Thursday, September 1, 2022

ಕರಾಟೆಯಲ್ಲಿ ನಮ್ರತಾ ವಿಭೂತಿ ಸಾಧನೆ


2022 ರ ಡಾ. ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಸಿದ್ಧಗಂಗಾ ಬಾಲಕಿ ನಮ್ರತಾ U ವಿಭೂತಿ ಕಟಾ ಮತ್ತು ಕುಮ್ಟೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 28 ರಂದು ನಡೆದ ಈ ಸ್ಪರ್ಧೆಗಳನ್ನು ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿಯವರು ಆಯೋಜಿಸಿದ್ದರು. ಪದಕಗಳನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿರುವ ನಮ್ರತಾಳನ್ನು ತಾಯಿ ಪದ್ಮ ಮತ್ತು ತಂದೆ ಉಮಾಪತಿಯವರು ಹಾಗೂ ಸಿದ್ಧಗಂಗಾ ಶಾಲೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ. 



1 comment: