Friday, March 26, 2021

ಸಿದ್ಧಗಂಗಾ ಬಾಲಕ ನಕ್ಷತ್ರ ನಾಯಕನ ಸಾಧನೆ

 ರಾಷ್ಟ್ರೀಯ ಈಜು ಸ್ಪರ್ಧೆ

ಸಿದ್ಧಗಂಗಾ ಬಾಲಕ ನಕ್ಷತ್ರ ನಾಯಕನ ಸಾಧನೆ


ದಾವಣಗೆರೆ, ಮಾ. 26,

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 20 ನೇ ರಾಷ್ಟ್ರೀಯ ಪ್ಯಾರಾ ಸ್ವಿಮಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಿದ್ಧಗಂಗಾ ಪ್ರಾಥಮಿಕ ಶಾಲೆಯ 9ನೇ ತರಗತಿ ಬಾಲಕ ನಕ್ಷತ್ರ ನಾಯಕ ಸಬ್ – ಜೂನಿಯರ್ ಗ್ರೂಪ್‍ನಲ್ಲಿ 100 ಮೀ. ಬ್ಯಾಕ್ ಸ್ಟ್ರೋಕ್‍ನಲ್ಲಿ ಪ್ರಥಮ, 50 ಮೀ. ಬ್ಯಾಕ್ ಸ್ಟ್ರೋಕ್ ಮತ್ತು 50 ಮೀ. ಫ್ರೀ ಸ್ಟೈಲ್ ಸ್ವಿಮಿಂಗ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.


ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿರುವ ಬಾಲಕನಿಗೆ ಮುಖ್ಯೋಪಾದ್ಯಾಯಿನಿ K. S. ರೇಖಾರಾಣಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.


Thursday, March 25, 2021

ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟ

 

ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜ್, ದಾವಣಗೆರೆ.

2020-21 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆಯನ್ನು ಮಾಡಿದ್ದಾರೆ. ಬಾಲಕರ ವಿಭಾಗದಲ್ಲಿ ಖೋ-ಖೋ, ಬಾಸ್ಕೆಟ್ ಬಾಲ್, ಕರಾಟೆ, ಪುಟ್‍ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರಲ್ಲದೆ ಒಟ್ಟು 22 ಬಾಲಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಥ್ರೋ-ಬಾಲ್, ಬಾಸ್ಕೆಟ್ ಬಾಲ್, ವಾಲಿ ಬಾಲ್,  ಅಥ್ಲೆಟಿಕ್ಸ್ ಹಾಗೂ ಕರಾಟೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೆ ಒಟ್ಟು 16 ಬಾಲಕಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿವರಗಳು ಈ ಕೆಳಗಿನಂತಿವೆ.



ಬಾಲಕರ ವಿಭಾಗ ಬಾಲಕಿಯರ ವಿಭಾಗ

1 ಸುದೀಪ (ಖೋ-ಖೋ) 1 ಸಹನ. ಎಸ್. ಎಸ್ (ಅಥ್ಲೆಟಿಕ್ಸ್)

2 ಕಿರಣ್ (ಖೋ-ಖೋ) 2 ಸಹನ (ಅಥ್ಲೆಟಿಕ್ಸ್)

3 ಮೋಹಿತ್ ಕಿರಣ್ (ಥ್ರೋ-ಬಾಲ್) 3 ಕವನ (ಬಾಸ್ಕೆಟ್ ಬಾಲ್)

4 ಯುವರಾಜ್. ಎಲ್ (ಅಥ್ಲೆಟಿಕ್ಸ್) 4 ಖುಷಿ (ಬಾಸ್ಕೆಟ್ ಬಾಲ್)

5 ಮಂಜುನಾಥ. ಬಿ.ಎಮ್ (ಅಥ್ಲೆಟಿಕ್ಸ್) 5 ಗೀತಾ (ಬಾಸ್ಕೆಟ್ ಬಾಲ್)

