Monday, January 28, 2019

ಸಿದ್ಧಗಂಗಾ ಸಂಸ್ಥೆಯಿಂದ ಇಂದು ಅಕ್ಕಿ ಲೋಡ್ ರವಾನೆ.

ಸಿದ್ಧಗಂಗಾ ಶ್ರೀಗಳವರ ಪುಣ್ಯಾರಾಧನೆ

ದಾವಣಗೆರೆ ಸಿದ್ಧಗಂಗಾ ಸಂಸ್ಥೆಯಿಂದ ಇಂದು ಅಕ್ಕಿ ಲೋಡ್ ರವಾನೆ.

ದಾವಣಗೆರೆ ಜ. 28-

ತ್ರಿವಿಧ ದಾಸೋಹ ಮೂರ್ತಿಯ 11ನೇ ದಿನದ ಪುಣ್ಯಾರಾಧನೆ ಕಾರ್ಯವು ತುಮಕೂರಿನ ಶ್ರೀಮಠದಲ್ಲಿ ಜನವರಿ 31ರಂದು ಏರ್ಪಡಿಸಲಾಗಿದೆ. ಲಕ್ಷಾಂತರ ಭಕ್ತರು ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವರು. ಶ್ರೀಮಠದ ಮಕ್ಕಳಿಗೆ, ಸಿಬ್ಬಂದಿಯವರಿಗೆ ಮತ್ತು ಭಕ್ತಗಣಕ್ಕೆ ದಾಸೋಹ ವ್ಯವಸ್ಥೆ ಇರುತ್ತದೆ. ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ 1 ಲೋಡ್ ಅಕ್ಕಿಯನ್ನು ಈ ದಾಸೋಹ ಕಾರ್ಯಕ್ಕೆ ಅರ್ಪಿಸಲಾಗುವುದು. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಕ್ಕಿ ಲೋಡ್ ಇರುವ ವಾಹನಕ್ಕೆ ಪೂಜೆ ಸಲ್ಲಿಸಲಾಗುವುದು. ಸಂಸ್ಥೆಯ ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಮತ್ತು ಪಾಲಕರಾದ ಅಪ್ಪಣ್ಣನವರ ನೇತೃತ್ವದಲ್ಲಿ ಅಕ್ಕಿ ಲೋಡ್ ಶ್ರೀಮಠಕ್ಕೆ ಸಮರ್ಪಣೆಯಾಗಲಿದೆ. ಶ್ರೀಮಠಕ್ಕೆ ಅಕ್ಕಿ ಅಥವಾ ಬೇಳೆ ಸಮರ್ಪಿಸಲು ಅಪೇಕ್ಷೆ ಇರುವ ಭಕ್ತರಿಗೆ ಮಂಗಳವಾರ ಬೆಳಿಗ್ಗೆ 9 ಗಂಟೆಯವರಿಗೆ ಅವಕಾಶವಿದೆ. ಶ್ರೀಮಠಕ್ಕೆ ಲಾರಿಯನ್ನು ಉಚಿತವಾಗಿ ಒದಗಿಸಿಕೊಟ್ಟ ಸಂಸ್ಥೆಯ ಪಾಲಕರಾದ ಶ್ರೀ ರಂಗ ಟ್ರಾನ್ಸ್‍ಪೋರ್ಟ್ ರವಿಯವರಿಗೆ ಹಾಗೂ ಶಕ್ತ್ಯಾನುಸಾರ ಸೇವೆ ಸಲ್ಲಿಸಿದ ಎಲ್ಲ ಸದ್ಭಕ್ತರಿಗೆ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಕೃತಜ್ಞತೆ ಸಲ್ಲಿಸಿದ್ದಾರೆ.

1 comment:

  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at Bosch Dishwasher Black Friday 2020 Deals

    ReplyDelete