2025-26 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ಕಾಲೇಜುಗಳಲ್ಲಿ ಒಂದಾದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಮಕ್ಕಳು ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ದಾವಣಗೆರೆ ನಗರದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಕ್ರೀಡಾ ಕೂಟದಲ್ಲಿ ಗಿರೀಶ್ ಆರ್ ನೇಸರ್ಗಿ ಎಂಬ ವಿದ್ಯಾರ್ಥಿ ಜಮ್ಮು- ಕಾಶ್ಮೀರದಲ್ಲಿ ನೆಡೆಯುವ ರಾಷ್ಟ್ರಮಟ್ಟದ ಫುಟ್ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ.
ಈ ಕ್ರೀಡಾಪಟುಗಳನ್ನು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ. ಜಸ್ಟಿನ್ ಡಿ”ಸೌಜ, ನಿರ್ದೇಶಕರಾದ ಡಾ. ಜಯಂತ್, ಕಾರ್ಯದರ್ಶಿಗಳಾದ ಹೇಮಂತ್ ಡಿ.ಎಸ್., ಪ್ರಾಂಶುಪಾಲರಾದ ವಾಣಿಶ್ರೀ ಹಾಗೂ ಉಪನ್ಯಾಸಕ ವೃಂದದವರು, ದೈಹಿಕ ಶಿಕ್ಷಣ ಉಪನ್ಯಾಸಕರಾದ ಲಿಂಗರಾಜ್ ಹೆಚ್, ರಘು ಹೆಚ್.ಎಂ., ಶ್ರೀನಿವಾಸ್ ಹಾಗು ಸುನೀತಾ ಇವರ ತರಬೇತಿಯಲ್ಲಿ ಮಕ್ಕಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ.
12 ಅಡಿ ಎತ್ತರದ ಭವ್ಯ ಗಣಪತಿ ಮಕ್ಕಳು ಎಳೆಯುತ್ತಿದ್ದ ರಥದ ಮೇಲೆ ಗಂಭೀರವದನವಾಗಿ ವಿರಾಜಮಾನನಾಗಿದ್ದನು. ಶಾಲೆಯ ಮಕ್ಕಳು ವಿವಿಧ ವೇಷ ಭೂಷಣಗಳಲ್ಲಿ ಆಗಮಿಸಿದ್ದರು. ತಿರುಪತಿ ವೆಂಕಟೇಶ, ಧನಲಕ್ಷ್ಮಿ, ಮಧುರೆ ಮೀನಾಕ್ಷಿ, ಚಾಮುಂಡೇಶ್ವರಿ, ಗಣಪತಿ, ಶಿವಾಜಿ, ರಾಮ, ಸೀತೆ, ಲಕ್ಷ್ಮಣ, ಹನುಮಂತ, ಪರಶುರಾಮ, ರಾಧಾಕೃಷ್ಣ ಹೀಗೆ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳು ಪೌರಾಣಿಕ ಪಾತ್ರದಲ್ಲಿ ಕಣ್ಮನ ಸೆಳೆಯುವಂತಿದ್ದರು. ಬೆಳಿಗ್ಗೆ 9 ಗಂಟೆಗೆ ಶಾಲೆಯಿಂದ ಪರಿಸರ ಸ್ನೇಹಿ ಪೇಪರ್ ಗಣಪತಿಯನ್ನು ಗಾಂಧಿ ಸರ್ಕಲ್ಗೆ ತಂದರು. ಅಲ್ಲಿಂದ ನಂದಿಕೋಲು, ಡೊಳ್ಳು, ವೀರಗಾಸೆ, ಪಟಗಳನ್ನು ಹಿಡಿದ ಮಕ್ಕಳು ಆಗಮಿಸಿ ಮೆರವಣಿಗೆಗೆ ಸಿದ್ಧರಾದರು. ಜೊತೆಗೆ ಸಾವಿರಕ್ಕೂ ಹೆಚ್ಚು ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಶಿಸ್ತುಬದ್ಧವಾಗಿ ಮೆರವಣಿಗೆಯೊಡನೆ ಹೆಜ್ಜೆ ಹಾಕಿದರು.