6 ಮಂಜುನಾಥ.ಸಿ.ಪಿ (ಅಥ್ಲೆಟಿಕ್ಸ್) 6 ಅಂಜಲಿ (ಬಾಸ್ಕೆಟ್ ಬಾಲ್)

7 ದರ್ಶನ್ (ಅಥ್ಲೆಟಿಕ್ಸ್) 7 ವರ್ಷ (ಬಾಸ್ಕೆಟ್ ಬಾಲ್)

8 ದೀಪಕ್. ಡಿ (ಅಥ್ಲೆಟಿಕ್ಸ್) 8 ನಿಶಾ  (ಬಾಸ್ಕೆಟ್ ಬಾಲ್)

9 ಕಲ್ಲೇಶ್ (ಕರಾಟೆ) 9 ಚೈತನ್ಯ (ವಾಲಿಬಾಲ್)

10 ಸಂಭ್ರಮ್ (ಪುಟ್‍ಬಾಲ್) 10 ಲಕ್ಷ್ಮಿ (ವಾಲಿಬಾಲ್)

11 ರಾಹುಲ್ (ಪುಟ್‍ಬಾಲ್) 11 ಲಾವಣ್ಯ (ಕರಾಟೆ)

12 ಪವನ್ (ಪುಟ್‍ಬಾಲ್) 12 ಆಷಿಯ (ಕರಾಟೆ)

13 ಪ್ರಜ್ವಲ್ (ಪುಟ್‍ಬಾಲ್) 13 ರಕ್ಷೀತ (ಕರಾಟೆ)

14 ಶ್ಯಾಮ್ (ಪುಟ್‍ಬಾಲ್) 14 ಜ್ಯೋತಿ (ಖೋ-ಖೋ)

15 ವರುಣ್ ಜಾಧವ್ (ಪುಟ್‍ಬಾಲ್) 15 ಸಂಚಿತ (ಖೋ-ಖೋ)

16 ಜೀವನ್ (ಪುಟ್‍ಬಾಲ್) 16 ದರ್ಶಿನಿ  (ಥ್ರೋ-ಬಾಲ್)

17 ಅಬ್ದುಲ್ ಕಲಾಂ ಆಜಾದ್ .ಹೆಚ್ (ಬಾಸ್ಕೆಟ್ ಬಾಲ್)

18 ಮಹೇಂದ್ರಕರ್ (ಬಾಸ್ಕೆಟ್ ಬಾಲ್)

19 ಮಾತರಿಶ್ವÀ . ಕೆ (ಬಾಸ್ಕೆಟ್ ಬಾಲ್)

20 ಸಿ. ಮಹೇಶ್ (ಬಾಸ್ಕೆಟ್ ಬಾಲ್)

21 ಸುದರ್ಶನ್ (ಟೇಬಲ್ ಟೆನ್ನಿಸ್)

22 ವಿಕಾಸ್ (ಟೇಬಲ್ ಟೆನ್ನಿಸ್)


ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘನಿಸಿದ ಕಾಲೇಜಿನ ನಿರ್ದೇಶಕರಾದ ಡಾ|| ಜಯಂತ್, ಸಿಕ್ಕ ಅತ್ಯಂತ ಕಡಿಮೆ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಳ್ಳಲು ಸಿದ್ಧ ಪಡಿಸಿದ ಸಂಸ್ಥೆಯ ದೈಹಿಕ ಶಿಕ್ಷಕರ ಕಾರ್ಯವನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳ ಈ ಸಾಧನೆಗೆ ಹೆಮ್ಮೆ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.


