.

ರಾಷ್ಟ್ರ – ರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆ ಮೆರೆದ ಬಾಲಕ – ಬಾಲಕಿಯರಿಗೆ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.

No comments:

Post a Comment