Monday, April 17, 2023

ಸಿದ್ಧಗಂಗಾ ಎಂ. ಎಸ್.‌ ಎಸ್ ಕ್ವಿಜ್‌ ಅಭೂತಪೂರ್ವ ಯಶಸ್ಸು – ಶಿಸ್ತಿಗೆ ಮನಸೋತ ಪಾಲಕರು


ಪ್ರತಿ ವರ್ಷದಂತೆ ಈ ವರ್ಷವೂ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಎಂ. ಎಸ್.‌ ಎಸ್ ಕ್ವಿಜ್‌ ಅಭೂತ ಪೂರ್ವ ಯಶಸ್ಸು ಕಂಡಿತು. ಶಿಕ್ಷಣ ಶಿಲ್ಪಿ ಡಾ. ಎಂ. ಎಸ್.‌ ಶಿವಣ್ಣನವರ ಗೌರವಾರ್ಥ ಕಳೆದ 9 ವರ್ಷಗಳಿಂದ ನಡೆಸುತ್ತಿರುವ ಅತ್ಯಂತ ಶಿಸ್ತಿನ ಪಾರದರ್ಶಕವಾದ ಈ ಲಿಖಿತ ಕ್ವಿಜ್‌ಗೆ ಎರಡು ಸಾವಿರದ ಮುನ್ನೂರು ವಿದ್ಯಾರ್ಥಿಗಳು ಹಾಜರಾಗಿದ್ದರು. ಆಂಗ್ಲ ಮಾಧ್ಯಮ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮದ ಮಕ್ಕಳ ಜೊತೆ ಕನ್ನಡ ಮಾಧ್ಯಮದ ಮಕ್ಕಳೂ ಭಾಗವಹಿಸಿದ್ದು ವಿಶೇಷವಾಗಿತ್ತು. ದೂರದ ರಾಯಚೂರು, ಬಳ್ಳಾರಿ, ಬೆಳಗಾವಿ, ಮೈಸೂರು, ಬೆಂಗಳೂರು, ಮಂಗಳೂರು, ಸಮೀಪದ ಹಾವೇರಿ, ಹುಬ್ಬಳ್ಳಿ, ಧಾರವಾಡ, ಜಿಲ್ಲೆಗಳಿಂದ ಪಾಲಕರ ಸಮೇತ ಬಂದ ಮಕ್ಕಳು ರಾತ್ರಿ ಸಿದ್ಧಗಂಗಾ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಿ ಬೆಳಿಗ್ಗೆ ಲಿಖಿತ ಕ್ವಿಜ್‌ಗೆ ಹಾಜರಾದರು. ಸಿದ್ಧಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸುಶ್ರಾವ್ಯ ಭಕ್ತಿಗೀತೆಗಳೊಂದಿಗೆ ಪ್ರಾರಂಭವಾದ ಕ್ವಿಜ್‌ಗೆ ಆಗಮಿಸಿದ್ದ ಮಕ್ಕಳನ್ನು ಮತ್ತು ಪಾಲಕರನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ನಿರ್ದೇಶಕರಾದ 

ಡಾ||ಜಯಂತ್‌ರವರು ಎಂ. ಎಸ್.‌ ಎಸ್‌ ಕ್ವಿಜ್‌ನ ನಿಯಮಗಳನ್ನು ಮಕ್ಕಳಿಗೆ ತಿಳಿಸಿದರು. ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಡಾ. ಎಂ. ಎಸ್‌. ಶಿವಣ್ಣನವರ ಗೌರವಾರ್ಥ ಎಂ. ಎಸ್.‌ ಎಸ್‌ ಕ್ವಿಜ್‌ ಮತ್ತು ಎಂ. ಎಸ್.‌ ಎಸ್‌ ಸ್ಕಾಲರ್‌ಶಿಪ್‌ ಹಾಗೂ ಎಂ. ಎಸ್. ಎಸ್‌ ಟ್ರೈನಿಂಗ್‌ ಸೆಂಟರ್‌ನಲ್ಲಿ ನೀಡುತ್ತಿರುವ ಸೂಪರ್‌ ಬ್ರೈನ್‌ ಟ್ರೈನಿಂಗ್‌ ಬಗ್ಗೆ ಮಾಹಿತಿ ನೀಡುತ್ತಾ ಎಂ. ಎಸ್.‌ ಎಸ್ ಕ್ವಿಜ್‌ನಲ್ಲಿ ವಿಜೇತ ಮಕ್ಕಳಿಗೆ ಎರಡು ವರ್ಷದ ಉಚಿತ ಪಿಯು ವಿಜ್ಞಾನ ಶಿಕ್ಷಣ ಮತ್ತು ಸ್ಕಾಲರ್‌ಶಿಪ್‌ ಪಡೆಯಲು ಬೇಕಾದ ಅರ್ಹತೆಗಳನ್ನು ತಿಳಿಸಿದರು.

