Tuesday, December 24, 2024

ಮೆದುಳನ್ನು ಸಕ್ರಿಯವಾಗಿ ತೊಡಗಿಸಿದರೆ ಎಲ್ಲಾ ಸಮಸ್ಯೆಗಳಿಂದ ಮುಕ್ತ,: ಡಾ ಸಿ ಆರ್ ಚಂದ್ರಶೇಖರ್





ಮನುಷ್ಯ ಇತರ ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಲು ಅವನ ಮೆದುಳೇ ಕಾರಣ, ಹತ್ತಾರು ಟನ್ ಭಾರವಿರುವ ಬ್ಲೂವೆಲ್, ನೂರಾರು ಟನ್ ಭಾರವಿರುವ ಆನೆಗಳ ಮೆದುಳಿಗಿಂತ ಕೇವಲ ಕೆಲವೇ ಕೇಜಿಗಳಲ್ಲಿ ತೂಗುವ ಮಾನವನ ಮೆದುಳಿನ ತೂಕ ಅವುಗಳಿಗಿಂತ ಹೆಚ್ಚು. ನಾವು ಈ ತೂಕವನ್ನು ಭಾರದಲ್ಲಿ ಲೆಕ್ಕ ಹಾಕದೆ ಮೌಲ್ಯದಿಂದ ಲೆಕ್ಕ ಹಾಕಿದಾಗ ಮನುಷ್ಯನ ವಿಕಾಸದ ಹಾದಿ ತಿಳಿಯುತ್ತದೆ ಎಂದು ಪದ್ಮಶ್ರೀ ಡಾಕ್ಟರ್ ಸಿ .ಆರ್ .ಚಂದ್ರಶೇಖರ್ ಹೇಳಿದರು, ಅವರು ಇಲ್ಲಿನ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 55ನೇ ವಾರ್ಷಿಕೋತ್ಸವದ ಅಂಗವಾಗಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಾ ಮನುಷ್ಯನ ಮನಸ್ಸು ಮತ್ತು ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದನರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ, ವಿದ್ಯಾರ್ಥಿಗಳು ಇಂದಿನ ಶೈಕ್ಷಣಿಕ ಸವಾಲುಗಳನ್ನು ಸಮಸ್ಯೆಗಳಾಗಿ ಮಾಡಿಕೊಳ್ಳದೆ ನಿರ್ಮಲ ಹಾಗೂ ಸಮಾಧಾನ ಚಿತ್ರದಿಂದ ಚಟುವಟಿಕೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಲು ಕರೆ ನೀಡಿದರು ಎರಡು ಗಂಟೆಗೂ ಹೆಚ್ಚು ಸಮಯ ಮಕ್ಕಳ ಅನೇಕ ಪ್ರಶ್ನೆಗಳಿಗೆ ಲವಲವಿಕೆಯಿಂದ ಉತ್ತರಿಸಿದ ಮಾನಸಿಕ ಆರೋಗ್ಯ ತಜ್ಞ ಡಾಕ್ಟರ್ ಸಿಆರ್ ಚಂದ್ರಶೇಖರ್ ಸಂಜೆ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಿದ್ಧಗಂಗಾ@55 - 4 ದಿನಗಳ ಸಂಭ್ರಮ ಸನ್ಮಾನ-ಪುರಸ್ಕಾರ, ಬಹುಮಾನಗಳ ಮಹಾಪೂರ