Monday, March 8, 2021

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

 ಸಿದ್ಧಗಂಗಾ ಶಾಲೆಯಲ್ಲಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 

ದಿನಾಂಕ: 08/03/2021 ರಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಲೇಡಿ ಕಬ್ ಮಾಸ್ಟರ್, ಸ್ಕೌಟ್ ಮಾಸ್ಟರ್ ಪ್ಲಾಕ್‍ಲೀಡರ್ಸ್ ಹಾಗೂ ಗೈಡ್ ಕ್ಯಾಪ್ಟನ್‍ಗಳೆಲ್ಲರೂ ಸೇರಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಟೋಟ ಸ್ಪರ್ಧೆಗಳ ಮೂಲಕ ಆಚರಿಸಲಾಯಿತು, ಬ್ಯಾಲೆನ್ಸ್ ಇನ್ ದ ಬುಕ್ ಮತ್ತು ಥ್ರೋ ಬಾಲ್ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಜಸ್ಟಿನ್ ಡಿ’ಸೌಜರವರು ಬಹುಮಾನ ವಿತರಣೆ ಮಾಡಿದರು. “ತೊಟ್ಟಿಲು ತೂಗುವ ಕೈ ಜಗತ್ತನ್ನೆ ಆಳುತ್ತದೆ” ಹಾಗಾಗಿ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರು ಮುಂದಿದ್ದಾರೆ ಎಂದು ಶಿಕ್ಷಕಿಯರಿಗೆ ಕಿವಿಮಾತು ಹೇಳಿದರು. ನಿಮಗಾಗಿ ಒಂದಿಷ್ಟು ಸಮಯವನ್ನು ಉಳಿಸಿಕೊಂಡು, ಸಮಾಜದಲ್ಲಿ ಯಾವುದಾದರೊಂದು ಕ್ಷೇತ್ರಗಳಲ್ಲಿ ದುಡಿದು ಮುಂದೆ ಬರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಖಜಾಂಚಿಗಳಾದ ಶ್ರೀಮತಿ ರೇಖಾರಾಣಿ ಕೆ. ಎಸ್ ಹಾಗೂ ಶ್ರೀಮತಿ ಗಾಯತ್ರಿ ಚಿಮ್ಮಡ್ ರವರು ಹಾಜರಿದ್ದರು. ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಉಸ್ತುವಾರಿಯನ್ನು ನೋಡಿಕೊಂಡರು.



Monday, February 1, 2021

ಪುನಶ್ಚೇತನ ಕಾರ್ಯಕ್ರಮ

 ಸ್ಕೌಟ್ಸ್ ಗೈಡ್ಸ್ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ

ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ

ಜನವರಿ 31,

ದಾವಣಗೆರೆ ದಕ್ಷಿಣ ವಲಯದ ಸ್ಕೌಟ್ಸ್ ಗೈಡ್ಸ್‍ನ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಕ್ರಮವನ್ನು ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. 

ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಶಿಬಿರದಲ್ಲಿ ಸಮವಸ್ತ್ರದ ಮಹತ್ವ ವಿವಿಧ ಧ್ವಜಗಳ ಆಳತೆ ಮತ್ತು ಪ್ರಾಮುಖ್ಯತೆ, ರಾಷ್ಟ್ರಗೀತೆ, ಝಂಡಾ ಗೀತೆಗಳ ತರಬೇತಿ, ಪ್ರಥಮ ಚಿಕಿತ್ಸಾ ವಿಧಾನ, ವಿವಿಧ ರೀತಿಯ ಗಂಟುಗಳನ್ನು ಮತ್ತು ಬ್ಯಾಂಡೇಜ್ ಕಟ್ಟುವ ರೀತಿಯನ್ನು ಶಿಬಿರದ ನಾಯಕರಾಗಿ ಆಗಮಿಸಿದ್ದ ಜಿಲ್ಲಾ ಕಾರ್ಯದರ್ಶಿ ರತ್ನ ಎಂ ಇವರು ಪರಿಚಯಿಸಿದರು. ಗಾಯಾಳುಗಳನ್ನು ತಕ್ಷಣ ರವಾನಿಸಲು ಉಪಯೋಗಿಸುವ ವಿವಿಧ ರೀತಿಯ ಡೋಲಿಗಳು ಅವುಗಳ ಅಳತೆ ಮತ್ತು ಲಾಗ್ ಪುಸ್ತಕ ಬರೆಯುವ ವಿಧಾನ ಮತ್ತು ಶುಭಾಷಯ ಪತ್ರಗಳನ್ನು ರಚಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು.