9 ರಿಂದ 10-45 ರವರೆಗೆ ವಿದ್ಯಾರ್ಥಿಗಳ ನೊಂದಣಿಯಾಯಿತು. ಪ್ರತಿಷ್ಠಿತ ಎಂ. ಎಸ್.‌ ಎಸ್.‌ ಟ್ರೋಫಿ ಹಿಡಿದ ಪಿಯುಸಿ ವಿದ್ಯಾರ್ಥಿನಿಯರು ಆಕರ್ಷಕ ಪಥಸಂಚಲನ ನಡೆಸಿದರು. ರಾಸಾಯನಿಕ ವಸ್ತುಗಳನ್ನು ಬಳಸಿ ಕೇಸರಿ, ಬಿಳಿ, ಹಸಿರು ಕಾರಂಜಿ ಚಿಮ್ಮಿಸಿದರು. 11 ಗಂಟೆಯಿಂದ 71 ಕೊಠಡಿಗಳಲ್ಲಿ ವ್ಯವಸ್ಥಿತವಾಗಿ ನಡೆದ ಲಿಖಿತ ಕ್ವಿಜ್‌ನಲ್ಲಿ ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಕೊಠಡಿ ವೀಕ್ಷಣೆ ಮಾಡಿದರು. ಭಾಗವಹಿಸಿದ ಪ್ರತಿ ಮಗುವಿಗೆ ಸರ್ಟಿಫಿಕೇಟ್‌ ಕೊಡಲಾಯಿತು. ಅತ್ಯಂತ ಸುವ್ಯವಸ್ಥಿತವಾಗಿ ಆಯೋಜಿಸಿದ್ದ ಲಿಖಿತ ಕ್ವಿಜ್‌ಗೆ ನೊಂದಣಿ ಮಾಡಿಸಿ ಬಂದ ಮಕ್ಕಳಿಗೆ ಮಾರ್ಗದರ್ಶನ ನೀಡಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ವಯಂ ಸೇವೆ ಆಗಮಿಸಿದ್ದ ಪಾಲಕರ ಗಮನ ಸೆಳೆಯಿತು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಿದ್ಧಗಂಗಾ ಸ್ವಾಮಿಜಿಯವರ ಮತ್ತು ಎಂ. ಎಸ್.‌ ಶಿವಣ್ಣನವರ ಚಿತ್ರ ಬಿಡಿಸಿದ್ದ ಮಕ್ಕಳ ಏಕಾಗ್ರತೆಯನ್ನು ಪಾಲಕರು ಮೆಚ್ಚಿದರು. ಸಂಸ್ಥೆಯ ಅಧ್ಯಕ್ಷರಾದ ಡಿ. ಎಸ್.‌ ಪ್ರಶಾಂತ್‌ರವರು, ಮನುಶ್ರೀ ಮತ್ತು ಮನೋಹರ, ಹರ್ಷ ಇವರು ಕ್ವಿಜ್‌ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಕಾರ್ಯದರ್ಶಿ ಹೇಮಂತ್‌ರವರು ಆಗಮಿಸಿದ್ದ ಪಾಲಕರಿಗೆ ಮತ್ತು ಮಕ್ಕಳಿಗೆ ಮಧ್ಯಾನ್ಹದ ಉಪಹಾರದ ವ್ಯವಸ್ಥೆ ಮಾಡಿದ್ದರು.

Friday, March 31, 2023

I PU RESULTS - 2022-23

1 PUC Result of Siddaganga PU College is published on website www.siddaganga.com

To check result click link here

To check result, enter your register number (8 digit number used for examination), Date of birth and click Search

Make sure you choose the proper date of birth as per official record. 

All the Best


Saturday, December 31, 2022

 ಮಕ್ಕಳ ಕೌಶಲ್ಯದ ಅನಾವರಣ

ಸಿದ್ಧಗಂಗಾದಲ್ಲಿ ನಡೆದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ.






ನಗರದ ಶ್ರೀ  ಸಿದ್ಧಗಂಗಾ ಶಾಲೆಯ 3 ರಿಂದ 10 ನೇ ತರಗತಿಯ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ನೂರಾರು ಮಾದರಿಗಳು, ಅದಕ್ಕೆ ಸಂಬಂಧಪಟ್ಟ ವಿವರಣೆ, ಮಕ್ಕಳ ವಿಜ್ಞಾನಾಸಕ್ತಿ ಮತ್ತು ಕಲಾ ಪ್ರೇಮಕ್ಕೆ ಸಾಕ್ಷಿಯಾದವು. ಸುಂದರವಾಗಿ ನಿರ್ಮಿತವಾದ ವೇದಿಕೆಯಲ್ಲಿ ಹಸಿರು ಸಸ್ಯಗಳಿಗೆ ನೀರೆರೆಯುವ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ'ಸೌಜ ರವರು ಮತ್ತು ತೀರ್ಪುಗಾರರಾಗಿ ಆಗಮಿಸಿದ್ದ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳನ್ನು ಶ್ಲಾಘಿಸಿದರು. ತಮ್ಮ ಮಕ್ಕಳ ‘ವಸ್ತು ಪ್ರದರ್ಶನ’ ವೀಕ್ಷಿಸಲು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಸ್ಮಾರ್ಟ್ ರೈಲ್ವೆ ಸ್ಟೇಷನ್, ಕಾರ್ಗಿಲ್ ಯುದ್ಧ , ಚನ್ನಕೇಶವ ದೇವಸ್ಥಾನ, ಮಣ್ಣಿನ ಮತ್ತು ಶಿಲೆಗಳ ಮಾದರಿಗಳು, ವಿಧಾನಸೌಧ, ಆದಿಮಾನವನ ಜೀವನಶೈಲಿ ಹೀಗೆ ನೂರಾರು ಸಮಾಜಶಾಸ್ತ್ರಕ್ಕೆ, ಕಲೆಗೆ ಸಂಬಂಧಪಟ್ಟ ಮಾದರಿಗಳು ಒಂದಕ್ಕಿಂತ  ಒಂದು ಆಕರ್ಷಕವಾಗಿ ಪ್ರದರ್ಶನಗೊಂಡವು. ಮಕ್ಕಳ ಕ್ರಿಯಾಶೀಲತೆಗೆ ವಿಸ್ಮಯ ಪಡುವಂತಾಯಿತು. ವಿಜ್ಞಾನ ಮಾದರಿಗಳು ಭೌತಶಾಸ್ತ್ರದ ಅನೇಕ ತತ್ವಗಳ ಮೇಲೆ ಆಧಾರಿತವಾಗಿದ್ದು, ರಸಾಯನಶಾಸ್ತ್ರ ವಿಭಾಗದಲ್ಲಿ ಮಕ್ಕಳು ರಾಸಾಯನಿಕ ಕ್ರಿಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಜೀವ ವೈವಿಧ್ಯಗಳ ಮಾದರಿಗಳು, ಸಸ್ಯಗಳು, ಜಲಚಕ್ರ, ನೀರಿನ ಮರುಬಳಕೆಯ ಮಾದರಿಗಳು ಜೀವಶಾಸ್ತ್ರ ವಿಭಾಗದಲ್ಲಿ ಗಮನ ಸೆಳೆದವು. ಹೊಲಗದ್ದೆಗಳಲ್ಲಿ ಪಶು-ಪಕ್ಷಿಗಳನ್ನು ಓಡಿಸಲು ದೊಡ್ಡ ಶಬ್ದ ಬರುವಂತೆ ಮಾಡಿದ ಮಂಕಿಗನ್ ಮಾದರಿಯ ಸರಳ ಯಂತ್ರದ ಬಗ್ಗೆ ಎಲ್ಲರೂ ಆಕರ್ಷಿತರಾದರು. ಇತ್ತೀಚಿನ ದಿನಗಳಲ್ಲಿ ಊರೊಳಗೆ ಬರುತ್ತಿರುವ ಮುಷ್ಯಾಗಳ ಹಾವಳಿ ತಡೆಯಲು ಇದು ಸೂಕ್ತವಾಗಿದೆ ಎಂಬ ಅಭಿಪ್ರಾಯ ಎಲ್ಲರಲ್ಲಿ ಮೂಡಿತು. ಪ್ಲಾಸ್ಟಿಕ್ ಪೈಪ್‌ನಿಂದ ಮಾಡಿದ ಬಹಳ ಹಗುರವಾದ ಈ ಮಂಕಿಗನ್ ಬಹು ಉಪಯೋಗಿಯಾಗಿತ್ತು. ಪ್ರಾಣಿ ಸಂಗ್ರಹಾಲಯ, ಗ್ರಾಮರ್ ಟ್ರೀ  , ಹೈಡ್ರಾಲಿಕ್ ಬ್ರಿಡ್ಜ್ , ರಾಕೆಟ್ ಉಡಾವಣೆ, ಸೌರವ್ಯೂಹ, ಕೆಂಪುಕೋಟೆ ಇತ್ಯಾದಿ ಅನೇಕ ಮಾದರಿಗಳಿದ್ದವು.

