Wednesday, August 27, 2025

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾ-ಭಕ್ತಿಯ ಆಕರ್ಷಕ ಮೆರವಣಿಗೆಯೊಂದಿಗೆ ಪೇಪರ್‌ ಗಣೇಶನ ಪ್ರತಿಷ್ಠಾಪನೆ



ದಾವಣಗೆರೆ ಆ. 27,

12 ಅಡಿ ಎತ್ತರದ ಭವ್ಯ ಗಣಪತಿ ಮಕ್ಕಳು ಎಳೆಯುತ್ತಿದ್ದ ರಥದ ಮೇಲೆ ಗಂಭೀರವದನವಾಗಿ ವಿರಾಜಮಾನನಾಗಿದ್ದನು. ಶಾಲೆಯ ಮಕ್ಕಳು ವಿವಿಧ ವೇಷ ಭೂಷಣಗಳಲ್ಲಿ ಆಗಮಿಸಿದ್ದರು. ತಿರುಪತಿ ವೆಂಕಟೇಶ, ಧನಲಕ್ಷ್ಮಿ, ಮಧುರೆ ಮೀನಾಕ್ಷಿ, ಚಾಮುಂಡೇಶ್ವರಿ, ಗಣಪತಿ, ಶಿವಾಜಿ, ರಾಮ, ಸೀತೆ, ಲಕ್ಷ್ಮಣ, ಹನುಮಂತ, ಪರಶುರಾಮ, ರಾಧಾಕೃಷ್ಣ ಹೀಗೆ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳು ಪೌರಾಣಿಕ ಪಾತ್ರದಲ್ಲಿ ಕಣ್ಮನ ಸೆಳೆಯುವಂತಿದ್ದರು. ಬೆಳಿಗ್ಗೆ 9 ಗಂಟೆಗೆ ಶಾಲೆಯಿಂದ ಪರಿಸರ ಸ್ನೇಹಿ ಪೇಪರ್‌ ಗಣಪತಿಯನ್ನು ಗಾಂಧಿ ಸರ್ಕಲ್‌ಗೆ ತಂದರು. ಅಲ್ಲಿಂದ ನಂದಿಕೋಲು, ಡೊಳ್ಳು, ವೀರಗಾಸೆ, ಪಟಗಳನ್ನು ಹಿಡಿದ ಮಕ್ಕಳು ಆಗಮಿಸಿ ಮೆರವಣಿಗೆಗೆ ಸಿದ್ಧರಾದರು. ಜೊತೆಗೆ ಸಾವಿರಕ್ಕೂ ಹೆಚ್ಚು ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಶಿಸ್ತುಬದ್ಧವಾಗಿ ಮೆರವಣಿಗೆಯೊಡನೆ ಹೆಜ್ಜೆ ಹಾಕಿದರು.


ಶಾಲೆಯ ವಾದ್ಯವೃಂದದವರು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ನಡೆದರು. ನಡುನಡುವೆ ಮಕ್ಕಳ ಉದ್ಘೋಷ ದಾರಿಹೋಕರ ಗಮನ ಸೆಳೆಯಿತು. ಕ್ಷಣಕಾಲ ನಿಂತು ಗಣಪತಿಗೆ ಕೈ ಮುಗಿಯುತ್ತಿದ್ದರು. ಮೆರವಣಿಗೆ ಗಾಂಧಿ ಸರ್ಕಲ್‌ನಿಂದ ಜಯದೇವ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌ ಮೂಲಕವಾಗಿ ಸಿದ್ಧಗಂಗಾ ಶಾಲೆಯ ಆವರಣ ತಲುಪಿತು. ಬೃಹತ್‌ ಮೆರವಣಿಗೆ ಭಕ್ತಿಪೂರ್ವಕ ವಾತಾವರಣ ಸೃಷ್ಠಿಸಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸಿದ್ಧಗಂಗಾ ಸಂಸ್ಥೆಯ ಮಕ್ಕಳೇ ತಯಾರಿಸಿದ ಈ ಪೇಪರ್‌ ಗಣಪತಿ ನೋಡಿ ದಿಗ್ಭೃಾಂತರಾದರು. ಕೆಲವರು ಸ್ಪರ್ಶಿಸಿ ಪುನೀತರಾದರು. ನಾಲ್ಕು ಮಕ್ಕಳು ಎತ್ತಬಹುದಾದ 12 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ ಸಾರ್ವಜನಿಕ ವೀಕ್ಷಣೆಗೆ 10 ದಿನಗಳ ಕಾಲ ಲಭ್ಯವಿದೆ. 11ನೇ ದಿನ ವಿಸರ್ಜಿಸಲಾಗುವುದು.



ಪ್ರತಿವರ್ಷ ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಸಾಂಪ್ರದಾಯಿಕವಾಗಿ ಆಚರಿಸುವ ಮಕ್ಕಳಲ್ಲಿ ಭಕ್ತಿಭಾವ ಮೂಡಿಸುವುದರ ಜೊತೆಗೆ ಶಾಲಾ ಮಕ್ಕಳೇ ರೂಪಿಸುವ ಗಣಪತಿ ಪೂಜೆಗೆ ಹಲವಾರು ಪಾಲಕರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕ ಡಾ|| ಜಯಂತ್‌ ಅವರ ಪರಿಕಲ್ಪನೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಶಾಲೆಯ ಚಿತ್ರಕಲಾ ಶಿಕ್ಷಕರ ನೆರವಿನಿಂದ ಸುಂದರ ರೂಪ ತಾಳುವ ಪೇಪರ್‌ ಗಣಪತಿಗೆ ಪ್ರತಿನಿತ್ಯ ಬೆಳಿಗ್ಗೆ ಶಾಲಾ ಮಕ್ಕಳು ಪೂಜಾ ಕಾರ್ಯದ ನೇತೃತ್ವ ವಹಿಸುವರು. ಕಾರ್ಯದರ್ಶಿ ಹೇಮಂತ್‌ ಹಾಗೂ ದೈಹಿಕ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರತಿ ತರಗತಿಯ ಶಿಕ್ಷಕರು ಈ ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಭಾವೈಕ್ಯತೆ, ಭಾತೃತ್ವ ಬೆಳೆಸುವಲ್ಲಿ ಮಹಾಗಣಪತಿಯ ಪಾತ್ರ ಹಿರಿದಾಗಿದೆ. ಇಡೀ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರದಿಂದ ಈ ಬೃಹತ್‌ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ.

Tuesday, August 26, 2025

ವಿದ್ಯಾರ್ಥಿಗಳ ಶ್ರಮದಿಂದ ಮೂಡಿದ ಪರಿಸರ ಸ್ನೇಹಿ ಪೇಪರ್ ಗಣಪತಿ – ಎಲ್ಲರಿಗೂ ಮಾದರಿ

 ದಾವಣಗೆರೆ | 26/08/2025



ದಾವಣಗೆರೆಯ ಸಿದ್ದಗಂಗಾ ಶಾಲೆಯ 12 ಅಡಿ ಎತ್ತರದ ಗಣೇಶ ಮೂರ್ತಿ – ಭವ್ಯ ಮೆರವಣಿಗೆಯಲ್ಲಿ ಅನಾವರಣ

ಗಣೇಶ ಚತುರ್ಥಿ ಹಬ್ಬ ಎಂದರೆ ಮನೆ ಮನೆಗೂ, ಬೀದಿ ಬೀದಿಗೂ ಹರಡುವ ಭಕ್ತಿ ಮತ್ತು ಸಡಗರ. ಆದರೆ, ಇಂದಿನ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಾಗುವ ಗಣೇಶ ಮೂರ್ತಿಗಳ ಪರಿಣಾಮವಾಗಿ ಪರಿಸರ ಮಾಲಿನ್ಯ ಗಂಭೀರ ಸಮಸ್ಯೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದಕ್ಕೆ ಮಾದರಿಯ ಉದಾಹರಣೆಯಾಗಿ ದಾವಣಗೆರೆಯ ಮಾದರಿ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ 12 ಅಡಿ ಎತ್ತರದ ಪರಿಸರ ಸ್ನೇಹಿ ಪೇಪರ್ ಗಣಪತಿ ಮೂರ್ತಿ ಈಗ ಸಜ್ಜಾಗಿದೆ.

ಹತ್ತು ದಿನಗಳ ಶ್ರಮ – ನೈಸರ್ಗಿಕ ಬಣ್ಣದ ಸೊಬಗು

30 ಕೆ.ಜಿ. ಹಳೆಯ ನ್ಯೂಸ್ ಪೇಪರ್ ಹಾಗೂ 10 ಕೆ.ಜಿ. ಮೈದಾ ಅಂಟನ್ನು ಬಳಸಿ, ವಿದ್ಯಾರ್ಥಿಗಳು ಹತ್ತು ದಿನಗಳ ಕಾಲ ಅಹರ್ನಿಶಿ ಶ್ರಮಿಸಿದರು. ಹಂತ ಹಂತವಾಗಿ ಪತ್ರಿಕೆಯನ್ನು ಅಂಟಿಸಿ, ಆಕರ್ಷಕವಾಗಿ ಆಕಾರ ನೀಡಿದ ನಂತರ ಮೂರ್ತಿಗೆ ನೈಸರ್ಗಿಕ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ, ಪ್ರಕೃತಿಗೆ ಹಾನಿಯಾಗದಂತೆ ತಯಾರಿಸಿರುವುದು ಈ ಮೂರ್ತಿಯ ಪ್ರಮುಖ ವಿಶೇಷತೆ.