ಶಾಲೆಯ ವಾದ್ಯವೃಂದದವರು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ನಡೆದರು. ನಡುನಡುವೆ ಮಕ್ಕಳ ಉದ್ಘೋಷ ದಾರಿಹೋಕರ ಗಮನ ಸೆಳೆಯಿತು. ಕ್ಷಣಕಾಲ ನಿಂತು ಗಣಪತಿಗೆ ಕೈ ಮುಗಿಯುತ್ತಿದ್ದರು. ಮೆರವಣಿಗೆ ಗಾಂಧಿ ಸರ್ಕಲ್ನಿಂದ ಜಯದೇವ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕವಾಗಿ ಸಿದ್ಧಗಂಗಾ ಶಾಲೆಯ ಆವರಣ ತಲುಪಿತು. ಬೃಹತ್ ಮೆರವಣಿಗೆ ಭಕ್ತಿಪೂರ್ವಕ ವಾತಾವರಣ ಸೃಷ್ಠಿಸಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸಿದ್ಧಗಂಗಾ ಸಂಸ್ಥೆಯ ಮಕ್ಕಳೇ ತಯಾರಿಸಿದ ಈ ಪೇಪರ್ ಗಣಪತಿ ನೋಡಿ ದಿಗ್ಭೃಾಂತರಾದರು. ಕೆಲವರು ಸ್ಪರ್ಶಿಸಿ ಪುನೀತರಾದರು. ನಾಲ್ಕು ಮಕ್ಕಳು ಎತ್ತಬಹುದಾದ 12 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ ಸಾರ್ವಜನಿಕ ವೀಕ್ಷಣೆಗೆ 10 ದಿನಗಳ ಕಾಲ ಲಭ್ಯವಿದೆ. 11ನೇ ದಿನ ವಿಸರ್ಜಿಸಲಾಗುವುದು.
ಪ್ರತಿವರ್ಷ ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಸಾಂಪ್ರದಾಯಿಕವಾಗಿ ಆಚರಿಸುವ ಮಕ್ಕಳಲ್ಲಿ ಭಕ್ತಿಭಾವ ಮೂಡಿಸುವುದರ ಜೊತೆಗೆ ಶಾಲಾ ಮಕ್ಕಳೇ ರೂಪಿಸುವ ಗಣಪತಿ ಪೂಜೆಗೆ ಹಲವಾರು ಪಾಲಕರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕ ಡಾ|| ಜಯಂತ್ ಅವರ ಪರಿಕಲ್ಪನೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಶಾಲೆಯ ಚಿತ್ರಕಲಾ ಶಿಕ್ಷಕರ ನೆರವಿನಿಂದ ಸುಂದರ ರೂಪ ತಾಳುವ ಪೇಪರ್ ಗಣಪತಿಗೆ ಪ್ರತಿನಿತ್ಯ ಬೆಳಿಗ್ಗೆ ಶಾಲಾ ಮಕ್ಕಳು ಪೂಜಾ ಕಾರ್ಯದ ನೇತೃತ್ವ ವಹಿಸುವರು. ಕಾರ್ಯದರ್ಶಿ ಹೇಮಂತ್ ಹಾಗೂ ದೈಹಿಕ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರತಿ ತರಗತಿಯ ಶಿಕ್ಷಕರು ಈ ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಭಾವೈಕ್ಯತೆ, ಭಾತೃತ್ವ ಬೆಳೆಸುವಲ್ಲಿ ಮಹಾಗಣಪತಿಯ ಪಾತ್ರ ಹಿರಿದಾಗಿದೆ. ಇಡೀ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರದಿಂದ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ.
ದಾವಣಗೆರೆಯ ಸಿದ್ದಗಂಗಾ ಶಾಲೆಯ 12 ಅಡಿ ಎತ್ತರದ ಗಣೇಶ ಮೂರ್ತಿ – ಭವ್ಯ ಮೆರವಣಿಗೆಯಲ್ಲಿ ಅನಾವರಣ
ಗಣೇಶ ಚತುರ್ಥಿ ಹಬ್ಬ ಎಂದರೆ ಮನೆ ಮನೆಗೂ, ಬೀದಿ ಬೀದಿಗೂ ಹರಡುವ ಭಕ್ತಿ ಮತ್ತು ಸಡಗರ. ಆದರೆ, ಇಂದಿನ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಾಗುವ ಗಣೇಶ ಮೂರ್ತಿಗಳ ಪರಿಣಾಮವಾಗಿ ಪರಿಸರ ಮಾಲಿನ್ಯ ಗಂಭೀರ ಸಮಸ್ಯೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದಕ್ಕೆ ಮಾದರಿಯ ಉದಾಹರಣೆಯಾಗಿ ದಾವಣಗೆರೆಯ ಮಾದರಿ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ 12 ಅಡಿ ಎತ್ತರದ ಪರಿಸರ ಸ್ನೇಹಿ ಪೇಪರ್ ಗಣಪತಿ ಮೂರ್ತಿ ಈಗ ಸಜ್ಜಾಗಿದೆ.
ಹತ್ತು ದಿನಗಳ ಶ್ರಮ – ನೈಸರ್ಗಿಕ ಬಣ್ಣದ ಸೊಬಗು
30 ಕೆ.ಜಿ. ಹಳೆಯ ನ್ಯೂಸ್ ಪೇಪರ್ ಹಾಗೂ 10 ಕೆ.ಜಿ. ಮೈದಾ ಅಂಟನ್ನು ಬಳಸಿ, ವಿದ್ಯಾರ್ಥಿಗಳು ಹತ್ತು ದಿನಗಳ ಕಾಲ ಅಹರ್ನಿಶಿ ಶ್ರಮಿಸಿದರು. ಹಂತ ಹಂತವಾಗಿ ಪತ್ರಿಕೆಯನ್ನು ಅಂಟಿಸಿ, ಆಕರ್ಷಕವಾಗಿ ಆಕಾರ ನೀಡಿದ ನಂತರ ಮೂರ್ತಿಗೆ ನೈಸರ್ಗಿಕ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ, ಪ್ರಕೃತಿಗೆ ಹಾನಿಯಾಗದಂತೆ ತಯಾರಿಸಿರುವುದು ಈ ಮೂರ್ತಿಯ ಪ್ರಮುಖ ವಿಶೇಷತೆ.
ಮೆರವಣಿಗೆಯ ಸಾಂಸ್ಕೃತಿಕ ಶೋಭೆ
ಶಾಲಾ ಆವರಣದಿಂದ ಹೊರಡುವ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ನಂದಿ ಕೋಲು, ಕುದುರೆ, ಪಟ ಮುಂತಾದ ಜನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಶಾಲೆಯ ವಾದ್ಯಗೋಷ್ಠಿಯು ಭಜನೆ ಹಾಗೂ ಭಕ್ತಿಗೀತೆಗಳೊಂದಿಗೆ ಶೋಭೆ ಹೆಚ್ಚಿಸಲಿದ್ದು, ಮಕ್ಕಳ ಭಕ್ತಿ ನೃತ್ಯ, ಪದ್ಯಪಾಠ ಹಾಗೂ ಕಲಾತ್ಮಕ ಅಭಿವ್ಯಕ್ತಿ ಮೆರವಣಿಗೆಯ ಆಕರ್ಷಣೆಯಾಗಲಿದೆ.
ಮಾರ್ಗದರ್ಶನ ಮತ್ತು ಸಹಕಾರ
ಈ ಪೇಪರ್ ಗಣಪತಿ ಡಾ. ಜಯಂತ್ ರವರ ಕಲ್ಪನೆಯ ಕೂಸು. ಕಳೆದ ಹತ್ತು ವರ್ಷಗಳಿಂದ ಈ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯಾಗುತ್ತಿದ್ದು, ಇದು ದಾವಣಗೆರೆಯಾದ್ಯಂತ ಗಮನ ಸೆಳೆಯುತ್ತಿದೆ. ಶಾಲೆಯ ಡ್ರಾಯಿಂಗ್ ಶಿಕ್ಷಕರ ಸಹಕಾರ ಹಾಗೂ ಡಾ. ಜಸ್ಟಿನ್ ಡಿಸೋಜಾ ಅವರ ತಾಂತ್ರಿಕ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದೊರೆತಿದೆ. ಶಾಲೆಯ ಅಧ್ಯಕ್ಷರಾದ ಹೇಮಂತ್ ಸರ್ ಮೆರವಣಿಗೆಯ ಎಲ್ಲಾ ವ್ಯವಸ್ಥೆಗಳಿಗೆ ನೇತೃತ್ವ ವಹಿಸಿದ್ದಾರೆ.
ಶಿಕ್ಷಕರ ಅಭಿಪ್ರಾಯ
“ಗಣೇಶನು ವಿಜ್ಞ ವಿನಾಶಕ, ಆದರೆ ನಾವು ತಯಾರಿಸಿದ ಪೇಪರ್ ಗಣಪತಿ ಸಮಾಜಕ್ಕೆ ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶ ನೀಡುತ್ತಿದೆ. ಮಕ್ಕಳು ಕಲೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗುವ ದಾರಿಯಲ್ಲಿ ಸಾಗುತ್ತಿದ್ದಾರೆ” ಎಂದು ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು.