ನಗರದ ಪ್ರತಿಷ್ಠಿತ ಸಿದ್ಧಗಂಗಾ ವಿದ್ಯಾಸಂಸ್ಥೆ ತನ್ನ 55ನೇ ವಾರ್ಷಿಕ ಸಂಭ್ರಮಾಚರಣೆಯನ್ನು ಇದೇ ತಿಂಗಳ 25,26,27,28 ನಾಲ್ಕು ದಿನಗಳಿಗೆ ಹಮ್ಮಿಕೊಂಡಿದೆ. ಡಿಸೆಂಬರ್‌ 25ರ ಕಾರ್ಯಕ್ರಮವನ್ನು ಸಂಜೆ 5:30 ಕ್ಕೆ ಪ್ರಖ್ಯಾತ ಮನೋವೈದ್ಯರಾದ ಪದ್ಮಶ್ರೀ ಡಾ|| ಸಿ.ಆರ್‌ ಚಂದ್ರಶೇಖರ್‌ರವರು ಉದ್ಘಾಟಿಸುವರು. ಅಂದು ರಾಜ್ಯಮಟ್ಟದ ಪ್ರತಿಷ್ಠಿತ ಎಂ.ಎಸ್‌.ಎಸ್‌ ಕ್ವಿಜ್‌ ವಿಜೇತರಿಗೆ ಬಹುಮಾನ ವಿತರಣೆ,‌2014ನೇ ಸಾಲಿನ 10 ನೇ ತರಗತಿ ಸ್ಟೇಟ್‌ ಮತ್ತು ಸಿ ಬಿ ಎಸ್‌ ಇ ಬೋರ್ಡ್ ಪರೀಕ್ಷೆಯಲ್ಲಿ 90ಕ್ಕಿಂತ ಹೆಚ್ಚು ಅಂಕಪಡೆದವರಿಗೆ “ಸಿದ್ಧಗಂಗಾ ಪ್ರತಿಭಾ ಪುರಸ್ಕಾರ” ಮತ್ತು ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಬಾಪೂಜಿ ವಿದ್ಯಾಸಂಸ್ಥೆಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ನಿವೃತ್ತ ನಿರ್ದೇಶಕರು, ಶಿಕ್ಷಣ ಸಂತರೆಂದೇ ಹೆಸರಾದ ಕೆ. ಇಮಾಂ ಸರ್‌ರವರಿಗೆ ಸಿದ್ಧಗಂಗಾ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿಎಂ.ಎಸ್‌ ಶಿವಣ್ಣನವರ ಸ್ಮರಣಾರ್ಥ ಕೊಡಲಾಗುವ “ಪ್ರತಿಷ್ಠಿತ ಎಂ.ಎಸ್.‌ಎಸ್‌ ಸ್ಮಾರಕ ಪ್ರಶಸ್ತಿ” ಪ್ರದಾನ ಮಾಡಲಾಗುವುದು. ಸಿದ್ಧಗಂಗಾ ಸಂಸ್ಥೆಯ “ಎಂ.ಎಸ್.‌ಎಸ್‌ ಕ್ರೀಡಾ ರತ್ನ” ಪ್ರಶಸ್ತಿಯನ್ನು ಅಭಿಷೇಕ್‌ ಎಂ.ಕೆ ಮತ್ತು “ಜಿಲ್ಲಾ ಪ್ರೌಢಶಾಲೆಗಳ ಉತ್ತಮ ವಿದ್ಯಾರ್ಥಿನಿ” ಪ್ರಶಸ್ತಿಯನ್ನು ಯಶಸ್ವಿನಿ ಕೆ.ಪಿ ಪಡೆಯುವರು. ಉತ್ತಮ ಬಾಲನಟಿ ಪ್ರಶಸ್ತಿ ಪಡೆದ 5 ನೇ ತರಗತಿ ವಿದ್ಯಾರ್ಥಿನಿ, ಗೌಳಿ ಮತ್ತು ಬಘೀರ ಖ್ಯಾತಿಯ “ನಮನ”ಗೆ ಸನ್ಮಾನವಿದೆ ಜೊತೆಗೆ ವೈವಿಧ್ಯಮಯ, ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುವುದು.

ಡಿಸೆಂಬರ್‌ 26 ರಂದು ದ್ವಿತೀಯ ದಿನದ ಕಾರ್ಯಕ್ರಮವನ್ನು ಉಡುಪಿಯ ಡಾ ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನ: ಶಾಸ್ತ್ರಜ್ಞರಾದ ಹಾಗೂ ಪ್ರಸಿದ್ಧ ವೈದ್ಯ ಲೇಖಕರಾದ ಡಾ|| ವಿರೂಪಾಕ್ಷ ದೇವರಮನೆಯವರು ಉದ್ಘಾಟಿಸುವರು. 2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 400 ವಿದ್ಯಾರ್ಥಿಗಳಲ್ಲಿ 132 ವಿದ್ಯಾರ್ಥಿಗಳನ್ನು “ಸಿದ್ಧಗಂಗಾ ಪ್ರತಿಭಾ ಪುರಸ್ಕಾರ” ನೀಡಿ ಸನ್ಮಾನಿಸಲಾಗುವುದು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ತರಗತಿಗಳ ಮಕ್ಕಳು ಪ್ರದರ್ಶಿಸುವರು.