ಕೋವಿಡ್‌ನಿಂದಾಗಿ ಮಕ್ಕಳು ಎರಡು ವರ್ಷ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌ರವರ ಮಾರ್ಗದರ್ಶನದಲ್ಲಿ, ಶಿಕ್ಷಕರ ಮತ್ತು ಪಾಲಕರ ಸಹಯೋಗದಿಂದ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಮಕ್ಕಳ ಆಸಕ್ತಿ ಅನಾವರಣಗೊಂಡಿತು. 300 ಕ್ಕೂ ಹೆಚ್ಚು ವಿವಿಧ ಮಾದರಿಗಳು ಪ್ರದರ್ಶಿತಗೊಂಡಿದ್ದವು.

Wednesday, December 21, 2022

 ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್‌ ನೀವಾಗಬೇಡಿ  ಹದಿವಯಸ್ಸಿನ ಬಾಲಕಿಯರಿಗೆ  ಡಾ || ಶಶಿಕಲಾ ಕೃಷ್ಣಮೂರ್ತಿಯವರಿಂದ ಎಚ್ಚರಿಕೆ

ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಉಂಟಾಗಿರುವ ಮಾನಸಿಕ ಬದಲಾವಣೆಗಳ ಹಾಗೂ ಹದಿವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಜೀವನ ಶೈಲಿಯನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ಎಸ್. ಎಸ್. ಇನ್ಸ್ಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್‌ (SSIMS) ನ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ|| ಶಶಿಕಲಾ ಕೃಷ್ಣಮೂರ್ತಿಯವರು ಸಿದ್ಧಗಂಗಾ ಸಂಸ್ಥೆಯ 10 ನೇ ತರಗತಿ ಬಾಲಕಿಯರಿಗೆ ಮತ್ತು ತಾಯಂದಿರಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. 



ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ್ದಾಗ ಮಕ್ಕಳು ಆನ್‌ಲೈನ್‌ ತರಗತಿಗೆಂದು ಪಡೆದ ಮೊಬೈಲ್‌ಗಳಿಂದಾಗಿ ಹೇಗೆ ಅದಕ್ಕೆ ದಾಸರಾಗಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. 180 ಹೆಣ್ಣು ಮಕ್ಕಳು ಅಷ್ಟೇ ಸಂಖ್ಯೆಯ ತಾಯಂದಿರು ಡಾ|| ಶಶಿಕಲಾ ಮೇಡಂರವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದರು. ಹದಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಲ್ಲಿ ಆಗುವ ದೈಹಿಕ ಬದಲಾವಣೆ, ಶುಚಿತ್ವ, ಋತು ಚಕ್ರ, ಆಹಾರ ಪದ್ಧತಿ, ಯುವಕರತ್ತ ಆಕರ್ಷಣೆ, ಸ್ನೇಹಿತರ ಆಯ್ಕೆಯ ಬಗ್ಗೆ ವಿವೇಚನೆ ಇವುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ತಾಯಂದಿರು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು. ಲೈಂಗಿಕ ದೌರ್ಜನ್ಯಗಳ ಬಗ್ಗೆ ಅವುಗಳಿಂದಾಗುತ್ತಿರುವ ಅನಾಹುತಗಳನ್ನು ವಿವರಿಸುತ್ತಾ “ಉಪಯೋಗಿಸಿ ಬಿಸಾಡುವ ಟಿಶ್ಯೂ ಪೇಪರ್‌ ನೀವಾಗಬೇಡಿ” ಎಂದು ಎಚ್ಚರಿಕೆ ನೀಡಿದರು.

ಪ್ರಾರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ 10 ನೇ ತರಗತಿಯ ಬಾಲಕಿಯರು ಪೂಜಾ ಸಾಮಗ್ರಿಗಳೊಂದಿಗೆ ತಮ್ಮ ತಮ್ಮ ತಾಯಂದಿರಿಗೆ ಪಾದ ಪೂಜೆ ನೆರವೇರಿಸಿ ಪುಷ್ಪವೃಷ್ಠಿಗೈದರು. ಹೆತ್ತಮ್ಮನಿಗೆ ಹೆಮ್ಮೆ ತರುವ ಮಗಳಾಗುವೆನೆಂದು ವಾಗ್ದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ, ಶಿಕ್ಷಕಿಯರಾದ ಪ್ರತಿಭಾ, ಝೀನತ್‌, ರಮಾದೇವಿ, ಅಂಬುಜಾಕ್ಷಿ ಮತ್ತು ಭೂಮಿಕ ಇವರಿದ್ದರು. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿತ್ತೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.

 ಸ್ಕೌಟ್ಸ್‌ – ಗೈಡ್ಸ್‌  ಸಿದ್ಧಗಂಗಾ ಸಂಸ್ಥೆಯಿಂದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ  ದಾವಣಗೆರೆಯ ಗಾಜಿನ ಅರಮನೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಮಟ್ಟದ ಪ್ರಪ್ರಥಮ ಸಾಂಸ್ಕೃತಿಕ ಜಾಂಬೂರಿ ನಡೆಯುತ್ತಿದೆ. ಡಿಸೆಂಬರ್‌ 21 ರಿಂದ 27 ರವರೆಗೆ ದೇಶ –ವಿದೇಶದ ಮಕ್ಕಳ ಪ್ರತಿಭೆ – ಸಾಹಸ ಪ್ರದರ್ಶನ ಅನಾವರಣಗೊಳ್ಳಲಿದೆ. ರಾಷ್ಟ್ರದ ವಿವಿಧ ರಾಜ್ಯಗಳ ಮತ್ತು 10 ವಿದೇಶಿ ರಾಷ್ಟ್ರಗಳ 50 ಸಾವಿರ ಸ್ಕೌಟ್ಸ್‌ – ಗೈಡ್ಸ, ರೇಂಜರ್ಸ್‌, ರೋವರ್ಸ್‌, 10 ಸಾವಿರ ದಳನಾಯಕರು ಮತ್ತು 3 ಸಾವಿರ ಸ್ವಯಂ ಸೇವಕರ ಬೃಹತ್‌ ಮೇಳ ಕರ್ನಾಟಕದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ದಾವಣಗೆರೆ ಜಿಲ್ಲೆಯಿಂದ 920 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.