ಭವಿಷ್ಯದ ಮಾದರಿ
ಈ ಪ್ರಯತ್ನವನ್ನು ಜಿಲ್ಲಾಡಳಿತವು ಇತರ ಶಾಲೆಗಳಲ್ಲಿಯೂ ಅನುಸರಿಸಿದರೆ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದರ ಜೊತೆಗೆ ಸಾಂಸ್ಕೃತಿಕ ಸಂವೇದನೆ ಬೆಳೆಸಲು ಇದು ಮಹತ್ವದ ಹೆಜ್ಜೆಯಾಗಲಿದೆ. ಸಮಾಜದ ಬೆಂಬಲ ದೊರೆತರೆ, ಇಂತಹ ಪರಿಸರ ಸ್ನೇಹಿ ಹಬ್ಬಗಳು ಮುಂದಿನ ದಿನಗಳಲ್ಲಿ ಜನಆಂದೋಲನದ ರೂಪ ತಾಳಲಿವೆ.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 3 ನೇ ತರಗತಿ ವಿದ್ಯಾರ್ಥಿನಿ ಚೇತನಾ ಧ್ವಜಾರೋಹಣ ಮಾಡಿದಳು. ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿದ PreKG , LKG ಹಾಗೂ UKG ಮಕ್ಕಳು ಗಮನ ಸೆಳೆದರು. LKG ಯ ನುಸ್ರಖಾಜ್ , ಜಾಹ್ನವ್ ಹಾಗೂ ಗಗನ್, ಯುಕೆಜಿ ಯ ಅಹಾನ, ಸಾತ್ವಿಕ್ ಮತ್ತು ಕಾರುಣ್ಯ ಇವರು ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಿದರು.
2 ನೇ ತರಗತಿಯ ಅಥರ್ವ ,ಸಂಗೊಳ್ಳಿ ರಾಯಣ್ಣನ ಏಕಪಾತ್ರಾಭಿನಯ ಪ್ರದರ್ಶಿಸಿದನು. 6ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ವಿವಿಧ ತರಗತಿಯ ಒಟ್ಟು 80 ಮಕ್ಕಳಿಂದ “ಮಾತೆ ಪೂಜಕ” ಎಂಬ ಹಾಡಿಗೆ ಸಾಮೂಹಿಕವಾಗಿ ಹಾಡಿದ್ದು ವಿಶೇಷವಾಗಿತ್ತು .ಹೈಸ್ಕೂಲ್ ವಿದ್ಯಾರ್ಥಿಗಳಿಂದ ಕಾರ್ಗಿಲ್ ವಿಜಯೋತ್ಸವ ನಾಟಕ ಪ್ರದರ್ಶಿಸಲಾಯಿತು.
ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ , ಬೋಧಕ ಹಾಗೂ ಬೋಧಕೇತರ ವರ್ಗದವರಿಂದ ಪಾಲಕರಿಂದ ಮೈದಾನ ತುಂಬಿತ್ತು. ಸಂಸ್ಥೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಕಾರ್ಯಕ್ರಮ ವೀಕ್ಷಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆ ದಾವಣಗೆರೆ, ದಿನಾಂಕ 10-08-2025 ರಂದು, ಬೆಂಗಳೂರಿನಿಂದ ಬೆಳಗಾವಿಗೆ ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ ಅನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು ಈ ನಿಮಿತ್ತ ದಾವಣಗೆರೆ ರೈಲು ನಿಲ್ದಾಣದಲ್ಲಿ ನೂತನ ಕಾರ್ಯವೈಕರಿಯುಳ್ಳ ರೈಲನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು, ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ನೃತ್ಯ,ಹಾಗೂ ನೈರುತ್ಯ ರೈಲ್ವೆ ವಿಭಾಗದಿಂದ ಆಯೋಜಿಸಿದ್ದ ಚಿತ್ರಕಲಾ,ಭಾಷಣ,ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಸಿದ್ಧಗಂಗಾಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದೆ ಶ್ರೀಮತಿ ಪ್ರಭಾಮಲ್ಲಿಕಾರ್ಜುನ್ ಮೇಡಂ ಅವರಿಂದ ಪ್ರಥಮ.