ಮೂರನೇ ದಿನದ ಕಾರ್ಯಕ್ರಮ ಡಿಸೆಂಬರ್‌ 27ರಂದು ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಸುರೇಶ್‌ ಬಿ. ಇಟ್ನಾಳ್‌ ಐ.ಎ.ಎಸ್‌ ಇವರು ಉದ್ಘಾಟಿಸುವರು. ದ್ವಿತೀಯ ಪಿಯುಸಿಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುತ್ತದೆ. ಮಕ್ಕಳಿಂದ ಸುಂದರ ನೃತ್ಯಗಳ ಪ್ರದರ್ಶನವಿರುತ್ತದೆ. ಡಿಸೆಂಬರ್‌ 28ರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಸಂಜೆ 5.30 ಕ್ಕೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕರೂ ಎಂ.ಎಸ್.‌ಎಸ್‌ ಸೂಪರ್‌ ಬ್ರೈನ್‌ ಸೆಂಟರ್‌ನ ಅಧ್ಯಕ್ಷರೂ ಆದ ಡಾ|| ಡಿ. ಎಸ್‌ ಜಯಂತ್ ರವರು ಉದ್ಘಾಟಿಸುವರು. ದ್ವಿತೀಯ ಪಿಯುಸಿಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಳ್ಳುತ್ತವೆ. ವಾರ್ಷಿಕ ಸಂಭ್ರಮದ ಹಿನ್ನಲೆಯಲ್ಲಿ ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ. ಭರತನಾಟ್ಯ, ಜನಪದ, ದೇಶಭಕ್ತಿ, ಪರಿಸರ, ಪ್ರಕೃತಿ, ಭಕ್ತಿಗೀತೆ, ಭಾವಗೀತೆ,ಸಾಮಾಜಿಕ ಜಾಗೃತಿ, ಯೋಗ ಹೀಗೆ ಹಲವಾರು ವಿಷಯಗಳನ್ನೊಳಗೊಂಡಂತೆ ನಾಲ್ಕು ದಿನಗಳಲ್ಲಿ ನೂರಕ್ಕೂ ಹೆಚ್ಚುಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧಗೊಂಡಿದ್ದಾರೆ. 

ಪಾಲಕರಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ತಮ್ಮೆಲ್ಲರಿಗೆ ಆತ್ಮೀಯ ಸ್ವಾಗತ ಕೋರುತ್ತಿದ್ದಾರೆ.ಪ್ರತಿದಿನದ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಬೋಧಕ ವರ್ಗದವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿ ಸೌಜ, ಕಾರ್ಯದರ್ಶಿ D S ಹೇಮಂತ್‌, ನಿರ್ದೇಶಕ ಡಾ|| ಜಯಂತ್‌,ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ, ಸಿ ಬಿ ಎಸ್ ಇ ಪ್ರಾಚಾರ್ಯ ಗಾಯತ್ರಿ ಚಿಮ್ಮಡ್‌, ಪ್ರೌಢಶಾಲೆಯ ಮುಖ್ಯಶಿಕ್ಷಕಿ K S ರೇಖಾ ರಾಣಿ, ಮತ್ತಿತರರು ಹಾಜರಿರುತ್ತಾರೆ.