ಮೆರವಣಿಗೆಯ ಸಾಂಸ್ಕೃತಿಕ ಶೋಭೆ

ಶಾಲಾ ಆವರಣದಿಂದ ಹೊರಡುವ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ನಂದಿ ಕೋಲು, ಕುದುರೆ, ಪಟ ಮುಂತಾದ ಜನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಶಾಲೆಯ ವಾದ್ಯಗೋಷ್ಠಿಯು ಭಜನೆ ಹಾಗೂ ಭಕ್ತಿಗೀತೆಗಳೊಂದಿಗೆ ಶೋಭೆ ಹೆಚ್ಚಿಸಲಿದ್ದು, ಮಕ್ಕಳ ಭಕ್ತಿ ನೃತ್ಯ, ಪದ್ಯಪಾಠ ಹಾಗೂ ಕಲಾತ್ಮಕ ಅಭಿವ್ಯಕ್ತಿ ಮೆರವಣಿಗೆಯ ಆಕರ್ಷಣೆಯಾಗಲಿದೆ.

ಮಾರ್ಗದರ್ಶನ ಮತ್ತು ಸಹಕಾರ

ಈ ಪೇಪರ್ ಗಣಪತಿ ಡಾ. ಜಯಂತ್ ರವರ ಕಲ್ಪನೆಯ ಕೂಸು. ಕಳೆದ ಹತ್ತು ವರ್ಷಗಳಿಂದ ಈ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯಾಗುತ್ತಿದ್ದು, ಇದು ದಾವಣಗೆರೆಯಾದ್ಯಂತ ಗಮನ ಸೆಳೆಯುತ್ತಿದೆ. ಶಾಲೆಯ ಡ್ರಾಯಿಂಗ್ ಶಿಕ್ಷಕರ ಸಹಕಾರ ಹಾಗೂ ಡಾ. ಜಸ್ಟಿನ್ ಡಿಸೋಜಾ ಅವರ ತಾಂತ್ರಿಕ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದೊರೆತಿದೆ. ಶಾಲೆಯ ಅಧ್ಯಕ್ಷರಾದ ಹೇಮಂತ್ ಸರ್ ಮೆರವಣಿಗೆಯ ಎಲ್ಲಾ ವ್ಯವಸ್ಥೆಗಳಿಗೆ ನೇತೃತ್ವ ವಹಿಸಿದ್ದಾರೆ.

ಶಿಕ್ಷಕರ ಅಭಿಪ್ರಾಯ

“ಗಣೇಶನು ವಿಜ್ಞ ವಿನಾಶಕ, ಆದರೆ ನಾವು ತಯಾರಿಸಿದ ಪೇಪರ್ ಗಣಪತಿ ಸಮಾಜಕ್ಕೆ ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶ ನೀಡುತ್ತಿದೆ. ಮಕ್ಕಳು ಕಲೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗುವ ದಾರಿಯಲ್ಲಿ ಸಾಗುತ್ತಿದ್ದಾರೆ” ಎಂದು ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು.

ಭವಿಷ್ಯದ ಮಾದರಿ

ಈ ಪ್ರಯತ್ನವನ್ನು ಜಿಲ್ಲಾಡಳಿತವು ಇತರ ಶಾಲೆಗಳಲ್ಲಿಯೂ ಅನುಸರಿಸಿದರೆ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದರ ಜೊತೆಗೆ ಸಾಂಸ್ಕೃತಿಕ ಸಂವೇದನೆ ಬೆಳೆಸಲು ಇದು ಮಹತ್ವದ ಹೆಜ್ಜೆಯಾಗಲಿದೆ. ಸಮಾಜದ ಬೆಂಬಲ ದೊರೆತರೆ, ಇಂತಹ ಪರಿಸರ ಸ್ನೇಹಿ ಹಬ್ಬಗಳು ಮುಂದಿನ ದಿನಗಳಲ್ಲಿ ಜನಆಂದೋಲನದ ರೂಪ ತಾಳಲಿವೆ.

Friday, August 15, 2025

“ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ”

ದಾವಣಗೆರೆ ಆಗಸ್ಟ್ 15

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 3 ನೇ ತರಗತಿ ವಿದ್ಯಾರ್ಥಿನಿ ಚೇತನಾ ಧ್ವಜಾರೋಹಣ ಮಾಡಿದಳು. ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿದ PreKG , LKG ಹಾಗೂ UKG ಮಕ್ಕಳು ಗಮನ ಸೆಳೆದರು. LKG ಯ ನುಸ್ರಖಾಜ್ , ಜಾಹ್ನವ್ ಹಾಗೂ ಗಗನ್, ಯುಕೆಜಿ ಯ ಅಹಾನ, ಸಾತ್ವಿಕ್ ಮತ್ತು ಕಾರುಣ್ಯ ಇವರು ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಿದರು.
2 ನೇ ತರಗತಿಯ ಅಥರ್ವ ,ಸಂಗೊಳ್ಳಿ ರಾಯಣ್ಣನ ಏಕಪಾತ್ರಾಭಿನಯ ಪ್ರದರ್ಶಿಸಿದನು. 6ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ವಿವಿಧ ತರಗತಿಯ ಒಟ್ಟು 80 ಮಕ್ಕಳಿಂದ “ಮಾತೆ ಪೂಜಕ” ಎಂಬ ಹಾಡಿಗೆ ಸಾಮೂಹಿಕವಾಗಿ ಹಾಡಿದ್ದು ವಿಶೇಷವಾಗಿತ್ತು .ಹೈಸ್ಕೂಲ್ ವಿದ್ಯಾರ್ಥಿಗಳಿಂದ ಕಾರ್ಗಿಲ್ ವಿಜಯೋತ್ಸವ ನಾಟಕ ಪ್ರದರ್ಶಿಸಲಾಯಿತು.







ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ , ಬೋಧಕ ಹಾಗೂ ಬೋಧಕೇತರ ವರ್ಗದವರಿಂದ ಪಾಲಕರಿಂದ ಮೈದಾನ ತುಂಬಿತ್ತು. ಸಂಸ್ಥೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಕಾರ್ಯಕ್ರಮ ವೀಕ್ಷಿಸಿದರು.

Sunday, August 10, 2025

ವಂದೇ ಭಾರತ್ ಸ್ವಾಗತ : ಭಾಗವಹಿಸಿದ ಸಿದ್ಧಗಂಗಾ ಸ್ಕೌಟ್ ಮತ್ತು ಗೈಡ್ ಮಕ್ಕಳು


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆ ದಾವಣಗೆರೆ, ದಿನಾಂಕ 10-08-2025 ರಂದು, ಬೆಂಗಳೂರಿನಿಂದ ಬೆಳಗಾವಿಗೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್ ಅನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು ಈ ನಿಮಿತ್ತ ದಾವಣಗೆರೆ ರೈಲು ನಿಲ್ದಾಣದಲ್ಲಿ ನೂತನ ಕಾರ್ಯವೈಕರಿಯುಳ್ಳ ರೈಲನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು, ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ  ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ನೃತ್ಯ,ಹಾಗೂ ನೈರುತ್ಯ ರೈಲ್ವೆ ವಿಭಾಗದಿಂದ ಆಯೋಜಿಸಿದ್ದ ಚಿತ್ರಕಲಾ,ಭಾಷಣ,ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಸಿದ್ಧಗಂಗಾಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದೆ ಶ್ರೀಮತಿ ಪ್ರಭಾಮಲ್ಲಿಕಾರ್ಜುನ್ ಮೇಡಂ ಅವರಿಂದ ಪ್ರಥಮ.ದ್ವಿತೀಯ, ತೃತೀಯ ಸ್ಥಾನ ಪಡೆದು ಪ್ರಶಸ್ತಿಪತ್ರ ಹಾಗೂ ಬಹುಮಾನ ಪಡೆದರು,ದಾವಣಗೆರೆಇಂದ ಹಾವೇರಿಯ ತನಕ ನೂತನ ವಂದೇಭಾರತ್ ರೈಲಿನಲ್ಲಿ‌ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಪ್ರಯಾಣಿಸಿ ಪುಳಕಗೊಂಡರು ಸ್ಥಳೀಯ ಸಂಸ್ಥೆಯ 105 ಸ್ಕೌಟ್ ಗೈಡ್ ‌ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Saturday, June 14, 2025

