2026 ಜನವರಿಯಲ್ಲಿ ನಡೆದ JEE MAINS ಪರೀಕ್ಷೆಯಲ್ಲಿ ದಾವಣಗೆರೆಯ ಶ್ರೀ ಸಿದ್ಧಗಂಗಾ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಗೈದಿದ್ದಾರೆ. ಶೇಕಡ 99.03 ಪರ್ಸೆಂಟೈಲ್ ಅಂಕಗಳಿಸಿರುವ ಸಂಜಯ್ ಎಸ್ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾನೆ, ದರ್ಶನ್ ರುದ್ರಪ್ಪ ಕರಿಯಜ್ಜಿ 97.64, ಸಮರ್ಥ ಮನೋಹರ್ ಕೋರಿ 96.92, ರಶ್ಮಿ ಹೆಚ್ ಎಸ್ 95.82, ಜಯದೇವ ಜಿ ಡಿ 95.74, ಜಗದೀಶ ಸಿ ಜಿ 95.17, ಪ್ರವೀಣ್ ಕುಮಾರ್ ಪೂಜಾರ್ 94.08, ಎಸ್.ಹೆಚ್ ಮೋಹನ 93.21, ದರ್ಶನ್ ಆರ್ 93.12, ಮೋಕ್ಷ ಜೆ ಹೆಚ್ 92.94, ಸರ್ವಮಂಗಳ ಭೀಮಪ್ಪ ಸೌಕಾರ್ 92.88, ಚೈತನ್ಯ ಆರ್ 92.56, ದೀಪ ಬಿ ಜೆ 92.46, ಚಂದನ್ ಎಂ ಡಿ 91.71, ಪ್ರಣವ್ ದಿಗ್ಗಾವಿ 91.7, ಕೆ ವಿಷ್ಣು 91.58, ಮಾನ್ಯ ಯು 91.47, ಚಂದನ ಎನ್ 91.01, ಜ್ಯೋತಿ ಅರುಣ ಕುಮಾರ್ 90.11 ಪರ್ಸೆಂಟೈಲ್ ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಪ್ರಶಂಸಿಸಿದ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ರವರು ಮುಂದಿನ ಪರೀಕ್ಷೆಗಳಿಗೂ ಶುಭ ಹಾರೈಸಿದರು. ಪಿ ಯು ಕಾಲೇಜಿನ ನಿರ್ದೇಶಕರಾದ ಡಾ|| ಜಯಂತ್ ಡಿ ಎಸ್, ಅಧ್ಯಕ್ಷರಾದ ಪ್ರಶಾಂತ್ ಡಿ ಎಸ್ ಹಾಗೂ ಕಾರ್ಯದರ್ಶಿ ಹೇಮಂತ್ ಡಿ ಎಸ್ ರವರು ಹರ್ಷವನ್ನು ವ್ಯಕ್ತಪಡಿಸಿ ಮಕ್ಕಳನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಹಾಗೂ ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ-ಕಾಲೇಜಿನ ಮಕ್ಕಳು 77 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ ಗೈಡ್ಸ್ ನ ಕಾರ್ಯದರ್ಶಿ ಎಂ.ಸಿ. ಮಹೇಶ್ ರವರು ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಲ್ಕೆಜಿ ಯುಸ್ರಾ ಖಾಜಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದಳು. 2 ನೇ ತರಗತಿ ಯಶಸ್ ಆರ್.ಎಸ್ ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ, ಚೈತ್ರಿಕ ಸಂವಿಧಾನ ದಿನಾಚರಣೆ ಬಗ್ಗೆ ಮೂರನೇ ತರಗತಿ ಫಜೀಲತ್ ಕೋಠಿ ಮತ್ತು ಹರ್ಷಿತ್ ಟಿ ಇವರು ಸಂವಿಧಾನದ ಪೀಠಿಕೆ ಮತ್ತು ಸಂವಿಧಾನದಲ್ಲಿರುವ ವಿವರಣೆ ತಿಳಿಸಿ ಹೇಳಿದರು.