ಹೊನ್ನಾಳಿಯಿಂದ ಆಗಮಿಸಿದ್ದ ಸ್ಕೌಟ್ ಸಂಪನ್ಮೂಲ ಶಿಕ್ಷಕ ಆಂಜನೇಯ ಮತ್ತು ಎಂ. ಎಂ. ಶಾಲೆಯ ವರ್ಷರವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. 

ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಬ್ ಮಾಸ್ಟರ್ಸ್, ಫ್ಲಾಕ್ ಲೀಡರ್ಸ್, ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‍ಗಳನ್ನೊಳಗೊಂಡಂತೆ 36 ಶಿಕ್ಷಕ - ಶಿಕ್ಷಕಿಯರು ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರು.


ಸಂಜೆ 4 ಗಂಟೆಗೆ ನಡೆದ ಸಮರೋಪ ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಜಸ್ಟಿನ್ ಡಿ’ಸೌಜ ಅವರು ಕೋವಿಡ್‍ನಿಂದ ಹೊರಬಂದ ವಾತಾವರಣದಲ್ಲಿ ಈ ಪುನಶ್ಚೇತನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕೋವಿಡ್ ಸಂದರ್ಭದಲ್ಲಿ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯಿಂದ ಆನ್‍ಲೈನ್‍ನಲ್ಲಿ ಮಕ್ಕಳ ಚಟುವಟಿಕೆ ನಿರಂತರವಾಗಿದ್ದು ಹಲವಾರು ಬಹುಮಾನ ಗಳಿಸುವಲ್ಲಿ ಮತ್ತು ರಾಜ್ಯ ಸಂಸ್ಥೆಯಿಂದ ಪ್ರಶಂಸೆಗೊಳಪಟ್ಟಿದ್ದನ್ನು ತಿಳಿಸಿ ಸ್ಕೌಟ್ಸ್ – ಗೈಡ್ಸ್ ಶಿಕ್ಷಕರನ್ನು ಅಭಿನಂದಿಸಿದರು. ಕಾರ್ಯಕಾರಿ ಸಮಿತಿಯ ಸಹಾಯಕ ಆಯುಕ್ತರುಗಳಾದ ಡಾ|| ಜಯಂತ್ ಮತ್ತು ರೇಖಾರಾಣಿಯವರು ಉಪಸ್ಥಿತರಿದ್ದರು. ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಅವರು ಶಿಬಿರದ ಆಯೋಜನೆಯನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದರು.


 


Friday, January 22, 2021

ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ

 ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ. 

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ.

ದಾವಣಗೆರೆ ಜ. 21, ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಮಾಡಿದವರು ಸಿದ್ಧಗಂಗಾ ಶಿವಕುಮಾರ ಶ್ರೀಗಳು. ಅವರ ಹೆಸರಲ್ಲಿರುವ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆ ಕೂಡ ಅದರಂತೆಯೇ ನಡೆಯುತ್ತಿರುವ ಕಾರಣ ಈ ಸಂಸ್ಥೆಯಲ್ಲಿ ಕಲಿತವರು ಸುಸಂಸ್ಕøತರಾಗುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. 

ಅವರಿಂದು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದಾಡುವ ದೇವರೆಂದೇ ಭಾವಿಸಿದ್ದ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ದಾಸೋಹದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ ಎಂದ ಅವರು ಮಕ್ಕಳಿಗೆ ಸುಜ್ಞಾನವಂತರಾಗುವ ಶಿಕ್ಷಣ ಪಡೆಯಲು ತಿಳಿಸಿದರು. 

ಪಿ. ಯು. ಸಿ ಹಂತದ ವಿದ್ಯಾರ್ಥಿಗಳು ಮುಂದೆ ನಾನು ಏನಾಗಬೇಕೆಂದು ಕನಸು ಕಟ್ಟುವ ಸಮಯ. ಈ ಸಮಯದಲ್ಲಿ ನೀವು ಉನ್ನತ ಮಟ್ಟದ ಕನಸನ್ನೇ ಕಟ್ಟಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗುತ್ತೆ ಎಂದರು.