ಸಿದ್ಧಗಂಗಾ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜರಿಗೆ ಸುವರ್ಣ ಸಾಧಕಿ ಪ್ರಶಸ್ತಿ

ದಾವಣಗೆರೆ-JUNE 14


ಕನ್ನಡ ಪ್ರಭ ಮತ್ತು ಸುವರ್ಣ ಏಷ್ಯಾನೆಟ್‌ ಸಮೂಹ ಸಂಸ್ಥೆಗಳಿಂದ ಜೂನ್‌ 14 ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸುವರ್ಣ ಸಾಧಕಿ ಪ್ರಶಸ್ತಿಯನ್ನು ನಗರದ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜರವರಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಇವರು ಸಲ್ಲಿಸುತ್ತಿರುವ ಅನುಪಮ ಸೇವೆಗೆ ಈ ಪ್ರಶಸ್ತಿಯನ್ನು ಕೊಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರೀಕರ ಮತ್ತು ಅಂಗವಿಕಲರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರïರವರಿಂದ ಪ್ರಶಸ್ತಿ ಸ್ವೀಕರಿಸಿದರು. ವೇದಿಕೆಯಲ್ಲಿ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ, ವಿಟಿಯು ಕುಲಪತಿ ಡಾ|| ವಿದ್ಯಾಶಂಕರ ಮತ್ತು ಕ್ರಿಕೆಟ್‌ ಆಟಗಾರ್ತಿ ರಾಜೇಶ್ವರಿ ಗಾಯಕïವಾಡ್‌ ಇದ್ದರು.ಬುಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅನುವಾದಕಿ ದೀಪಾ ಸೇರಿದಂತೆ ಸಮಾಜದ ವಿವಿಧ ಸ್ತರಗಳಲ್ಲಿ ಸಾಧನೆ ಮಾಡಿದ 35 ಸಾಧಕಿಯರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.


Friday, May 23, 2025

S S L C ಮರು ಮೌಲ್ಯಮಾಪನ ಸಿದ್ಧಗಂಗಾ ಯಶಸ್ವಿನಿ ಕೆ.ಪಿ ಗೆ 625 ಕ್ಕೆ 624


ದಾವಣಗೆರೆ ಮೇ23,

ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್‌ ಹೈಸ್ಕೊಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಫಲಿತಾಂಶ ಪ್ರಕಟಗೊಂಡಾಗ 625 ಕ್ಕೆ 623 ಅಂಕಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಳು. ಹಿಂದಿ ವಿಷಯದಲ್ಲಿ ತನಗೆ 100 ಕ್ಕೆ 100 ಬರಬೇಕೆಂದು ವಿಶ್ವಾಸಪೂರ್ಣವಾಗಿ ಹೇಳಿದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಬಾಲಕಿಯ ವಿಶ್ವಾಸದಂತೆ ಹಿಂದಿಯಲ್ಲಿ 100ಕ್ಕೆ 100 ಪಡೆದಿದ್ದಾಳೆ. ಕನ್ನಡ ವಿಷಯದಲ್ಲಿ ಒಂದು ಅಂಕದ ಪ್ರಶ್ನೆಗೆ ಉತ್ತರ ತಪ್ಪಾಗಿದೆ. 124 ಬಂದಿರುವುದು ಸರಿ ಇದೆ ಎಂದು ಹೇಳುತ್ತಾಳೆ. ದಾವಣಗೆರೆ ಜಿಲ್ಲೆಗೆ ಮತ್ತು ಸಿದ್ಧಗಂಗಾ ಶಾಲೆಗೆ ಕೀರ್ತಿ ತಂದ ಈ ಬಾಲಕಿ ಮರು ಮೌಲ್ಯಮಾಪನದ ನಂತರ ಕನ್ನಡ 124, ಹಿಂದಿ 100, ಇಂಗ್ಲಿಷ್‌ 100, ಗಣಿತ 100, ವಿಜ್ಞಾನ 100 ಮತ್ತು ಸಮಾಜ 100. ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಯಶಸ್ವಿನಿ ಕೆ.ಪಿ ಯ ಈ ಅದ್ವಿತೀಯ ಸಾಧನೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

Tuesday, May 13, 2025

ಸಿದ್ಧಗಂಗಾ ಸಿಬಿಎಸ್‌ಇ 10ನೇ ತರಗತಿ ಕೃತಿಕಾ ಎಸ್. ವಿ. ಪ್ರಥಮ - ಶಾಲೆಗೆ 99% ಫಲಿತಾಂಶ



ದಾವಣಗೆರೆ ಮೇ, 13

ಕಳೆದ ಫೆಬ್ರವರಿ–ಮಾರ್ಚ್‌ನಲ್ಲಿ ನಡೆದ 10 ನೇ ತರಗತಿ ಸಿ ಬಿ ಎಸ್‌ ಇ ಬೋರ್ಡಿನ ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಶಾಲೆಯ ಕೃತಿಕಾ ಎಸ್‌. ವಿ. ಶೇಕಡ 96 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್‌ 94, ಕನ್ನಡ 99, ಗಣಿತ 95, ವಿಜ್ಞಾನ 98, ಸಮಾಜ 94 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಕೃತಿಕಾ- ವೀರಭದ್ರಪ್ಪ ಮತ್ತು ರಶ್ಮಿ ಕೆ. ಸಿ. ದಂಪತಿಗಳ ಪುತ್ರಿ. ದರ್ಶನ್‌ ಕೆ. ಸಿ. 93.80%, ನಿಖಿಲ್‌ ಎಂ. ಎಂ.‌ 93.80%, ಡಯಾನಾ ಜಿ. ಕೆ. 93.40 %, ಸುಮುಖ್‌ ಬಿ. ಕೆ. 92.20%, ಸೃಷ್ಠಿ ಎಂ. ಎಸ್‌. 92%, ಪ್ರೀತಂ ಎಸ್. ಜಿ. ಸ್ವಾಮಿ 91.40%, ಸಿಂಚನಾ ವಿ. ಜಿ. 91.40%, ಸೌಕಾರ್‌ ಎಲ್. ಎಸ್‌. 90.80%, ದಾನೀಶ್‌ ಸಿ. ಟಿ. 90.60%, ರಾಹುಲ್‌ ಪಿ. ಐ. 90.40% ಪಡೆದಿದ್ದಾರೆ. ಶೇಕಡ 95 ಕ್ಕಿಂತ ಹೆಚ್ಚು ಓರ್ವ ವಿದ್ಯಾರ್ಥಿನಿ, 90% ಕ್ಕಿಂತ ಹೆಚ್ಚು 11 ಮಕ್ಕಳು, 85% ಕ್ಕಿಂತ ಹೆಚ್ಚು 26 ಮಕ್ಕಳು, 60% ಕ್ಕಿಂತ ಹೆಚ್ಚು 12 ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ನಿಖಿಲ್‌ ಎಂ. ಎಂ. ಮತ್ತು ಸಿಂಚನಾ ವಿ. ಜಿ. ಕನ್ನಡ ವಿಷಯದಲ್ಲಿ 100 ಕ್ಕೆ 100 ಮತ್ತು ದರ್ಶನ್‌ ಕೆ. ಸಿ. ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲಾ ಮಕ್ಕಳನ್ನು ಮತ್ತು ಅವರ ಪಾಲಕರನ್ನು ಪ್ರಾಚಾರ್ಯರಾದ ಗಾಯಿತ್ರಿ ಚಿಮ್ಮಡ್‌ ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ. ದಾಖಲೆಯ ಫಲಿತಾಂಶ ನೀಡಿದ ಸಿ ಬಿ ಎಸ್‌ ಇ 10 ನೇ ತರಗತಿಯ ಎಲ್ಲ ಮಕ್ಕಳನ್ನು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಆಡಳಿತ ಮಂಡಳಿಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ, ಕಾರ್ಯದರ್ಶಿ ಹೇಮಂತ್‌ ಮತ್ತು ನಿರ್ದೇಶಕ ಡಾ. ಜಯಂತ್‌ ಶ್ಲಾಘಿಸಿದ್ದಾರೆ.

Friday, May 2, 2025

SSLC ಫಲಿತಾಂಶ ಸಿದ್ಧಗಂಗಾ ಹೈಸ್ಕೂಲಿನ ಯಶಸ್ವಿನಿ ಕೆ. ಪಿ. ಗೆ 623/625 , ಜಿಲ್ಲೆಗೆ ಪ್ರಥಮ - ರಾಜ್ಯಕ್ಕೆ 3ನೇ ರಾå0ಕ್‌


ದಾವಣಗೆರೆ, ಮೇ 2.

ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್‌ ಹೈಸ್ಕೂಲಿನ ಯಶಸ್ವಿನಿ ಕೆ. ಪಿ. 625 ಕ್ಕೆ 623 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ರಾå0ಕ್‌ ಗಳಿಸಿದ್ದಾಳೆ. ಕನ್ನಡ 124, ಇಂಗ್ಲೀಷ್‌ 100, ಹಿಂದಿ 99,ಗಣಿತ 100, ವಿಜ್ಞಾನ 100, ಸಮಾಜ 100 ಒಟ್ಟು 623 ಅಂಕಗಳನ್ನು ಪಡೆದಿದ್ದಾಳೆ. ಯಶಸ್ವಿನಿ ಈಡಿಗಾರ್‌ 622, ಕೀರ್ತಿ ಡಿ. ಎಸ್.‌ 622, ಸುಶ್ಮಿತ ಯು. 620, ಶ್ರೀ ರಕ್ಷ ಶ್ರೀನಿವಾಸ್‌ 612, ಯುಕ್ತ ಬಿ 612, ಹರ್ಷಿತ ಹೆಚ್.‌ ವೈ 608, ಶ್ರೀದೇವಿ ಎಲ್‌. ಆರ್‌. 607, ಮುರುಳಿ ಜಿ ಆರ್.‌ 606, ನಿಹಾರಿಕಾ ಸಿ. ಯು. 606, ನಿಶ್ಚಲ್‌ ಕೆ. ಪಿ. 606, ಚನ್ನಬಸಮ್ಮ ಕೆ. ಪಿ. ಎಂ. 605, ಅಜಯ್‌ ಆರ್‌. 604, ಕಲ್ಲೇಶ್‌ ಎಂ. 603, ಪ್ರಜ್ವಲ್‌ ಕೆ. ಯು. 603, ಅನ್ನಪೂರ್ಣ ಜೆ. ಕೆ. 602 ಬಿಂದು ಕೆ. ಎಸ್.‌ 601, ಪ್ರತೀಕ್ಷಾ ಎ. ವಿ. 601, ಓಂಶುಕ್ಲಾ ಬಿ. ಕೆ. 600, ಪ್ರಜ್ವಲ್‌ ಆರ್‌ ಜಿ. 600, ತನುಶ್ರೀ ಕೆ ಜಿ. 600, ಒಟ್ಟು 21 ಮಕ್ಕಳು 625 ಕ್ಕೆ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 73 ಮಕ್ಕಳು ಶೇಕಡಾ 90 ರಷ್ಟು ಮಾರ್ಕ್ಸ್‌ ಪಡೆದಿದ್ದಾರೆ. ಡಿಸ್ಟಿಂಕ್ಷನ್‌ನಲ್ಲಿ 119, ಪ್ರಥಮ ದರ್ಜೆ 144, ದ್ವಿತೀಯ ದರ್ಜೆಯಲ್ಲಿ 28 ಮಕ್ಕಳು ಉತ್ತೀರ್ಣರಾಗಿ ಶಾಲೆಗೆ ಉತ್ತಮ ಫಲಿತಾಂಶ ನೀಡಿದ್ದಾರೆ. ಕನ್ನಡದಲ್ಲಿ 125 ಕ್ಕೆ 125 ನಾಲ್ಕು ವಿದ್ಯಾರ್ಥಿಗಳು, ಇಂಗ್ಲೀಷ್‌ನಲ್ಲಿ 8, ಹಿಂದಿಯಲ್ಲಿ 20, ವಿಜ್ಞಾನದಲ್ಲಿ 5 ಗಣಿತ 4, ಸಮಾಜ ವಿಜ್ಞಾನ 7 ಮಕ್ಕಳು, ಒಟ್ಟು 48 ಮಕ್ಕಳು 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.




ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಯಶಸ್ವಿನಿ ಕೆ ಪಿ ಜ್ಯೋತಿಕಲಾ, ಪಾಲಾಕ್ಷಪ್ಪ ಕೆ ವಿ ದಂಪತಿಗಳ ಪುತ್ರಿ. ಶಾಲೆಗೆ ಅತ್ಯುತ್ತಮ ಫಲಿತಾಂಶ ಕೊಟ್ಟ ಎಲ್ಲಾ ಮಕ್ಕಳನ್ನು ಶಾಲೆಯ ಮುಖ್ಯಸ್ಥರಾದ ಜಸ್ಟಿನ್‌ ಡಿʼಸೌಜ,ಮುಖ್ಯ ಶಿಕ್ಷಕಿ ರೇಖಾರಾಣಿ, ಕಾರ್ಯದರ್ಶಿ ಡಿ. ಎಸ್.‌ ಹೇಮಂತ್‌, ನಿರ್ದೇಶಕ ಡಾ|| ಜಯಂತ್‌, ಬೋಧಕಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Friday, April 25, 2025

ಪಿಯುಸಿ ಮರುಮೌಲ್ಯಮಾಪನ : ಸಿದ್ಧಗಂಗಾ ಕಾಲೇಜಿನ ರವಿಕಿರಣ್‌ ಎನ್ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ಸ್ಥಾನ


ದಾರಣಗೆರೆ, ಏಪ್ರಿಲ್‌ 25

ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಎನ್.‌ ರವಿಕಿರಣ್ ಮರುಮೌಲ್ಯಮಾಪನದ ನಂತರ 600ಕ್ಕೆ 597 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ತೃತೀಯ ರಾåಂಕ್‌ ಗಳಿಸಿದ್ದಾನೆ. ಆಂಗ್ಲ ಭಾಷೆಯಲ್ಲಿ 100ಕ್ಕೆ 97 ಅಂಕ ಗಳಿಸಿದ್ದ ರವಿಕಿರಣ್ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದನು. ಮರುಮೌಲ್ಯಮಾಪನದಲ್ಲಿ ಎರಡು ಅಂಕಗಳು ಹೆಚ್ಚಾಗಿ 100ಕ್ಕೆ 99 ಅಂಕ ಪಡೆದಿದ್ದಾನೆ. ಕನ್ನಡ 100, ಭೌತಶಾಸ್ತ್ರ 100, ಜೀವಶಾಸ್ತ್ರ 100 ಮತ್ತು ಗಣಿತ, ರಸಾಯನ ಶಾಸ್ತ್ರ ಹಾಗೂ ಆಂಗ್ಲ ಭಾಷೆಯಲ್ಲಿ ತಲಾ 99, ಒಟ್ಟು 597 ಅಂಕಗಳನ್ನು ಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಉಪ್ಪನಾಯಕನಹಳ್ಳಿಯ ನಾಗರಾಜ್‌ ಮತ್ತು ಸಿದ್ದಮ್ಮ ರೈತ ದಂಪತಿಗಳ ಪುತ್ರ ರವಿಕಿರಣ್ ಅಂಕಗಳ ಏರಿಕೆಯಿಂದ ಸಂತಸ ಪಟ್ಟಿದ್ದಾನೆ. ಬಾಲಕನ ನಿರೀಕ್ಷಿತ ಸಾಧನೆಗೆ ಸಿದ್ಧಗಂಗಾ ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರು ಅಭಿನಂದಿಸಿದ್ದಾರೆ.





Tuesday, April 15, 2025

MSS QUIZ RESULT - 2025

 




MSS QUIZ 2025 RESULTS ANNOUNCED
Click here to see you result - MSS QUIZ RESULT 2025