C:\Users\lenovo\Downloads\IMG-20221221-WA0002.jpg

ಈ ಅವಿಸ್ಮರಣೀಯ ಜಾಂಬೂರಿಗೆ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ 50 ಸ್ಕೌಟ್ಸ್‌ 47 ಗೈಡ್ಸ್‌ಗಳು, 5 ತರಬೇತಿದಾರರು ಮತ್ತು 4 ಸ್ವಯಂ ಸೇವಕರು ಎರಡು ಬಸ್‌ಗಳಲ್ಲಿ ತೆರಳಿದ್ದಾರೆ. ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಗಾಜಿನ ಅರಮನೆಯ ಪ್ರತಿರೂಪವನ್ನು ಜಾಂಬೂರಿಯ ಕಲಾ ಪ್ರದರ್ಶನದಲ್ಲಿ ಸ್ಥಾಪಿಸಿದ್ದಾರೆ. ರಾಷ್ಟ್ರದ ಅತಿ ದೊಡ್ಡ ದಾವಣಗೆರೆಯ ಗಾಜಿನ ಮನೆಯ ವಿಶಿಷ್ಠತೆಯನ್ನು ಪ್ರೇಕ್ಷಕರಿಗೆ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ತಿಳಿಸಿಕೊಡಲು ಮಕ್ಕಳು ಸಿದ್ಧರಾಗಿದ್ದಾರೆ. ಇದಲ್ಲದೆ ಹಿಂದೂ ಸಂಪ್ರದಾಯದ ವಿವಾಹ ಪದ್ಧತಿಯನ್ನು ಸಾಂಸ್ಕೃತಿಕ ವೇದಿಕೆಯಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಅಭಿನಯಿಸಲಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಮಟ್ಟದ ಬೃಹತ್‌ ಜಾಂಬೂರಿ ಮೇಳದಲ್ಲಿ ದಾವಣಗೆರೆಯ ಅನುರೂಪ – ಸುಂದರ ಗಾಜಿನ ಅರಮನೆಯನ್ನು ಸಿದ್ಧಗಂಗಾ ಸ್ಕೌಟ್‌ – ಗೈಡ್‌ ಮಕ್ಕಳು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್‌, ರಾಜೇಶ್, ರಾಜಶೇಖರ್‌, ಸ್ವಾತಿ, ಹೀನಾ ಕೌಸರ್‌ ಮತ್ತು ಪ್ರಿಯಾಂಕರವರ ಪರಿಶ್ರಮದಿಂದ ಈ ಸುಂದರ ಆಕೃತಿ ಮೂಡಿ ಬಂದಿದೆ.

Monday, December 19, 2022

 ಸಿದ್ಧಗಂಗಾ ಕಾಲೇಜಿನ ಬಾಲಕ-ಬಾಲಕಿಯರಿಂದ

ರಾಷ್ಟ್ರ – ರಾಜ್ಯಮಟ್ಟದ ಕ್ರೀಡೆಗಳಲ್ಲಿ ಅಪ್ರತಿಮ ಸಾಧನೆ



ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬಾಲಕ – ಬಾಲಕಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಬಾಲಕಿಯರ ವಿಭಾಗದಿಂದ ಸೃಷ್ಠಿ ಕೆ ಬೆಳ್ಳೂಡಿ ರಾಜ್ಯ ಮಟ್ಟದ ಬಾಸ್ಕೆಟ್‌ ಬಾಲ್‌ನಲ್ಲಿ ದ್ವಿತೀಯ, ಯುವ ಸಬಲೀಕರಣ ಪ್ರಾಧಿಕಾರದ ವಿಭಾಗ ಮಟ್ಟದ ನೆಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಹಾವೇರಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮಾನ್ಯ ಜೆ. ಮತ್ತು ದೀಪ್ತಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಬಾಲ್‌ ಬ್ಯಾಡ್‌ಮಿಂಟನ್‌ನಲ್ಲಿ ಅಕ್ಷತಾ ಟಿ. ವಿ ಮತ್ತು ಸಿಂಧು ಸಿ. ವಿ, ಶಿವಮೊಗ್ಗದಲ್ಲಿ ನಡೆದ ಕರಾಟೆಯಲ್ಲಿ ರಕ್ಷಾ ಜಿ. ಆರ್, ಉಡುಪಿಯಲ್ಲಿ ನಡೆದ ವಾಲಿಬಾಲ್‌ನಲ್ಲಿ ಕವನ ವೈ ಮತ್ತು ಸ್ನೇಹ ಟಿ. ಬಿ, ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಥ್ರೊ ಬಾಲ್‌ ನಲ್ಲಿ ಶ್ರೀಕಮಲ, ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಅನುಷಾ ಹೆಚ್, ದೀಪಾ ಜೆ. ಮೈದೂರ್‌ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಡೆದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಸುಪ್ರಿಯ ಎಂ, ನಂದಿತ ವಿ, ಪ್ರಕಾಶ್‌, ರೇಣುಕಾ ಎಂ, ಧನುಷ್‌ ಕೆ. ಜೆ, ಸುಪ್ರಿಯ, ಹರ್ಷಿತ  ಎ. ಎನ್ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಾಲಕರ ವಿಭಾಗದಲ್ಲಿ ವೈಭವ್‌‌ ಎಸ್, ವಿನಾಯಕ ಬಿ ತಮಿಳು ನಾಡಿನ ದಿಂಡಿಗಲ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲ್‌ಬಾಲ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಯಚೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಭಾಗವಹಿಸಿದ ಶಶಾಂಕ ಕೆ. ಎಸ್, ಕಾರ್ತಿಕ್  ಟಿ. ವಿ, ಸುಹಾಸ್‌, ಧನುಷ್‌ ಎಲ್, ಅವನೀಶ್‌ ಡಿ. ಹೆಚ್ , ಶಿವರಾಜ್‌ ಹೆಚ್.‌ ಬಿ ಇವರಲ್ಲಿ ಕಾರ್ತಿಕ್  ಟಿ. ವಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಆದಿತ್ಯ ದೀಪಕ್‌, ಅಭಿಷೇಕ್‌ ವೈ. ಎಂ ಬೆಸ್ಟ್‌ ಆಟಗಾರರಾಗಿದ್ದರು. ಆದಿತ್ಯ ದೀಪಕ್‌ ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್‌ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾನೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ಕ್ರೀಡೆಗಳಲ್ಲಿ ಉಲ್ಲಾಸ್‌ ರೆಡ್ಡಿ, ಸಿದ್ಧನಗೌಡ, ಹರೀಶ್‌ ಹೆಚ್.‌ ಕೆ ಇವರು ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ, ಸೂಫಿಯಾನ್‌ ಎಸ್.‌ ಎಂ ಚಿಕ್ಕೋಡಿ ಜಿಲ್ಲೆಯಲ್ಲಿ ನಡೆದ ಷಟಲ್‌ ಬ್ಯಾಡ್ಮಿಂಟನ್‌ ನಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕರಾಟೆಯಲ್ಲಿ ಮನೋಜ್‌ ಶೀಲವಂತ್‌ ಮತ್ತು ಮಧು, ಹಾವೇರಿ ಜಿಲ್ಲೆಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಶಿವರಾಜ್‌ ಸಿ. ಜೆ ಮತ್ತು ವಿನಾಯಕ ಕೆ. ಹಾಗೂ ಮೈಸೂರು ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್‌ ಟೆನ್ನಿಸ್‌ನಲ್ಲಿ ಮಲ್ಲಿಕಾರ್ಜುನ್  ಜೆ. ಎಸ್ ಮತ್ತು ಅಭಿಷೇಕ್‌ ಬಿ. ಎಸ್ ಉತ್ತಮ ಪ್ರದರ್ಶನ ನೀಡಿ ಸಿದ್ಧಗಂಗಾ ಕಾಲೇಜಿನ ಉತ್ತಮ ಕ್ರೀಡಾಪಟುಗಳೆಂದು ಹೆಸರು ಗಳಿಸಿದ್ದಾರೆ.