ದ್ವಿತೀಯ, ತೃತೀಯ ಸ್ಥಾನ ಪಡೆದು ಪ್ರಶಸ್ತಿಪತ್ರ ಹಾಗೂ ಬಹುಮಾನ ಪಡೆದರು,ದಾವಣಗೆರೆಇಂದ ಹಾವೇರಿಯ ತನಕ ನೂತನ ವಂದೇಭಾರತ್ ರೈಲಿನಲ್ಲಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಪ್ರಯಾಣಿಸಿ ಪುಳಕಗೊಂಡರು ಸ್ಥಳೀಯ ಸಂಸ್ಥೆಯ 105 ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಪ್ರಭ ಮತ್ತು ಸುವರ್ಣ ಏಷ್ಯಾನೆಟ್ ಸಮೂಹ ಸಂಸ್ಥೆಗಳಿಂದ ಜೂನ್ 14 ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸುವರ್ಣ ಸಾಧಕಿ ಪ್ರಶಸ್ತಿಯನ್ನು ನಗರದ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜರವರಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಇವರು ಸಲ್ಲಿಸುತ್ತಿರುವ ಅನುಪಮ ಸೇವೆಗೆ ಈ ಪ್ರಶಸ್ತಿಯನ್ನು ಕೊಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರೀಕರ ಮತ್ತು ಅಂಗವಿಕಲರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರïರವರಿಂದ ಪ್ರಶಸ್ತಿ ಸ್ವೀಕರಿಸಿದರು. ವೇದಿಕೆಯಲ್ಲಿ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ, ವಿಟಿಯು ಕುಲಪತಿ ಡಾ|| ವಿದ್ಯಾಶಂಕರ ಮತ್ತು ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕïವಾಡ್ ಇದ್ದರು.ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅನುವಾದಕಿ ದೀಪಾ ಸೇರಿದಂತೆ ಸಮಾಜದ ವಿವಿಧ ಸ್ತರಗಳಲ್ಲಿ ಸಾಧನೆ ಮಾಡಿದ 35 ಸಾಧಕಿಯರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೊಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಫಲಿತಾಂಶ ಪ್ರಕಟಗೊಂಡಾಗ 625 ಕ್ಕೆ 623 ಅಂಕಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಳು. ಹಿಂದಿ ವಿಷಯದಲ್ಲಿ ತನಗೆ 100 ಕ್ಕೆ 100 ಬರಬೇಕೆಂದು ವಿಶ್ವಾಸಪೂರ್ಣವಾಗಿ ಹೇಳಿದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಬಾಲಕಿಯ ವಿಶ್ವಾಸದಂತೆ ಹಿಂದಿಯಲ್ಲಿ 100ಕ್ಕೆ 100 ಪಡೆದಿದ್ದಾಳೆ. ಕನ್ನಡ ವಿಷಯದಲ್ಲಿ ಒಂದು ಅಂಕದ ಪ್ರಶ್ನೆಗೆ ಉತ್ತರ ತಪ್ಪಾಗಿದೆ. 124 ಬಂದಿರುವುದು ಸರಿ ಇದೆ ಎಂದು ಹೇಳುತ್ತಾಳೆ. ದಾವಣಗೆರೆ ಜಿಲ್ಲೆಗೆ ಮತ್ತು ಸಿದ್ಧಗಂಗಾ ಶಾಲೆಗೆ ಕೀರ್ತಿ ತಂದ ಈ ಬಾಲಕಿ ಮರು ಮೌಲ್ಯಮಾಪನದ ನಂತರ ಕನ್ನಡ 124, ಹಿಂದಿ 100, ಇಂಗ್ಲಿಷ್ 100, ಗಣಿತ 100, ವಿಜ್ಞಾನ 100 ಮತ್ತು ಸಮಾಜ 100. ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಯಶಸ್ವಿನಿ ಕೆ.