Click here to see you result - MSS QUIZ RESULT 2025

Steps to see your result

1. Enter the website.

2. Select exam as  'MSS QUIZ 2025'.

3. Enter your Reg no as given in your MSS QUIZ HALL TICKET.

4. Put your Date of Birth and click search.





Watch this video to see 2 PU Result (2024-25) of Siddaganga PU College






Tuesday, April 8, 2025

ರಾಜ್ಯಕ್ಕೆ ಐದನೇ ಸ್ಥಾನದಲ್ಲಿ ಶ್ರೀ ಸಿದ್ಧಗಂಗಾ ಪಿ ಯು ಕಾಲೇಜು


ದಾವಣಗೆರೆ, ಏ 8

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆ ನಗರದ ಸಿದ್ಧಗಂಗಾ ಪಿಯು ಕಾಲೇಜು ರಾಜ್ಯ ಕ್ಕೆ ಐದನೇ  ಸ್ಥಾನ ಪಡೆದು ಮತ್ತೊಮ್ಮೆ ತನ್ನ ಶೈಕ್ಷಣಿಕ ಸಾಧನೆಯ ಇತಿಹಾಸ ರಚಿಸಿದೆ. 600 ಕ್ಕೆ 595 ಅಂಕಗಳಿಸಿದ ರವಿಕಿರಣ ಎನ್‌, ಕನ್ನಡ 100, ಇಂಗ್ಲೀಷ್‌, 97, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 99, ಜೀವಶಾಸ್ತ್ರ 100, ಗಣಿತ 99 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ, ಇವನು ನಾಗರಾಜ್‌ ಎಸ್‌ ಮತ್ತು ಸಿದ್ದಮ್ಮ ದಂಪತಿಗಳ ಪುತ್ರ ಚಿತ್ರದುರ್ಗ ಜಿಲ್ಲೆ ಉಪ್ಪನಾಯಕನಹಳ್ಳಿ ಊರಿನವನು. ಈ ಬಾಲಕ ಎಂ‌.ಎಸ್‌.ಎಸ್. ಸ್ಕಾಲರ್‌ಶಿಪ್‌ನಲ್ಲಿ ಎರಡು ವರ್ಷ ಉಚಿತ ವಿದ್ಯಾಭ್ಯಾಸ ಪಡೆದಿದ್ದಾನೆಂಬುದು ಉಲ್ಲೇಖನೀಯ ಉಳಿದಂತೆ ಹೆಚ್ಚು ಅಂಕಗಳಿಸಿರುವ, ಮನೋಜ್‌ ಎಲ್‌, ವಿನಯ್‌ ಕುಮಾರ್‌ ಆರ್‌, ಕೃತಿಕ ಕದಂ, ಚೇತನ ಆರ್‌, ಜೀವಿತ ಜೆ ಇಟಗಿ, ಸ್ನೇಹಲ್‌ ಕೆ ಕುಡ್ತೇಕರ್‌ , ಸುಹಾಸ್‌ ಹೆಚ್‌ , ಅಜಯ್‌ ಕುಮಾರ್‌ ಆರ್‌, ವಿವೇಕ ಅಂಗಡಿ ಎನ್‌ ಎಂ, ಲಕ್ಷ್ಮಿ ಎಂ, ಸಂಜನಾ ಎಂ ಎಂ, ಚಂದನಾ ಜಿ ವಿ, ಕರಿಬಸಮ್ಮ ಪಾನಿಯಪ್ಲ, ಶಿವಯೋಗಿ ಹೆಚ್‌ ಆರ್‌, ಈ ಎಲ್ಲಾ ವಿದ್ಯಾರ್ಥಿಗಳು ಕೂಡ ಎಂ‌.ಎಸ್‌.ಎಸ್. ಸ್ಕಾಲರ್‌ಶಿಪ್‌ನಲ್ಲಿ ಓದಿರುತ್ತಾರೆ.





ಮನೋಜ್‌ ಎಲ್‌ 593, ವಿನಯ್‌ ಕುಮಾರ್‌ ಆರ್‌ 590, ಕೃತಿಕ ಕದಂ 589, ಚೇತನ ಆರ್‌ 585, ಜೀವಿತ ಜೆ ಇಟಗಿ 585, ಸ್ನೇಹಲ್‌ ಕೆ ಕುಡ್ತೇಕರ್‌ 585, ಸುಹಾಸ್‌ ಹೆಚ್‌ 585, ಅಜಯ್‌ ಕುಮಾರ್‌ ಆರ್‌582, ವಿವೇಕ ಅಂಗಡಿ ಎನ್‌ ಎಂ 582, ಅಭಿನವ್‌ ಎಂ.ಎಸ್‌ 580, ಲಕ್ಷ್ಮಿ ಎಂ 580, ಸುಮಂತ ಪಿ 579, ರಕ್ಷಿತ ಕೆ 579, ಸಂಜನಾ ಎಂ ಎಂ 579, ಚಂದನಾ ಜಿ ವಿ 578, ಕರಿಬಸಮ್ಮ ಪಾನಿಯಪ್ಲ 578, ಶಿವಯೋಗಿ ಹೆಚ್‌ ಆರ್‌ 577, ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಡಿಸ್ಟಿಂಕ್ಷನ್‌ನಲ್ಲಿ 236 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 320, ದ್ವಿತೀಯ ದರ್ಜೆಯಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿಗೆ 95.13% ಫಲಿತಾಂಶ ನೀಡಿದ್ದಾರೆ. ಕನ್ನಡ 13, ಸಂಸ್ಕೃತ 1, ಭೌತಶಾಸ್ತ್ರ 3, ರಸಾಯನ ಶಾಸ್ತ್ರ 2, ಗಣಿತ 8, ಜೀವಶಾಸ್ತ್ರ 18, ಕಂಪ್ಯೂಟರ್‌ ವಿಜ್ಞಾನದಲ್ಲಿ ಒಬ್ಬರು, 100 ಕ್ಕೆ 100 ಅಂಕಗಳಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದಿಸಿದ್ದಾರೆ.

Saturday, February 15, 2025

ಪುಲ್ವಾಮ ದಿನಾಚರಣೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀಸಿದ್ಧಗಂಗಾ ಸ್ಥಳೀಯ ಸಂಸ್ಥೆ

 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀಸಿದ್ಧಗಂಗಾ ಸ್ಥಳೀಯ ಸಂಸ್ಥೆ ದಾವಣಗೆರೆ ದಿನಾಂಕ 14-02-2025 ರಂದು ದಾವಣಗೆರೆ ಜಿಲ್ಲಾಸಂಸ್ಥೆ ಹಾಗು ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಪುಲ್ವಾಮ ದಿನಾಚರಣೆಯನ್ನು ಆಚರಿಸಲಾಯಿತು ಜಸ್ಟಿನ್ ಡಿಸೋಜ ಮೇಡಂ ಸ್ಕೌಟ್ ಗೈಡ್ ಮಕ್ಕಳಿಗೆ ಪುಲ್ವಾಮದಲ್ಲಿ ನಡೆದ  ಹೃದಯವಿದ್ರಾವಕ ಘಟನೆಯ ಬಗೆಗೆ ವಿವರಿಸಿ ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರನ್ನು ನೆನೆದರು ನಂತರ ದಾವಣಗೆರೆಯ ಅಮರ್ ಜವಾನ್ ಉದ್ಯಾನವನಕ್ಕೆ ತೆರಳಿ ಸ್ಕೌಟ್ ಗೈಡ್  ವಿದ್ಯಾರ್ಥಿಗಳಿಂದ ಪುಷ್ಪನಮನ ಸಲ್ಲಿಸಲಾಯಿತು ಸುಬೇದಾರ್ ಮಲ್ಲನಗೌಡ ಪಾಟಿಲ್ ರವರು ಪುಲ್ವಾಮ ಧಾಳಿಯಲ್ಲಿ ಪ್ರಾಣತೆತ್ತ ಸೈನಿಕರ ಬಗೆಗೆ ಮಾಹಿತಿನೀಡಿ ಸ್ಕೌಟ್ ಗೈಡ್ ಮಕ್ಕಳಲ್ಲಿನ ದೇಶಪ್ರೇಮಾಭಿಮಾನವನ್ನು ಕಂಡು ಸಂತಸಪಟ್ಟರು ಈ ಸಂಧರ್ಭದಲ್ಲಿ ಜಿಲ್ಲಾಸಂಸ್ಥೆಯ ಪದಾದಿಕಾರಿಗಳು ಹಾಗು ಸ್ಥಳೀಯ ಸಂಸ್ಥೆಯ ಶ್ರೀನಿವಾಸ್ NL (HWB) ಉಪಸ್ಥಿತರಿದ್ದರು



Thursday, February 13, 2025

ಕಿರಿಯ ವಿಜ್ಞಾನಿ ಪ್ರಶಸ್ತಿ ಪಡೆದ ಸಿದ್ಧಗಂಗಾ ಪ್ರೌಢಶಾಲೆಯ ದೀಪಕ್‌ ಜಿ.ಕೆ


ದಾವಣಗೆರೆ, ಪೆ.13

ಬಾಲ್ಯದಿಂದಲೂ ಕುತೂಹಲ, ವಿಜ್ಞಾನದಲ್ಲಿ ಆಸಕ್ತಿ, ಇಸ್ರೋದೊಡನೆ ನಿರಂತರ ಸಂಪರ್ಕದ ಪ್ರತಿಫಲವಾಗಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ದೀಪಕ್‌ ಜಿ.ಕೆ ಜನವರಿ 3 ರಂದು ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ “ಜೂನಿಯರ್‌ ಸೈಂಟಿಸ್ಟ್‌ ಪ್ರಶಸ್ತಿ” ಪಡೆದಿದ್ದಾನೆ. 6ನೇ ತರಗತಿಯಲ್ಲಿದ್ದಾಗ ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರದವರು ನಡೆಸಿದ “ಪ್ಯೂರಿಫೈ ದ ಅರ್ಥ್” ಸ್ಪರ್ಧೆಯಲ್ಲಿ ದೀಪಕ್‌ ಭಾಗವಹಿಸಿ ಸಮಾಧಾನಕರ ಬಹುಮಾನ ಪಡೆದನು. ಇಸ್ರೋದ ಕಾರ್ಯನಿರ್ವಾಹಕ ಅಧಿಕಾರಿ ಸರ್‌ ಕೌಸ್ತುಬ್‌ ರವರ ಪರಿಚಯ ಮತ್ತು ಮಾರ್ಗದರ್ಶನದಿಂದ “ಗ್ರಿಪ್ಪರ್‌ ಎಕ್ಸ್‌ ಪ್ಲೊರೇಷನ್”‌ ಕಂಡು ಹಿಡಿದಿದ್ದಾರೆ.

ರಾಕೆಟ್‌ ಉಡಾವಣೆಯಲ್ಲಿ ಪ್ರಮುಖ ಪಾತ್ರ ಲ್ಯಾಂಡರ್‌ ಎಂದರಿತ ಬಾಲಕ ದೀಪಕ್‌ “ಲ್ಯಾಂಡರ್‌ ಗ್ರಿಪ್ಪರ್”‌ ಮೇಲೆ ತನ್ನ ಅಧ್ಯಯನ ಕೇಂದ್ರೀಕರಿಸಿ ಸಂಶೋಧನೆ ಪ್ರಾರಂಭಿಸಿದನು. ಗ್ರಿಪ್ಪರ್‌ ಜೊತೆ ಸೆನ್ಸಾರ್‌ ಜೋಡಿಸಿದಾಗ ಅದು ವಿಫಲವಾಗಿದ್ದನ್ನು ಕಂಡು ಗ್ರಿಪ್ಪರ್‌ ಜೊತೆ “ಬ್ಲೂಟೂತ್‌ ಮೆಮೊರಿ ಸ್ಪೆನ್ಸರ್” ಉಪಯೋಗಿಸಿದಾಗ “ಲ್ಯಾಂಡರ್‌ ಗ್ರಿಪ್ಪರ್” ಸಫಲವಾಯಿತು. ಈ ಪ್ರಯತ್ನವನ್ನು ಇಸ್ರೋಗೆ ಅಂತರ್ಜಾಲದಲ್ಲಿ ಕಳಿಸಿಕೊಟ್ಟಾಗ ಇಸ್ರೋ ಮುಖ್ಯಸ್ಥರು ಒಪ್ಪಿಗೆ ಸೂಚಿಸಿ ಲ್ಯಾಂಡರ್‌ ಗ್ರಿಪ್ಪರ್‌ ಮಾದರಿ ಮಾಡಲು ಸೂಚಿಸಿದರು. ಈ ಸಂಶೋಧನೆಯನ್ನು 23 ದಿನಗಳ ಕಾಲ ಪರಿಶೀಲಿಸಿ ಅಂತಿಮವಾಗಿ ಜನವರಿ 25ರಂದು “ಜೂನಿಯರ್‌ ಸೈಂಟಿಸ್ಟ್‌” ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ. ಕೆ ಎಸ್‌ ಆರ್‌ ಟಿಸಿ ಯಲ್ಲಿ ಕಂಡೆಕ್ಟರ್‌ ದಂಪತಿಗಳಾದ ಗಂಗಾಧರ ಮತ್ತು ರಾಜೇಶ್ವರಿಯವರ ಸುಪುತ್ರ ದೀಪಕ್‌ ಜಿ.ಕೆ ಪಾಲಕರಿಗೆ, ಶಾಲೆಗೆ ಮತ್ತು ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದವರು ಬಾಲಕನ ಪ್ರತಿಭೆಗೆ ಅಭಿನಂದಿಸಿದ್ದಾರೆ.




Sunday, January 26, 2025

ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮ

ದಾವಣಗೆರೆ, ಜ 26,


ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಶಿಕ್ಷಕ- ಶಿಕ್ಷಕಿಯರು ಸಂಭ್ರಮದಿಂದ 76ನೇ ಗಣರಾಜ್ಯೋತ್ಸವನ್ನು ಆಚರಿಸಿದರು. ಹಿರಿಯ ಶಿಕ್ಷಕಿ ವೇದಾವತಿಯವರು ಧ್ವಜಾರೋಹಣ ಕಾರ್ಯ ನಡೆಸಿಕೊಟ್ಟರು. 7ನೇ ತರಗತಿ ಅನುಷಾ ಬಿ.ಪಿ ಮತ್ತು ಯು.‌ ಕೆ. ಜಿ. ಯ ಅಥರ್ವ ಗಣರಾಜ್ಯೋತ್ಸವದ ಶುಭಾಷಯ ತಿಳಿಸಿ ಆಚರಣೆಯ ಮಹತ್ವವನ್ನು ವಿವರಿಸಿದರು. ಸಂಗೀತ ಶಿಕ್ಷಕರಾದ ರುದ್ರಾಕ್ಷಿ ಬಾಯಿ ಮತ್ತು ಮಂಗಳ ಅವರ ನೇತೃತ್ವದಲ್ಲಿ ಮಕ್ಕಳು ಸುಶ್ರಾವ್ಯವಾಗಿ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.ವೇದಿಕೆಯಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ, ಸಿ. ಬಿ. ಎಸ್‌. ಇ. ಶಾಲೆಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್‌, ಸಿದ್ಧಗಂಗಾ ಕಾಂಪೋಜಿಟ್‌ ಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ ಕೆ. ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಆಶಾ ನಡೆಸಿಕೊಟ್ಟರು. ಸ್ವಾಗತ ಮತ್ತು ವಂದನಾರ್ಪಣೆಯನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್‌. ಹೇಮಂತ್‌, ನಿರ್ದೇಶಕ ಡಾ|| ಡಿ. ಎಸ್‌. ಜಯಂತ್‌ ರವರು ಮತ್ತು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು.





Tuesday, January 21, 2025

ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರೀಗಳವರ ಸ್ಮರಣೆ : ಶ್ರದ್ಧಾಪೂರ್ವಕ ದಾಸೋಹ ದಿನಾಚರಣೆ.

ದಾವಣಗೆರೆ, ಜ. 21

ತುಮಕೂರಿನ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರೂ, ತ್ರಿವಿಧ ದಾಸೋಹಿಗಳೂ,ನಡೆದಾಡುವ ದೇವರೆಂದೇ ಎಲ್ಲರ ಮನಸ್ಸಿನಲ್ಲಿ ನೆಲೆ ನಿಂತಿರುವ ಮಹಾ ತಪಸ್ವಿ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 6ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಕ್ತಿ ಗೀತೆಗಳ ಹಿನ್ನಲೆಯಲ್ಲಿ ಮಕ್ಕಳು ಶ್ರೀಗಳವರ ಭಾವಚಿತ್ರಕ್ಕೆ ಮತ್ತು ಪಾದುಕೆಗಳಿಗೆ ನಮಿಸಿ ಬಿಲ್ಪತ್ರೆಗಳನ್ನು ಸಮರ್ಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್.‌ ಹೇಮಂತïರವರ ನೇತೃತ್ವದಲ್ಲಿ ಎಲ್ಲ ಮಕ್ಕಳಿಗೆ ಫಲಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಶಾಲಾ-ಕಾಲೇಜಿನ ಸಿಬ್ಬಂದಿ ವರ್ಗದವರು, ಪ್ರಿಕೆಜಿಯಿಂದ ದ್ವಿತೀಯ ಪಿಯುಸಿವರೆಗಿನ ಆರು ಸಾವಿರ ಮಕ್ಕಳು ಮತ್ತು ಅನೇಕ ಪಾಲಕರು ಇಂದಿನ ದಾಸೋಹ ದಿನಾಚರಣೆಯಲ್ಲಿ ಭಾಗವಹಿಸಿ ತಮ್ಮ ಭಕ್ತಿ ಸಮರ್ಪಣೆ ಮಾಡಿದರು. ಸ್ವಾಮಿಜಿಯವರ ಸೇವಾದೀಕ್ಷೆ ಬಗ್ಗೆ ಸಂಸ್ಥೆಯ ಮುಖ್ಯಸ್ಥೆ  ಜಸ್ಟಿನ್‌ ಡಿʼಸೌಜರವರು ಮಕ್ಕಳಿಗೆ ತಿಳಿಸಿಕೊಟ್ಟರು. ಸಂಸ್ಥೆಯ ಸಂಸ್ಥಾಪಕರಾದ ಶಿವಣ್ಣನವರು ಗುರುಗಳ ಬಗ್ಗೆ ಹೊಂದಿದ್ದ ಅನನ್ಯ ಭಕ್ತಿಭಾವವನ್ನು ವಿವರಿಸಿದರು.