6 ನೇ ತರಗತಿ ಸಾಕ್ಷಿ ಮತ್ತು ಗಾನಶ್ರೀ ಸಂವಿಧಾನದ ರಚನೆ ಮತ್ತು ಸಮಿತಿ ಸದಸ್ಯರ ಬಗ್ಗೆ ಬೆಳಕು ಚೆಲ್ಲಿದರು. ಅಭಿಷೇಕ್ ಎಂ.ಸಿ ಜನವರಿ 26 ರಂದು ಹುತಾತ್ಮನಾದ ಸಂಗೊಳ್ಳಿ ರಾಯಣ್ಣನ ತ್ಯಾಗ-ಬಲಿದಾನವನ್ನು ಸ್ಮರಿಸಿದನು. 1 ನೇ ತರಗತಿ ಮಕ್ಕಳು ಐ ಲವ್ ಮೈ ಇಂಡಿಯಾ, 3 ನೇ ತರಗತಿ ಮಕ್ಕಳು ವಂದೇ ಮಾತರಂ ಗೀತೆಗಳಿಗೆ ಆಕರ್ಷಕವಾಗಿ ನೃತ್ಯ ಪ್ರಸ್ತುತ ಪಡಿಸಿದರು. 7 ನೇ ತರಗತಿಯ ಜಾನ್ಹವಿ ತಂಡದವರು ಚೊಡೋ ಕಲ್ ಕಿ ಬಾತ್, ಐಜಾ ಅಫ್ಸರಿ ತಂಡದವರು ವಿಶ್ವ ವಿನೂತನ ವಿದ್ಯಾಚೇತನ, 6 ನೇ ತರಗತಿಯ ಕೀರ್ತನಾ ತಂಡದವರು ತಾಯಿ ಭಾರತಿಯ ಪಾದ ಪದ್ಮಗಳ ಎಂಬ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. 1 ನೇ ತರಗತಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಜೈಹೋ ಹಾಡಿಗೆ ರಾåಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿದ್ಧಗಂಗಾ ಸಿಬಿಎಸ್ಇ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಕಾಂಪೋಜಿಟ್ ಹೈಸ್ಕೂಲ್ ಮುಖ್ಯ ಶಿಕ್ಷಕಿ ರೇಖಾರಾಣಿ, ಸಂಸ್ಥೆಯ ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಜಯಂತ್ ಮತ್ತು ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಉಪಸ್ಥಿತರಿದ್ದರು. ಶಾಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು. ಸಹ ಶಿಕ್ಷಕಿ ಆಶಾ. ಎಸ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಚಿತ್ರಕಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಧ್ವಜಸ್ತಂಭದ ಮುಂದೆ ಭಾರತದ ಭೂಪಟ ಮತ್ತು ರಂಗೋಲಿ ಬಿಡಿಸಿ ಸುಂದರವಾಗಿ ಸಿಂಗರಿಸಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀ ಸಿದ್ಧಗಂಗಾ ಸ್ಥಳೀಯಸಂಸ್ಥೆ ದಾವಣಗೆರೆ, ದಿನಾಂಕ 22/01/2026 ಗುರುವಾರದಂದು ಸ್ಥಳೀಯ ಸಂಸ್ಥೆಯ 121 ಸ್ಕೌಟ್ ಮತ್ತು 66 ಗೈಡ್ಸ್ ವಿದ್ಯಾರ್ಥಿಗಳಿಗೆ ಕುಕ್ಕಿಂಗ್ ಪ್ರಾವಿಣ್ಯತಾ ಪದಕ ಪಡೆಯಲು “ಕುಕಿಂಗ್ ಆಕ್ಟಿವಿಟಿ ” ಹಮ್ಮಿಕೊಳ್ಳಲಾಗಿತ್ತು, ಶ್ರೀಮತಿ ರೇಖಾರಾಣಿ ಕೆ ಎಸ್ ,(ಏ ಡಿ ಸಿ ) ಮಕ್ಕಳಿಗೆ ಶುಭಹಾರೈಸಿ ಹಸಿರು ನಿಶಾನೆ ತೋರಿಸುವುದರ ಮೂಲಕ ವಿದ್ಯಾರ್ಥಿಗಳ ಫೂಟ್ ಹೈಕ್ ಗೆ ಚಾಲನೆ ನೀಡಿದರು ಹೈಕಿಂಗ್ ಮೂಲಕ ಆನಗೋಡಿನ ಸಿದ್ಧೇಶ್ವರ ಪ್ರೌಢಶಾಲಾ ಆವರಣ ತಲುಪಿದ ವಿದ್ಯಾರ್ಥಿಗಳು ಧ್ವಜಾರೋಹಣದ ಬಳಿಕ ತಮ್ಮ ತಮ್ಮ ದಳಗಳ ಪ್ಯಾಟ್ರೋಲ್ ಗುಂಪುಗಳಲ್ಲಿ ಸೌದೆಒಲೆಗಳಮೇಲೆ ಅವಲಕ್ಕಿ,ಮಂಡಕ್ಕಿ,ಈರುಳ್ಳಿ ಬಜ್ಜಿ,ಮೆಣಸಿನಕಾಯಿ, ಚಪಾತಿ ಬೆಂಡೆಕಾಯಿ ಪಲ್ಯ,ತಾಳಿಪಟ್ಟು,ಪನ್ನೀರ್ ರೋಲ್,ಗೋಬಿಮಂಚೂರಿ,ಪುದೀನಾ ರೈಸ್,ಶಾವಿಗೆ ಪಾಯಸ,ಶರಬತ್ತು, ಬಾದಾಮಿಹಾಲು,ಟಿ,ಕಾಫಿ,ಇನ್ನಿತರೆ ಖಾದ್ಯಗಳನ್ನು ತುಂಬಾ ರುಚಿಕರವಾಗಿ ಉತ್ಸಾಹದಿಂದ ತಯಾರಿಸಿದರು ಹಾಗು ಅಡುಗೆಮಾಡುವ ಕೌಶಲಗಳನ್ನು ತಿಳಿದುಕೊಂಡರು .
ಆನಗೋಡಿನಬಳಿ ಇರುವ ಶಿಕ್ಷಣ ಶಿಲ್ಪಿ ಎಂ ಎಸ್ ಶಿವಣ್ಣ ಶಿಲಾ ಸ್ಮಾರಕದ ಬಳಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಈ ಸಂಧರ್ಭದಲ್ಲಿ ಸ್ಕೌಟ್ ಮಾಸ್ಟರ್ಸ್ ಗಳಾದ ಶ್ರೀನಿವಾಸ್ ಎನ್ ಎಲ್ (ಹೆಚ್ ಡಬ್ಲ್ಯೂ ಬಿ ),ಆರೋಗ್ಯಮ್ಮ(ಹೆಚ್ ಡಬ್ಲ್ಯೂ ಬಿ),ತನುಜಾ (ಅಡ್ವಾನ್ಸ್ ಡ್ )ಹಾಗೂ ಗೈಡ್ ಕ್ಯಾಪ್ಟನ್ಸ್ ಸುನಿ ತಾ ಕೆ ಎಂ (ಹೆಚ್ ಡಬ್ಲ್ಯೂ ಬಿ),ಸುನಿತಾ ಎಂ, ಗೀತಾ ಪಟ್ಟಣಶೆಟ್ಟಿ (ಅಡ್ವಾನ್ಸ್ ಡ್ ) ಇವರು ಉಪಸ್ಥಿತರಿದ್ದರು, ಸ್ಥಳೀಯಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಂ,ಸಿ (ಹೆಚ್ ಡಬ್ಲ್ಯೂ ಬಿ) ಇವರು ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸಿದರು .
ಸಂಕ್ರಾಂತಿಯ ಮುನ್ನಾ ದಿನವಾದ ಇಂದು ನಗರದ ಸಿದ್ಧಗಂಗಾ ಸಿ.ಬಿ.ಎಸ್.ಇ ಶಾಲೆಯ 6 ಮತ್ತು 3 ಹಾಗೂ LKG ಮಕ್ಕಳು ಸಂಕ್ರಾಂತಿ ಸಂತೆಯನ್ನು ಶಾಲಾ ಆವರಣದಲ್ಲಿ ಏರ್ಪಡಿಸಿದ್ದರು. ತರಕಾರಿ, ಸೊಪ್ಪು, ಬೇಳೆ ಕಾಳು, ಮಂಡಕ್ಕಿ ಉಸುಳಿ, ವಿವಿಧ ರೀತಿಯ ರೊಟ್ಟಿ ಪಲ್ಯಗಳು, ಮಜ್ಜಿಗೆ, ಎಳನೀರು, ಬಳೆ, ಮಾವಿನ ಸೊಪ್ಪು, ಬಾಳೆಕಂಬ, ಅರಿಶಿಣ ಕುಂಕುಮ, ಹೂ, ಎಲೆ ಅಡಿಕೆ ಹೀಗೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಮಾರಾಟ ಮಾಡಿದರು. ಕೂಡು-ಕಳೆಯುವ ಲೆಕ್ಕಕ್ಕೆ ಅನುಗುಣವಾಗಿ ಮನೆಯಿಂದಲೇ ಚಿಲ್ಲರೆ ನಾಣ್ಯಗಳನ್ನು ತಂದಿದ್ದರು. ಹಳ್ಳಿಯ ಸೊಗಡು ಬಿಂಬಿಸುವಂತೆ ಮಕ್ಕಳೆಲ್ಲರೂ ಯೂನಿಫಾರಂ ಬದಲಾಗಿ ಇಳಕಲ್ ಸೀರೆ, ಧೋತಿ-ಪಂಜೆ, ಶರ್ಟು, ಟವೆಲïಗಳನ್ನು ಧರಿಸಿ ಬಂದಿದ್ದರು. ಹಣೆಯ ಮೇಲೆ ವಿಭೂತಿ-ಕುಂಕುಮ ರಾರಾಜಿಸುತ್ತಿತ್ತು. ಪಂಚಾಯಿತಿ ಕಟ್ಟೆ, ಧಾನ್ಯದ ರಾಶಿಪೂಜೆ, ಹಳ್ಳಿ ಹೋಟೆಲ್, ಗ್ರಾಮದೇವತೆ ಪೂಜೆ ಹೀಗೆ ಹಳ್ಳಿಯ ವಾತಾವರಣ ಸೃಷ್ಠಿ ಮಾಡಿದ್ದರು. ಬಂದವರಿಗೆ ಆರತಿ ಬೆಳಗಿ ಎಳ್ಳು-ಬೆಲ್ಲ ನೀಡಿ ಅತಿಥಿ ಸತ್ಕಾರವನ್ನೂ ಮಾಡಿದರು. ಕೆಲವು ಮಕ್ಕಳು ಚನ್ನೆ ಮಣೆ ಗೋಲಿ, ಬುಗುರಿ, ಚಿನ್ನಿದಾಂಡು, ಗಾಳಿಪಟದ ಆಟದಲ್ಲಿ ತಲ್ಲೀನರಾಗಿದ್ದರು. ರಾಗಿ ಬೀಸುತ್ತಾ, ಕಣಿ ಹೇಳುತ್ತಾ, ಗಿಣಿ ಶಾಸ್ತ್ರ ನುಡಿಯುತ್ತಾ ಮಕ್ಕಳು ಆಹ್ವಾನಿತರನ್ನು ಮತ್ತಷ್ಟು ರಂಜಿಸಿದರು. ಶಿಕ್ಷಕರು ಮಾರ್ಗದರ್ಶನ ನೀಡುತ್ತಾ ಸಂಕ್ರಾಂತಿ ಸಂತೆಯನ್ನು ಯಶಸ್ವಿಗೊಳಿಸಿಕೊಟ್ಟರು.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 56ನೇ ವಾರ್ಷಿಕ ಸಂಭ್ರಮ 2026ರ ಜನವರಿ 3 ರಿಂದ 6 ರವರೆಗೆ ನಾಲ್ಕು ದಿನಗಳವರೆಗೆ ನಡೆಯಲಿದೆ.