ಜಾತಿ, ವರ್ಣಗಳನ್ನ ಮೀರಿ ಸಮಾಜದ ಆಸ್ತಿಯಾಗಿ ನಿಮ್ಮ ಬಳಿ ಬರುವ ಎಲ್ಲರಿಗೂ ಒಳಿತನ್ನು ಬಯಸಿ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಂದುವರೆದು ಮಾತನಾಡಿದ ಬೀಳಗಿಯವರು ದೊಡ್ಡ ಮರದ ನೆರಳಿನಲ್ಲಿ ಬೆಳೆಯುವವರು ವಿಭೂತಿ  ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕೆಂದರು. ದಾಸೋಹ ಉದ್ಘಾಟನೆಯ ನಂತರ ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪ್ರಸಾದ ವಿನಿಯೋಗಿಸಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ನಮ್ಮ ನಾಡಿನ ಸಹಸ್ರಾರು ನಿರ್ಗತಿಕರ ದಾರಿದೀಪವಾಗಿದ್ದರು ಅವರು ಇಂದು ನಮ್ಮ ಜೊತೆಗಿಲ್ಲ ಆದರೆ ಅವರ ಆದರ್ಶ ನಮ್ಮ ಜೊತೆಗಿದೆÉ. ಅವುಗಳನ್ನ ನಾವು ಪಾಲಿಸೋಣ ಎಂದರು.

ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಶ್ವೇತಾ ಶ್ರೀನಿವಾಸ್ ಉಪಸ್ಥಿತರಿದ್ದರು.


ಪ್ರಾರಂಭದಲ್ಲಿ ಸಿದ್ಧಗಂಗಾ ಪಿ. ಯು. ಕಾಲೇಜು ಪ್ರಾಂಶುಪಾಲರಾದ ನಿರಂಜನ ಜಿ. ಸಿ. ಸ್ವಾಗತಿಸಿದರು. ಪಿ. ಯು. ಕಾಲೇಜು ನಿರ್ದೇಶಕ ಜಯಂತ್ ಡಿ. ಎಸ್. ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಿದ್ಧಗಂಗೆ ಶ್ರೀಗಳವರ ತ್ರಿವಿಧ  ದಾಸೋಹ  ಸೇವೆಯನ್ನು ಮತ್ತು ಅವರ ಮಾರ್ಗದಲ್ಲೇ ಮುನ್ನಡೆದ ಎಂ. ಎಸ್. ಶಿವಣ್ಣನವರ ಕಾಯಕವನ್ನು ನಿರೂಪಿಸುತ್ತಾ ನಡೆದಾಡುವ ದೇವರು ಪಾದಸ್ಪರ್ಶ ಮಾಡಿದ ಪುಣ್ಯಭೂಮಿ ಈ ಸಿದ್ಧಗಂಗಾ ವಿದ್ಯಾಸಂಸ್ಥೆ ಎಂದರು. ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ದರ್ಶನ್ ರುದ್ರಾಕ್ಷಿಬಾಯಿ ಮತ್ತು ತಂಡದವರು ಸುಶ್ರಾವ್ಯವಾಗಿ ಹಾಡಿ ಭಕ್ತಿ ಸೇವೆ ಸಮರ್ಪಿಸಿದರು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ಮತ್ತು ಪ್ರಶಾಂತ್‍ರವರು ನಿರ್ವಹಿಸಿದರು.

ಸಂಸ್ಥಾಪಕ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಸ್ಟಿನ್ ಡಿ’ಸೌಜ ಎಲ್ಲರಿಗೂ ವಂದಿಸಿದರು. 