Friday, November 22, 2024

ವರ್ಷದ ಉತ್ತಮ ಪ್ರೌಢಶಾಲಾ ವಿದ್ಯಾರ್ಥಿಯಾಗಿ ಸಿದ್ಧಗಂಗಾ ಶಾಲೆಯ ಯಶಸ್ವಿನಿ ಕೆ.ಪಿ ಆಯ್ಕೆ

ದಾವಣಗೆರೆ. ನ.22

ದಾವಣಗೆರೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವನಿತಾ ಸಮಾಜದಲ್ಲಿ ಏರ್ಪಡಿಸಲಾಗಿದ್ದ ವರ್ಷದ ಉತ್ತಮ ಪ್ರೌಢಶಾಲಾ ವಿದ್ಯಾರ್ಥಿ ಆಯ್ಕೆ ಸ್ಪರ್ಧೆಯಲ್ಲಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಆಯ್ಕೆಯಾಗಿದ್ದಾಳೆ. ನವೆಂಬರ್ 24 ರ ಭಾನುವಾರ ಸಂಜೆ 5 ಗಂಟೆಗೆ ವನಿತಾ ಸಮಾಜದಲ್ಲಿ ಯಶಸ್ವಿನಿ ಕೆ.ಪಿ ಯ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.ಸಿದ್ಧಗಂಗಾ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಪ್ರತಿಭಾವಂತೆ, ಪಠ್ಯಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಕಿ, ಹಲವಾರು ಬಹುಮಾನಗಳ ವಿಜೇತೆ, ಇಂಡಿಯನ್‌ ಟ್ಯಾಲೆಂಟ್‌ ಪರೀಕ್ಷೆಯಲ್ಲಿ RANK , ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದ ವಿಜ್ಞಾನ ವಿಚಾರ ಸಂಕಿರಣದಲ್ಲಿ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ಶಾಲಾಮಟ್ಟದಲ್ಲಿ ನಡೆಯುವ ಅನೇಕ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಸಮರ್ಥನಾಯಕತ್ವ ಗುಣ ಹೊಂದಿರುವ ಈ ಬಾಲಕಿ ವಿನಯ ಸಂಪನ್ನೆ ಎಂದು ಶಾಲಾ ಮುಖ್ಯಶಿಕ್ಷಕಿ ರೇಖಾರಾಣಿಯವರು ಶ್ಲಾಘಿಸಿದ್ದಾರೆ. 10 ನೇ ತರಗತಿಯ ಶಿಕ್ಷಕ ವೃಂದ ಮತ್ತು ಸಹಪಾಠಿಗಳು ಯಶಸ್ವಿನಿಯನ್ನು ಅಭಿನಂದಿಸಿದ್ದಾರೆ. ಯಶಸ್ವಿನಿಯ ತಂದೆ ಪಾಲಾಕ್ಷಪ್ಪ ಮತ್ತು ತಾಯಿ ಜ್ಯೋತಿಕಲಾ ಅವರು ಮಗಳ ಆಯ್ಕೆಯನ್ನು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.‍


Friday, November 1, 2024

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ರಾಜ್ಯೋತ್ಸವ

ದಾವಣಗೆರೆ ನ. 1.

ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ – ಕಾಲೇಜಿನ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು 69 ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಹಿರಿಯ ಶಿಕ್ಷಕಿ ವಸಂತ ಆರ್.‌ ರವರು ಧ್ವಜಾರೋಹಣ ನೆರವೇರಿಸಿದರು. ಸಂಗೀತ ಶಿಕ್ಷಕರಾದ ಮಂಗಳ ಮತ್ತು ರುದ್ರಾಕ್ಷಿಬಾಯಿ ನೇತೃತ್ವದಲ್ಲಿ ಕನ್ನಡ ಭಾವಗೀತೆಗಳನ್ನು ಮಕ್ಕಳು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಕರ್ನಾಟಕ ಏಕೀಕರಣದ ಬಗ್ಗೆ, ಕನ್ನಡ ನಾಡು, ಶ್ರೀಮಂತಿಕೆ, ಭಾಷಾ ಪ್ರೌಢಿಮೆ, ಸುಂದರ ಲಿಪಿಯ ಬಗ್ಗೆ ಮಕ್ಕಳು ಭಾಷಣ ಮಾಡಿದರು. ಜಾನಪದ ಪ್ರಕಾರಗಳಾದ ಡೊಳ್ಳು, ಕಂಸಾಳೆ, ನಂದಿಕೋಲುಗಳ ಪ್ರಾತ್ಯಕ್ಷಿಕೆ ನೀಡಿ ಈ ಕಲೆಗಳ ಭವ್ಯತೆ, ಆಚರಣೆ, ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿಯರಾದ ಉಷಾರಾಣಿ ಎಸ್‌ ಎಲ್, ವಿಜಯಶ್ರೀ‌ ಬಿ ಸಿ, ವಸಂತ ಆರ್. ರವರು ಬರೆದಿದ್ದ ಕವನಗಳನ್ನು ಮಕ್ಕಳು ವಾಚಿಸಿದರು. ಆಕರ್ಷಕ ರಂಗೋಲಿ ಚಿತ್ತಾರದ ನಡುವೆ ಕರ್ನಾಟಕ ಮಾತೆಯ ಭಾವ ಚಿತ್ರ ಮತ್ತು ಕರ್ನಾಟಕ ಭೂಪಟ ಸುಂದರವಾಗಿ ಕಂಗೊಳಿಸುತ್ತಿತ್ತು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಡಿ ಎಸ್‌ ಹೇಮಂತ್‌, ನಿರ್ದೇಶಕರಾದ ಡಾ|| ಜಯಂತ್‌‌ ಡಿ. ಎಸ್., ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ ಕೆ. ಎಸ್.‌‌, ಸಿ ಬಿ ಎಸ್‌ ಇ ಶಾಲೆಯ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್‌ ಇವರು ಉಪಸ್ಥಿತರಿದ್ದರು. ಸ್ವಾಗತ, ಪ್ರಾಸ್ತಾವಿಕ ಮತ್ತು ವಂದನಾರ್ಪಣೆಯನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ರವರು ನಡೆಸಿಕೊಟ್ಟರು. ಶಿಕ್ಷಕಿ ಆಶಾ ಎಸ್.‌ ರವರು ಕಾರ್ಯಕ್ರಮ ನಿರೂಪಿಸಿದರು.