ರಾಷ್ಟ್ರ – ರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆ ಮೆರೆದ ಬಾಲಕ – ಬಾಲಕಿಯರಿಗೆ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.

Friday, December 16, 2022

 ಪ್ರತಿಭಾ ಕಾರಂಜಿ : ಸಿದ್ಧಗಂಗಾ ಫಲ್ಗುಣಿ ರಾಜ್ಯ ಮಟ್ಟಕ್ಕೆ ಆಯ್ಕೆ


ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ  ಫಲ್ಗುಣಿ ಜಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಂತ 3 ರಲ್ಲಿ ಕನ್ನಡ ಭಾಷಾ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ನಿರ‍್ಗಳವಾಗಿ ಭಾಷಣ ಮಾಡಿದ ಈ ಬಾಲಕಿ ಕ್ಲಸ್ಟರ್‌, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಈಗ ರಾಜ್ಯ ಮಟ್ಟದ ಸ್ರ‍್ಧೆಗೆ ರ‍್ಹಳಾಗಿದ್ದಾಳೆ. ಸುಪ್ರಿಯಾ ಮತ್ತು ವಿ. ಗಿರಿ ಯವರ ಪುತ್ರಿ ಫಲ್ಗುಣಿಗೆ ಶಾಲಾ ಆಡಳಿತ ಮಂಡಳಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

Wednesday, November 2, 2022

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ವೈಶಿಷ್ಠ್ಯ ಪೂರ್ಣ ಆಚರಣೆ



ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
ವೈಶಿಷ್ಠ್ಯ  ಪೂರ್ಣ ಆಚರಣೆ
ನ.೧
೬೭ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಸಿದ್ಧಗಂಗಾ ಶಾಲಾ-ಕಾಲೇಜಿನ ಮಕ್ಕಳು ವೈಶಿಷ್ಠö್ಯಪೂರ್ಣವಾಗಿ ಆಚರಿಸಿದರು. ಬೆಳಿಗ್ಗೆ ೦೮:೩೦ಕ್ಕೆ ಸಂಸ್ಥೆಯ ಹಿರಿಯ ಶಿಕ್ಷಕಿ ರಮಾದೇವಿ ಅವರಿಂದ ಧ್ವಜಾರೋಹಣೆ ನೆರವೇರಿತು. ನಾಡಗೀತೆ ನಂತರ ಉದಯವಾಗಲಿ ಕನ್ನಡನಾಡು, ಬಾರಿಸು ಕನ್ನಡ ಡಿಂಡಿಮ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ಗೀತೆಗಳನ್ನು ಒಟ್ಟಾಗಿ ಹಾಡಿ ಮಕ್ಕಳು ನಾಡಪ್ರೇಮ, ಭಾಷಾ ಪ್ರೇಮವನ್ನು ಸಂಗೀತದ ಮೂಲಕ ಪ್ರಸ್ತುತ ಪಡಿಸಿದರು. ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ್‌ರವರು ಮೈಸೂರು ರಾಜ್ಯ ಹೇಗೆ ಕರ್ನಾಟಕ ಎಂಬ ಹೆಸರು ಪಡೆಯಿತು ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತಾ ಕನ್ನಡ ಭಾಷೆಗೆ ವಿದೇಶಿಯರ ಕೊಡುಗೆಯನ್ನು ಸ್ಮರಿಸಿದರು. ೧೦ನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದಳು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ಸಿ. ನಿರಂಜನ್‌ರವರು ವಂದನಾರ್ಪಣೆ ಸಲ್ಲಿಸಿದರು. ಶಾಲಾ-ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮ ವೀಕ್ಷಿಸಿದರು. ಕನ್ನಡ ಬಾವುಟಗಳಿಂದ ಸಿಂಗಾರಗೊAಡ ಶಾಲಾ ಆವರಣ, ಕನ್ನಡಾಂಬೆಯ ಪೂಜಾ ಕಾರ್ಯಕ್ರಮದಿಂದಾಗಿ ಕಾರ್ಯಕ್ರಮ ಹೆಚ್ಚು ಮೆರಗು ಪಡೆಯಿತು. 



