ದಾವಣಗೆರೆ. ಸೆ.15
ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ರಚಿಸಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ದಾವಣಗೆರೆ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ , ಶಿಕ್ಷಣ ಮತ್ತಿತರ ಇಲಾಖೆಗಳು , ಸಾರ್ವಜನಿಕರು,ಸಂಘ - ಸಂಸ್ಥೆಗಳು ಜಿಲ್ಲೆಯ ಹರಿಹರ ನಗರ ಗಾಂಧಿ ಮೈದಾನದಲ್ಲಿ ಈ ಆಚರಣೆಯನ್ನು ವಿನೂತನ ಶೈಲಿಯಲ್ಲಿ ಆಚರಿಸಿದರು.
ದಾವಣಗೆರೆ ನಗರದ ಸಿದ್ಧಗಂಗಾ ಶಾಲೆಯ ಸುಮಾರು 1250 ಮಕ್ಕಳು ಸಂವಿಧಾನ ಪೀಠಿಕೆಯ ಪ್ರಮುಖ ಅಂಶಗಳಾದ ಡೆಮಾಕ್ರಸಿ, ಸೋಶಿಯಲಿಸ್ಟಿಕ್, ಸೆಕ್ಯುಲರ್, ಡೆಮಾಕ್ರಟಿಕ್, ರಿಪಬ್ಲಿಕ್, ಜಸ್ಟಿಸ್, ಲಿಬರ್ಟಿ, ಈಕ್ವಾಲಿಟಿ, ಫೆಟರ್ನಿಟಿ ಪದಗಳನ್ನು ಇಂಗ್ಲಿಷ್ ಅಕ್ಷರದಲ್ಲಿ ಮೂಡಿಸಿ ಎಲ್ಲರನ್ನು ಚಕಿತಗೊಳಿಸಿದರು.ಮಕ್ಕಳು ಪ್ರಜಾಪ್ರಭುತ್ವದ ಮಹತ್ವ ಪ್ರದರ್ಶಿಸುವ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯ ಶಪಥವನ್ನು ಹರಿಹರದ ಶಾಸಕರಾದ ಬಿ. ಪಿ ಹರೀಶ್ ರವರು ಭೋದಿಸಿದರು. ದಾವಣಗೆರೆ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಪ್ರಜಾಪ್ರಭುತ್ವದ ಮಹತ್ವ ವಿವರಿಸಿ ಎಲ್ಲರ ಸಹಭಾಗಿತ್ವಕ್ಕೆ ವಂದಿಸಿದರು.ಅಲ್ಲದೆ ತಾವು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಸಂಭ್ರಮಿಸಿದರು. ಸಸಿ ನೆಟ್ಟು ನೀರೆರೆದು ದಿನದ ಸ್ಮರಣೆಯನ್ನು ಶಾಶ್ವತಗೊಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್. ಬಿ . ಇಟ್ನಾಳ್ ರವರು ತಮ್ಮ ಭಾಷಣದಲ್ಲಿ ವಿನೂತನ ಆಚರಣೆಯನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಕಾರ್ಯಕ್ರಮ ಮುಗಿದ ನಂತರ ಶಾಲೆಯ ಆವರಣದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
No comments:
Post a Comment