Sunday, November 22, 2020

ಕನ್ನಡ ಕೀರ್ತಿ ಕಳಸ ಪ್ರಶಸ್ತಿ

Kannada Keerthi  kalasa prashasti pradaana samaarambha

ಕನ್ನಡ ಕೀರ್ತಿ ಕಳಸ ಪ್ರಶಸ್ತಿ ಪ್ರದಾನ ಸಮಾರಂಭ 


ದಾವಣಗೆರೆಯ ಸಮಾನ ಮನಸ್ಕರ ಸೇವಾ ಸಮಿತಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಮತ್ತು 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 2019-20ನೇ ಸಾಲಿನ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ SSLC ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 125 ಪರಿಪೂರ್ಣ ಅಂಕ ಪಡೆದ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲಾ ಮಕ್ಕಳಿಗೆ "ಕನ್ನಡ ಕೀರ್ತಿ ಕಳಸ" ಪ್ರಶಸ್ತಿ.

ದಿನಾಂಕ : 22 ನವಂಬರ್ 2020ನೇ ಭಾನುವಾರ ಬೆಳಿಗ್ಗೆ 10-35ಕ್ಕೆ 

ಸ್ಥಳ : ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆ ಆವರಣ, ದಾವಣಗೆರೆ

 

Sunday, November 1, 2020

ಸಿದ್ಧಗಂಗಾ ಶಾಲೆಯ ವಿನೂತನ ಕನ್ನಡ ರಾಜ್ಯೋತ್ಸವ

ಸಿದ್ಧಗಂಗಾ ವಿದ್ಯಾ ಸಂಸ್ಥೆಯಿಂದ ವಿನೂತನ ಮಾದರಿಯ ಕನ್ನಡ ರಾಜ್ಯೋತ್ಸವ Kannada Rajyotsava 2020 by Siddaganga Students, Davanagere

Friday, October 30, 2020

ಕನ್ನಡ ಕುವರ - ಕುವರಿ

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗು ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ 2019-20 ನೇ ಸಾಲಿನ SSLC ಪರೀಕ್ಷೆಯ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ, ಕನ್ನಡ ಕುವರ ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ - 2020 

Saturday, October 17, 2020

NEET Results-2020

ಕಳೆದ ತಿಂಗಳು ನಡೆದ NEET ಪರೀಕ್ಷೆಯಲ್ಲಿ ದಾವಣಗೆರೆಯ ಸಿದ್ದಗಂಗಾ ವಿಜ್ಞಾನ ಕಾಲೇಜಿನ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ದಾಖಲೆಯ ಅಂಕಗಳನ್ನು ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣ ಪಡೆಯುವಲ್ಲಿ ಸಾಧನೆ ತೋರಿದ್ದಾರೆ  ಅದರಲ್ಲಿ 643 ಅಂಕಗಳಿಸಿದ ಲಕ್ಷ್ಮಿ ಶಿವ ಸಾಲಿ, 635 ಪಡೆದ ಸಾಗರ್ ಮಾಮನಿ, 613 ಪಡೆದ  ಇಮಾಮ್ ಜಾಫರ್ ಸಾದಿಕ್, 595 ಪಡೆದ ಬಿರೇಶ್ , 593 ವಿಜಯ್ ಕಿಶನ್, 582 ಅಂಕಗಳಿಸಿದ ನಿಸರ್ಗ ಎ ಕೌಟಿ ,  567 ಅಂಕಗಳನ್ನು ಪಡೆದ ಕಿರಣ್ ಮತ್ತು ಸಹನಾ ಉಲ್ಲೇಖನಾರ್ಹ . 

ಆಲ್ ಇಂಡಿಯಾ ranking ನಲ್ಲಿ  ಸಿದ್ದರಾಮೇಶ್ವರ KM 512 , ಉದಯ್ H ದುಮ್ಮಿಹಾಳ 837, ಅಕ್ಷತಾ ಬಿಜಿ  1179 ನೇ  rank ನಲ್ಲಿದ್ದರೆ   ಎಂದು ಕಾಲೇಜಿನ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ ತಿಳಿಸಿದ್ದಾರೆ . ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ನಿರ್ದೇಶಕರಾದ ಡಾll ಜಯಂತ್ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.