 

Thursday, September 1, 2022

ಕರಾಟೆಯಲ್ಲಿ ನಮ್ರತಾ ವಿಭೂತಿ ಸಾಧನೆ


2022 ರ ಡಾ. ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಸಿದ್ಧಗಂಗಾ ಬಾಲಕಿ ನಮ್ರತಾ U ವಿಭೂತಿ ಕಟಾ ಮತ್ತು ಕುಮ್ಟೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 28 ರಂದು ನಡೆದ ಈ ಸ್ಪರ್ಧೆಗಳನ್ನು ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿಯವರು ಆಯೋಜಿಸಿದ್ದರು. ಪದಕಗಳನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿರುವ ನಮ್ರತಾಳನ್ನು ತಾಯಿ ಪದ್ಮ ಮತ್ತು ತಂದೆ ಉಮಾಪತಿಯವರು ಹಾಗೂ ಸಿದ್ಧಗಂಗಾ ಶಾಲೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ. 



12 ಅಡಿ ಎತ್ತರದ ಸಿದ್ಧಗಂಗಾ ಪರಿಸರ ಸ್ನೇಹಿ ಗಣೇಶ ಮೂರ್ತಿ












12 ಅಡಿ ಎತ್ತರದ ಸಿದ್ಧಗಂಗಾ ಪರಿಸರ ಸ್ನೇಹಿ ಗಣೇಶ ಮೂರ್ತಿ 
ಪ್ರತಿ ವರ್ಷದಂತೆ ಈ ವರ್ಷವೂ ದಾವಣಗೆರೆಯ ಸಿದ್ಧಗಂಗೆಯ ಆವರಣದಲ್ಲಿ ಬೃಹತ್ ಗಣಪ ಸಭಾ ಮಂಟಪದಲ್ಲಿ ಕಂಗೊಳಿಸುತ್ತಿದ್ದಾನೆ. 12 ಅಡಿ ಎತ್ತರದ ಪೇಪರ್ ಗಣೇಶ ಸರ್ವಾಂಗ ಸುಂದರವಾಗಿದ್ದು ಶಿಲಾ ಮೂರ್ತಿಯಂತೆ ಕಾಣುತ್ತಿದ್ದಾನೆ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್, ರಾಜೇಶ್,ರಾಜಶೇಖರ್, ಹೀನಾ ಕೌಸರ್, ಸ್ವಾತಿ, ಪ್ರಿಯಾಂಕ, ಇವರ ಕೈ ಚಳಕದಿಂದ ಮೂಡಿದ ಈ ಗಣಪನನ್ನು ತಯಾರಿಸುವಲ್ಲಿ 9 ಮತ್ತು 10 ನೇ ತರಗತಿ ಮಕ್ಕಳು ಕೈ ಜೋಡಿಸಿದ್ದರು. ತಾವೇ ರೂಪಿಸಿದ ಗಣಪ ಎಂಬ ಹೆಮ್ಮೆ ಶಾಲಾ ಮಕ್ಕಳದು. ಪ್ರತಿಷ್ಠಾಪನೆಗೆ ಮುನ್ನ ಪ್ರಮುಖ ಬೀದಿಗಳಲ್ಲಿ ಗಣಪನ ಮೆರವಣಿಗೆ ಮಾಡಿದರು. ಮಕ್ಕಳು ಸಾಂಪ್ರದಾಯಿಕ ಉಡುಗೆ ಧರಿಸಿ ಭಕ್ತಿಗೀತೆಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಕಣ್ಮನ ಸೆಳೆಯುವಂತಿತ್ತು. ನಂದಿಕೋಲು, ಪಟಗಳು, ಬಣ್ಣ ಬಣ್ಣದ ಛತ್ರಿಗಳು ಗಣಪನ ಶೋಭೆಯನ್ನು ಇನ್ನಷ್ಟು ಹೆಚ್ಚಿಸಿತು. ಮಧ್ಯಾನ್ಹ 12 ಗಂಟೆಗೆ ಗಣೇಶನ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು. ಸಾರ್ವಜನಿಕರ ವೀಕ್ಷಣೆಗೆ ಅಪರೂಪದ ಈ ಪರಿಸರ ಸ್ನೇಹಿ ಪೇಪರ್ ಗಣಪತಿ ಸೆಪ್ಟೆಂಬರ್ 9 ರ ವರೆಗೆ ಲಭ್ಯವಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮತ್ತು  ನಿರ್ದೇಶಕ ಜಯಂತ್ ಅವರು ತಿಳಿಸಿದ್ದಾರೆ. 

Tuesday, August 30, 2022

ಸಿದ್ಧಗಂಗಾ ಸ್ಕೌಟ್-ಗೈಡ್ಸ್ ಮಕ್ಕಳಿಂದ ಪರಿಸರ ಗಣಪತಿ

 













ವಿಘ್ನನಿವಾರಕ, ವಿದ್ಯಾ ಗಣಪತಿಯ ವಿವಿಧ  ಆಕಾರ - ಗಾತ್ರದ  ಗಣಪತಿಗಳು ಸಿದ್ಧಗಂಗಾ ಅಂಗಳದಲ್ಲಿ ಇಂದು ಕಂಗೊಳಿಸಿದವು . ವಿಶೇಷವೆಂದರೆ ಈ ಎಲ್ಲಾ ಗಣಪತಿಗಳು ಪರಿಸರ ಸ್ನೇಹಿ ಗಣಪಗಳಾಗಿದ್ದವು . ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ,ಗೈಡ್ಸ್  ಮಕ್ಕಳು ಮೈದಾ ,ಅರಿಶಿನ ,ಜೇಡಿ ಮಣ್ಣು ,ಸೋಪು ,ಗೋಧಿಹಿಟ್ಟು  ಹೀಗೆ  ಸ್ಥಳೀಯ ಲಭ್ಯ ಪರಿಸರ ವಸ್ತುಗಳಿಂದ ಗಣೇಶನನ್ನು ನಿರ್ಮಿಸಿದ್ದರು . ಪುಟ್ಟ ಪುಟ್ಟ  ಕೈಗಲ್ಲಿ  ಸುಂದರ ಗಣಪಗಳು ವಿಶೇಷ  ಭೂಷಣಗಳೊಂದಿಗೆ  ಅಲಂಕೃತಗೊಂಡಿದ್ದವು .  ಎಲ್ .ಟಿ  ಶಶಿಕಲಾ ಅವರ  ನೇತೃತ್ವದಲ್ಲಿ  ಶಾಲೆಯ ಗೈಡ್ಸ್  ಶಿಕ್ಷಕರಾದ ನಿರ್ಮಲ , ಮಂಜುಳ , ದೀಪ ಎನ್ , ಸುನೀತಾ , ಸುನೀತಾಬಾಯಿ , ವೇದಾವತಿ , ವಾಹಿದಾ  ಮತ್ತು  ಸ್ಕೌಟ್ ಮಾಸ್ಟರ್ ಗಳಾದ  ಆರೋಗ್ಯಮ್ಮ ,ದುಗ್ಗಪ್ಪ ,ಮಹೇಶ್ , ಶ್ರೀನಿವಾಸ್ ,ಸಾಮ್ಯಾನಾಯ್ಕ , ಎ ಡಿ ಸಿ  ಸ್ಕೌಟ್  ಡಾ।। ಜಯಂತ್ , ಎ ಡಿ ಸಿ ಗೈಡ್ಸ್  ರೇಖಾರಾಣಿ , ಖಜಾಂಚಿ ಗಾಯತ್ರಿಯವರು ಮಕ್ಕಳಿಗೆ ಮಾರ್ಗದರ್ಶನ  ನೀಡಿ ಗಣೀಶ ಹಬ್ಬದ ಸಂಭ್ರಮ ಹಂಚಿಕೊಂಡರು .

