Monday, January 28, 2019

ಜ. 31 ರಂದು ಸಿದ್ಧಗಂಗಾ ಶ್ರೀಗಳವರ ಪುಣ್ಯಾರಾಧನೆ

ಜ. 31 ರಂದು ಸಿದ್ಧಗಂಗಾ ಶ್ರೀಗಳವರ ಪುಣ್ಯಾರಾಧನೆ

ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಅನ್ನ ದಾಸೋಹ

ದಾವಣಗೆರೆ ಜ. 28
ನಡೆದಾಡುವ ದೇವರೆಂದು ವಿಶ್ವಮಾನ್ಯರಾಗಿರುವ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮವನ್ನು ಜನವರಿ 31ರಂದು ಗುರುವಾರ ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಭಕ್ತಿ ಸೇವೆ. ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿಯವರು ಕಾರ್ಯಕ್ರಮ ಉದ್ಘಾಟಿಸುವರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಾಗಲಿದೆ. ಸುಮಾರು ಹತ್ತು ಸಾವಿರ ಜನರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಪಾಲಕರು, ಸ್ವಯಂ ಪ್ರೇರಣೆಯಿಂದ ದಾಸೋಹಕ್ಕಾಗಿ ಅಕ್ಕಿ , ಬೇಳೆ , ಬೆಲ್ಲ , ತರಕಾರಿ , ಎಣ್ಣೆ ಹೀಗೆ ವಿವಿಧ ರೂಪದಲ್ಲಿ ಸಲ್ಲಿಸುತ್ತಿದ್ದಾರೆ. ತ್ರಿವಿಧ ದಾಸೋಹಮೂರ್ತಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಜನವರಿ 31ರ ಗುರುವಾರ ನಡೆಯುವ ಈ ಪುಣ್ಯಕಾರ್ಯದಲ್ಲಿ ಎಲ್ಲ ಸದ್ಭಕ್ತರು ಪಾಲ್ಗೊಳ್ಳಲು ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಶಿವಣ್ಣನವರು ವಿನಂತಿಸಿದ್ದಾರೆ.

1 comment:

  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at Bosch Dishwasher Black Friday 2020 Deals

    ReplyDelete