ಜನವರಿ 3ರ ಶನಿವಾರ ಸಂಜೆ ಮೊದಲ ದಿನದ ಸಿದ್ಧಗಂಗಾ ಸಂಭ್ರಮದ ಉದ್ಘಾಟನೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ರವಿಕಾಂತೇ ಗೌಡ ಐ.ಪಿ.ಎಸ್ ರವರು ಉದ್ಘಾಟಿಸಲಿದ್ದಾರೆ. ರಾಜ್ಯಮಟ್ಟದ ಪ್ರತಿಷ್ಠಿತ ಎಂ.ಎಸ್.ಎಸ್ ಕ್ವಿಜ್ 2025ರಲ್ಲಿ ವಿಜೇತ 30 ಮಕ್ಕಳಿಗೆ ಬಹುಮಾನ ವಿತರಣೆ. ಅರುಣೋದಯ ಬಿ.ವೈ ಮತ್ತು ದರ್ಶನ್ ಕೆ.ಸಿ ತಲಾ ಐವತ್ತು ಸಾವಿರರೂ.ಗಳನ್ನು ಬಹುಮಾನವಾಗಿ ಪಡೆಯುವರು, ಸಿರಿ ಬಿ.ಸಿ ದ್ವಿತೀಯ ಬಹುಮಾನವಾಗಿ 25ಸಾವಿರ, ತೃತೀಯ ಬಹುಮಾನವನ್ನು 9 ಮಕ್ಕಳು ಪ್ರತಿಯೊಬ್ಬರೂ 10 ಸಾವಿರ ಪಡೆಯುವರು,18 ಮಕ್ಕಳು ಸಮಾಧಾನಕರ ಬಹುಮಾನವಾಗಿ ಒಂದು ಸಾವಿರ ಪಡೆಯುವರು. ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಕಮಟಂ ಶ್ರೀನಿವಾಸಲು, ವಿನಾಯಕ ಬಿ.ಎಂ, ಧನಂಜಯಪ್ಪ ಬಿ.ಎನ್, ನಿಂಗಮ್ಮ ಕೆ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ವಾಣಿಶ್ರೀ ಅವರು ವಹಿಸಲಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳಿಸಿದ 146 ಮಕ್ಕಳು ಸಿದ್ಧಗಂಗಾ ಪ್ರತಿಭಾ ಪುರಸ್ಕಾರವನ್ನು ಪಡೆಯಲಿದ್ದಾರೆ.
ಭಾನುವಾರ ಜನವರಿ 4 ರಂದು 2ನೇ ದಿನದ ಕಾರ್ಯಕ್ರಮವನ್ನು ಖ್ಯಾತ ವ್ಯಂಗ್ಯ ಚಿತ್ರಕಾರರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ.ಹೆಚ್.ಬಿ ಮಂಜುನಾಥ್ರವರು ಉದ್ಘಾಟಿಸುವರು. ಅಂದಿನ ಅಧ್ಯಕ್ಷತೆ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾದ ಡಾ|| ಡಿ.ಎಸ್. ಜಯಂತ್ರವರು ವಹಿಸಲಿದ್ದಾರೆ. ಉಪನ್ಯಾಸಕರಾದ ಬಿ.ಎಂ ವಿಜಯ್ ಕುಮಾರ್, ವನ್ನಂ ಸುಬ್ಬರಾವ್, ಸಂತೋಷ್ ಎಸ್ ರವರು ಮುಖ್ಯ ಅತಿಥಿಗಳಾಗಿರುವರು. ದ್ವಿತೀಯ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜನವರಿ 5ರ ಸೋಮವಾರದಂದು 3ನೇ ದಿನದ ಸಂಜೆಯ ಕಾರ್ಯಕ್ರಮಕ್ಕೆ “ಸಂಪ್ರದಾಯ” ಸಹ ಸಂಸ್ಥಾಪಕರಾದ ಚೇತನ್ ಡಿ.ಸಿಯವರು ಚಾಲನೆ ನೀಡುವರು. ರಾಜ್ಯಮಟ್ಟದ ಪ್ರತಿಷ್ಠಿತ “ಶಿಕ್ಷಣ ಶಿಲ್ಪಿ ಡಾ. ಎಂ.ಎಸ್ ಶಿವಣ್ಣ ಪ್ರಶಸ್ತಿ”ಯನ್ನು ನಗರದ ಎಸ್ ಜೆ ಜೆ ಎಂ ಪ್ರೌಢಶಾಲೆಯ ಶೈಕ್ಷಣಿಕ ಸಲಹೆಗಾರರಾದ ಶಿಕ್ಷಣ ತಜ್ಞೆ ವಾಗ್ದೇವಿ ಆರ್ ಇವರಿಗೆ ಪ್ರದಾನ ಮಾಡಲಾಗುತ್ತದೆ. ಅಂದಿನ ಅಧ್ಯಕ್ಷತೆ ಸಿದ್ಧಗಂಗಾ ಸಿಬಿಎಸ್ಇಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್ ವಹಿಸಲಿದ್ದಾರೆ. 2025ರ ಸಿಬಿಎಸ್ಇ 10ನೇ ತರಗತಿಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾದ 26 ಮಕ್ಕಳಿಗೆ ಪ್ರತಿಭಾ ಪುರಸ್ಕಾರವಿದೆ. ಸಿಬಿಎಸ್ಇ ಶಾಲೆಯ ಸಹ ಶಿಕ್ಷಕರಾದ ಆಶಾ, ಹರಿಣಿ, ಫಾರೂಕ್ ಉಸ್ಮಾನಿ ಮುಖ್ಯ ಅತಿಥಿಗಳಾಗಿರುತ್ತಾರೆ.