Tuesday, August 16, 2022

75 th INDEPENDENCE DAY





 











ಸ್ವಾತಂತ್ರ ಸಂಭ್ರಮದ  75 ವರ್ಷಗಳ ಇತಿಹಾಸ  ತೆರೆದಿಟ್ಟ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು

ಕ್ಷಣಕ್ಕೊಂದು ದೃಶ್ಯ , ಗಳಿಗೆಗೊಂದು ಘಟನೆ . ವೀಕ್ಷಕರು  ಕಣ್ಣು ಮಿಟುಕಿಸಲೂ  ಇಚ್ಛೆ ಪಡದಂತೆ  ಸಹಸ್ರಾರು ಮಕ್ಕಳ ನೃತ್ಯ  ವೈಭವವನ್ನು  ಇಂದು ನಗರದ ಕ್ರೀಡಾಂಗಣದಲ್ಲಿ  ಕಣ್ತುಂಬಿಕೊಂಡರು.  ಸಿದ್ದಗಂಗಾ ಸಂಸ್ಥೆಯ ಶಾಲಾ ಕಾಲೇಜಿನ ಎರಡು ಸಾವಿರಕ್ಕೂ ಹೆಚ್ಚು  ಮಕ್ಕಳು ಅಮೃತ ಮಹೋತ್ಸವಕ್ಕೆ  " ವಂದೇ ಮಾತರಂ " ನೃತ್ಯ ರೂಪಕದ  ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದರು. 

ಕಾರ್ಗಿಲ್ ಯುದ್ಧ , ಪುಲ್ವಾಮ ಘಟನೆ, ಯೋಧರ ಹೋರಾಟದ ಮೂಲಕ ಅವರಿಗೆ ಶ್ರದ್ಧಾಂಜಲಿ  ಸಲ್ಲಿಸಿದರೆ , ಭಾರತೀಯ  ನೃತ್ಯ ಪರಂಪರೆಗಳನ್ನು  ಏಕ ಕಾಲದಲ್ಲಿ ಅನಾವರಣಗೊಳಿಸಿ  ವೈವಿಧ್ಯತೆಯಲ್ಲಿ ಏಕತೆ ಮೆರೆದರು. ಭರತನಾಟ್ಯ , ಮಣಿಪುರಿ ,ಕಥಕ್ಕಳಿ , ಪೂಜಾ ಕುಣಿತ , ನಂದಿಕೋಲು , ಜನಪದ  ನೃತ್ಯಗಳಲ್ಲಿ ಏಕ ಕಾಲದಲ್ಲಿ ಮಕ್ಕಳು ಗೀತೆಗೆ ತಕ್ಕ ಹೆಜ್ಜೆ ಹಾಕುತ್ತಾ ಇಡೀ  ಕ್ರೀಡಾಂಗಣವನ್ನು  ತ್ರಿವರ್ಣ ಧ್ವಜಮಯ  ಗೊಳಿಸಿದರು . ಪ್ರಾರಂಭದಲ್ಲಿ ವಿಜ್ಞಾನಿಗಳು  ಇಸ್ರೋ  ಸಂಸ್ಥೆಯಿಂದ  ರಾಕೆಟ್ ಉಡಾವಣೆಯನ್ನು  ಯಶಸ್ವಿಯಾಗಿ  ಮಾಡಿದರು . ನಂತರ ಇಡೀ ಭೂಮಂಡಲವನ್ನು  ವ್ಯಾಪಿಸಿದ  ಕರೋನಾ  ವಿರುದ್ಧ  ಭಾರತೀಯರು  ಹೋರಾಟ ನಡೆಸಿದ್ದು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿದು ಕರೋನಾ ಮೆಟ್ಟಿ ನಿಂತ  ದೃಶ್ಯ  ಊಹೆಗೂ ಮೀರಿದ್ದಾಗಿತ್ತು.  ವೈದ್ಯರು  ಕರೋನಾ ರೋಗಿಗಳನ್ನು  ಉಳಿಸಲು  ನಡೆಸಿದ ಹೋರಾಟ ,ಕರೋನಾ ವೈರಸ್ ಗಳು  ಸ್ವೇಚ್ಚೆ ಯಾಗಿ  ಜನ ಜಂಗುಳಿಯನ್ನು  ಕಂಗಾಲಾಗಿಸಿದ ಮನಕಲುಕುವ ದೃಶ್ಯ ಎರಡು ವರ್ಷಗಳ  ಕರೋನಾ ಆಘಾತವನ್ನು ನೆನಪಿಸುವಂತೆ  ಮಾಡಿತು . ಕ್ರೀಡಾಂಗಣ ಸ್ತಬ್ಧವಾಗಿ  ಕೇವಲ ಚಪ್ಪಾಳೆ  ಶಬ್ದ  ಮಾತ್ರ  ಕೇಳುತಿತ್ತು . ದೃಶ್ಯಕ್ಕೆ  ತಕ್ಕ ಪರಿಕರ , ಕಟೌಟ್ ಗಳು ನೃತ್ಯ ರೂಪಕದ ಶೋಭೆ ಹೆಚ್ಚಿಸಿತು . ಹಿನ್ನಲೆಯಲ್ಲಿ  ಸುಮಾರು 900  ಬಾಲಕರು ಜೈಹಿಂದ್ ,ಇಂಡಿಯಾ ,ಅಬ್ದುಲ್ ಕಲಾಂ ,ಪಿ . ಎಸ್ . ಎಲ್ . ವಿ ,ಪುಲ್ವಾಮ  ಹೀಗೆ  ಸಂದರ್ಭಕ್ಕೆ  ತಕ್ಕಂತೆ  ಇಂಗ್ಲಿಷ್  ಅಕ್ಷರ  ಜೋಡಣೆ ನಡೆಸಿ ವೀಕ್ಷಕರನ್ನು  ಬೆರಗಾಗಿಸಿದರು. ಡಾll ಜಯಂತ್ ರವರ ಪರಿಕಲ್ಪನೆಯಲ್ಲಿ  ರೂಪುಗೊಂಡ ನೃತ್ಯ ರೂಪಕಕ್ಕೆ  ಸಂಸ್ಥೆಯ  ಎಲ್ಲ  ಶಿಕ್ಷಕ - ಶಿಕ್ಷಕಿಯರು  ಸಹಕರಿಸಿ  ಯಶಸ್ವಿಗೊಳಿಸಿ ಕೊಟ್ಟಿದ್ದು  ಪಾಲಕರ ಸಂಭ್ರಮ  ಇಮ್ಮಡಿಗೊಳಿಸಿತು .  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು  ವಿಜ್ಞಾನಿ ಕಲಾಂ ಮತ್ತು ಸಾರಾಭಾಯಿ  ಅವರ ಬೃಹತ್ ಚಿತ್ರ ಮೂಡಿಸಿದ  ಮಕ್ಕಳ ಏಕಾಗ್ರತೆಗೆ  ವೀಕ್ಷಕರು ಬೆರಗಾದರು. 