Monday, October 21, 2024

“ ಭಾರತ್‌ ಕೋ ಜಾನೋ “ ರಾಜ್ಯಮಟ್ಟದ ಕ್ವಿಜ್‌ ಸ್ಪರ್ಧೆ ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ

ದಾವಣಗೆರೆ ಅ .21

ಭಾರತ್‌ ವಿಕಾಸ್‌ ಪರಿಷದ್ ನಿಂದ ಭಾನುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಭಾರತ್‌ ಕೋ ಜಾನೋ ಕ್ವಿಜ್ ಸ್ಪರ್ಧೆಯಲ್ಲಿ ದಾವಣಗೆರೆ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ವಿಭಾಗೀಯ ಮಟ್ಟಕ್ಕೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.ಆಗಸ್ಟ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾರತ್‌ ಕೋ ಜಾನೋ ಸೀನಿಯರ್‌ ವಿಭಾಗದ ಕ್ವಿಜ್ನಲ್ಲಿ ಆಯ್ಕೆಯಾದ ಸಿದ್ಧಗಂಗಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಜಯ್‌ ಕುಮಾರ್‌ ಆರ್‌ ಮತ್ತು ವಿದ್ಯಾರ್ಥಿನಿ ಭೂಮಿಕಾ ಇಟಗಿ ಇವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಪಾರಿತೋಷಕಮತ್ತು 3000 ರೂ. ನಗದು ಬಹುಮಾನ ಪಡೆದಿದ್ದರು. ಇದೀಗ ರಾಜ್ಯ ಮಟ್ಟದಲ್ಲೂ ಸ್ಪರ್ಧಿಸಿ ಪ್ರಥಮ ಬಹುಮಾನತಮ್ಮದಾಗಿಸಿಕೊಂಡಿದ್ದಾರೆ.ಅಜಯ್‌ ಕುಮಾರ್ ಮತ್ತು ಭೂಮಿಕಾರವರನ್ನು ಸಿದ್ಧಗಂಗಾ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.


Sunday, September 15, 2024

ಜಿಲ್ಲಾಡಳಿತದ ಸಹಯೋಗದಲ್ಲಿ ಸಿದ್ಧಗಂಗಾ ಶಾಲೆ ಮಕ್ಕಳಿಂದ ಐತಿಹಾಸಿಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

 

















ದಾವಣಗೆರೆ. ಸೆ.15
ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ರಚಿಸಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ದಾವಣಗೆರೆ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ , ಶಿಕ್ಷಣ ಮತ್ತಿತರ ಇಲಾಖೆಗಳು , ಸಾರ್ವಜನಿಕರು,ಸಂಘ -  ಸಂಸ್ಥೆಗಳು ಜಿಲ್ಲೆಯ ಹರಿಹರ ನಗರ ಗಾಂಧಿ ಮೈದಾನದಲ್ಲಿ ಈ ಆಚರಣೆಯನ್ನು ವಿನೂತನ ಶೈಲಿಯಲ್ಲಿ ಆಚರಿಸಿದರು.