ಪಿ ಯ ಈ ಅದ್ವಿತೀಯ ಸಾಧನೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಕಳೆದ ಫೆಬ್ರವರಿ–ಮಾರ್ಚ್ನಲ್ಲಿ ನಡೆದ 10 ನೇ ತರಗತಿ ಸಿ ಬಿ ಎಸ್ ಇ ಬೋರ್ಡಿನ ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಶಾಲೆಯ ಕೃತಿಕಾ ಎಸ್. ವಿ. ಶೇಕಡ 96 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್ 94, ಕನ್ನಡ 99, ಗಣಿತ 95, ವಿಜ್ಞಾನ 98, ಸಮಾಜ 94 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಕೃತಿಕಾ- ವೀರಭದ್ರಪ್ಪ ಮತ್ತು ರಶ್ಮಿ ಕೆ. ಸಿ. ದಂಪತಿಗಳ ಪುತ್ರಿ. ದರ್ಶನ್ ಕೆ. ಸಿ. 93.80%, ನಿಖಿಲ್ ಎಂ. ಎಂ. 93.80%, ಡಯಾನಾ ಜಿ. ಕೆ. 93.40 %, ಸುಮುಖ್ ಬಿ. ಕೆ. 92.20%, ಸೃಷ್ಠಿ ಎಂ. ಎಸ್. 92%, ಪ್ರೀತಂ ಎಸ್. ಜಿ. ಸ್ವಾಮಿ 91.40%, ಸಿಂಚನಾ ವಿ. ಜಿ. 91.40%, ಸೌಕಾರ್ ಎಲ್. ಎಸ್. 90.80%, ದಾನೀಶ್ ಸಿ. ಟಿ. 90.60%, ರಾಹುಲ್ ಪಿ. ಐ. 90.40% ಪಡೆದಿದ್ದಾರೆ. ಶೇಕಡ 95 ಕ್ಕಿಂತ ಹೆಚ್ಚು ಓರ್ವ ವಿದ್ಯಾರ್ಥಿನಿ, 90% ಕ್ಕಿಂತ ಹೆಚ್ಚು 11 ಮಕ್ಕಳು, 85% ಕ್ಕಿಂತ ಹೆಚ್ಚು 26 ಮಕ್ಕಳು, 60% ಕ್ಕಿಂತ ಹೆಚ್ಚು 12 ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ನಿಖಿಲ್ ಎಂ. ಎಂ. ಮತ್ತು ಸಿಂಚನಾ ವಿ. ಜಿ. ಕನ್ನಡ ವಿಷಯದಲ್ಲಿ 100 ಕ್ಕೆ 100 ಮತ್ತು ದರ್ಶನ್ ಕೆ. ಸಿ. ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲಾ ಮಕ್ಕಳನ್ನು ಮತ್ತು ಅವರ ಪಾಲಕರನ್ನು ಪ್ರಾಚಾರ್ಯರಾದ ಗಾಯಿತ್ರಿ ಚಿಮ್ಮಡ್ ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ. ದಾಖಲೆಯ ಫಲಿತಾಂಶ ನೀಡಿದ ಸಿ ಬಿ ಎಸ್ ಇ 10 ನೇ ತರಗತಿಯ ಎಲ್ಲ ಮಕ್ಕಳನ್ನು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಆಡಳಿತ ಮಂಡಳಿಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಕಾರ್ಯದರ್ಶಿ ಹೇಮಂತ್ ಮತ್ತು ನಿರ್ದೇಶಕ ಡಾ. ಜಯಂತ್ ಶ್ಲಾಘಿಸಿದ್ದಾರೆ.
ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲಿನ ಯಶಸ್ವಿನಿ ಕೆ. ಪಿ. 625 ಕ್ಕೆ 623 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ರಾå0ಕ್ ಗಳಿಸಿದ್ದಾಳೆ. ಕನ್ನಡ 124, ಇಂಗ್ಲೀಷ್ 100, ಹಿಂದಿ 99,ಗಣಿತ 100, ವಿಜ್ಞಾನ 100, ಸಮಾಜ 100 ಒಟ್ಟು 623 ಅಂಕಗಳನ್ನು ಪಡೆದಿದ್ದಾಳೆ. ಯಶಸ್ವಿನಿ ಈಡಿಗಾರ್ 622, ಕೀರ್ತಿ ಡಿ. ಎಸ್. 