 

Friday, August 12, 2022

FLAG MARCH 75th INDEPENDENCE DAY


 


75 ನೇ  ಸ್ವಾತಂತ್ರ ಸಂಭ್ರಮ 
ಸಾಗರದಂತೆ  ಹರಿದು ಬಂದ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು 

ಎತ್ತ ನೋಡಿದರೂ ತ್ರಿವರ್ಣ ಧ್ವಜಗಳು , ಸಾಗರದಂತೆ  ಹರಿದು ಬಂದ ವಿದ್ಯಾರ್ಥಿ ಸಮೂಹ . ಸೂರ್ಯ ರಶ್ಮಿಗೆ ಮಿರಮಿರನೆ ಮಿಂಚುತ್ತಿದ್ದ ಬಾವುಟಗಳು . ಮುಗಿಲು ಮುಟ್ಟಿದ ಉತ್ಸಾಹ. " ಜೈ ಭಾರತ್ ಮಾತಾಕೀ " , " ವಂದೇ ಮಾತರಂ " ಘೋಷಣೆಗಳು  ರಸ್ತೆಗಳಲ್ಲಿ ಅನುರಣಿಸಿತು . ನಾಗರೀಕರು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು . ಶಿಸ್ತಿನಿಂದ ಹೆಜ್ಜೆ ಹಾಕಿದ ಸಾವಿರಾರು ಮಕ್ಕಳು ರಾಷ್ಟ್ರಭಕ್ತಿಯನ್ನು ಆವಾಹಿಸಿಕೊಂಡಿದ್ದರು . ಬಿಸಿಲು - ಮಳೆ  ಲೆಕ್ಕಿಸದೆ  ಡಾಂಗೆ ಪಾರ್ಕ್ ರಸ್ತೆಯಿಂದ - ಶಿವಪ್ಪಯ್ಯ ಸರ್ಕಲ್ - ಜಯದೇವ ಸರ್ಕಲ್ - ಅಂಬೇಡ್ಕರ್ ಸರ್ಕಲ್ - ವಿದ್ಯಾರ್ಥಿ ಭವನ  ಸರ್ಕಲ್ ದಾಟಿ ಸಂಸ್ಥೆಯತ್ತ ಹೆಜ್ಜೆ ಹಾಕಿದ ಮಕ್ಕಳು ರಸ್ತೆಯುದ್ದಕ್ಕೂ ಸಂಚಲನ ಮೂಡಿಸಿದರು . 


ಈ ಬೃಹತ್ ಮೆರವಣಿಗೆಗೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ P. ಮುದ್ದಜ್ಜಿಯವರು ಚಾಲನೆ ನೀಡಿದರು . ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಜಿ .ಆರ್.ತಿಪ್ಪೇಶಪ್ಪ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ  ನಿರಂಜನಮೂರ್ತಿ , ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ್ , ಯುವ ಕಾಂಗ್ರೆಸ್ ನಾಯಕ  K . G . ಶಿವಕುಮಾರ್ , ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು .  ಬ್ಯಾoಡ್  ಸೆಟ್ಟಿನ ಸುಮಧುರ ನಾದಕ್ಕೆ ಮಕ್ಕಳು ಶಿಸ್ತಿನಿಂದ  ಹೆಜ್ಜೆ  ಹಾಕಿದರು . ರಾಷ್ಟ್ರಗೀತೆ  ಹಾಡುವುದರ ಮೂಲಕ ಪ್ರಾರಂಭವಾದ ಮೆರವಣಿಗೆ ರಾಷ್ಟ್ರ  ಗೀತೆಯೊಂದಿಗೆ ಮುಕ್ತಾಯಗೊಂಡಿತು . " ಆಜಾದಿ ಕೀ ಅಮೃತ್ ಮಹೋತ್ಸವ " ವನ್ನು  ಸಿದ್ದಗಂಗಾ  ವಿದ್ಯಾ  ಸಂಸ್ಥೆ  ಅರ್ಥಪೂರ್ಣವಾಗಿ  ಆಚರಿಸಿತು . ಸಂಸ್ಥೆಯ ಕಾರ್ಯದರ್ಶಿ D.S. ಹೇಮಂತ್  ಮತ್ತು  ನಿರ್ದೇಶಕ ಡಾll ಜಯಂತ್ ರವರ  ಮಾರ್ಗದರ್ಶನದಲ್ಲಿ  ನಡೆದ ಈ ಅಭೂತ ಪೂರ್ವ  ಕಾರ್ಯಕ್ರಮದಲ್ಲಿ  ಸಹಕರಿಸಿದ ಪ್ರತಿಯೊಬ್ಬರನ್ನೂ  ಸಂಸ್ಥೆಯ ಮುಖ್ಯಸ್ಥೆ  ಜಸ್ಟಿನ್  ಡಿ'ಸೌಜ  ವಂದಿಸಿದರು.