ದಾವಣಗೆರೆ ನಗರದ ಸಿದ್ಧಗಂಗಾ ಶಾಲೆಯ ಸುಮಾರು 1250 ಮಕ್ಕಳು ಸಂವಿಧಾನ ಪೀಠಿಕೆಯ ಪ್ರಮುಖ ಅಂಶಗಳಾದ ಡೆಮಾಕ್ರಸಿ, ಸೋಶಿಯಲಿಸ್ಟಿಕ್, ಸೆಕ್ಯುಲರ್, ಡೆಮಾಕ್ರಟಿಕ್, ರಿಪಬ್ಲಿಕ್, ಜಸ್ಟಿಸ್, ಲಿಬರ್ಟಿ, ಈಕ್ವಾಲಿಟಿ, ಫೆಟರ್ನಿಟಿ ಪದಗಳನ್ನು ಇಂಗ್ಲಿಷ್ ಅಕ್ಷರದಲ್ಲಿ ಮೂಡಿಸಿ ಎಲ್ಲರನ್ನು ಚಕಿತಗೊಳಿಸಿದರು.ಮಕ್ಕಳು ಪ್ರಜಾಪ್ರಭುತ್ವದ ಮಹತ್ವ ಪ್ರದರ್ಶಿಸುವ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯ ಶಪಥವನ್ನು ಹರಿಹರದ ಶಾಸಕರಾದ ಬಿ. ಪಿ ಹರೀಶ್ ರವರು ಭೋದಿಸಿದರು. ದಾವಣಗೆರೆ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಪ್ರಜಾಪ್ರಭುತ್ವದ ಮಹತ್ವ ವಿವರಿಸಿ ಎಲ್ಲರ ಸಹಭಾಗಿತ್ವಕ್ಕೆ ವಂದಿಸಿದರು.ಅಲ್ಲದೆ ತಾವು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಸಂಭ್ರಮಿಸಿದರು. ಸಸಿ ನೆಟ್ಟು ನೀರೆರೆದು ದಿನದ ಸ್ಮರಣೆಯನ್ನು ಶಾಶ್ವತಗೊಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್. ಬಿ . ಇಟ್ನಾಳ್ ರವರು ತಮ್ಮ ಭಾಷಣದಲ್ಲಿ ವಿನೂತನ ಆಚರಣೆಯನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಕಾರ್ಯಕ್ರಮ ಮುಗಿದ ನಂತರ ಶಾಲೆಯ ಆವರಣದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Saturday, September 7, 2024

ಸಿದ್ಧಗಂಗಾ ವಿದ್ಯಾಸಂಸ್ಥೆ ಯಲ್ಲಿ ಪರಿಸರ ಸ್ನೇಹಿ 12 ಅಡಿಯ ಪೇಪರ್ ಗಣೇಶ


ದಾವಣಗೆರೆ ಸೆ.7

ಬಾಂಧವ್ಯ ಬೆಸೆಯುವ ಗಣೇಶ ಚತುರ್ಥಿಯು, ಭಕ್ತಾದಿಗಳು ವಿವಿಧ ಆಕಾರದ ಗಣಪಗಳನ್ನು ಭಕ್ತಿಯಿಂದ ಬರಮಾಡಿಕೊಂಡು ಪೂಜಿಸುವ ಭಾವೈಕ್ಯತೆ ಮೆರೆಯುವ ಹಬ್ಬವಾಗಿದೆ.