Thursday, January 9, 2025

ರಾಜ್ಯ ಮಟ್ಟದ ಕ್ವಿಜ್ ನಲ್ಲಿ ಸಿದ್ಧಗಂಗಾ ಪಿಯು ವಿದ್ಯಾರ್ಥಿಗಳು ಪ್ರಥಮ

ದಾವಣಗೆರೆ ಜ 9

ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪ್ರತಿವರ್ಷ ಸಾಂಸ್ಕೃತಿಕ ಸ್ಪರ್ಧೆಗಳನ್ನು ತಾಲ್ಲೂಕು, ಜಿಲ್ಲಾ, ವಿಭಾಗೀಯ ಮತ್ತು ರಾಜ್ಯಮಟ್ಟದಲ್ಲಿ ಏರ್ಪಡಿಸಲಾಗುತ್ತದೆ. ವಿವಿಧ ಸ್ಪರ್ಧೆಗಳಲ್ಲಿ ಪದವಿಪೂರ್ವ ಕಾಲೇಜಿನ ಮಕ್ಕಳು ಭಾಗವಹಿಸುತ್ತಾರೆ. ಈ ವರ್ಷ ರಾಜ್ಯಮಟ್ಟದ ಸ್ಪರ್ಧೆಗಳನ್ನು ತುಮಕೂರಿನ ಎಂಪ್ರೆಸ್‌ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ರಸ ಪ್ರಶ್ನೆ ವಿಭಾಗದಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಜಯ್‌ ಕುಮಾರ್‌ ಆರ್‌ ಮತ್ತು ರವಿಕುಮಾರ್ ಎನ್‌ ಪ್ರಥಮ ಸ್ಧಾನಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಈರ್ವರು ಬಾಲಕರ ಅಪ್ರತಿಮ ಸಾಧನೆಯನ್ನು ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ ಮತ್ತು ಬೋಧಕವರ್ಗದವರು ಶ್ಲಾಘಿಸಿ ಅಭಿನಂದಿಸಿದ್ದಾರೆ. ಈ ಬಾಲಕರು ಇವರು ಪ್ರಶಸ್ತಿ ಪತ್ರದ ಜೊತಗೆ ತಲಾ 12 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಅಜಯ್‌ ಕುಮಾರ್‌ ಮತ್ತು ರವಿಕುಮಾರ್ ಅವರನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ|| ಜಯಂತ್‌ ಕಾರ್ಯದರ್ಶಿ, ಹೇಮಂತ್‌ ಹಾಗೂ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜರವರು‌ ಅಭಿನಂದಿಸಿ, ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಈ ಹೆಮ್ಮೆಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.




Thursday, January 2, 2025

MSS QUIZ - 2025



MSS Quiz is a State Level competition held by Siddaganga School & PU College, Davanagere in the name of founder  Dr. M.S. Shivanna
MSS ಲಿಖಿತ ಕ್ವಿಜ್ ಸಂಸ್ಥಾಪಕ   ಡಾ. M.S. ಶಿವಣ್ಣ ಅವರ ಹೆಸರಿನಲ್ಲಿ ದಾವಣಗೆರೆಯ ಸಿದ್ಧಗಂಗಾ ಶಾಲೆ & ಪದವಿ ಪೂರ್ವ ಕಾಲೇಜು ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ.

Dr . M.S. SHIVANNA

Instructions for the day of MSS Quiz - MSS ಲಿಖಿತ ಕ್ವಿಜ್ ದಿನದ ಸೂಚನೆಗಳು

1) Student should reach Siddaganga School, Davanagere and collect Admission ticket at-least one hour before Quiz Time. 
 ವಿದ್ಯಾರ್ಥಿಗಳು ದಾವಣಗೆರೆಯ ಸಿದ್ದಗಂಗಾ ಶಾಲೆಯನ್ನು ತಲುಪಬೇಕು ಮತ್ತು ಕ್ವಿಜ್ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು Admission ticket ಅನ್ನು ಪಡೆದುಕೊಳ್ಳಬೇಕು.

2) Counter for Admission ticket will be open from 9 AM on Quiz Day.
    ಕ್ವಿಜ್ ದಿನದಂದು ಬೆಳಗ್ಗೆ 9 ಗಂಟೆಯಿಂದ Admission ticket ಕೌಂಟರ್ ತೆರೆದಿರುತ್ತದೆ.

3) You MUST bring xerox copy of your SSLC/CBSE Hall Ticket
    ನೀವು ನಿಮ್ಮ SSLC/CBSE ಹಾಲ್ ಟಿಕೆಟ್‌ನ ಜೆರಾಕ್ಸ್ ಪ್ರತಿಯನ್ನು ತರಬೇಕು.

4) Write Your Home Address along with Pincode on the Backside of Board Exam Hall ticket Xerox.
 ನಿಮ್ಮ ಮನೆಯ ವಿಳಾಸವನ್ನು Pincode ನೊಂದಿಗೆ Board Exam Hall ticket Xerox ಹಿಂಭಾಗದಲ್ಲಿ ಬರೆಯಿರಿ.

5) Note, there will be separate counter for Kannada Medium & English Medium to collect Admission Ticket. 
ಗಮನಿಸಿ, Admission Ticket ಸಂಗ್ರಹಿಸಲು ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಕೌಂಟರ್ ಇರುತ್ತದೆ.

6) Admission Ticket contains Room Number & Register Number. Admission Ticket 
    ನಿಮ್ಮ ರೂಮ್ ನಂಬರ್ ಮತ್ತು ನೊಂದಣಿ ಸಂಖ್ಯೆಯನ್ನು ನಮೂದಿಸಲಾಗಿರುವುದು.

7) Student should bring blue or black ball point PEN. 
    ವಿದ್ಯಾರ್ಥಿಗಳು ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ ತರಬೇಕು.

8) NO ELECTRONIC GADGETS like Phone, Tablet, Smart Watch allowed inside examination Hall. 
ಪರೀಕ್ಷಾ ಹಾಲ್ ಒಳಗೆ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್‌ನಂತಹ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಅನುಮತಿಸಲಾಗುವುದಿಲ್ಲ.

9) For students coming from other cities, pickup is arranged from Davanagere KSRTC Bus Stand (Entry Gate) & Davanagere Railway Station at 9 AM, 9.30 AM, 10 AM. Look for Yellow coloured school bus with Siddaganga name on it outside Bus stand / railway station.
    ಇತರ ನಗರಗಳಿಂದ ಬರುವ ವಿದ್ಯಾರ್ಥಿಗಳಿಗೆ, 9 AM, 9.30 AM, 10 AM ಕ್ಕೆ ದಾವಣಗೆರೆ KSRTC ಬಸ್ ನಿಲ್ದಾಣ (ಪ್ರವೇಶ ದ್ವಾರ) ಮತ್ತು ರೈಲ್ವೆ ನಿಲ್ದಾಣದಿಂದ SCHOOL BUS ಪಿಕಪ್ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ / ರೈಲ್ವೆ ನಿಲ್ದಾಣದ ಹೊರಗೆ ಸಿದ್ದಗಂಗಾ ಹೆಸರಿನ ಹಳದಿ ಬಣ್ಣದ ಶಾಲಾ ಬಸ್‌ಗಾಗಿ ನೋಡಿ.

10) For any additional query send WhatsApp message ONLY to  8073054295
ಯಾವುದೇ ಹೆಚ್ಚುವರಿ ಪ್ರಶ್ನೆಗೆ WhatsApp ಸಂದೇಶವನ್ನು  ಮಾತ್ರ  8073054295  ಗೆ ಕಳುಹಿಸಿ.

11) Those who are coming on Saturday evening or Sunday early morning, can request hostel facility , to avail see the below video. 
ಶನಿವಾರ ಸಂಜೆ ಅಥವಾ ಭಾನುವಾರ ಮುಂಜಾನೆ ಬರಲು ಇಚ್ಚಿಸುವವರು ಹಾಸ್ಟೆಲ್ ಸೌಲಭ್ಯವನ್ನು ಪಡೆಯಲು, ಈ  ಕೆಳಗಿನ ವಿಡಿಯೋ ನೋಡಿ. 




Date of Quiz : Sunday, 6th April 2025
Reporting time : 10 AM
Examination time : 11 AM
Address : Sri Siddaganga School and PU College
                     2347, Siddalingeshwara Nagar
                     Near district stadium
                     Davanagere - 577002 , 
                    Google Map link : https://goo.gl/maps/6rmy41yV256U8uCh9

Frequently Asked Questions - FAQ

    1. What is MSS Quiz? - MSS ಕ್ವಿಜ್ ಎಂದರೇನು?
            MSS Quiz is a state level written test competition held by Siddaganga School & PU College every year in honour of Founder Dr. M.S. Shivanna. Quiz will be in the form of M.C.Q. questions. Students will answer in OMR sheet. MSS ಕ್ವಿಜ್ ಸಿದ್ಧಗಂಗಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸಂಸ್ಥಾಪಕ  ಡಾ. ಎಂ.ಎಸ್.ಶಿವಣ್ಣ ಅವರ ಗೌರವಾರ್ಥ ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ. ರಸಪ್ರಶ್ನೆಯು MCQ ಪ್ರಶ್ನೆಗಳ ರೂಪದಲ್ಲಿರುತ್ತದೆ. 

    2. Why should I attend MSS Quiz? ನಾನು MSS ಕ್ವಿಜ್ ನಲ್ಲಿ ಏಕೆ ಭಾಗವಹಿಸಬೇಕು ?
         Quiz is based on your 10th board syllabus. No additional preparation is required to attend this quiz. You can win prize upto Rs. 50,000/- and bring fame to yourself, parents and your school. This can also help your future studies. ಕ್ವಿಜ್ ನಿಮ್ಮ 10ನೇ ಬೋರ್ಡ್ ಪಠ್ಯಕ್ರಮವನ್ನು ಆಧರಿಸಿದೆ. ಈ ರಸಪ್ರಶ್ನೆಗೆ ಹಾಜರಾಗಲು ಯಾವುದೇ ಹೆಚ್ಚುವರಿ ತಯಾರಿ ಅಗತ್ಯವಿಲ್ಲ. ನೀವು  ರೂ 50,000/- ವರೆಗೆ ಬಹುಮಾನವನ್ನು ಗೆದ್ದು, ನಿಮಗೆ, ನಿಮ್ಮ ಪಾಲಕರಿಗೆ ಮತ್ತು ನಿಮ್ಮ ಶಾಲೆಗೆ ಖ್ಯಾತಿಯನ್ನು ತರಬಹುದು. ಇದು ನಿಮ್ಮ ಮುಂದಿನ ಶಿಕ್ಷಣಕ್ಕೆ ಸಹಾಯವಾಗಬಲ್ಲದು. 