622, ಸುಶ್ಮಿತ ಯು. 620, ಶ್ರೀ ರಕ್ಷ ಶ್ರೀನಿವಾಸ್ 612, ಯುಕ್ತ ಬಿ 612, ಹರ್ಷಿತ ಹೆಚ್. ವೈ 608, ಶ್ರೀದೇವಿ ಎಲ್. ಆರ್. 607, ಮುರುಳಿ ಜಿ ಆರ್. 606, ನಿಹಾರಿಕಾ ಸಿ. ಯು. 606, ನಿಶ್ಚಲ್ ಕೆ. ಪಿ. 606, ಚನ್ನಬಸಮ್ಮ ಕೆ. ಪಿ. ಎಂ. 605, ಅಜಯ್ ಆರ್. 604, ಕಲ್ಲೇಶ್ ಎಂ. 603, ಪ್ರಜ್ವಲ್ ಕೆ. ಯು. 603, ಅನ್ನಪೂರ್ಣ ಜೆ. ಕೆ. 602 ಬಿಂದು ಕೆ. ಎಸ್. 601, ಪ್ರತೀಕ್ಷಾ ಎ. ವಿ. 601, ಓಂಶುಕ್ಲಾ ಬಿ. ಕೆ. 600, ಪ್ರಜ್ವಲ್ ಆರ್ ಜಿ. 600, ತನುಶ್ರೀ ಕೆ ಜಿ. 600, ಒಟ್ಟು 21 ಮಕ್ಕಳು 625 ಕ್ಕೆ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 73 ಮಕ್ಕಳು ಶೇಕಡಾ 90 ರಷ್ಟು ಮಾರ್ಕ್ಸ್ ಪಡೆದಿದ್ದಾರೆ. ಡಿಸ್ಟಿಂಕ್ಷನ್ನಲ್ಲಿ 119, ಪ್ರಥಮ ದರ್ಜೆ 144, ದ್ವಿತೀಯ ದರ್ಜೆಯಲ್ಲಿ 28 ಮಕ್ಕಳು ಉತ್ತೀರ್ಣರಾಗಿ ಶಾಲೆಗೆ ಉತ್ತಮ ಫಲಿತಾಂಶ ನೀಡಿದ್ದಾರೆ. ಕನ್ನಡದಲ್ಲಿ 125 ಕ್ಕೆ 125 ನಾಲ್ಕು ವಿದ್ಯಾರ್ಥಿಗಳು, ಇಂಗ್ಲೀಷ್ನಲ್ಲಿ 8, ಹಿಂದಿಯಲ್ಲಿ 20, ವಿಜ್ಞಾನದಲ್ಲಿ 5 ಗಣಿತ 4, ಸಮಾಜ ವಿಜ್ಞಾನ 7 ಮಕ್ಕಳು, ಒಟ್ಟು 48 ಮಕ್ಕಳು 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಯಶಸ್ವಿನಿ ಕೆ ಪಿ ಜ್ಯೋತಿಕಲಾ, ಪಾಲಾಕ್ಷಪ್ಪ ಕೆ ವಿ ದಂಪತಿಗಳ ಪುತ್ರಿ. ಶಾಲೆಗೆ ಅತ್ಯುತ್ತಮ ಫಲಿತಾಂಶ ಕೊಟ್ಟ ಎಲ್ಲಾ ಮಕ್ಕಳನ್ನು ಶಾಲೆಯ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ,ಮುಖ್ಯ ಶಿಕ್ಷಕಿ ರೇಖಾರಾಣಿ, ಕಾರ್ಯದರ್ಶಿ ಡಿ. ಎಸ್. ಹೇಮಂತ್, ನಿರ್ದೇಶಕ ಡಾ|| ಜಯಂತ್, ಬೋಧಕಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಎನ್. ರವಿಕಿರಣ್ ಮರುಮೌಲ್ಯಮಾಪನದ ನಂತರ 600ಕ್ಕೆ 597 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ತೃತೀಯ ರಾåಂಕ್ ಗಳಿಸಿದ್ದಾನೆ. ಆಂಗ್ಲ ಭಾಷೆಯಲ್ಲಿ 100ಕ್ಕೆ 97 ಅಂಕ ಗಳಿಸಿದ್ದ ರವಿಕಿರಣ್ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದನು. ಮರುಮೌಲ್ಯಮಾಪನದಲ್ಲಿ ಎರಡು ಅಂಕಗಳು ಹೆಚ್ಚಾಗಿ 100ಕ್ಕೆ 99 ಅಂಕ ಪಡೆದಿದ್ದಾನೆ. ಕನ್ನಡ 100, ಭೌತಶಾಸ್ತ್ರ 100, ಜೀವಶಾಸ್ತ್ರ 100 ಮತ್ತು ಗಣಿತ, ರಸಾಯನ ಶಾಸ್ತ್ರ ಹಾಗೂ ಆಂಗ್ಲ ಭಾಷೆಯಲ್ಲಿ ತಲಾ 99, ಒಟ್ಟು 597 ಅಂಕಗಳನ್ನು ಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಉಪ್ಪನಾಯಕನಹಳ್ಳಿಯ ನಾಗರಾಜ್ ಮತ್ತು ಸಿದ್ದಮ್ಮ ರೈತ ದಂಪತಿಗಳ ಪುತ್ರ ರವಿಕಿರಣ್ ಅಂಕಗಳ ಏರಿಕೆಯಿಂದ ಸಂತಸ ಪಟ್ಟಿದ್ದಾನೆ. ಬಾಲಕನ ನಿರೀಕ್ಷಿತ ಸಾಧನೆಗೆ ಸಿದ್ಧಗಂಗಾ ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರು ಅಭಿನಂದಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆ ನಗರದ ಸಿದ್ಧಗಂಗಾ ಪಿಯು ಕಾಲೇಜು ರಾಜ್ಯ ಕ್ಕೆ ಐದನೇ ಸ್ಥಾನ ಪಡೆದು ಮತ್ತೊಮ್ಮೆ ತನ್ನ ಶೈಕ್ಷಣಿಕ ಸಾಧನೆಯ ಇತಿಹಾಸ ರಚಿಸಿದೆ. 600 ಕ್ಕೆ 595 ಅಂಕಗಳಿಸಿದ ರವಿಕಿರಣ ಎನ್, ಕನ್ನಡ 100, ಇಂಗ್ಲೀಷ್, 97, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 99, ಜೀವಶಾಸ್ತ್ರ 100, ಗಣಿತ 99 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ, ಇವನು ನಾಗರಾಜ್ ಎಸ್ ಮತ್ತು ಸಿದ್ದಮ್ಮ ದಂಪತಿಗಳ ಪುತ್ರ ಚಿತ್ರದುರ್ಗ ಜಿಲ್ಲೆ ಉಪ್ಪನಾಯಕನಹಳ್ಳಿ ಊರಿನವನು. ಈ ಬಾಲಕ ಎಂ.ಎಸ್.ಎಸ್. ಸ್ಕಾಲರ್ಶಿಪ್ನಲ್ಲಿ ಎರಡು ವರ್ಷ ಉಚಿತ ವಿದ್ಯಾಭ್ಯಾಸ ಪಡೆದಿದ್ದಾನೆಂಬುದು ಉಲ್ಲೇಖನೀಯ ಉಳಿದಂತೆ ಹೆಚ್ಚು ಅಂಕಗಳಿಸಿರುವ, ಮನೋಜ್ ಎಲ್, ವಿನಯ್ ಕುಮಾರ್ ಆರ್, ಕೃತಿಕ ಕದಂ, ಚೇತನ ಆರ್, ಜೀವಿತ ಜೆ ಇಟಗಿ, ಸ್ನೇಹಲ್ ಕೆ ಕುಡ್ತೇಕರ್ , ಸುಹಾಸ್ ಹೆಚ್ , ಅಜಯ್ ಕುಮಾರ್ ಆರ್, ವಿವೇಕ ಅಂಗಡಿ ಎನ್ ಎಂ, ಲಕ್ಷ್ಮಿ ಎಂ, ಸಂಜನಾ ಎಂ ಎಂ, ಚಂದನಾ ಜಿ ವಿ, ಕರಿಬಸಮ್ಮ ಪಾನಿಯಪ್ಲ, ಶಿವಯೋಗಿ ಹೆಚ್ ಆರ್, ಈ ಎಲ್ಲಾ ವಿದ್ಯಾರ್ಥಿಗಳು ಕೂಡ ಎಂ.ಎಸ್.ಎಸ್. ಸ್ಕಾಲರ್ಶಿಪ್ನಲ್ಲಿ ಓದಿರುತ್ತಾರೆ.
ಮನೋಜ್ ಎಲ್ 593, ವಿನಯ್ ಕುಮಾರ್ ಆರ್ 590, ಕೃತಿಕ ಕದಂ 589, ಚೇತನ ಆರ್ 585, ಜೀವಿತ ಜೆ ಇಟಗಿ 585, ಸ್ನೇಹಲ್ ಕೆ ಕುಡ್ತೇಕರ್ 585, ಸುಹಾಸ್ ಹೆಚ್ 585, ಅಜಯ್ ಕುಮಾರ್ ಆರ್582, ವಿವೇಕ ಅಂಗಡಿ ಎನ್ ಎಂ 582, ಅಭಿನವ್ ಎಂ.ಎಸ್ 580, ಲಕ್ಷ್ಮಿ ಎಂ 580, ಸುಮಂತ ಪಿ 579, ರಕ್ಷಿತ ಕೆ 579, ಸಂಜನಾ ಎಂ ಎಂ 579, ಚಂದನಾ ಜಿ ವಿ 578, ಕರಿಬಸಮ್ಮ ಪಾನಿಯಪ್ಲ 578, ಶಿವಯೋಗಿ ಹೆಚ್ ಆರ್ 577, ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಡಿಸ್ಟಿಂಕ್ಷನ್ನಲ್ಲಿ 236 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 320, ದ್ವಿತೀಯ ದರ್ಜೆಯಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿಗೆ 95.13% ಫಲಿತಾಂಶ ನೀಡಿದ್ದಾರೆ. ಕನ್ನಡ 13, ಸಂಸ್ಕೃತ 1, ಭೌತಶಾಸ್ತ್ರ 3, ರಸಾಯನ ಶಾಸ್ತ್ರ 2, ಗಣಿತ 8, ಜೀವಶಾಸ್ತ್ರ 18, ಕಂಪ್ಯೂಟರ್ ವಿಜ್ಞಾನದಲ್ಲಿ ಒಬ್ಬರು, 100 ಕ್ಕೆ 100 ಅಂಕಗಳಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದಿಸಿದ್ದಾರೆ.