Sunday, September 13, 2020

JEE Result 2020 (Mains)



JEE Mainನಲ್ಲಿ ಸಿದ್ಧಗಂಗಾ ಕಾಲೇಜಿನ ಸಾಧನೆ

ದಾವಣಗೆರೆ . ಸೆ . 12

ಇತ್ತೀಚೆಗೆ ನಡೆದ JEE Mainನಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಮೇಘ ಹಿರೇಮಠ್  305 ನೇ Rank, ಅಕ್ಷತ B.G. 1213 ನೇ Rank, ಹರ್ಷವರ್ಧನ 1781 ನೇ Rank, ರಾಜೇಶ್ ಮೈಸೂರ್ Mutt 1791 ನೇ Rank, V. ಶ್ರೀ ಕೃಷ್ಣ 2445, V. ನಾಗಸಾಯಿ 5020, ಮೇಘನ . D ಧುತ್ತರಗಿ 5094, ಅನುಶ್ರೀ K.C. 9821, ಹರ್ಷ .V 9898 Rank ಪಡೆದಿದ್ದಾರೆ. 65 ಕ್ಕಿಂತ ಹೆಚ್ಚು ಮಕ್ಕಳು JEE(Advanced) ಗೆ ಅರ್ಹತೆ ಪಡೆದಿದ್ದಾರೆ. ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

























Saturday, August 22, 2020

K-CET 2020 Result

 ಸಿದ್ಧಗಂಗಾ ಕಾಲೇಜಿಗೆ K-CET ಯಲ್ಲಿ ಉತ್ತಮ ಫಲಿತಾಂಶ

ದಾವಣಗೆರೆ ಆ. 21

ಜುಲೈ ತಿಂಗಳ 30, 31 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನಗರದ ಸಿದ್ಧಗಂಗಾ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ದೊರೆತಿದೆ.

ವಿನಾಯಕ ಹಾವೇರಿ ಬಿ. ಎಸ್ಸಿ., (ಅಗ್ರಿ) 263 ನೇ Rank, ನ್ಯಾಚುರೋಪತಿ ಮತ್ತು ಯೋಗ 346, ವೆಟರ್ನರಿ 446, ಬಿ ಮತ್ತು ಡಿ. ಫಾರ್ಮದಲ್ಲಿ 721 ನೇ Rank ಗಳಿಸಿದ್ದಾನೆ.

ನಿಸರ್ಗ ಎಸ್ ಕೌಟಿ ಬಿ. ಎಸ್ಸಿ(ಅಗ್ರಿ) 267, ಯೋಗ ನ್ಯಾಚುರೋಪತಿ 339, ವೆಟರ್ನರಿ 411, ಬಿ ಮತ್ತು ಡಿ ಫಾರ್ಮ 717ನೇ Rank ಪಡೆದಿದ್ದಾಳೆ.

ವಿರಂಚಿ ಎಲ್. ಎಸ್. ಬಿ. ಎಸ್ಸಿ(ಅಗ್ರಿ) 585 ಇಂಜಿನಿಯರಿಂಗ್ 955 ನೇ Rank ಪಡೆದಿದ್ದಾನೆ.

Nisarga
Vinayak

Viranchi


10000ದೊಳಗೆ Rank ಪಡೆದ ವಿದ್ಯಾರ್ಥಿಗಳು ಇಂಜಿನಿಯರಿಂಗ್‍ನಲ್ಲಿ 48, ಬಿ. ಎಸ್ಸಿ(ಅಗ್ರಿ) 66, ನ್ಯಾಚುರೋಪತಿ ಮತ್ತು ಯೋಗದಲ್ಲಿ 58, ವೆಟರ್ನರಿ ಸೈನ್ಸ್‍ನಲ್ಲಿ 45 ಬಿ ಫಾರ್ಮ ಮತ್ತು ಡಿ ಫಾರ್ಮದಲ್ಲಿ 38 ಒಟ್ಟು 293 ಇದ್ದಾರೆ.

ಉತ್ತಮ ಫಲಿತಾಂಶ ಪಡೆದಿರುವ ಮಕ್ಕಳನ್ನು ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಬೋಧಕ ವರ್ಗದವರು ಅಭಿನಂದಿಸಿದ್ದಾರೆ.