ನಗರದ ಪ್ರತಿಷ್ಠಿತ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಪರಿಸರ ಸ್ನೇಹಿ 12 ಅಡಿ ಎತ್ತರದ ಪೇಪರ್ ಗಣೇಶನ ಭವ್ಯ ಆಕೃತಿ ಎಲ್ಲರ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿಗಳ ಸಹಾಯದಿಂದ ಶಾಲೆಯ ಚಿತ್ರಕಲಾ ಶಿಕ್ಷಕರಾದ ಪ್ರಶಾಂತ್ ಕುಮಾರ್, ಸ್ವಾತಿ, ಹೀನ ಕೌಸರ್, ಮುಜಸ್ಸಿಂ, ಸಹನಾ ಹಾಗೂ ಶಾಲಾ ಮಕ್ಕಳ ಕೈ ಚಳಕದಲ್ಲಿ ಮೂಡಿಬಂದಿರುವ ಈ ಗಣಪನನ್ನು ಸಂಪೂರ್ಣವಾಗಿ ಕಾಗದ, ಮೈದಾ ಅಂಟು ಮತ್ತು ಇದ್ದಿಲಿನ ಪುಡಿಯಿಂದ ನಿರ್ಮಿಸಲಾಗಿದೆ. 12 ಅಡಿ ಎತ್ತರದ ಗಣಪ ಕೇವಲ 20kg ತೂಗುತ್ತಿದ್ದು ,4 ಮಕ್ಕಳು ಸುಲಭವಾಗಿ ಎತ್ತಿ ಇಳಿಸಬಹುದಾಗಿದೆ.

ಗಣಪನನ್ನು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಗರದ ಗಾಂಧಿ ಸರ್ಕಲ್ಲಿಗೆ ಕರೆದೊಯ್ದು ಅಲ್ಲಿಂದ ಸುಂದರವಾದ ರಥದಲ್ಲಿ ಕೂರಿಸಿ ಅಶೋಕ ರಸ್ತೆ, ಜಯದೇವ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿ ಭವನ ಸರ್ಕಲ್ ಮೂಲಕ ತಂದು ಶಾಲೆಯ ಸುಂದರ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. 
ಸಾಂಪ್ರದಾಯಿಕ ಉಡುಗೆ ತೊಟ್ಟ ಬಾಲಕಿಯರು ಮೆರವಣಿಗೆಯುದ್ದಕ್ಕೂ ಗಣಪನ ಭಕ್ತಿ ಪ್ರಧಾನ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ನಡುನಡುವೆ ಘೋಷಣೆ ಕೂಗಿದರು.
ಪಂಚೆ ಷರ್ಟ್ ಧರಿಸಿದ ಬಾಲಕರು ರಥ ಎಳೆಯುತ್ತಾ ಟ್ರಾಫಿಕ್ ಸಮಸ್ಯೆಯಾಗದಂತೆ ಜಾಗರೂಕತೆಯಿಂದ ವರ್ತಿಸಿದ್ದು ಸಾರ್ವಜನಿ ಕರ ಮೆಚ್ಚುಗೆಗೆ ಪಾತ್ರವಾಯಿತು.
ದಾರಿಯುದ್ದಕ್ಕೂ ಸಾರ್ವಜನಿಕರು ಈ ಬೃಹತ್ ಗಣಪತಿಗೆ ಕೈ ಮುಗಿದು ಭಕ್ತಿ ವ್ಯಕ್ತಪಡಿಸಿದರು.
ಮೆರವಣಿಗೆಯ ನೇತೃತ್ವ ವಹಿಸಿದ ಸಂಸ್ಥೆಯ ನಿರ್ದೇಶಕರಾದ ಡಾ. ಜಯಂತ್ ಹಾಗೂ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದ ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ರವರು ಪೂರ್ಣ ಕಾರ್ಯಕ್ರಮವನ್ನು ಭಕ್ತಿಯಿಂದ ನಡೆಸಿಕೊಟ್ಟರು.
ಅನಂತ ಚತುರ್ದಶಿಯಂದು ವಿಸರ್ಜಿತವಾಗುವ ಈ ವಿಶಿಷ್ಠ ಬೃಹತ್ ಗಣಪತಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.ಭಕ್ತಾದಿಗಳು ಬಂದು ಗಣೇಶನ ದರ್ಶನ ಪಡೆಯಬಹುದು ಎಂದು ಸಂಸ್ಥೆಯ ಮುಖ್ಯಸ್ಥೆ ಡಾ ಜಸ್ಟಿನ್ ಡಿ ಸೌಜ ರವರು ತಿಳಿಸಿದರು.






Sunday, April 14, 2024

MSS QUIZ RESULT -2024




MSS QUIZ 2024 RESULTS ANNOUNCED

Click this link to see you result - https://www.siddaganga.com/mss/find-result.php

Enter your Register number and your date of birth to see your result , 




watch this video to see 2 PU Result (2023-24) of Siddaganga PU College