    3. When is MSS Quiz held this year ?  ಈ ವರ್ಷ ಕ್ವಿಜ್ ಯಾವಾಗ ನಡೆಯುವುದು?
           This year, quiz will be held on Sunday, 6th April 2025 at Siddaganga School, Davanagere at 11 AM. ಈ ವರ್ಷ ಭಾನುವಾರ, 6 ಏಪ್ರಿಲ್ 2025 ರಂದು ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

    4. Is it Online or Offline ? ಇದು ಆನ್‌ಲೈನ್ ಪರೀಕ್ಷೆಯೋ ಅಥವಾ ಆಫ್‌ಲೈನ್ ಪರೀಕ್ಷೆಯೋ ?
           Quiz is held only in OFFLINE format at Siddaganga School, Davanagere. Students will write quiz using OMR sheet provided during examination. ಕ್ವಿಜ್ ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ OFFLINE ಮಾದರಿಯಲ್ಲಿ ಮಾತ್ರ ನಡೆಯುತ್ತದೆ. ಪರೀಕ್ಷೆಯ ಸಮಯದಲ್ಲಿ ಒದಗಿಸಲಾಗುವ  OMR ಹಾಳೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ರಸಪ್ರಶ್ನೆಗೆ ಉತ್ತರಿಸುತ್ತಾರೆ. 

    5. Who can attend this Quiz? ಯಾರು ಈ ಕ್ವಿಜ್ ಗೆ  ಹಾಜರಾಗಬಹುದು?
        All 10th Students from Karnataka, writing State board, CBSE examination this year are eligible to register. 
ಈ ವರ್ಷ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ಕರ್ನಾಟಕದ ಎಲ್ಲಾ 10 ನೇ ವಿದ್ಯಾರ್ಥಿಗಳು ನೋಂದಾಯಿಸಲು ಅರ್ಹರಾಗಿದ್ದಾರೆ.

    6. Is there any entry fee for Quiz ? ರಸಪ್ರಶ್ನೆಗೆ ಪ್ರವೇಶ ಶುಲ್ಕವಿದೆಯೇ ?
            There is NO ENTRY FEE for quiz. ರಸಪ್ರಶ್ನೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.

    7. Will score in MSS Quiz help me to get admission to Siddaganga PU College? ಸಿದ್ಧಗಂಗಾ  P.U.     ಕಾಲೇಜಿಗೆ ಪ್ರವೇಶ ಪಡೆಯಲು MSS ಕ್ವಿಜ್  ಅಂಕಗಳು ನನಗೆ ಸಹಾಯವಾಗುವುದೇ ?
            MSS Quiz score may help you to get admission for Siddaganga PU College. 
            MSS ರಸಪ್ರಶ್ನೆ ಅಂಕವು ಸಿದ್ದಗಂಗಾ P.U. ಕಾಲೇಜಿಗೆ ಪ್ರವೇಶ ಪಡೆಯಲು ನಿಮಗೆ ಸಹಾಯವಾಗಬಹುದು 

    8. When is the result of M.S.S. Quiz? ಕ್ವಿಜ್ ಫಲಿತಾಂಶ ಯಾವಾಗ ?
         Result will be published within one week on website : www.siddaganga.com   
         ಫಲಿತಾಂಶವನ್ನು ಒಂದು ವಾರದೊಳಗೆ ವೆಬ್‌ಸೈಟ್: www.siddaganga.com ನಲ್ಲಿ ಪ್ರಕಟಿಸಲಾಗುವುದು





Eligibility to participate - ಭಾಗವಹಿಸಲು ಅರ್ಹತೆ

    1. Students writing board exam for SSLC or CBSE 10th Grade this year. ಈ ವರ್ಷ SSLC ಅಥವಾ CBSE 10ನೇ ತರಗತಿಗೆ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.

    2. Other boards like ICSE can participate, however quiz will be based on NCERT textbook. ICSE ನಂತಹ ಇತರ ಬೋರ್ಡ್ ವಿದ್ಯಾರ್ಥಿಗಳು ಭಾಗವಹಿಸಬಹುದು, ಆದರೆ  ಕ್ವಿಜ್ NCERT ಪಠ್ಯಪುಸ್ತಕವನ್ನು ಆಧರಿಸಿರುತ್ತದೆ

    3. Only students from Karnataka state are eligible to participate. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅರ್ಹರು

Date and format of Quiz - ಕ್ವಿಜ್ ದಿನಾಂಕ ಮತ್ತು ಸ್ವರೂಪ

    1. Quiz will be held on Sunday, 6th April 2025 at 11 AM as a written test. ಕ್ವಿಜ್ 6ನೇ ಏಪ್ರಿಲ್ 2025 ರಂದು ಭಾನುವಾರ ಬೆಳಿಗ್ಗೆ 11 ಕ್ಕೆ ಲಿಖಿತ ರೂಪದಲ್ಲಿರುತ್ತ್ತದೆ. 

    2. Quiz will be held in offline format at Siddaganga School Campus in Davanagere (address and google map link provided above). ಲಿಖಿತ ಕ್ವಿಜ್ ದಾವಣಗೆರೆಯ ಸಿದ್ದಗಂಗಾ ಶಾಲಾ ಕ್ಯಾಂಪಸ್‌ನಲ್ಲಿ ಆಫ್‌ಲೈನ್ ಸ್ವರೂಪದಲ್ಲಿ ನಡೆಯಲಿದೆ.(ವಿಳಾಸ ಮತ್ತು ಗೂಗಲ್ ಮ್ಯಾಪ್ ಲಿಂಕ್ ಮೇಲೆ  ನೀಡಲಾಗಿದೆ)

    3. Quiz will be in form of MCQ, 30 Questions from Science & 30 Questions from Maths. ಲಿಖಿತ ಕ್ವಿಜ್ MCQ ರೂಪದಲ್ಲಿರುತ್ತದೆ, ವಿಜ್ಞಾನದಿಂದ 30 ಪ್ರಶ್ನೆಗಳು ಮತ್ತು ಗಣಿತದಿಂದ 30 ಪ್ರಶ್ನೆಗಳು.

    4. Duration of examination is 60 minutes. ಪರೀಕ್ಷೆಯ ಅವಧಿ 60 ನಿಮಿಷಗಳು.

    5. Students will be answering using OMR sheet provided during the quiz. ಲಿಖಿತ ಕ್ವಿಜ್ ಸಮಯದಲ್ಲಿ ಒದಗಿಸಲಾದ OMR ಶೀಟ್ ಬಳಸಿ ವಿದ್ಯಾರ್ಥಿಗಳು ಉತ್ತರಿಸುತ್ತಾರೆ.

    6. NO NEGATIVE marking for wrong answer. ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕ ಇರುವುದಿಲ್ಲ.

    7. Syllabus for Quiz is based on reduced syllabus given by SSLC & CBSE boards. ಲಿಖಿತ ಕ್ವಿಜ್ ಪಠ್ಯಕ್ರಮವು ಈ ವರ್ಷ SSLC ಮತ್ತು CBSE ಬೋರ್ಡ್‌ಗಳು ನೀಡಿದ ಕಡಿತಗೊಂಡ ಪಠ್ಯಕ್ರಮವನ್ನು ಆಧರಿಸಿದೆ.

How to register for Quiz - ಕ್ವಿಜ್ ಗೆ  ನೋಂದಾಯಿಸುವುದು ಹೇಗೆ
    1. Send your name and School Name to 8073054295 by WhatsApp. You can also use this link to send message https://bit.ly/3v2GJlX . ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು 8073054295 ಗೆ WhatsApp ಸಂದೇಶವನ್ನು ಕಳುಹಿಸುವ ಮೂಲಕ ರಸಪ್ರಶ್ನೆಗೆ ನೋಂದಾಯಿಸಿಕೊಳ್ಳಬಹುದು. ಸಂದೇಶವನ್ನು ಕಳುಹಿಸಲು ನೀವು ಈ ಲಿಂಕ್ ಅನ್ನು ಸಹ ಬಳಸಬಹುದು https://bit.ly/3v2GJlX 

    2. Last date for registration is Saturday, 5th April 2025. ನೋಂದಣಿಗೆ ಕೊನೆಯ ದಿನಾಂಕ ಶನಿವಾರ 5 ನೇ ಏಪ್ರಿಲ್ 2025.