ನಾಲ್ಕನೇ ದಿನದ ಸಂಭ್ರಮದಲ್ಲಿ ಶೈಕ್ಷಣಿಕ ಸಲಹೆಗಾರರಾದ ಜಗನ್ನಾಥ್ ನಾಡಿಗೇರ್ರವರು ಉದ್ಘಾಟಕರಾಗಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್ ಹೇಮಂತ್ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಿದ್ಧಗಂಗಾ ಶಾಲೆಯ ಸಹ ಶಿಕ್ಷಕರಾದ ಸ್ವಾತಿ, ಮಲ್ಲಿಕಾರ್ಜುನಯ್ಯ, ವೇದಾವತಿ ಇವರು ಮುಖ್ಯ ಅತಿಥಿಗಳು. ನಾಲ್ಕೂ ದಿನದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಉಪಸ್ಥಿತರಿರುತ್ತಾರೆ. ಅಂದು ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 80 ಮಕ್ಕಳಿಗೆ ಪ್ರತಿಭಾ ಪುರಸ್ಕಾರವಿರುತ್ತದೆ.
ಪ್ರತಿದಿನ ಸಂಜೆ 5 ರಿಂದ 5:30 ರವರೆಗೆ ಸಾನ್ವಿ, ಜೀವಾಕ್ಷರಿ, ಅನುಶ್ರೀ, ಐಸಿರಿ, ಪ್ರಿಯಾಂಕ ಮತ್ತು ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಸಿದ್ಧಗಂಗಾ ಕಾಂಪೋಜಿಟ್ ಸ್ಕೂಲಿನ ಮುಖ್ಯ ಶಿಕ್ಷಕಿ ರೇಖಾರಾಣಿ ಯವರು ನಾಲ್ಕೂ ದಿನಗಳು ಕಾರ್ಯಕ್ರಮದ ನಿರೂಪಣೆ ನಡೆಸಿಕೊಡುವರು.
* ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ 2500ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಗಿದೆ.
* ವಾರ್ಷಿಕ ಸಂಭ್ರಮಾಚರಣೆಯಲ್ಲಿ ಪ್ರತಿದಿನ ಪ್ರತಿಭಾ ಪುರಸ್ಕಾರವಿರಲಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೂರಕ್ಕೂ ಹೆಚ್ಚು ನೃತ್ಯಗಳಲ್ಲಿ ಮಕ್ಕಳು ತಮ್ಮ ಅಭಿನಯ ತೋರಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿʼಸೌಜ, ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಲರಾದ ವಾಣಿಶ್ರೀ, ಕಾರ್ಯದರ್ಶಿಗಳಾದ ಹೇಮಂತ್ ಡಿ. ಎಸ್, ಕಾಲೇಜಿನ ಟ್ರಸ್ಟಿಯಾದ ಜಯಂತ್ ಡಿ. ಎಸ್., ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾರಾಣಿ ಕೆ. ಎಸ್. ರವರು ಉಪಸ್ಥಿತರಿದ್ದರು.